Get Updates
Get notified of breaking news, exclusive insights, and must-see stories!

Ramesh Jarkiholi: ಜನವರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ: ಸ್ಫೋಟಕ ಸುಳಿವು ನೀಡಿದ ರಮೇಶ್‌ ಜಾರಕಿಹೊಳಿ

ರಾಯಚೂರು, ನವೆಂಬರ್‌ 12: ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ರಾಜಕೀಯ ಬೆಳವಣಿಗಳು ನಡೆದಿವೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ಅವರು ನೇಮಕಗೊಂಡ ನಂತರ ಕಮಲ ಪಾಳಯದಲ್ಲಿ ವಿಜಯೇಂದ್ರ ಅವರ ವಿರೋಧಿ ಬಣ ಬಲಿಷ್ಠವಾಗಿದ್ದು, ಬಿ ವೈ ವಿಜಯೇಂದ್ರ ಅವರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಬಿಜೆಪಿ ಪಕ್ಷದಲ್ಲಿ ಬಿ ವೈ ವಿಜಯೇಂದ್ರ ಅವರ ವಿರೋಧಿ ಬಣ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಇನ್ನಿಲ್ಲದ ಕಸರತ್ತು ನಡೆಸಿದೆ. ಈಗಾಗಲೇ ಹಲವು ಗೌಪ್ಯ ಸಭೆಗಳನ್ನು ಮಾಡಿ ತಮ್ಮ ಬೇಡಿಕೆಯನ್ನು ಹೈಕಮಾಂಡ್‌ ನಾಯಕರಿಗೆ ರವಾನಿಸಿದೆ. ಹೀಗಾಗಿ ಡಿಸೆಂಬರ್ ಅಥವಾ ಜನವರಿಯಲ್ಲಿ ವಿಜಯೇಂದ್ರ ಬದಲಾವಣೆಯಾಗುತ್ತೆ ಎನ್ನುವ ಚರ್ಚೆಗಳು ನಡೆದಿವೆ. ಇದಕ್ಕೆ ಪೂರಕವೆಂಬಂತೆ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸ್ಟೋಟಕ ಸುಳಿವು ನೀಡಿದ್ದಾರೆ.

Ramesh Jarkiholi predicts Change BY Vijayendra In December

ಈ ಕುರಿತು ಸೋಮವಾರ ರಾಯಚೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಮಾತನಾಡಿ, ಬಿ ವೈ ವಿಜಯೇಂದ್ರ ಇರುವವರೆಗೂ ನಾನು ಚುನಾವಣಾ ಪ್ರಚಾರಕ್ಕೆ ಹೋಗಲ್ಲ. ವಿಜಯೇಂದ್ರ ಅಧ್ಯಕ್ಷ ಎಂದು ಒಪ್ಪಿಲ್ಲ, ಒಪ್ಪುವುದಿಲ್ಲ. ಅವರ ಸ್ಥಾನಮಾನದ ಕೆಲಸಕ್ಕೆ ನಾನು ವಿರೋಧ ಮಾಡಿಲ್ಲ.

ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ವರಿಷ್ಠರು ತೀರ್ಮಾನಿಸುತ್ತಾರೆ. ಬಹಿರಂಗವಾಗಿ ನಾನು ಕೆಲವೊಂದು ವಿಷಯಗಳನ್ನ ಹೇಳಲ್ಲ. ಡಿಸೆಂಬರ್ ಅಥವಾ ಜನವರಿಯಲ್ಲಿ ಏನಾದ್ರೂ ನಿರ್ಣಯ ಆಗುತ್ತೆ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸ್ಫೋಟಕ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಗೆಲುವುಸಾದಿಸಲಿದೆ. ನಮ್ಮ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ವಿಜಯೇಂದ್ರ ಸಾಮಾನ್ಯ ಕಾರ್ಯಕರ್ತ, ನಮ್ಮ ಜೂನಿಯರ್ ಅವರ ಬಗ್ಗೆ ಮಾತನಾಡೋಕೆ ಹೋಗ್ಬೆಡಿ ಅವರ ಅಪ್ಪನ ಬಗ್ಗೆ ಮಾತನಾಡಿ ಅವರ ಬಗ್ಗೆ ಗೌರವ ವಿದೆ ರಮೇಶ್‌ ಜಾರಕಿಹೊಳಿ ಅವರು ಹೇಳಿದರು.

ಸಿದ್ದರಾಮಯ್ಯನವರಿಗೆ ಕೊನೆಗಳಿಗೆಯಲ್ಲಿ ಈ ಪರಿಸ್ಥಿತಿ ಬರಬಾರದಾಗಿತ್ತು. ಯಾವುದೇ ಒಂದು ಜಾತಿಗೆ ಸಿಮಿತವಾಗಿ ಮುಸ್ಲಿಂಮರು ಅನ್ನುವಾಗಿಲ್ಲ. ಕುರುಬರು ಎನ್ನುವಾಗಿಲ್ಲ, ವಾಲ್ಮೀಕಿ ಅನ್ನುವಾಗಿಲ್ಲ. ಲಿಂಗಾಯತರು ಅನ್ನುವಾಗಿಲ್ಲ. ಏನು ಬಾಯಿ ಬಿಡದಂತ ಪರಿಸ್ಥಿತಿಯಲ್ಲಿದ್ದು, ಹುಲಿಯಾಗಿ ಇದ್ದವರು ಇಲಿಯಾಗಿ ಬಿಟ್ಟಿದ್ದಾರೆ. ನಾವು ಮಂತ್ರಿಯಾಗಿದಾಗ ಅವರು ಮಾತನಾಡುವ ಸ್ಟೈಲ್ ನೋಡಿದ್ರ ಈಗ ನಮಗೆ ಬೇಜಾರ ಆಗುತ್ತದೆ.
ನಮ್ಮ ಪಕ್ಷ ಗಟ್ಟಿ ಗೊಳಿಸುವುದಕ್ಕಾಗಿ ನಾವು ಯತ್ನಾಳ್‌, ಸೇರಿ ಪ್ರವಾಸ ಮಾಡುತ್ತಿದ್ದೆವೆ. ಪಕ್ಷವನ್ನು ಗಟ್ಟಿಗೊಳಿಸುವುದಕ್ಕಾಗಿ ಸಾಮುಹಿಕ ನಾಯಕತ್ವದಲ್ಲಿ ಪ್ರವಾಸ ಮಾಡುತ್ತಿದ್ದೆವೆ ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ಹೇಳಿದರು.

ವಕ್ಬ ಆಸ್ತಿ ಬಳಿಕೆ ವಿಚಾರವಾಗಿ ಮಾತನಾಡಿ, ಇದು ವ್ಯವಸ್ತಿತ ನಾಟಕ. 30- 40 ವರ್ಷಗಳಿಂದ ನಡೆದಿರುವ ಹಗರಣ ಇದಾಗಿದೆ. ರಾಜ್ಯ ಸರಕಾರ ಈಗಾಗಲೇ ಇದನ್ನು ವಾಪಾಸ ತೆಗೆದುಕೊಳ್ಳಲಿಕೆ ನೋಟಿಸನ್ನು ನೀಡಿದ್ದಾರೆ. ನಾವು ರಾಜ್ಯ ಸರಕಾರಕ್ಕೆ ಒತ್ತಾಯ ಮಾಡುತ್ತವೆ. ರೈತರಿಗೆ ಅನ್ಯಾಯವಾಗದಂತೆ ಪೂರ್ಣಪ್ರಮಾಣದಲ್ಲಿ ರೈತರ ಪಹಣಿಯಲ್ಲಿ ವಕ್ಬ ಅನ್ನುವ ಹೆಸರು ತೆಗೆದು ರೈತರ ಹೆಸರು ಬರಬೇಕೆಂದು ಒತ್ತಾಯ ಮಾಡುತ್ತವೆ. ಕಣ್ಣೊರೆಸುವ ತಂತ್ರ ಮಾಡಿದರೆ ಕೇಂದ್ರ ಸರಕಾರದ ಮೋದಿಯವರ ನೇತ್ರತ್ವದಲ್ಲಿ ಪೂರ್ಣ ಪ್ರಮಾಣದಲ್ಲಿ ರೈತರಿಗೆ ಅನ್ಯಾಯವಾಗದಂತೆ ಸರಿಪಡಿಸುವ ಕೆಲಸ ಆಗುತ್ತದೆ ಎಂದು ರಮೇಶ್‌ ಜಾರಕಿಹೊಳಿ ಅವರು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+