ಲವ್ ಜಿಹಾದ್ ಗೊತ್ತಿಲ್ಲದವರು ಅವರೆಂಥ ಗೃಹ ಸಚಿವರು?
ಮುಂಬೈ, ಸೆ 20: ಲವ್ ಜಿಹಾದ್ ಬಗ್ಗೆ ಕೇಂದ್ರ ಗೃಹ ಸಚಿವರು ನೀಡಿರುವ ಹೇಳಿಕೆ ಶ್ರೀರಾಮಸೇನೆ ಮುಖ್ಯಸ್ಥರಿಗೆ ಸಹಿಸಲಿಲ್ಲವೇನೋ? ಆ ವಿಚಾರ ತಿಳಿಯದವರು ಅವರೆಂಥಾ ಗೃಹ ಸಚಿವರು ಎಂದು ಮುಂಬೈನಲ್ಲಿ ಪ್ರಮೋದ್ ಮುತಾಲಿಕ್ ಅಬ್ಬರಿಸಿದ್ದಾರೆ.
ಗೃಹ ಸಚಿವರಾದ ರಾಜನಾಥ್ ಸಿಂಗ್ ಅನುಭವಿ ರಾಜಕಾರಣಿ. ಹಿಂದೂ ಸಮಾಜವನ್ನು ಕಾಡುತ್ತಿರುವ ಲವ್ ಜಿಹಾದ್ ಎನ್ನುವ ಪಿಡುಗಿನ ಬಗ್ಗೆ ನಿರ್ಲ್ಯಕ್ಷದಿಂದ ಮಾತನಾಡುವ ರಾಜನಾಥ್ ಅವರಿಗೆ ಸೂಕ್ತ ಪಾಠ ಕಲಿಸುವುದಾಗಿ ಮುತಾಲಿಕ್ ಹೇಳಿದ್ದಾರೆ.
ಲವ್ ಜಿಹಾದ್ ಬಗ್ಗೆ ಗೊತ್ತಿಲ್ಲದ ರಾಜನಾಥ್ ಸಿಂಗ್ ಯಾವ ಸೀಮೆಯ ಗೃಹ ಸಚಿವರು? ದೆಹಲಿಯಲ್ಲಿನ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಲವ್ ಜಿಹಾದ್ ಬಗ್ಗೆ ತಿಳಿಸಿಕೊಡುತ್ತೇವೆ ಎಂದು ಶ್ರೀರಾಮಸೇನೆಯ ಮುಖ್ಯಸ್ಥರು ಎಚ್ಚರಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಸುಮಾರು 22 ಲವ್ ಜಿಹಾದ್ ಪ್ರಕರಣ ವರದಿಯಾಗಿದೆ. ಇದರಿಂದ ಅನ್ಯಾಯಕ್ಕೆ ಒಳಗಾದವರನ್ನು ರಾಜನಾಥ್ ಸಿಂಗ್ ನಿವಾಸಕ್ಕೆ ಕರೆದುಕೊಂಡು ಹೋಗಲು ಶ್ರೀರಾಮಸೇನೆ ಸಿದ್ದವಾಗಿದೆ ಎಂದು ಮುತಾಲಿಕ್ ಕೇಂದ್ರ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಮುಖವಾಗಿ ರಾಜ್ಯ ಕರಾವಳಿ, ಮಲೆನಾಡು ಭಾಗದಲ್ಲಿ ಹೆಚ್ಚಾಗಿ ವರದಿಯಾಗಿತ್ತಿರುವ ಲವ್ ಜಿಹಾದ್, ಏನಿದು?

ರಾಜ್ಯಕ್ಕೆ ಈ ಪದ ಪರಿಚಯಿಸಿದ್ದೇ ಕರಾವಳಿ
ಕಳೆದ ಕೆಲವು ವರ್ಷಗಳಿಂದ ರಾಜ್ಯಕ್ಕೆ ಲವ್ ಜಿಹಾದ್ ಎನ್ನುವ ಹೆಸರನ್ನು ಪರಿಚಯಿಸಿದ್ದೇ ರಾಜ್ಯ ಕರಾವಳಿ ಮತ್ತು ಮಲೆನಾಡು ಭಾಗದ ಪ್ರದೇಶ. ಕಳೆದ ಆರು ವರ್ಷಗಳಲ್ಲಿ ಕರಾವಳಿಯಲ್ಲಿ ವರದಿಯಾದಷ್ಟು ಲವ್ ಜಿಹಾದ್ ಪ್ರಕರಣ ರಾಜ್ಯದಲ್ಲಿ ಎಲ್ಲೂ ವರದಿಯಾಗಿರಲಿಕ್ಕಿಲ್ಲ.

ಲವ್ ಜಿಹಾದ್ ಅಥವಾ ರೋಮಿಯೋ ಜಿಹಾದ್
ಲವ್ ಜಿಹಾದ್ ಅಥವಾ ರೋಮಿಯೋ ಜಿಹಾದ್ ಎನ್ನುವ ಕಾರ್ಯಸೂಚಿಯ ಮೂಲಕ ಕೆಲವೊಂದು ಮತೀಯ ಸಂಘಟನೆಗಳು ಒಂದು ಕೋಮಿನ ಹುಡುಗಿಯರನ್ನು (ಪ್ರಮುಖವಾಗಿ ಶಾಲಾ, ಕಾಲೇಜುಗಳೇ ಟಾರ್ಗೆಟ್) ಇನ್ನೊಂದು ಕೋಮಿಗೆ ಮತಾಂತರಿಸುವುದೇ ಈ ಸಂಘಟನೆಗಳ ಕಾಯಕ.

ಕೇರಳದಲ್ಲಿ ವ್ಯಾಪಕಾವಿಗಿದ್ದ ಲವ್ ಜಿಹಾದ್ ಈಗ ರಾಜ್ಯದಲ್ಲೂ
ಕೇರಳದಲ್ಲಿ ವ್ಯಾಪಕವಾಗಿದ್ದ ಲವ್ ಜಿಹಾದ್ ಸಾಮಾಜಿಕ ಪಿಡುಗು ಈಗ ರಾಜ್ಯದಲ್ಲೂ ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ. ಹಿಂದೂ ಅಥವಾ ಕ್ರಿಶ್ಚಿಯನ್ ಸಮುದಾಯದ ಹೆಣ್ಣುಮಕ್ಕಳನ್ನು ಪ್ರೀತಿಸಿ, ಮೋಹಿಸಿ, ಮದುವೆಯಾಗಿ ಅಥವಾ ಮದುವೆಯಾಗುವುದಾಗಿ ನಂಬಿಸಿ, ಅನುಭವಿಸಿ ನಂತರ ಇಸ್ಲಾಂಗೆ ಮತಾಂತರಗೊಳಿಸುವುದೇ ಈ ಲವ್ ಜಿಹಾದ್.

ಹೇಗೆ ಈ ಸಂಘಟನೆಗಳು ಕಾರ್ಯನಿರ್ವಹಿಸುತ್ತವೆ
ಈ ಸಂಘಟನೆಯ ಸದಸ್ಯರು ತಮ್ಮ ಸಮುದಾಯದ ಸುಂದರ, ಕಟ್ಟುಮಸ್ತಾದ ಹುಡುಗರನ್ನು ಕಾಲೇಜು ಅಥವಾ ಶಾಲಾ ಕ್ಯಾಂಪಸ್ ನಲ್ಲಿ ಬಿಡುತ್ತಾರೆ. ಇಂತಹ ಹುಡುಗರಲ್ಲಿ ಕೆಲವರಿಗೆ ನಯಾಪೈಸೆಯ ವಿದ್ಯೆ ಇರದಿದ್ದರೂ ಚೆನ್ನಾಗಿ ಡ್ರೆಸ್ ಮಾಡಿಕೊಂಡು, ಹಣ ಖರ್ಚುಮಾಡಿಕೊಂಡು ಸುತ್ತಾಡುತ್ತಿರುತ್ತಾರೆ. ಇವರಿಗೆ ಇರುವ ಟಾರ್ಗೆಟ್ ಅಂದರೆ ಇತರ ಧರ್ಮೀಯ ಹುಡುಗಿಯರನ್ನು ಬಳಸಿಕೊಂಡು ತಮ್ಮ ಧರ್ಮಕ್ಕೆ ಮತಾಂತರಗೊಳಿಸುವುದು.

ಮತಾಂತರ ಮಾಡುವುದು ಮಾತ್ರವಲ್ಲ
ಲವ್ ಜಿಹಾದ್ ಮೂಲಕ ಹುಡುಗಿಯರನ್ನು ಇಸ್ಲಾಂಗೆ ಮತಾಂತರಗೊಳಿಸುವುದಷ್ಟೇ ಅಲ್ಲದೆ ಭಯೋತ್ಪಾದನಾ ಚಟುವಟಿಕೆಗೂ ದೂಡಿದ ಉದಾಹರಣೆಗಳೂ ಇವೆ. ಲವ್ ಜಿಹಾದ್ ಮೂಲಕ ಲೈಂಗಿಕ ಸಂಪರ್ಕ ಬಳಸಿ, ಅದನ್ನು ಚಿತ್ರೀಕರಿಸಿ ಸಾಮಾಜಿಕ ತಾಣಗಳಲ್ಲೂ ಹಾಕಿ ಬ್ಲ್ಯಾಕ್ ಮೇಲ್ ಮಾಡಿದ ಉದಾಹರಣೆಗಳೂ ನಮ್ಮ ಮುಂದಿವೆ.

ಸರಕಾರ ಕಣ್ಣುಮುಚ್ಚಿ ಕೂತಿದೆಯೇ ?
ಮಂಗಳೂರು, ಉಡುಪಿ, ಭಟ್ಕಳ ಭಾಗದಲ್ಲಿ ದಿನಕ್ಕೊಂದರಂತೆ ಪ್ರಕರಣಗಳು ದಾಖಲಾಗುತ್ತಿದ್ದರೂ, ಸಿದ್ದರಾಮಯ್ಯ ಸರಕಾರ ಇದರ ಬಗ್ಗೆ ಹೆಚ್ಚು ತಲೆಕೆಡಿಸಿ ಕೊಳ್ಳದೇ ಕೂತಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications