Rain Alert: ಮಳೆ ಆರ್ಭಟಕ್ಕೆ ಬೆಚ್ಚಿಬಿದ್ದ ಜನ, 4 ದಿನ ಮತ್ತಷ್ಟು ಮಳೆ ಅಬ್ಬರ ಗ್ಯಾರಂಟಿ...
ಮಳೆ
ನೋಡ ನೋಡುತ್ತಲೇ ತನ್ನ ಅರ್ಭಟವನ್ನು ಹೆಚ್ಚು ಮಾಡುತ್ತಿದ್ದು, ಮಳೆಯ ಅಬ್ಬರಕ್ಕೆ ಈಗ ದಿಕ್ಕೇ ತೋಚದಂತೆ ರೈತರು ಕೂರುವ ಪರಿಸ್ಥಿತಿ ಎದುರಾಗಿದೆ. ರೈತರ ಜೊತೆಗೆ ಸಾಮಾನ್ಯ ಜನ ಕೂಡ ಈಗ ದಿಕ್ಕೇ ತೋಚದಂತೆ ಕೂತಿದ್ದಾರೆ. ಒಂದು ಕಡೆ ಅಕಾಲಿಕ ಮಳೆ ಪರಿಣಾಮ ಈಗಾಗಲೇ ಕೃಷಿಕರಿಗೆ ಬೆಳೆ ನಷ್ಟವಾಗಿದ್ದರೆ, ಇನ್ನೊಂದು ಕಡೆ ಸಾಮಾನ್ಯ ಜನರಿಗೆ ತಮ್ಮ ಮನೆ ಉಳಿಸಿಕೊಳ್ಳುವುದೇ ಇದೀಗ ಮುಖ್ಯ ಎನ್ನುವಂತಾಗಿದೆ. ಹಾಗಾದ್ರೆ ಇನ್ನೂ ಎಷ್ಟು ದಿನಗಳ ಕಾಲ ಮಳೆ ಆರ್ಭಟ ಮುಂದುವರಿಯಲಿದೆ? id="toptextpromo"> id='are-slot-1' class='oiad oi-axt oiadv'> id='top-searched-articles'>ಚಂಡಮಾರುತ
ಪರಿಣಾಮ ಮಳೆ ಆರ್ಭಟ ಮತ್ತೆ ಶುರುವಾಗಿದೆ, ಹೀಗೆ ಸೈಕ್ಲೋನ್ ಹಿನ್ನೆಲೆ ಮಳೆ ಆರ್ಭಟ ಹೆಚ್ಚಾದ ಕಾರಣ ಜನ ಜೀವನ ಅಸ್ತವ್ಯಸ್ಥ ಆಗಿದೆ. ಮತ್ತೊಂದು ಕಡೆ ಚಳಿ ಪ್ರಮಾಣ ಕೂಡ ಹೆಚ್ಚಾಗಿದ್ದು, ಜನ ಚಿಂತೆ ಮಾಡುವಂತೆ ಆಗಿದೆ. ಇಂತಹ ಸಮಯಕ್ಕೇ ದಕ್ಷಿಣ ಭಾರತದಲ್ಲಿ ಮಳೆಯ ಕಾರಣ ಸಾಕಷ್ಟು ಸಮಸ್ಯೆ ಎದುರಾಗಿದ್ದು, ಈಗಾಗಲೇ ಹಲವು ಪ್ರದೇಶಗಳು ಮಳೆಯ ನೀರಲ್ಲಿ ಮುಳುಗಿ ಹೋಗಿ ಸಮಸ್ಯೆ ದೊಡ್ಡದಾಗುತ್ತಿದೆ. ಇದೇ ಸಮಯದಲ್ಲಿ ಮತ್ತಷ್ಟು ಕೋಪ ಮಾಡಿಕೊಂಡಿರುವ ಪ್ರಕೃತಿ ಮಾತೆ ಮತ್ತೆ ತನ್ನ ಆರ್ಭಟ ತೋರಿಸುವ ಸಾಧ್ಯತೆ ದಟ್ಟವಾಗಿದೆ. ಮಳೆ ಆರ್ಭಟಕ್ಕೆ ಬೆಚ್ಚಿಬಿದ್ದ ಜನರಿಗೆ ಮತ್ತೆ 4 ದಿನ ಮತ್ತಷ್ಟು ಮಳೆ ಅಬ್ಬರ ಗ್ಯಾರಂಟಿ ಆಗಿದೆ... id='are-slot-2' class='oiad oi-axt oiadv'>












Click it and Unblock the Notifications