ಕುಷ್ಟಗಿಯಿಂದ ಕರಟಗಿಯತ್ತ ಹೊರಟ ರಾಹುಲ್ ಗಾಂಧಿ ರೋಡ್ ಶೋ
ಕೊಪ್ಪಳ, ಫೆಬ್ರವರಿ 11: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ತಮ್ಮ ಎರಡನೇ ದಿನದ 'ಜನಾಶಿರ್ವಾದ ಯಾತ್ರೆ' ಆರಂಭಿಸಿದ್ದಾರೆ. ಯಾತ್ರೆಯ ಅಂಗವಾಗಿ ರಾಹುಲ್ ಇಂದು ಮೊದಲಿಗೆ ರೋಡ್ ಶೋದಲ್ಲಿ ಪಾಲ್ಗೊಂಡಿದ್ದಾರೆ.
ಬೆಳಿಗ್ಗೆ 10.30ಕ್ಕೆ ಕೊಪ್ಪಳದ ಕುಷ್ಟಗಿಯಿಂದ ರಾಹುಲ್ ಗಾಂಧಿ ರೋಡ್ ಶೋ ಆರಂಭಿಸಿದರು. ಕಾಂಗ್ರೆಸ್ ಅಧ್ಯಕ್ಷರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಸಾಥ್ ನೀಡಿದ್ದಾರೆ.
ಚಿತ್ರಗಳು : ಕರ್ನಾಟಕದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ
ಯಾತ್ರೆ ಆರಂಭದಲ್ಲಿ ಕುಷ್ಟಗಿಯಲ್ಲಿ ರಾಣಿ ಚೆನ್ನಮ್ಮ ಪ್ರತಿಮೆಗೆ ರಾಹುಲ್ ಗಾಂಧಿ ಮಾಲಾರ್ಪಣೆ ಮಾಡಿದರು. ನಂತರ ತಾಗರಗೇರಾದತ್ತ ತೆರಳಿದರು.
Congress President Rahul Gandhi pays his respects to Queen Kittur Chennamma #JanaAashirwadaYatre #KarnatakaWithRahul pic.twitter.com/YQs7L32px4
— Congress (@INCIndia) February 11, 2018
ಇದೀಗ ತಾಗರಗೇರಾದಿಂದ ಕನಕಗಿರಿಯತ್ತ ರೋಡ್ ಶೋದಲ್ಲಿ ತೆರಳುತ್ತಿದ್ದು ಇಲ್ಲಿನ ಕನಕಾಚಲಪತಿ ದೇಗುಲಕ್ಕೆ ರಾಹುಲ್ ಭೇಟಿ ನೀಡಲಿದ್ದಾರೆ. ನಂತರ ರೋಡ್ ಶೋ ಮೂಲಕ ರಾಹುಲ್ ಗಾಂಧಿ ಕರಟಗಿಗೆ ತೆರಳಲಿದ್ದಾರೆ.

ಕೊಪ್ಪಳದ ಕರಟಗಿಯಲ್ಲಿ ಮಧ್ಯಾಹ್ನ 2.45ಕ್ಕೆ ಸಾರ್ವಜನಿಕ ಸಮಾರಂಭ ಉದ್ದೇಶಿಸಿ ರಾಹುಲ್ ಗಾಂಧಿ ಭಾಷಣ ಮಾಡಲಿದ್ದಾರೆ. ನಂತರ ಸಂಜೆ 5.15ಕ್ಕೆ ಸಿಂಧನೂರಿನಲ್ಲಿ ರೈತ ಸಂಘಟನಗಳ ಪ್ರತಿನಿಧಿಗಳ ಜತೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ.












Click it and Unblock the Notifications