ರಾಘವೇಶ್ವರ ಶ್ರೀ ಪ್ರಕರಣ, ಶನಿವಾರ ಚಾರ್ಜ್ ಶೀಟ್ ಸಲ್ಲಿಕೆ
ಬೆಂಗಳೂರು, ಸೆಪ್ಟೆಂಬರ್ 25 : ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿರುವ ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಸಿಐಡಿ ಶನಿವಾರ ಚಾರ್ಜ್ಶೀಟ್ ಸಲ್ಲಿಕೆ ಮಾಡಲಿದೆ.
ರಾಮಕಥಾ
ಗಾಯಕಿ
ಮತ್ತು
ಯಕ್ಷಗಾನ
ಕಲಾವಿದೆ
ಮೇಲೆ
ಅತ್ಯಾಚಾರ
ನಡೆಸಿದ
ಆರೋಪಗಳು
ಶ್ರೀಗಳ
ಮೇಲಿದ್ದು,
ಸಿಐಡಿ
ಎರಡೂ
ಪ್ರಕರಣಗಳ
ತನಿಖೆ
ನಡೆಸುತ್ತಿದೆ.
ಶನಿವಾರ
ರಾಮಕಥಾ
ಗಾಯಕಿ
ಪ್ರೇಮಲತಾ
ದಿವಾಕರ್
ಅವರ
ಮೇಲೆ
ಅತ್ಯಾಚಾರ
ನಡೆಸಿದ
ಪ್ರಕರಣದ
ಚಾರ್ಜ್ಶೀಟ್
ಕೋರ್ಟ್ಗೆ
ಸಲ್ಲಿಕೆಯಾಗಲಿದೆ.
[ಮಹಿಳಾ
ಆಯೋಗಕ್ಕೆ
ಮಠದ
12
ಪ್ರಶ್ನೆಗಳು]
ಒಂದು ವೇಳೆ ಶನಿವಾರ ಕರ್ನಾಟಕ ಬಂದ್ ಕಾರಣದಿಂದ ನ್ಯಾಯಾಲಯದ ಕಲಾಪ ನಡೆಯದಿದ್ದರೆ ಸೋಮವಾರ ಚಾರ್ಜ್ಶೀಟ್ ಸಲ್ಲಿಕೆಯಾಗಲಿದೆ. ರಾಮಕಥಾ ಕಾರ್ಯಕ್ರಮಗಳು ನಡೆದ ರಾಜ್ಯದ 9 ಜಿಲ್ಲೆಗಳಲ್ಲಿ ವಿಚಾರಣೆ ನಡೆಸಿ, ಸಾಕ್ಷಿಗಳನ್ನು ಸಂಗ್ರಹಣೆ ಮಾಡಿರುವ ಸಿಐಡಿ ಚಾರ್ಜ್ಶೀಟ್ ಸಲ್ಲಿಕೆ ಮಾಡಲಿದೆ.[ಶ್ರೀಗಳ ಜಾಮೀನು ಅರ್ಜಿ ಸೆ.30ಕ್ಕೆ ತೀರ್ಪು]
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಗಳ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿದೆ. ಈ ವರದಿ ಸೇರಿದಂತೆ ಹಲವು ಸಾಕ್ಷ್ಯ ಮತ್ತು ದೂರವಾಣಿ ಕರೆಗಳ ಮಾಹಿತಿಯನ್ನು ಸಿಐಡಿ ಕೋರ್ಟ್ಗೆ ಸಲ್ಲಿಸಲಿದೆ. 2014ರ ನವೆಂಬರ್ನಲ್ಲಿ ರಾಮಕಥಾ ಗಾಯಕಿ ಪ್ರೇಮಲತಾ ದಿವಾಕರ್ ಅವರು ಅತ್ಯಾಚಾರದ ದೂರು ದಾಖಲಿಸಿದ್ದರು.