ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಮುಂದೆ SC/ST ಗುತ್ತಿಗೆದಾರರಿಗೆ ಟೆಂಡರ್ ನಲ್ಲೂ ಮೀಸಲಾತಿ

By ಅನುಷಾ ರವಿ
|
Google Oneindia Kannada News

ಬೆಂಗಳೂರು, ಜೂನ್ 26: ಕರ್ನಾಟಕದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಗುತ್ತಿಗೆದಾರರಿಗೆ ಇದೊಂದು ಸಿಹಿ ಸುದ್ದಿ. ಟೆಂಡರ್ ಗಳಲ್ಲಿ ಎಸ್ಸಿ ಮತ್ತು ಎಸ್ಟಿಗಳಿಗೆ ಮೀಸಲಾತಿ ನೀಡುವ ಕರ್ನಾಟಕ ಸರಕಾರದ ಪ್ರಸ್ತಾವನೆಗೆ ರಾಷ್ಟ್ರಪತಿಗಳು ಸಹಿ ಹಾಕಿದ್ದಾರೆ.

ನಾವು ದಲಿತರ ಪರ ಎನ್ನುವ, ದಲಿತ ಟ್ರಂಪ್ ಕಾರ್ಡ್ ಇಟ್ಟುಕೊಂಡು 2018ರ ಚುನಾವಣೆ ಎದುರಿಸಲು ಹೊರಟಿರುವ ಕರ್ನಾಟಕದ ಕಾಂಗ್ರೆಸ್ ಸರಕಾರಕ್ಕೆ ಇದು ಮತ್ತಷ್ಟು ಪ್ರಯೋಜನಕಾರಿಯಾಗಲಿದೆ.

ಬಿಡಿಎನಿಂದ ಎಸ್ಸಿ, ಎಸ್ ಟಿಗೆ 6.7 ಲಕ್ಷಕ್ಕೆ ಒಂದು ಬಿಎಚ್ ಕೆ ಫ್ಲಾಟ್ಬಿಡಿಎನಿಂದ ಎಸ್ಸಿ, ಎಸ್ ಟಿಗೆ 6.7 ಲಕ್ಷಕ್ಕೆ ಒಂದು ಬಿಎಚ್ ಕೆ ಫ್ಲಾಟ್

President Mukherjee okays SC/ST reservation in government tenders in Karnataka

ರಾಷ್ಟ್ರಪತಿಗಳ ಸಹಿಯೊಂದಿಗೆ 50 ಲಕ್ಷವರೆಗಿನ ಗುತ್ತಿಗೆಗಳಲ್ಲಿ ಎಸ್ಸಿ ಮತ್ತು ಎಸ್ಟಿ ಸಮುದಾಯದವರು ಶೇಕಡಾ 24.1 ರಷ್ಟು ಮೀಸಲಾತಿ ಪಡೆದುಕೊಳ್ಳಲಿದ್ದಾರೆ. 'ಕರ್ನಾಟಕ ಸಾರ್ವಜನಿಕ ಪರಿಷ್ಕರಣೆ ಪಾರದರ್ಶಕತೆ (ತಿದ್ದುಪಡಿ) ಕಾಯ್ದೆ'ಗೆ ರಾಷ್ಟ್ರಪತಿ ಅಂಕಿತ ಬಿದ್ದಿದ್ದು, ಟೆಂಡರ್ ಇಲ್ಲದೆ ಹಿಂದುಳಿದ ಸಮುದಾಯದವರಿಗೆ ಗುತ್ತಿಗೆ ನೀಡಲು ಸಾಧ್ಯವಾಗಲಿದೆ.

ಈ ಮೂಲಕ ಟೆಂಡರುಗಳಲ್ಲಿ ಪರಿಶಿಷ್ಟ ಜಾತಿಗೆ ಶೇ. 17.15 ಮೀಸಲಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ. 6.95 ಮೀಸಲಾತಿ ಸಿಗಲಿದೆ.

ಬಡ್ತಿಯಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ರದ್ದು: ಕರ್ನಾಟಕಕ್ಕೆ ಸುಪ್ರೀಂ ಆದೇಶಬಡ್ತಿಯಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ರದ್ದು: ಕರ್ನಾಟಕಕ್ಕೆ ಸುಪ್ರೀಂ ಆದೇಶ

2016ರ ಆಗಸ್ಟ್ ನಲ್ಲಿ ಈ ತಿದ್ದುಪಡಿ ಮಸೂದೆಗೆ ಸಹಿ ಹಾಕಲು ರಾಜ್ಯಪಾಲರು ನಿರಾಕರಿಸಿದ್ದರು. ಇದು ಸಂವಿಧಾನ ವಿರೋಧಿ ಎಂದು ಅವರು ಹೇಳಿದ್ದರು. ಶಿಕ್ಷಣ, ಉದ್ಯೋಗ ಮತ್ತು ಚುನಾವಣೆಯಲ್ಲಿ ಮಾತ್ರ ಮೀಸಲಾತಿ ನೀಡಲು ಅವಕಾಶವಿದೆ ಎಂದು ಹೇಳಿ ರಾಜ್ಯಪಾಲರು ಮಸೂದೆಯನ್ನು ರಾಷ್ಟ್ರಪತಿಗಳ ಬಳಿಗೆ ಕಳುಹಿಸಿದ್ದರು. ಇದೀಗ ರಾಷ್ಟ್ರಪತಿಗಳು ಸಹಿ ಹಾಕಿರುವುದರಿಂದ ಕಾಯ್ದೆ ಜಾರಿಗೆ ಬರಲಿದೆ.

ರಾಷ್ಟ್ರಪತಿಗಳ ಬಳಿಗೆ ಕಡತ ಕಳುಹಿಸಿದರೂ ಜೂನ್ 17ರವರೆಗೆ ಇದು ಧೂಳು ತಿನ್ನುತ್ತಿತ್ತು. ಆದರೆ ಬೆಂಗಳೂರು ಮೆಟ್ರೋ ಉದ್ಘಾಟನೆಗೆ ಬಂದಿದ್ದ ರಾಷ್ಟ್ರಪತಿಗಳ ಗಮನಕ್ಕೆ ಸಿದ್ದರಾಮಯ್ಯ ಈ ಕಡತವನ್ನು ತಂದಿದ್ದರು. ಹೀಗಾಗಿ ಇದೀಗ ರಾಷ್ಟ್ರಪತಿಗಳು ಸಹಿ ಹಾಕಿದ್ದಾರೆ.

ಬೇರೆ ಜಾತಿಯವರಿಗೆ ವಿಷ ಭಾಗ್ಯ ಕರುಣಿಸಿ: ಫೇಸ್ ಬುಕ್ ನಲ್ಲಿ ಸಿಎಂಗೆ ಮನವಿಬೇರೆ ಜಾತಿಯವರಿಗೆ ವಿಷ ಭಾಗ್ಯ ಕರುಣಿಸಿ: ಫೇಸ್ ಬುಕ್ ನಲ್ಲಿ ಸಿಎಂಗೆ ಮನವಿ

ಅತ್ತ ಸಾಲಮನ್ನಾ, ಇದೀಗ ದಲಿತರಿಗೆ ಮೀಸಲಾತಿ; ಕಾಂಗ್ರೆಸಿಗೆ ಚುನಾವಣಾ ಪ್ರಚಾರಕ್ಕೆ ಬೇಕಾದ ಭರ್ಜರಿ ಸರಕು ಸಿಕ್ಕಿದಂತಾಗಿದೆ.

English summary
SC/ST contractors in Karnataka have reason to rejoice with the President of India giving his accent to 24.1 reservation in government tenders. The move comes as a major boost to Karnataka Congress to take its Dalit welfare agenda forward ahead of the 2018 assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X