ಆರೋಪಗಳನ್ನು ಎದುರಿಸಲು ಸಿದ್ಧ : ರಾಘವೇಶ್ವರ ಶ್ರೀ
ಬೆಂಗಳೂರು, ಅ.27 : ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಶ್ರೀಗಳ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ಗಾಯಕಿ ಪ್ರೇಮಲತಾ ದಿವಾಕರ್ ಅವರ ಸಂದರ್ಶನ ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾದ ಹಿನ್ನಲೆಯಲ್ಲಿ ಗಿರಿನಗರದಲ್ಲಿರುವ ರಾಮಚಂದ್ರಾಪುರ ಮಠ ಶ್ರೀಗಳ ಸಂದೇಶವಿರುವ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ.
ರಾಘವೇಶ್ವರ
ಶ್ರೀಗಳ
ಪರವಾಗಿ
ಆಪ್ತಕಾರ್ಯದರ್ಶಿ
ಮೋಹನ
ಭಾಸ್ಕರ
ಅವರು
ಪತ್ರಿಕಾ
ಹೇಳಿಕೆಯನ್ನು
ಬಿಡುಗಡೆ
ಮಾಡಿದ್ದು,
ಹೇಳಿಕೆಯಲ್ಲಿ
ಆರೋಪಗಳಿಂದ
ಶ್ರೀಮಠದ
ಭಕ್ತ
ಸಮುದಾಯಕ್ಕೆ
ನೋವಾಗಿದೆ.
ಇಂತಹ
ಎಷ್ಟೇ
ಆರೋಪಗಳನ್ನು
ಎದುರಿಸಲು
ಸಿದ್ಧ
ಎಂದು
ಹೇಳಿದ್ದಾರೆ.
[ಸಂದರ್ಶನದಲ್ಲಿ
ಪ್ರೇಮಲತಾ
ದಿವಾಕರ್
ಹೇಳಿದ್ದೇನು?]
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 32 ಗಂಟೆ ಸಿಐಡಿ ತನಿಖಾಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದೇನೆ. ತನಿಖೆಯಿಂದ ಜಗತ್ತಿಗೆ ಸತ್ಯ ತಿಳಿಯಲಿದೆ. ಆರೋಪಗಳ ಬಗ್ಗೆ ನಡೆಯುವ ಸಮಗ್ರ ತನಿಖೆಗೆ ಸಹಕರಿಸುತ್ತಿದ್ದೇನೆ ಎಂದು ಶ್ರೀಗಳು ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. [ಶ್ರೀಗಳ ಪರ ಹೇಳಿಕೆ ನೀಡದಂತೆ ಬೆದರಿಕೆ ಕರೆ]
ನ್ಯಾಯಾಂಗ
ವ್ಯವಸ್ಥೆಯ
ಮೇಲೆ
ನಮಗೆ
ನಂಬಿಕೆ
ಇದೆ.
ನಾವು
ಆರೋಪ
ಮುಕ್ತವಾಗುತ್ತೇವೆ
ಎಂಬ
ವಿಶ್ವಾಸವಿದೆ.
ಈ
ಬಗ್ಗೆ
ಬಹಿರಂಗವಾಗಿ
ಮಾತನಾಡಿದರೆ
ತನಿಖೆಗೆ
ಅಡ್ಡಿಯಾಗಬಹುದು.
ಇಂತಹ
ಆರೋಪ
ಮಾಡುವವರಿಗೆ
ದೇವರು
ಒಳ್ಳೆಯದನ್ನು
ಮಾಡಲಿ
ಎಂದು
ಪತ್ರಿಕಾ
ಹೇಳಿಕೆಯಲ್ಲಿ
ಹೇಳಿದ್ದಾರೆ.