ಕೋಲಾರ: ಕಾಂಗ್ರೆಸ್ ವಿರುದ್ಧ ಗುಡುಗಿದ ಪವನ್ ಕಲ್ಯಾಣ್
ಬೆಂಗಳೂರು, ಏ.14: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಸಂಪೂರ್ಣ ಬೆಂಬಲ ಘೋಷಿಸಿದ್ದ ಆಂಧ್ರಪ್ರದೇಶದ ಹೊಸ ಪಕ್ಷ ಜನಸೇನಾದ ಮುಖ್ಯಸ್ಥ, ನಟ ಪವನ್ ಕಲ್ಯಾಣ್ ಈಗ ಮೊದಲ ಬಾರಿಗೆ ಬಿಜೆಪಿ ಪರ ಪ್ರಚಾರ ನಡೆಸಿದ್ದಾರೆ. ಮಂಗಳವಾರ ಮೊದಲ ಬಾರಿಗೆ ಕರ್ನಾಟಕದಲ್ಲಿ ತೆಲುಗಿನ ಪವರ್ ಸ್ಟಾರ್ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.
ಕೋಲಾರದ ಸರ್ ಎಂವಿ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ತೆಲುಗು ನಟ, ಜನಸೇನ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಭಾಷಣ ಆರಂಭ ಮಾಡಿದ್ದು .. ಎಲ್ಲರಿಗೂ ನಮಸ್ಕಾರ.. ನನಗೆ ಸ್ವಲ್ಪ ಸ್ವಲ್ಪ ಕನ್ನಡ ಬರುತ್ತೆ... ದಯವಿಟ್ಟು ಕ್ಷಮಿಸಿ ಭಾಷೆಗಿಂತ ಭಾವ ಮುಖ್ಯ. ನಿಮ್ಮನ್ನು ಈ ರೀತಿ ತಲುಪುತ್ತೇನೆ ಎಂದು ತೆಲುಗಿನಲ್ಲಿ ನಿರರ್ಗಳವಾಗಿ ಭಾಷಣ ಮುಂದುವರೆಸಿದರು.. ಭಾಷಣದ ಮುಖ್ಯಾಂಶ ಹೀಗಿದೆ:

* ನಾನು ಇಲ್ಲಿ ಸಿನಿಮಾ ಡೈಲಾಗ್ ಹೇಳಲು ಬಂದಿಲ್ಲ. ಕರ್ನಾಟಕದಲ್ಲಿ ವಿವಿಧ ಭಾಷೆ ಇದ್ದರೂ ಐಕ್ಯತೆಯಿದೆ. ನಿಮ್ಮ ಐಕ್ಯತೆಗೆ ನನ್ನ ನಮನ, ಆಂಧ್ರದಲ್ಲಿ ಭಾಷೆಗಾಗಿ, ಪ್ರಾಂತ್ಯಕ್ಕಾಗಿ ಜನ ಕಿತ್ತಾಡುವುದನ್ನು ತಪ್ಪಿಸಲಾಗುತ್ತಿಲ್ಲ.
* ವಿಜಯನಗರ ಅರಸರ ಕಾಲದಲ್ಲಿ ಕರ್ನಾಟಕ ಆಂಧ್ರಪ್ರದೇಶದ ಜನ ಒಟ್ಟಿಗೆ ಸಮೃದ್ಧವಾಗಿ ಬಾಳಿ ಬದುಕಿದ ಕಥೆ ಕೇಳಿದ್ದೀರಿ. ಈಗ ಮತ್ತೆ ಅದೇ ಸುವರ್ಣ ಯುಗವನ್ನು ಕಾಣಲು ಮೋದಿ ಅವರನ್ನು ಗೆಲ್ಲಿಸಬೇಕಿದೆ.
* ಈ ಪ್ರಾಂತ್ಯದ ಎಂ ನಾರಾಯಣಸ್ವಾಮಿ, ಬಿ.ಎನ್ ಬಚ್ಚೇಗೌಡ ಅವರಿಗೆ ತಪ್ಪದೇ ಮತ ನೀಡಿ
* ಕಾಂಗ್ರೆಸ್ ದೇಶ ವಿಭಜನೆ ಕಾರ್ಯದಲ್ಲಿ ನಿರತವಾಗಿದೆ. ಇದಕ್ಕೆ ಆಂಧ್ರಪ್ರದೇಶ ಒಡೆದಿದ್ದೇ ಸಾಕ್ಷಿ.
* ಅಣ್ಣ ತಮ್ಮಂದಿರ ಮಧ್ಯೆ ದ್ವೇಷ ಹುಟ್ಟುವಂತೆ ಮಾಡಿದೆ. ಕೇಂದ್ರದಲ್ಲಿ ಸಮರ್ಥ ನಾಯಕರ ಅವಶ್ಯಕತೆ ಇದೆ. ಮೋದಿ ಪ್ರಧಾನಿಯಾಗಬೇಕು.
* ಈ ಭಾಗದ ಜನತೆ ಫ್ಲೂರೈಡ್ ನೀರು ಕುಡಿಯುವಂತೆ ಮಾಡುತ್ತಿರುವ ಸರ್ಕಾರವನ್ನು ಉಳಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ.
* 25 ವರ್ಷದಿಂದ ಮುನಿಯಪ್ಪ ಅವರು ಏನು ಮಾಡಿದ್ದಾರೆ. ನೀವ್ಯಾಕೆ ಸುಮ್ಮನಿದ್ದೀರಾ? ನಿಮಗೆ ಒಳ್ಳೆ ನೀರು, ನೆಲೆ ಬೇಡವೆ?
* ರೈತರು ಸೂಕ್ತ ಬೆಲೆ ಸಿಗದೆ ಇಲ್ಲಿ ಬೆಳೆದ ಟೊಮ್ಯಾಟೋ, ಇನ್ನಿತರ ತರಕಾರಿಗಳನ್ನು ರಸ್ತೆಗೆ ಎಸೆಯುವಂತಾಗಿರುವುದು ದುರಂತ.
* ಇಲ್ಲಿನ ಯುವಕರಿಗೆ ಸರಿಯಾದ ಉದ್ಯೋಗ ಸಿಗುತ್ತಿಲ್ಲ. ನಗರಕ್ಕೆ ತೆರಳಿ ಸಿಗುವ ಅಲ್ಪ ಸಂಬಳದಲ್ಲಿ ಸಂಸಾರ ಸಾಕಬೇಕಿದೆ. ಇದು ಚಿನ್ನದ ಬೀಡು ಆದರೆ, ಕಾಂಗ್ರೆಸ್ ಇದನ್ನು ಬೆಂಗಾಡು ಮಾಡಿ ಬಿಟ್ಟಿದೆ. [ಮೋದಿ ಪ್ರಧಾನಿಯಾಗುವುದು ನನ್ನ ಗುರಿ: ಪವನ್]
* ಇದು ಕೇವಲ ಹಿಂದೂಗಳ ಪಕ್ಷವಲ್ಲ. ಮುಸ್ಲಿಮರು ಸೇರಿದಂತೆ ಎಲ್ಲಾ ಮತದವರ ರಕ್ಷಣೆಗೆ ಈ ಪಾರ್ಟಿ ಬದ್ಧವಾಗಿದೆ.
* ಗಬ್ಬರ್ ಸಿಂಗ್ ಶೂಟಿಂಗ್ ವೇಳೆ ಗುಜರಾತಿಗೆ ಹೋಗಿದ್ದೆ. ಮೋದಿ ಅವರ ರಾಜ್ಯ ಅಭಿವೃದ್ಧಿ ಬಗ್ಗೆ ಕಣ್ಣಾರೆ ನೋಡಿ ಬಂದೆ. ಆದರೂ ಅಲ್ಲಿದ್ದ ಸ್ಥಳೀಯ ಮುಸ್ಲಿಂ ಯುವಕರನ್ನು ಮಾತನಾಡಿಸಿದಾಗ ಮೋದಿ ಅವರು ನಿಜವಾದ ಅಭಿವೃದ್ಧಿ ಹರಿಕಾರ ಎಂಬುದು ತಿಳಿದು ಬಂದಿತು.
* ಕಾಂಗ್ರೆಸ್ ಹಠಾವೋ, ದೇಶ್ ಬಚಾವೋ.. ಅಬ್ ಕಿ ಬಾರ್ ಮೋದಿ ಸರ್ಕಾರ್ ಎಂದು ಘೋಷಣೆ ಮೊಳಗಿಸಿದ ಪವರ್ ಸ್ಟಾರ್.
* ಕಾಂಗ್ರೆಸ್ಸನ್ನು ಸೋಲಿಸಿ ದೇಶವನ್ನು ಉಳಿಸಿ ಎಂದು ಮತ್ತೊಮ್ಮೆ ಕನ್ನಡ ಭಾಷೆಯಲ್ಲಿ ಘರ್ಜಿಸಿದ ಗಬ್ಬರ್ ಸಿಂಗ್.
ಪವನ್ ಕಲ್ಯಾಣ್ ಅವರ ಅಣ್ಣ, ಕೇಂದ್ರ ಸಚಿವ ಚಿರಂಜೀವಿ ಅವರು ಸೋಮವಾರ ಕರ್ನಾಟಕದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಇದಾದ ಬಳಿಕವೇ ಪವನ್ ಅವರು ಅಖಾಡಕ್ಕೆ ಇಳಿಯುತ್ತಿರುವುದು ಕುತೂಹಲಕಾರಿಯಾಗಿದೆ. ಹೈದರಾಬಾದಿನ ಬೇಗಂಪೇಟ್ ವಿಮಾನ ನಿಲ್ದಾಣದಿಂದ ನಾಳೆ ಹೊರಟ ಪವನ್ ಅವರು ಬಿಜೆಪಿ ಒದಗಿಸಿರುವ ವಿಶೇಷ ಹೆಲಿಕಾಪ್ಟರ್ ಮೂಲಕ ಸಂಚರಿಸಿ ಕರ್ನಾಟಕದ ಕೋಲಾರ, ರಾಯಚೂರು, ಗುರುಮಿಠಕಲ್ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಡೆಸಲಿದ್ದಾರೆ.
#PawanKalyan On Stage @ #Kollar with @narendramodi ji Pic front cover of Podium #AbKiBaarModiSarkaar @pawanjanasena pic.twitter.com/mCT4pmogCN
— Sidhu SiddartH Roy.! (@UrsAnurag) April 15, 2014 -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications