ಪ್ಯಾರಡೈಸ್ ಪೇಪರ್ಸ್: ಹರ್ಷ ಮೊಯ್ಲಿ ಕಂಪನಿಯಲ್ಲಿ ವಿದೇಶಿ ಹೂಡಿಕೆ
ಬೆಂಗಳೂರು, ನವೆಂಬರ್ 6: ಪನಾಮ ಪೇಪರ್ಸ್ ಮಾದರಿಯಲ್ಲಿ ಸದ್ದು ಮಾಡಿರುವ ಪ್ಯಾರಡೈಸ್ ಪೇಪರ್ಸ್ 714 ಭಾರತೀಯರು ಸೇರಿ ಹಲವು ದೇಶಗಳ ಉದ್ಯಮಿಗಳು, ರಾಜಕಾರಣಿಗಳ ಗೌಪ್ಯ ವ್ಯವಹಾರಗಳನ್ನು ಬಯಲು ಮಾಡಿದೆ.
ಈ ಪಟ್ಟಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯ್ಲಿ ಪುತ್ರ ಹರ್ಷ ಮೊಯ್ಲಿ ಹೆಸರಿದೆ.

ಹರ್ಷ ಮೊಯ್ಲಿಗೆ ಸೇರಿದ 'ಮೋಕ್ಷ್ ಯುಗ್ ಆಕ್ಸೆಸ್ ಇಂಡಿಯಾ ಕ್ಯಾಪಿಟಲ್'ನಲ್ಲಿ ಯುನಿಟಸ್ ಗ್ರೂಪ್ ಗೆ ಸೇರಿದ ಕಂಪೆನಿಗಳು ಹೂಡಿಕೆ ಮಾಡಿವೆ ಎಂದು 'ದಿ ಇಂಡಿಯನ್ ಎಕ್ಸ್ ಪ್ರೆಸ್' ವರದಿ ಮಾಡಿದೆ.
ಯುನಿಟಸ್ ಲ್ಯಾಬ್, ಯುನಿಟಸ್ ಈಕ್ವಿಟಿ ಫಂಡ್, ಯುನಿಟಸ್ ಕ್ಯಾಪಿಟಲ್, ಯುನಿಟಸ್ ಸೀಡ್ ಫಂಡ್, ಯುನಿಟಸ್ ಇಂಪ್ಯಾಕ್ಟ್ ನಂಥ ಬೆಂಗಳೂರು ಮತ್ತು ಸಿಯಾಟಲ್ ನಲ್ಲಿ ನೋಂದಣಿಯಾದ ಕಂಪೆನಿಗಳನ್ನು ಈ ಯೂನಿಟಸ್ ಗ್ರೂಪ್ ಹೊಂದಿದೆ. ಈ ಕಂಪನಿಗಳ ಮೂಲಕವೇ ಹರ್ಷ್ ಮೊಯ್ಲಿ ಕಂಪೆನಿಯಲ್ಲಿ ಹೂಡಿಕೆ ಮಾಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
2012ರ ಪ್ರಕಾರ ಹರ್ಷ ಮೊಯ್ಲಿ ಮೋಕ್ಷ್ ಯುಗ್ ಕಂಪನಿಯಲ್ಲಿ ಶೇಕಡಾ 37.24 ಶೇರುಗಳನ್ನು ಹೊಂದಿದ್ದರು. ಈ ಕಂಪನಿ ಲಾಭದಾಯಕ ಕಂಪೆನಿಯಾಗಿದ್ದು ಗ್ರಾಮೀಣ ರೈತರ ಆದಾಯ ವೃದ್ಧಿ ಮಾಡುವಲ್ಲಿ ಕೆಲಸ ಮಾಡುತ್ತದೆ ಎಂದು ಕಂಪೆನಿ ಹೇಳಿಕೊಳ್ಳುತ್ತದೆ.
'ಅಂತರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ' (ಐಸಿಐಜೆ) ಈ ಎಲ್ಲಾ ದಾಖಲೆಗಳನ್ನು ಹೊರಗೆಡಹಿದೆ. ಒಟ್ಟು ಸಿರಿವಂತರ 1.34 ಕೋಟಿ ದಾಖಲೆಗಳನ್ನು ಬಿಡುಗಡೆ ಮಾಡಲಾಗಿದೆ.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಇದೇ ಹರ್ಷ ಮೊಯ್ಲಿ ಕನ್ನಡ ಸ್ಟಾರ್ಟ್ ಅಪ್ ಆನ್ಲೈನ್ ಮಾಧ್ಯಮ ಸಂಸ್ಥೆಯೊಂದರಲ್ಲಿಯೂ ಹಣ ಹೂಡಿದ್ದನ್ನೂ ಸ್ಮರಿಸಬಹುದು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್












Click it and Unblock the Notifications