Get Updates
Get notified of breaking news, exclusive insights, and must-see stories!

"ಉತ್ತರ ಕರ್ನಾಟಕದ ಹಿನ್ನಡೆಗೆ ಇದೇ ಕಾರಣ"

Uttara Karnataka: "ಚಾಲುಕ್ಯರು, ರಾಷ್ಟ್ರಕೂಟರು ಹಾಗೂ ವಿಜಯನಗರ ಸಾಮ್ರಾಜ್ಯದಂತಹ ಮಹತ್ವದ ಇತಿಹಾಸವಿರುವ, ದೊಡ್ಡ ದೊಡ್ಡ ಶ್ರೀಮಂತ ಸಾಮ್ರಾಜ್ಯವಿದ್ದ ಉತ್ತರ ಕರ್ನಾಟಕದ ಈಗಿನ ಪರಿಸ್ಥಿತಿ ಶೋಚನೀಯವಾಗಿದೆ. ಉತ್ತರ ಕರ್ನಾಟಕದ ಕೆಲವು ಯುವಕರಿಗೆ ಜವಾಬ್ದಾರಿ ಇಲ್ಲ... ಕೆಲವರು ಕುಡುಕರು ಇನ್ನೂ ಕೆಲವರು ತಂಬಾಕು ಸೇವನೆ ಮಾಡುತ್ತಾರೆ. ಈ ಭಾಗದಲ್ಲಿ ಕೆಲವು ನಗರಗಳು ಅಭಿವೃದ್ಧಿ ಹಾಗೂ ಸ್ವಚ್ಛತೆ ಕೊರತೆ ಇದೆ" ಇದು "ನನ್‌ ಮಿನಿ ರೇಡಿಯೋ" ಖ್ಯಾತಿಯ ಯೂಟ್ಯೂಬರ್ ಹರೀಶ್‌ ಅವರು ಹೇಳಿರುವ ಮಾತು. ಈ ವಿಡಿಯೋ ಉತ್ತರ ಕರ್ನಾಟಕದವರನ್ನು ಕೆರಳಿಸಿದೆ. ಉತ್ತರ ಕರ್ನಾಟಕದ ಬಗ್ಗೆ ಏನೂ ತಿಳಿದುಕೊಳ್ಳದೆ ಸುಮ್ಮನೆ ಮಾತನಾಡಬೇಕು ಅಂತ ಮಾತನಾಡಿದಾಗ ಈ ರೀತಿ ಆಗುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಏನಿದು ವಿವಾದ ಎನ್ನುವ ವಿವರ ಇಲ್ಲಿದೆ.

ಉತ್ತರ ಕರ್ನಾಟಕದ ಯುವಕರು ಹಾಗೂ ಪರಿಸ್ಥಿತಿಯ ಬಗ್ಗೆ ಹರೀಶ್‌ ಅವರು ಮಾಡಿರುವ ವಿಡಿಯೋಗೆ ಪರ - ವಿರೋಧ ವ್ಯಕ್ತವಾಗುತ್ತಿದೆ. ಆದರೆ ಉತ್ತರ ಕರ್ನಾಟಕದ ಬಹುತೇಕರು ಈ ವಿಡಿಯೋಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. "ಇಲ್ಲಿರುವ ಎಷ್ಟೋ ಹಳ್ಳಿಗಳಲ್ಲಿರುವ ಯುವಕರು, ಯುವತಿಯರು ಓದಬೇಕು ಏನಾದರೂ ಮಾಡಬೇಕು ಎನ್ನುವ ಛಲವನ್ನೇ ಕಳೆದುಕೊಂಡು ಬಿಟ್ಟಿದ್ದಾರೆ. ಇಲ್ಲಿರುವ ಎಷ್ಟೋ ಯುವಕರು 10ನೇ ತರಗತಿಯ ನಂತರ ಓದುವುದೇ ಇಲ್ಲ. ರಸ್ತೆ ರಸ್ತೆಗಳಲ್ಲಿ ಅಡ್ಡಾಡಿರುತ್ತಿರುತ್ತಾರೆ. ಜೀವನದಲ್ಲಿ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಕೆಲವರು ತಂಬಾಕು ಚಟವನ್ನು ಬೆಳೆಸಿಕೊಂಡಿದ್ದಾರೆ" ಎನ್ನುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಅವರು ಮಾತನಾಡಿದ್ದಾರೆ.

Opposition to YouTuber Harishs video Some Youth in North Karnataka lack willpower

ಉತ್ತರ ಕರ್ನಾಟಕದವರಿಂದ ವಿರೋಧ: ಈ ವಿಡಿಯೋವನ್ನು ರಿಸರ್ಚ್‌ ಮಾಡದೆ ಮಾಡಲಾಗಿದೆ. ಚೂರಾದರೂ ರಿಸರ್ಚ್‌ ಮಾಡಿಕೊಂಡು ವಿಡಿಯೋ ಮಾಡಬೇಕು. ಈ ರೀತಿಯ ಸೂಕ್ಷ್ಮ ವಿಚಾರಗಳನ್ನು ಮಂಡಿಸುವಾಗ ಕೆಲವರು.. ಕೆಲವೊಂದು ಅಂತ ಹೇಳುವುದರಲ್ಲಿ ಅರ್ಥವಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಶೇಷಗಿರಿ ದೇಶಪಾಂಡೆ ಎನ್ನುವವರು, ಅಣ್ಣ Please Restrict yourself to OMR (ಮಂಗಳೂರು). ಸುಮ್ನೆ ಉತ್ತರ ಕರ್ನಾಟಕದ ಬಗ್ಗೆ ಏನೋ ಏನೋ ವದರ್ ಬ್ಯಾಡಾ. - High Crime Rates - High Alcohol Consumption are more in your OMR, Google first ಎಂದು ಹೇಳಿದ್ದಾರೆ.

ಸಚಿನ್‌ ಎನ್‌ ಎನ್ನುವವರು, ಏನೋ ಕೊನೆಗೂ ನಮ್ಮ ಉತ್ತರ ಕರ್ನಾಟಕದ ಪರಿಸ್ಥಿತಿ ಬಗ್ಗೆ ಹೋರಾಟಗಾರರು ಉತ್ತರ ಕರ್ನಾಟಕದ ಬಗ್ಗೆ ಮಾತನಾಡಿದದ್ದಾರೆ ಎನ್ನುವಾಗಲೇ ಅಲ್ಲಿ ಆಗಿದ್ದು ಬರೀ ಅವಮಾನ. ವಿಡಿಯೋದಲ್ಲಿ ಬಂದ ಮಾತುಗಳು

Opposition to YouTuber Harishs video Some Youth in North Karnataka lack willpower

* ಕುಡುಕರು

* ಕಸ ಎಸೆಯೋ ಕೊಳಕರು

* ಪತ್ನಿ ಪೀಡಕರು

* ಕೊಡುವ ಸೌಲಭ್ಯ ತಿರಸ್ಕರಿಸೋರು

* ಛಲ - ಗುರಿ ಇಲ್ಲದವರು

* ಶುಚಿತ್ವ ಇಲ್ಲದವರು

* ವಾಸ್ತವಿಕತೆ ತಿಳಿಯದವರು

* ಧರ್ಮಾಂಧರು ಇವೆಲ್ಲ ಬೇರೆಲ್ಲೂ ಇಲ್ವಾ? ಅಂತ ಪ್ರಶ್ನೆ ಮಾಡಿದ್ದಾರೆ.

ಉತ್ತರ ಕರ್ನಾಟಕದ ಮಕ್ಕಳು ಯಾಕೆ ಓದುತ್ತಿಲ್ಲ. ಯುವಕರು ಯಾಕೆ ಗುಳೆ ಹೋಗುತ್ತಿದ್ದಾರೆ, ಸರ್ಕಾರದ ಸೌಲಭ್ಯಗಳೇನಾದವು ? ತಿಳಿಬೇಕಂದ್ರೆ ಸರ್ಕಾರಿ ಶಾಲಾ ಕಾಲೇಜುಗಳಲ್ಲಿನ ಶಿಕ್ಷಣ ಗುಣಮಟ್ಟ ಪರಿಕ್ಷಿಸಿ, ಸರ್ಕಾರದ ಸೌಕರ್ಯಗಳು ಪೇಪರ್ ಬಿಟ್ಟು ಮನೆಗೆ ಬಂದಿದಾವಾ ಕೇಳಿ, ಹೊಲ ಇದ್ರು ಬೆಲೆ ಯಾಕಿಲ್ಲ ಹೇಳಿ. ಇದ್ರು ನಿಮ್ಮೂರಿಗೆ ನೀರಾವರಿ ಯೋಜನೆಗಳು ಯಾಕಿಲ್ಲ ಕೇಳಿ ಅಂತ Tweet‌ ಕರ್ನಾಟಕ ಎನ್ನುವ ಖಾತೆಯಿಂದ ಟ್ವೀಟ್‌ ಮಾಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+