ಕೆಪಿಎಸ್ಸಿ ಹಳೆ ಪದ್ಧತಿ ಮುಂದುವರಿಕೆ: ಜನರಲ್ ಮೆರಿಟ್ ಬದಲಿಲ್ಲ
ಬೆಂಗಳೂರು, ನವೆಂಬರ್ 20: ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಪರಿಶಿಷ್ಟರು ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳನ್ನು ಸಾಮಾನ್ಯ ವರ್ಗಕ್ಕೆ ಆಯ್ಕೆ ಮಾಡಬಾರದೆಂಬ ನಿರ್ಧಾರವನ್ನು ಮೊದಲಿನಂತೆಯೇ ಮುಂದುವರೆಸಲು ತೀರ್ಮಾನಿಸಲಾಗಿದೆ.
ಪರಿಶಿಷ್ಟ ಜಾತಿ, ಪಂಗಡ ಹಿಂದುಳಿದ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೆರಿಟ್ ಕೋಟಾದಲ್ಲಿ ನೇಮಕಕ್ಕೆ ಅವಕಾಶ ನೀಡದೇ ಕೆಪಿಎಸ್ಸಿ ನೇಮಕ ಪ್ರಕ್ರಿಯೆ ನಡೆಸಬೇಕು ಎಂದು ಡಿಪಿಆರ್ ನಿಂದ ಸುತ್ತೋಲೆ ಹೊರಡಿಸಲಾಗಿತ್ತು.
ಲೋಕಸೇವಾ ಆಯೋಗದ ನೇಮಕಾತಿ ಮೀಸಲಿಗೆ ಸಂಬಂಧಿಸಿದಂತೆ ಯಾವುದೇ ಬದಲಾವಣೆ ಇಲ್ಲ, ಮೊದಲಿನಂತೆಯೇ ನಿಯಮಗಳನ್ನು ಮುಂದುವರೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಸಭೆಯಲ್ಲಿ ಕೆಪಿಸಿಎಸ್ಸಿ ನೇಮಕಾತಿ ವಿಷಯದಲ್ಲಿ ಮಾನದಂಡ ಬದಲಾವಣೆ ಮಾಡಲಾಗುತ್ತಿದೆ ಎಂಬ ವಿಚಾರವೂ ಸಾಕಷ್ಟು ಚರ್ಚೆಯಾಗಿದೆ.

ಸದ್ಯಕ್ಕೆ ಇರುವ ನಿಯಮಗಳನ್ನು ಮುಂದುವರೆಸಲು ನಿರ್ಣಯಿಸಲಾಗಿದೆ. ಎಸ್ಸಿ/ಎಸ್ಟಿ ಮತ್ತು ಹಿಂದುಳಿದ ವರ್ಗಗಳ ಪ್ರತಿಭಾನ್ವಿತ ಅಭ್ಯರ್ಥಿಗಳ ವರ್ಗದಲ್ಲಿ ಆಯ್ಕೆಯಾದರೆ ಆ ಆಯ್ಕೆಯನ್ನು ಸಾಮಾನ್ಯ ವರ್ಗಕ್ಕೆ ಪರಿಗಣಿಸಬೇಕು.
ಮೀಸಲಾತಿಗೆ ಸಮಸ್ಯೆಯಾಗದ ರೀತಿಯಲ್ಲಿ ನಡೆದುಕೊಂಡು ಬರಲಾಗಿದೆ.ಇದನ್ನು ಮುಂದುವರೆಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.











Click it and Unblock the Notifications