ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ ಎಂದ ಸಿಎಂ
ಬೆಂಗಳೂರು.ಜೂನ್, 20: 'ಸಚಿವ ಸಂಪುಟ ಪುನಾರಚನೆಯ ಸಂದರ್ಭದಲ್ಲಿ ತಮಗೆ ಮಂತ್ರಿ ಸ್ಥಾನ ದೊರಕಿಲ್ಲ ಎಂಬ ಕಾರಣಕ್ಕಾಗಿ ಕೆಲವರಿಗೆ ಅಸಮಾಧಾನವಾಗಿರುವುದು ನಿಜ. ಈ ಬಗ್ಗೆ ಖುದ್ದು ನಾನೇ ಮಾತುಕತೆ ನಡೆಸಿ ಭಿನ್ನಾಭಿಪ್ರಾಯ ಬಗೆಹರಿಸುತ್ತೇನೆ. ಪಕ್ಷದಲ್ಲಿ ಯಾವುದೇ ಭಿನ್ನಮತದ ಚುಟುವಟಿಕೆ ಇಲ್ಲ' ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನ
ಅಂಬೇಡ್ಕರ್
ಭವನದಲ್ಲಿ
ಪ್ರಗತಿಪರ
ಮಠಾಧೀಶರು
ಆಯೋಜಿಸಿದ್ದ
ಅಂಬೇಡ್ಕರ್
ಜಯಂತಿ
ಕಾರ್ಯಕ್ರಮ
ನಂತರ
ಸುದ್ದಿಗಾರರೊಂದಿಗೆ
ಮಾತನಾಡಿದ
ಅವರು,
ರಾಜ್ಯದಲ್ಲಿ
ಸಂಪುಟದಿಂದ
ಕೈಬಿಟ್ಟ
ಸಚಿವರುಗಳು
ಅಥವಾ
ಶಾಸಕರುಗಳು
ಪ್ರತಿಭಟನೆ
ಮಾಡುತ್ತಿಲ್ಲ.
ರಾಜ್ಯದ
176
ತಾಲ್ಲೂಕುಗಳಲ್ಲಿ
ಪ್ರತಿಭಟನೆ
ಆಗುತ್ತಿದಿಯೇ
ಎಂದು
ಸುದ್ದಿಗಾರರಿಗೆ
ಮರು
ಪ್ರಶ್ನೆ
ಹಾಕಿದರು.
[ಶಾಸಕ
ಸ್ಥಾನಕ್ಕೆ
'ರೆಬೆಲ್
ಸ್ಟಾರ್'
ಅಂಬರೀಶ್
ರಾಜೀನಾಮೆ]
ಸಚಿವ ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ವೇಳೆ ಆಕಾಂಕ್ಷಿಗಳಿಗೆ ಅಸಮಾಧಾನವಾಗುವುದು ಸಹಜ. ಅತೃಪ್ತರನ್ನು ಕರೆದು ಮಾತನಾಡಿ ಸಮಾಧಾನ ಪಡಿಸುತ್ತೇನೆ ಎಂದರು.
ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರೆ ಸಿಎಂ ಸ್ಥಾನ ಕಳೆದುಕೊಳ್ಳುತ್ತಾರೆ ಎಂಬ ಪ್ರತೀತಿ ಇತ್ತು. ನಾನು ಹಲವಾರು ಬಾರಿ ಹೋಗಿದ್ದೇನೆ. ಈಗಲೂ ನಾನೇ ಸಿಎಂ, ಮುಂದಿನ ಚುನಾವಣೆಯಲ್ಲೂ ಗೆದ್ದು ಸಿಎಂ ಆಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.[ಮೊದಲ ಬಾರಿ ಸಚಿವರಾದ 7 ಶಾಸಕರ ಪರಿಚಯ]
ನಾನು
ಸಚಿವ
ಸ್ಥಾನ
ತಪ್ಪಿಸಿಲ್ಲ:
ಡಿಕೆಶಿ
ಒಕ್ಕಲಿಗ
ಸಮುದಾಯದ
ನಾಯಕ,
ಹಿರಿಯ
ಶಾಸಕ
ಎಂ.ಕೃಷ್ಣಪ್ಪ
(ಲೇಔಟ್
ಕೃಷ್ಣಪ್ಪ)
ಅವರಿಗೆ
ನಾನು
ಸಚಿವ
ಸ್ಥಾನ
ತಪ್ಪಿಸಿಲ್ಲ.
ಮಂತ್ರಿ
ಸ್ಥಾನ
ತಪ್ಪಿದ್ದಕ್ಕಾಗಿ
ಸಿಎಂ
ಸಿದ್ದರಾಮಯ್ಯ
ಹಾಗೂ
ಹೈಕಮಾಂಡ್
ದೂರಲು
ಸಾಧ್ಯವಿಲ್ಲದ
ಕಾರಣ
ಪಾಪ,ಅವರು
ನನ್ನನ್ನು
ದೂರಿದ್ದಾರೆ
ಎಂದು
ಇಂಧನ
ಸಚಿವ
ಡಿ.ಕೆ.ಶಿವಕುಮಾರ್
ತಿರುಗೇಟು
ನೀಡಿದ್ದಾರೆ.
ಶಾಸಕ ಎಂ.ಕೃಷ್ಣಪ್ಪ ಅವರ ಬಗ್ಗೆ ಅಪಾರ ಗೌರವವಿದೆ. ಅವರು ಸತತವಾಗಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರ ಪುತ್ರ ಪ್ರಿಯಾಕೃಷ್ಣ ಸಹ ಗೋವಿಂದರಾಜನಗರ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಅವರದ್ದೇ ಕೊಡುಗೆ ನೀಡಿದ್ದಾರೆ. ನಾನೇಕೆ ಅವರು ಸಚಿವರಾಗುವುದನ್ನು ತಪ್ಪಿಸಲಿ ಎಂದು ಶಿವಕುಮಾರ್ ಪ್ರಶ್ನೆ ಮಾಡಿದರು.[ಅಹಿಂದ ನಾಯಕ ಸಿದ್ದರಾಮಯ್ಯಗೆ ಲಿಂಗಾಯತರ ಮೇಲೆ ಕಣ್ಣು!]
ಬೆಂಗಳೂರಿನ ಕೆಇಬಿ ಸಭಾಂಗಣದಲ್ಲಿ ಆಯೋಜಿಸಿದ್ದ ಇಂಜಿನಿಯರ್ ಗಳ ಸಭೆಯಲ್ಲಿ ಮಾತನಾಡಿ, ಮುಂದಿನ ಐದು ವರ್ಷಗಳಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ನಾವು ಸ್ವಾವಲಂಬಿಗಳಾಗಬೇಕು. ಜಲ, ಪವನ, ಉಷ್ಣ, ಹಾಗೂ ಸೋಲಾರ್ ವಿದ್ಯುತ್ ಉತ್ಪಾದಿಸುವ ಮೂಲಕ ರಾಜ್ಯದ ಬೇಡಿಕೆ ನಾವೇ ಪೂರೈಸಿಕೊಳ್ಳುವಂತೆ ಮಾಡಬೇಕು ಎಂದು ಹೇಳಿದರು.