ಜಯಘೋಷದೊಂದಿಗೆ ಬನ್ನಿ ಮಂಟಪ ತಲುಪಿದ ಜಂಬೂ ಸವಾರಿ
ಮೈಸೂರು, ಅಕ್ಟೋಬರ್. 23: ನಾಡಹಬ್ಬ ದಸರಾ ಮಹೋತ್ಸವಕ್ಕೆ ಜಂಬೂಸವಾರಿಯೊಂದಿಗೆ ತೆರೆಬಿದ್ದಿದೆ. ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ಧರಾಮಯ್ಯ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪನೆಗೊಂಡಿರುವ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿದರು.
ರೈತರಿಗೆ ಆತ್ಮ ಸ್ಥೈರ್ಯ ತುಂಬುವ ಉದ್ದೇಶದಿಂದ ಈ ಬಾರಿ ದಸರಾಕ್ಕೆ ಪ್ರಗತಿಪರ ರೈತರಿಂದಲೇ ಚಾಲನೆ ನೀಡಲಾಗಿದೆ. ಮುಂಗಾರು ಕೈ ಕೊಟ್ಟಿದ್ದರೂ ಹಿಂಗಾರು ಬೆಳೆ ಉತ್ತಮವಾಗಿ ಬರುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ರೈತರು ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣವಾಗಲಿ ಎಂದು ಸಿದ್ಧರಾಮಯ್ಯ ಪ್ರಾರ್ಥನೆ ಮಾಡಿದರು.[ಮೈಸೂರು ಅರಮನೆ ಇತಿಹಾಸ]
ರೈತರ ನೆರವಿಗೆ ರಾಜ್ಯ ಸರ್ಕಾರ ಬದ್ಧ, ಕೇಂದ್ರ ಸರ್ಕಾರ ಯಾವ ಪರಿಹಾರವನ್ನು ಬಿಡುಗಡೆ ಮಾಡಲಾಗಿಲ್ಲ. ರಾಜ್ಯದ ಸಮಗ್ರ ಚಿತ್ರಣವನ್ನು ಗಮನದಲ್ಲಿ ಇರಿಸಿಕೊಂಡು ಕೆಲಸ ಮಾಡಲಾಗುತ್ತಿದೆ. ಈಗಾಗಲೇ ಪರಿಹಾರ ವಿತರಣಾ ಕಾರ್ಯ ಕೈಗೊಂಡಿದ್ದು ಬಡ್ಡಿ ಮನ್ನಾಕ್ಕೆ ಸುತ್ತೋಲೆ ಹೊರಡಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
#MysuruDasara
procession
#JambooSavari
countdown
started
pic.twitter.com/8RGRwwEgwL
—
Rohini
Mithra
(@RohiniMithra)
October
23,
2015
ಸಂಜೆ
5.30:
ಜಯಘೋಷಗಳೊಂದಿಗೆ
ಬನ್ನಿ
ಮಂಟಪ
ತಲುಪಿದ
ದಸರಾ
ಜಂಬೂ
ಸವಾರಿ
ಮಧ್ಯಾಹ್ನ
3.45:ಸಯ್ಯಾಜಿರಾವ್
ರಸ್ತೆಯಲ್ಲಿ
ಮೆರವಣಿಗೆ
ಮಧ್ಯಾಹ್ನ
3.40:
ಅರಮನೆಯಿಂದ
ಹೊರಟ
ಜಂಬೂ
ಸವಾರಿ
ಮೆರವಣಿಗೆ,
ಅರ್ಜುನನಿಗೆ
ಉಳಿದ
ದಸರಾ
ಆನೆಗಳ
ಸಾಥ್
ಮಧ್ಯಾಹ್ನ
3.30:
ಜಂಬೂ
ಸವಾರಿಗೆ
ಪುಷ್ಪ
ನಮನ
ಸಲ್ಲಿಸಿದ
ಯದುವೀರ್
ಮಧ್ಯಾಹ್ನ
2.45:
ಚಿನ್ನದ
ಅಂಬಾರಿಯಲ್ಲಿ
ಪ್ರತಿಷ್ಠಾಪನೆಗೊಂಡಿರುವ
ಚಾಮುಂಡೇಶ್ವರಿ
ದೇವಿಗೆ
ಪುಷ್ಪಾರ್ಚನೆ
ಮಾಡಿದ
ಸಿಎಂ
ಸಿದ್ದರಾಮಯ್ಯ
ಮಧ್ಯಾಹ್ನ
2.00:
ಆನೆ
ಅರ್ಜುನನ
ಮೇಲೆ
ಅಂಬಾರಿಯನ್ನು
ಹಗ್ಗದಿಂದ
ಬಿಗಿದ
ಸಿಬ್ಬಂದಿ
ಮಧ್ಯಾಹ್ನ
1.00:
ಸರತಿ
ಸಾಲಿನಲ್ಲಿ
ಸಾಗುತ್ತಿರುವ
ವಿವಿಧ
ಇಲಾಖೆಗಳ
ಸ್ಥಬ್ಧಚಿತ್ರಗಳು
ಮಧ್ಯಾಹ್ನ
12.10:ಚಿನ್ನದ
ಅಂಬಾರಿಯಲ್ಲಿ
ಚಾಮುಂಡಿ
ದೇವಿ
ಪ್ರತಿಷ್ಠಾಪನೆ
ಮಧ್ಯಾಹ್ನ
12.10:
ರಥ
ಬೀದಿಯಲ್ಲಿ
ನಗಾರಿ
ಸದ್ದಿನೊಂದಿಗೆ
ಸಾಗುತ್ತಿರುವ
ಕಲಾ
ತಂಡಗಳು
ಬೆಳಿಗ್ಗೆ
12.00:
30
ಕ್ಕೂ
ಆಕರ್ಷಕ
ಸ್ಥಬ್ಧ
ಚಿತ್ರಗಳ
ಒಂದರ
ಹಿಂದೆ
ಹೊರಟಿವೆ
ಬೆಳಿಗ್ಗೆ
11.30:
ನಂದಿಧ್ವಜಕ್ಕೆ
ಪೂಜೆ
ಸಲ್ಲಿಸಿದ
ಸಿಎಂ
ಸಿದ್ದರಾಮಯ್ಯ
ರೈತರ
ಸಮಸ್ಯೆಗಳನ್ನು
ಬಗೆಹರಿಸುವ
ಭರವಸೆ
ನೀಡಿದರು