ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಮೈ ಮರೆಯದಿರಿ: ಈ ಎಚ್ಚರಿಕೆಗಳನ್ನು ನೆನಪಿನಲ್ಲಿಡಿ
ಇತಿಹಾಸದ ಕಾಲಗರ್ಭದೊಳಗೆ ವರ್ಷವೊಂದನ್ನು ಸರಿಸಿ ಹೊಸವರ್ಷವನ್ನು ಸ್ವಾಗತಿಸಲು ನಾವು ಕಾತರರಾಗಿದ್ದೇವೆ. ಪ್ರತಿ ವರ್ಷವೂ ಕಳೆದ ದಿನಗಳಲ್ಲಿನ ನೋವುಗಳನ್ನು ಮರೆತು ಸಂತಸದ ಕ್ಷಣಗಳನ್ನು ಮೆಲುಕು ಹಾಕುತ್ತಾ ಹೊಸ ನಿರ್ಧಾರ, ತೀರ್ಮಾನಗಳನ್ನು ಮಾಡಿಕೊಂಡು ಹೊಸವರ್ಷಕ್ಕೆ ಕಾಲಿಡಲು ತಯಾರಾಗುತ್ತಿದ್ದೇವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೊಸವರ್ಷದ ಆರಂಭದಲ್ಲಿಯೇ ಕೊರೊನಾ ಸೋಂಕು ಹೆಚ್ಚಾಗುತ್ತಿರುವುದ ಆತಂಕಕಾರಿಯಾಗಿದೆ. ಆದರೂ ಒಂದಷ್ಟು ಎಚ್ಚರಿಕೆಯೊಂದಿಗೆ ಹೊಸವರ್ಷವನ್ನು ಸ್ವಾಗತಿಸೋಣ.
ಈ ಬಾರಿ ಕೊರೊನಾ ಆರ್ಭಟವೂ ಇರುವುದರಿಂದ ನಾವೆಲ್ಲರೂ ಎಚ್ಚರಿಕೆಯ ಹೆಜ್ಜೆಯಿಡುವುದು ಅನಿವಾರ್ಯವಾಗಿದೆ. ಹಿಂದಿನ ವರ್ಷಗಳಲ್ಲಿ ಅನುಭವಿಸಿದ ನೋವುಗಳನ್ನು ಮೆಲುಕು ಹಾಕುತ್ತಾ ಮುಂಜಾಗ್ರತಾ ಕ್ರಮಗಳೊಂದಿಗೆ ಕಾಲಿಡುವುದು ಬಹುಮುಖ್ಯವಾಗಿದೆ. 2023ರ ವರ್ಷವು ಹಲವು ಒಳಿತು ಕೆಡಕುಗಳಿಗೆ ಸಾಕ್ಷಿಯಾಗಿದೆ. ಕೆಡಕುಗಳನ್ನು ಮರೆತು, ಒಳಿತನ್ನು ನೆನಪಿಸುತ್ತಾ ಮುನ್ನಡೆಯೋಣ. ಬರಗಾಲದ ಪರಿಣಾಮಗಳು ಹೊಸವರ್ಷದ ಮೇಲೆ ಪರಿಣಾಮ ಬೀರಲಿದೆ. ಜೊತೆಗೆ ಕೊರೊನಾ ಸೋಂಕು ಎಚ್ಚರಿಕೆ ಗಂಟೆಯಾಗಲಿದೆ. ಅದನ್ನು ನಿಭಾಯಿಸುವ ಆಶಾಭಾವನೆ ನಮ್ಮಲ್ಲಿರಬೇಕಾಗಿದೆ.

ಮೇಲ್ನೋಟಕ್ಕೆ ಹೊಸವರ್ಷ ಪ್ರಾಕೃತಿಕವಾಗಿ ಒಂದಷ್ಟು ಸವಾಲುಗಳನ್ನು ನೀಡಿರುವುದು ಗೋಚರಿಸುತ್ತಿದೆ. ಎಲ್ಲ ವರ್ಷಗಳಲ್ಲಿಯೂ ನೋವು, ನಲಿವು, ಸಂಕಷ್ಟಗಳು, ಪ್ರಾಕೃತಿಕ ವಿಕೋಪಗಳು, ಯುದ್ಧದ ಭಯ ಹೀಗೆ ಹತ್ತು ಹಲವು ಸಮಸ್ಯೆಗಳು ಇದ್ದದ್ದೇ ಎಲ್ಲವನ್ನು ನಿಭಾಯಿಸಿಕೊಂಡು ಮುನ್ನಡೆದುಕೊಂಡು ಬಂದಿದ್ದೇವೆ. ಹೀಗೆ ಬರುವಾಗ ಹತ್ತು ಹಲವನ್ನು ಕಳೆದುಕೊಂಡಿದ್ದೇವೆ. ಹಾಗೆಯೇ ಇನ್ನೇನನ್ನೋ ಪಡೆದುಕೊಂಡಿದ್ದೇವೆ.
ಹೊಸವರ್ಷದ ಆಚರಣೆ ಹೇಗಿರಬೇಕು?
ಕೊರೊನಾದಿಂದಾಗಿ ಏನೆಲ್ಲ ಆಗಿದೆ ಎಂಬುದು ನಮ್ಮ ಮುಂದಿದೆ. ಅದನ್ನೊಮ್ಮೆ ಮೆಲುಕು ಹಾಕಿದರೆ ಕೊರೊನಾದಿಂದಾಗಿ ಹಲವರು ಅನಾಥ ಶವಗಳಾದರು. ತಬ್ಬಲಿಯಾದರು, ಹೊಟ್ಟೆಗೆ ಹಿಟ್ಟಿಲ್ಲದೆ ಬಳಲಿದರು, ಇದ್ದ ಕೆಲಸ ಕಳೆದುಕೊಂಡರು. ಕೈತುಂಬಾ ಬರುತ್ತಿದ್ದ ವೇತನಕ್ಕೆ ಕತ್ತರಿ ಬಿತ್ತು. ಹೀಗೆ ಒಂದೇ ಎರಡೇ ನೂರಾರು ಸಮಸ್ಯೆಗಳನ್ನು ಜನ ಎದುರಿಸಿದರು. ಕಾಯಿಲೆಗಳಿಂದ ಬಳಲಿದರು. ನಮ್ಮವರು ಎಂದು ಕೊಂಡವರಿಂದಲೇ ದೂರವಾಗಿ ಬದುಕಿದರು. ಈ ಸೋಂಕಿನಿಂದ ನಾವು ನೀವು ಎಲ್ಲರೂ ನೋವು ಅನುಭವಿಸಿದರವೇ ಹೀಗಾಗಿ ಇದನ್ನು ಮನದಲ್ಲಿಟ್ಟುಕೊಂಡು ನಮ್ಮ ಹೊಸ ವರ್ಷಾಚರಣೆ ಹೇಗಿರಬೇಕು? ಹೇಗಿದ್ದರೆ ಒಳಿತು ಎಂಬ ತೀರ್ಮಾನಕ್ಕೆ ಬರಬೇಕಿದೆ.

ಈಗ ನೋಡಿ ಹೊಸವರ್ಷಕ್ಕೆ ಓಮಿಕ್ರಾನ್ ರೂಪಾಂತರಿ (ಜೆಎನ್.1) ಇನ್ನೇನು ಗಂಡಾಂತರಗಳನ್ನು ತಂದೊಡ್ಡಲಿದೆಯೋ ಎಂಬ ಭಯವಂತು ಇದ್ದೇ ಇದೆ. ಹೀಗಿರುವಾಗ ನಾವೀಗ ಸ್ವಲ್ಪ ಎಚ್ಚರ ತಪ್ಪಿದರೂ ಅದಕ್ಕೆ ಕಂದಾಯ ಕಟ್ಟಲೇ ಬೇಕಾಗಿದೆ. ಹಾಗಾಗಿ ಪ್ರತಿವರ್ಷದಂತೆ ಹೊಸ ವರ್ಷದ ಆಗಮನದ ಈ ಕಾಲದಲ್ಲಿ ನಮ್ಮಲ್ಲಿ ಹೊಸ ಹೊಸ ಕನಸುಗಳು ಚಿಗುರಿದರೂ ಅದನ್ನು ನನಸು ಮಾಡಿಕೊಳ್ಳುವುದಕ್ಕಿಂತ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ನಾವು ಆದ್ಯತೆ ನೀಡುವುದು ಅನಿವಾರ್ಯವಾಗಿದೆ.
ಆದಷ್ಟು ಜನಜಂಗುಳಿಯಿಂದ ದೂರವಿರೋಣ
ನಾವು ಹೊಸ ವರ್ಷದಿಂದ ಹೊಸ ಮನುಷ್ಯರಾಗುವ ದೃಢ ನಿರ್ಧಾರಕ್ಕೆ ಬರಬೇಕಿದೆ. ಕೊರೊನಾದ ಬಗ್ಗೆ ಜಾಗ್ರತೆ ವಹಿಸುತ್ತೇನೆ ಎಂಬ ಶಪಥ ಮಾಡಬೇಕಿದೆ. ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸುತ್ತೇನೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತೇನೆ. ಆ ಮೂಲಕ ತನ್ನನ್ನು ಮತ್ತು ತನ್ನ ಅವಲಂಭಿತ ಕುಟುಂಬವನ್ನು ಕೊರೋನಾದಿಂದ ಕಾಪಾಡುತ್ತೇನೆ ಎಂಬ ವಾಗ್ದಾನವನ್ನು ತಪ್ಪದೆ ಮಾಡಬೇಕಿದೆ. ಕೊರೊನಾ ಇನ್ನೂ ಜೀವಂತವಾಗಿರುವ ಈ ಸಮಯದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿಡುವುದು ಬಹಳ ಮುಖ್ಯವಾಗಿದೆ. ಹಣ ಖರ್ಚು ಮಾಡಿ ಪಾರ್ಟಿ ಮಾಡಿ ಕುಣಿದು ಕುಪ್ಪಳಿಸುವುದು ಹೊಸವರ್ಷವಲ್ಲ. ಹೊಸವರ್ಷ ಬದುಕಿನಲ್ಲಿ ಹೊಸತನ ನೀಡುವಂತೆ ನೋಡಿಕೊಳ್ಳುವುದಾಗಿದೆ .

ಮೋಜು ಮಸ್ತಿಯೇ ವರ್ಷಾಚರಣೆ ಎಂಬುದನ್ನು ತಲೆಯಿಂದ ತೆಗೆದುಹಾಕಿ ಮನೆಯಲ್ಲಿಯೇ ಕುಟುಂಬದೊಂದಿಗೆ ವರ್ಷಾಚರಣೆ ಮಾಡೋಣ, ನಮ್ಮ ಕುಟುಂಬಕ್ಕೆ ಮತ್ತು ಇಡೀ ಜಗತ್ತಿಗೆ ಒಳ್ಳೆಯದಾಗಲಿ ಎಂದು ಬಯಸೋಣ. ನಾವು ಸಮಾಜದ ನಡುವೆ ಬದುಕುತ್ತಿದ್ದೇವೆ. ಸಮಾಜ ಉತ್ತಮವಾಗಿದ್ದರೆ ಮಾತ್ರ ನಾವೆಲ್ಲರೂ ನೆಮ್ಮದಿಯಾಗಿ ಬದುಕಲು ಸಾಧ್ಯ. ಹೀಗಾಗಿ ನೆಮ್ಮದಿಯ ಜೀವನಕ್ಕೆ ಅಗತ್ಯವಾಗಿರುವುದು ಏನು ಎಂಬುದನ್ನು ಅರಿತು ಕೊಳ್ಳುವುದು ಕೂಡ ಅಗತ್ಯವಾಗಿದೆ. 2022, 2023 ವರ್ಷದಲ್ಲಿ ನಾವು ಕೊರೋನಾ ಮರೆತು ಖುಷಿಯಾಗಿದ್ದೆವು. ಆದರೆ ವರ್ಷದ ಕೊನೆಯಲ್ಲಿ ಕೊರೊನಾ ರೂಪಾಂತರಿ ನಮ್ಮೆಲ್ಲರನ್ನು ಆತಂಕಕ್ಕೀಡು ಮಾಡಿದೆ.

ಹೊಸವರ್ಷಕ್ಕೆ ಎಚ್ಚರಿಕೆಯ ಹೆಜ್ಜೆಯಿಡೋಣ
ಇಷ್ಟಕ್ಕೂ ಈಗ ಅಬ್ಬರಿಸುತ್ತಿರುವ ಒಮಿಕ್ರಾನ್ ರೂಪಾಂತರಿ ಜೆಎನ್.1 ಬಗ್ಗೆ ಭಯ ಪಡಬೇಕಾಗಿಲ್ಲವಾದರೂ ಎಚ್ಚರಿಕೆ ವಹಿಸುವುದು ಬಹುಮುಖ್ಯವಾಗಿದೆ. ಆದ್ದರಿಂದ ಕೆಲವೊಂದು ಎಚ್ಚರಿಕೆ ಮತ್ತು ಜಾಗ್ರತೆಯನ್ನು ನಾವು ವಹಿಸಲೇ ಬೇಕಾಗಿದೆ. ಹೀಗಾಗಿ ಹೊಸವರ್ಷದಲ್ಲಿ ಒಳ್ಳೆಯ ಆಲೋಚನೆಗಳೊಂದಿಗೆ ಮುಂದೆ ಸಾಗಲು ಸಜ್ಜಾಗೋಣ. ನಾವು ಮತ್ತು ನಮ್ಮ ಸುತ್ತಮುತ್ತಲ ಜಗತ್ತು ಆರೋಗ್ಯವಾಗಿದ್ದರೆ ಇಡೀ ದೇಶ ಆರೋಗ್ಯವಾಗಿರಲು ಸಾಧ್ಯವಾಗಲಿದೆ.
-
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ -
Karnataka Weather: ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 39 ಡಿಗ್ರಿ ದಾಟಿದ ತಾಪಮಾನ -
ಮಾರ್ಚ್ 10ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಅಕ್ಷಯ ತೃತೀಯ 2026: ಏಪ್ರಿಲ್ 19ಕ್ಕೆ ಚಿನ್ನದಂತಹ ಹಬ್ಬ; ಶುಭ ಮುಹೂರ್ತ, ಪೂಜಾ ವಿಧಿವಿಧಾನ, ವಿವರ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
ಪ್ರವಾಸೋದ್ಯಮ ಇಲಾಖೆಯಿಂದ ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ ಆತಿಥ್ಯ ಕ್ಷೇತ್ರದಲ್ಲಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications