ಗುಲ್ಬರ್ಗಾ ಹೆಸರು ಬದಲಾವಣೆಗೆ ಮುಸ್ಲಿಂ ವಿರೋಧ
ಗುಲ್ಬರ್ಗಾ, ಅ.27: ರಾಜ್ಯದ 12 ನಗರಗಳ ಹೆಸರನ್ನು ಬದಲಾಯಿಸಲು ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ನಿರ್ಧರಿಸಿರುವುದಕ್ಕೆ ಎಲ್ಲೆಡೆಯಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಆದರೆ, ಗುಲ್ಬರ್ಗಾದಲ್ಲಿ ಮಾತ್ರ ಪಾಲಿಕೆ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಡುವೆ ಎಂದಿನಂತೆ ಬೆಳಗಾವಿ ಹೆಸರಿಡಲು ಬಿಡುವುದಿಲ್ಲ ಎಂದು ಎಂಇಎಸ್ ನ ಸಂಬಾಜಿ ಪಾಟೀಲ್ ಅರ್ಭಟಿಸಿದ್ದಾರೆ.
ಗುಲ್ಬರ್ಗಾ ಹೆಸರನ್ನು ಕಲ್ಬುರ್ಗಿ ಎಂದು ಬದಲಾಯಿಸುವುದು ಬೇಡ ಎಂದು ಹಲವಾರು ಮುಸ್ಲಿಂ ಸಂಘಟನೆಗಳು ಪ್ರತಿಭಟನೆಗಿಳಿದಿವೆ. ಮುಸ್ಲಿಮರ ಅಭಿವೃದ್ಧಿ ಸಮಿತಿ ಅಡಿಯಲ್ಲಿ ಅನೇಕ ಸಂಘಟನೆಗಳು ಈಗಾಗಲೇ ಸಹಿ ಸಂಗ್ರಹ ಅಭಿಯಾನ ಆರಂಭಿಸಿವೆ.
ಬೆಂಗಳೂರು ಹಾಗೂ ಬೆಳಗಾವಿ ಸೇರಿದಂತೆ 12 ನಗರಗಳ ಹೆಸರನ್ನು ಬದಲಾಯಿಸಲು ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಶಿಫಾರಸ್ಸಿಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಈಗ ಗುಲ್ಬರ್ಗಾ ಹಾಗೂ ಬೆಳಗಾವಿ ಹೆಸರು ಬದಲಾವಣೆ ಮಾತ್ರ ವಿರೋಧ ವ್ಯಕ್ತವಾಗಿವೆ. ಉಳಿದ ನಗರಗಳ ಹೆಸರುಗಳ ಬದಲಾವಣೆ ಯಾವುದೇ ಆಕ್ಷೇಪ ವ್ಯಕ್ತವಾಗಿದೆ.

14ನೇ ಶತಮಾನದಲ್ಲಿ ಬಹಮನಿ ಸುಲ್ತಾನರ ಕಾಲದಲ್ಲಿ ಗುಲ್ಬರ್ಗಾ ಎಂಬ ಹೆಸರು ಪಡೆದಿದ್ದ ಹೈದರಾಬಾದ್ ಕರ್ನಾಟಕ(ಕಲ್ಯಾಣ ಕರ್ನಾಟಕ) ಭಾಗದ ಪ್ರಮುಖ ನಗರದ ಹೆಸರನ್ನು ಕಲ್ಬುರ್ಗಿ ಎಂದು ಹೆಸರಿಸಲು ಸರ್ಕಾರ ಮುಂದಾಗಿದೆ. ನಿಜಾಮರ ಕಾಲ ಹಾಗೂ ಬ್ರಿಟಿಷರ ಆಳ್ವಿಕೆಯಲ್ಲೂ ಗುಲ್ಬರ್ಗಾ ಹೆಸರಿನಲ್ಲಿ ಬದಲಾವಣೆ ಮಾಡಿರಲಿಲ್ಲ ಎಂದು ಮುಸ್ಲಿಮ್ ಸಂಘಟನೆಗಳು ಹೇಳಿವೆ.
ಇತಿಹಾಸ ಏನು ಹೇಳುತ್ತದೆ?: ಅದರೆ, 12ನೇ ಶತಮಾನದಲ್ಲೇ ಈ ನಗರವನ್ನು ಕಲಮ್ ಬುರ್ಗಿ ಅಥವಾ ಕಲಬುರ್ಗಿ ಅಂದರೆ ಕಲ್ಲುಗಳಿರುವ ನಗರ ಎಂದು ಕರೆಯುತ್ತಿದ್ದರು ಎಂದು ಕೆಸರಟಗಿ ಜಿಲ್ಲೆಯ ಹುಣಸಿನಹಡಗಲಿ ಶಾಸನದಿಂದ ತಿಳಿದು ಬರುತ್ತದೆ. 6 ಶತಮಾನದಲ್ಲಿ ರಾಷ್ಟ್ರಕೂಟರು, ಯಾದವರು, ಹೊಯ್ಸಳರು, ಚಾಲುಕ್ಯರು, ಕಲಾಚೂರಿಗಳು, ಕಾಕಾತಿಯರು,ಬಹಮನಿ ಸುಲ್ತಾನರು, ಮೊಘಲರು, ಬ್ರಿಟಿಷರು, ನಿಜಾಮರು ಗುಲ್ಬರ್ಗಾವನ್ನು ಆಳಿದ್ದಾರೆ.
ಕಲಬುರ್ಗಿ- ಕಲ್ಬುರ್ಗಿಯಾಗಿ ಜನಪ್ರಿಯಗೊಳ್ಳದೆ ಗುಲ್ಬರ್ಗಾ ಹೆಸರೇ ಹೆಚ್ಚು ಬಳಕೆಯಲ್ಲಿತ್ತು. ಸರ್ಕಾರ ಹೆಸರು ಬದಲಾವಣೆ ನಿಲ್ಲಿಸದಿದ್ದರೆ ನಾವು ಕಾನೂನು ಪ್ರಕಾರ ಹೋರಾಟ ನಡೆಸಬೇಕಾಗುತ್ತದೆ ಗುಲ್ಬರ್ಗಾ ಮುಸ್ಲಿಂ ವೆಲ್ ಫೇರ್ ಅಸೋಸಿಯೇಷನ್ ಹೇಳಿದೆ.
ಸಾಮಾನ್ಯವಾಗಿ ಬಿಬಿಎಂಪಿ ಸೇರಿದಂತೆ ಪಾಲಿಕೆಗಳು ಯಾವುದೇ ಪಾರ್ಕ್, ರಸ್ತೆಗಳಿಗೆ ಹೆಸರಿಡುವಾಗ ಅಥವಾ ಮರು ನಾಮಕರಣ ಮಾಡುವಾಗ ಪ್ರಕಟಣೆ ಹೊರಡಿಸಿ ಸಾರ್ವಜನಿಕರ ಆಕ್ಷೇಪಣೆಗಳಿಲ್ಲದಿದ್ದರೆ ಮಾತ್ರ ಹೆಸರು ಬದಲಾಯಿಸುವುದು ನಡೆದುಕೊಂಡು ಬಂದಿರುವ ಕ್ರಮ. ಈಗ ಸರ್ಕಾರ ತೆಗೆದುಕೊಂಡ ಕ್ರಮಕ್ಕೆ ಆಯಾ ನಗರ ಪಾಲಿಕೆಗಳಲ್ಲಿ ಪರ ವಿರೋಧ ಚರ್ಚೆಗಳು ನಡೆದು ವಿರೋಧ ವ್ಯಕ್ತವಾದರೆ ಮುಂದೇನಾಗುತ್ತದೆ? ಕಾನೂನು ಸಮರ ಆರಂಭವಾಗುತ್ತದೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications