ಕಾನೂನು ಚೌಕಟ್ಟಿನಲ್ಲಿ ಮೇಕೇದಾಟಿನಲ್ಲಿ ಅಣೆಕಟ್ಟು ನಿರ್ಮಾಣ
ನವದೆಹಲಿ, ಏ.30 : 'ಕಾನೂನು ಚೌಕಟ್ಟಿನಲ್ಲಿ ಕರ್ನಾಟಕ ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಾಣ ಮಾಡಲಿದೆ. ಕೇಂದ್ರ ಸರ್ಕಾರಕ್ಕೆ ಯೋಜನೆಯ ಉದ್ದೇಶದ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಗುರುವಾರ
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು
ಸರ್ವಪಕ್ಷ
ನಿಯೋಗದೊಂದಿಗೆ
ಪ್ರಧಾನಿ
ನರೇಂದ್ರ
ಮೋದಿ
ಅವರನ್ನು
ಭೇಟಿ
ಮಾಡಿ
ಮೇಕೆದಾಟು
ಯೋಜನೆಯ
ಕುರಿತು
ಮಾತುಕತೆ
ನಡೆಸಿದರು.
ನಂತರ
ಮಾತನಾಡಿದ
ಅವರು
ಕರ್ನಾಟಕ
ಯೋಜನೆ
ಕೈಗೆತ್ತಿಕೊಳ್ಳುತ್ತಿರುವ
ಉದ್ದೇಶದ
ಬಗ್ಗೆ
ಕೇಂದ್ರ
ಸರ್ಕಾರಕ್ಕೆ
ಮನವರಿಕೆ
ಮಾಡಿಕೊಡಲಾಗಿದೆ
ಎಂದು
ತಿಳಿಸಿದರು.
[ಸರ್ವಪಕ್ಷ
ನಿಯೋಗದಿಂದ
ಪ್ರಧಾನಿ
ಭೇಟಿ]
'ಮೇಕೆದಾಟುವಿನಲ್ಲಿ ಕರ್ನಾಟಕ ಅಣೆಕಟ್ಟು ನಿರ್ಮಾಣ ಮಾಡುವುದರಿಂದ ತಮಿಳುನಾಡಿಗೆ ಹರಿದು ಹೋಗುವ ಕಾವೇರಿ ನೀರಿನಲ್ಲಿ ಕೊರತೆ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಸಿದ್ದರಾಮಯ್ಯ ಅವರು, 1994ರ ತನಕ ತಮಿಳುನಾಡು ಯೋಜನೆಗೆ ತಕರಾರು ತೆಗೆದಿರಲಿಲ್ಲ. ಈಗ ರಾಜಕೀಯ ಕಾರಣಕ್ಕಾಗಿ ಯೋಜನೆ ವಿರೋಧಿಸುತ್ತಿದೆ' ಎಂದರು. [ಮೇಕೆದಾಟು ಯೋಜನೆ ವಿವಾದವೇನು?]
'ಕರ್ನಾಟಕ
ಬೆಂಗಳೂರು
ನಗರ
ಮತ್ತು
ಗ್ರಾಮಾಂತರ
ಜಿಲ್ಲೆಗಳಿಗೆ
ಕುಡಿಯುವ
ನೀರು
ಪೂರೈಕೆ
ಮಾಡಲು
ಈ
ಯೋಜನೆಯನ್ನು
ಕೈಗೆತ್ತಿಕೊಳ್ಳುತ್ತಿದೆ.
ಇದನ್ನು
ಪ್ರಧಾನಿ
ನರೇಂದ್ರ
ಮೋದಿ
ಅವರಿಗೂ
ಮನವರಿಕೆ
ಮಾಡಿಕೊಡಲಾಗಿದೆ'
ಎಂದು
ಹೇಳಿದರು.
ಪ್ರಸ್ತಾವನೆ ಬರಲಿ : ಪ್ರಧಾನಿ ಭೇಟಿ ಬಳಿಕ ಮಾತನಾಡಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, 'ಮೊದಲು ಪ್ರಸ್ತಾವನೆ ಬರಲಿ, ಆ ಬಳಿಕ ಪರಿಶೀಲಿಸೋಣ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ರಾಜ್ಯ ಸರ್ಕಾರ ಶೀಘ್ರದಲ್ಲೇ ಪ್ರಸ್ತಾವನೆ ಸಲ್ಲಿಸಲಿ' ಎಂದರು.