ಕ್ಷೇತ್ರದ ಅಭಿವೃದ್ಧಿಗಾಗಿ ಶಕ್ತಿ ಮೀರಿ ಕೆಲಸ ಮಾಡುವೆ
ಉಡುಪಿ, ಮೇ 25 : ಪ್ರಧಾನಿಯಾಗಲಿರುವ ನರೇಂದ್ರ ಮೋದಿ ದೇಶದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರಲಿದ್ದಾರೆ. ಸರ್ಕಾರದ ಸಹಾಯ ಪಡೆದು ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ನಾನು ಶ್ರಮಿಸುತ್ತೇನೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಕಾರ್ಕಳದ
ಬಂಡಿಮಠ
ಬಸ್
ನಿಲ್ದಾಣದಲ್ಲಿ
ಬಿಜೆಪಿ
ವತಿಯಿಂದ
ಹಮ್ಮಿಕೊಂಡಿದ್ದ
ವಿಜಯೋತ್ಸವದಲ್ಲಿ
ಮತದಾರರಿಗೆ
ಅಭಿನಂದನೆ
ಸಲ್ಲಿಸಿ
ಮಾತನಾಡಿದ
ಶೋಭಾ
ಕರಂದ್ಲಾಕೆ
ಅವರು,
ಪಕ್ಷದ
ಪ್ರಮುಖರ
ತಂಡ
ರಚಿಸಿ
ಕ್ಷೇತ್ರದ
ಸಮಸ್ಯೆಗಳನ್ನು
ಕ್ರೋಡೀಕರಿಸಿ
ಅದರ
ಪರಿಹಾರಕ್ಕೆ
ಪ್ರಯತ್ನಿಸುತ್ತೇನೆ
ಎಂದರು.
ಕಾಂಗ್ರೆಸ್ ದುರಾಡಳಿತದಿಂದ ಬೇಸತ್ತ ಜನರು ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿ ಆಡಳಿತ ನಡೆಸಲು ಜನಾದೇಶ ನೀಡಿದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ, ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಿದ್ದಾರೆ ಎಂದು ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದರು.
ಪಶ್ಚಿಮ ಘಟ್ಟಕ್ಕೆ ಸಂಬಂಧಿಸಿದಂತೆ ಕಸ್ತೂರಿ ರಂಗನ್ ಸಮಿತಿ ನೀಡಿರುವ ವರದಿ ಕೇರಳಕ್ಕೆ ಅನ್ವಯವಾಗದಿದ್ದರೆ ನಮ್ಮ ರಾಜ್ಯಕ್ಕೂ ಅದು ಅಗತ್ಯವಿಲ್ಲ. ಈ ಕುರಿತು ಸಂಸತ್ ನಲ್ಲಿ ಮಾತನಾಡಲಾಗುವುದು ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಕಾರ್ಕಳ ತಾಲೂಕಿನ 202 ಬೂತ್ ಗಳಲ್ಲಿ 20ರಲ್ಲಿ ಮಾತ್ರ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಉಳಿದ 182ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ತಾಲೂಕಿನಲ್ಲಿ ಜೆಡಿಎಸ್ ಅಭ್ಯರ್ಥಿಗೆ ಕೇವಲ 300 ಮತಗಳು ಬಂದಿವೆ. ಬಿಜೆಪಿಗೆ ಮೇಲೆ ನಂಬಿಕೆ ಇಟ್ಟು ಬೆಂಬಲ ನೀಡಿದ್ದಕ್ಕೆ ಮತದಾರರಿಗೆ ಶೋಭಾ ಕರಂದ್ಲಾಜೆ ಧನ್ಯವಾದ ಸಲ್ಲಿಸಿದರು.
ಬಿಜೆಪಿ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬರಬೇಕು ಎಂದು ವಾಜಪೇಯಿ ಕನಸು ಕಂಡಿದ್ದರು. 2014ರಲ್ಲಿ ಈ ಕನಸು ನನಸಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಪಕ್ಷದ ಸ್ಥಾನವನ್ನು ಕೊಡದೆ ಜನರು ತಕ್ಕ ಪಾಠ ಕಲಿಸಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾಗುವುದಿಲ್ಲ ಎಂದ ಹೇಳಿದ್ದ ವೀರಪ್ಪ ಮೊಯ್ಲಿ ಅವರೇ ಕಷ್ಟಪಟ್ಟು ಕೆಲವು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ವಿಜಯೋತ್ಸವ ಸಮಾರಂಭದಲ್ಲಿ ಪಕ್ಷದ ನಾಯಕರಾದ ಬೋಳ ಪ್ರಭಾಕರ ಕಾಮತ್, ತಿಂಗಳೆ ವಿಕ್ರಮ ಹೆಗ್ಡೆ, ಶ್ಯಾಮಲಾ ಕುಂದರ್, ಬೋಳಸದಾಶಿವ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.