ಕರ್ನಾಟಕದಲ್ಲಿ ಮತ್ತೊಮ್ಮೆ ಹಾಲಿನ ದರ 3 ರೂಪಾಯಿ ಏರಿಕೆ?
ಬೆಂಗಳೂರು, ನವೆಂಬರ್ 11: ರಾಜ್ಯದಲ್ಲಿ ಮುಂದಿನ ವರ್ಷದ ಆರಂಭದ ಜನವರಿಯಲ್ಲಿ ನಂದಿನಿ ಹಾಲಿನ ಬೆಲೆ ಏರಿಕೆ ಮಾಡಬಹುದು. ಜುಲೈ ಹಾಲಿನ ಬೆಲೆಯನ್ನು ಸರ್ಕಾರ ಏರಿಕೆ ಮಾಡಿತ್ತು.
ಜುಲೈನಲ್ಲಿ ಹಾಲಿನ ದರ ಲೀಟರ್ಗೆ 3 ರೂಪಾಯಿ ಏರಿಕೆ ಮಾಡಲಾಗಿತ್ತು. ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಅಧಿಕಾರಿಗಳು ಮತ್ತು ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಶು ಸಂಗೋಪನಾ ಸಚಿವ ಕೆ ವೆಂಕಟೇಶ್ ಅವರು ಜನವರಿಯಲ್ಲಿ ಬೆಲೆ ಹೆಚ್ಚಳಕ್ಕೆ ಕೆಎಂಎಫ್ ಸಲ್ಲಿಸಿರುವ ಪ್ರಸ್ತಾವನೆಯನ್ನು ಸರ್ಕಾರ ಪರಿಗಣಿಸಬಹುದು ಎಂದು ಹೇಳಿದರು.

"ಬೇರೆ ರಾಜ್ಯಗಳಲ್ಲಿನ ನಂದಿನಿ ಹಾಲಿನ ಬೆಲೆ ಮತ್ತು ಇತರ ರಾಜ್ಯಗಳ ಉತ್ಪನ್ನಗಳಿಗೆ ಹೋಲಿಸಿದರೆ, ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಕಡಿಮೆಯಾಗಿದೆ. ನಮ್ಮ ರಾಜ್ಯದಲ್ಲಿ ಹಾಲಿನ ದರ ಲೀಟರ್ಗೆ 42 ರೂ. (ಟೋನ್ಡ್ ಮಿಲ್ಕ್), ಮತ್ತು ನೆರೆಯ ರಾಜ್ಯಗಳಲ್ಲಿ 48 ರಿಂದ 51 ರೂ. ಇದೆ" ಎಂದು ಹೇಳಿದರು.
ಈ ಬಗ್ಗೆ ಕೆಎಂಎಫ್ ಸಭೆಯಲ್ಲಿ ಚರ್ಚಿಸಿ ನಷ್ಟದ ಕಾರಣ ನೀಡಿ ಸರ್ಕಾರ ಬೆಲೆ ಏರಿಕೆಗೆ ಒತ್ತಾಯಿಸಿರುವುದಾಗಿ ಸಚಿವರು ತಿಳಿಸಿದರು. ಹಾಲಿನ ದರವನ್ನು ಹೆಚ್ಚಿಸುವಂತೆ ರೈತರು ಮತ್ತು ಹಾಲು ಒಕ್ಕೂಟಗಳೆರಡರಿಂದಲೂ ಸರ್ಕಾರದ ಮೇಲೆ ಒತ್ತಡವಿದೆ. ಸದ್ಯಕ್ಕೆ ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲದಿದ್ದರೂ ಜನವರಿಯಲ್ಲಿ ಬೆಲೆ ಏರಿಕೆ ಬಗ್ಗೆ ಪರಿಶೀಲಿಸುತ್ತೇವೆ ಎಂದು ವೆಂಕಟೇಶ್ ತಿಳಿಸಿದರು.
ಪ್ರತಿ ಲೀಟರ್ಗೆ 5 ರೂ.ಗಳಷ್ಟು ಬೆಲೆಯನ್ನು ಹೆಚ್ಚಿಸುವ ಬೇಡಿಕೆಯಿದ್ದರೂ, ಅದನ್ನು 3 ರೂ.ಗಳಷ್ಟು ಹೆಚ್ಚಿಸಲು ಸರ್ಕಾರ ಯೋಚಿಸಿದೆ ಎಂದು ಸಚಿವರು ಹೇಳಿದರು. ಬಳಿಕ ವಿವಿಧ ರಾಜ್ಯಗಳಲ್ಲಿ ಹಾಲಿನ ದರ ಪಟ್ಟಿಯನ್ನು ಪ್ರದರ್ಶಿಸಿದರು ಮತ್ತು ಹಿಂದೆ ಅಮುಲ್ ಮತ್ತು ನಂದಿನಿಯವರು ಬೆಲೆ ಏರಿಕೆಯ ಹೋಲಿಕೆಯನ್ನು ಸಹ ಪ್ರದರ್ಶಿಸಿದರು. ಸಚಿವರು ವಿವರಿಸಿದಂತೆ ಅಮುಲ್ ಹಾಲಿನ ದರವನ್ನು ಪರಿಷ್ಕರಿಸಿ ಕಳೆದ 10 ತಿಂಗಳಲ್ಲಿ 12 ರೂ., ನಂದಿನಿ 3 ರೂ. ಏರಿಕೆ ಮಾಡಿದೆ.
ಇದೇ ವೇಳೆ ಸಭೆಯಲ್ಲಿ ಕೆಎಂಎಫ್ ಅಧಿಕಾರಿಗಳು ಕ್ಷೀರ ಭಾಗ್ಯ ಯೋಜನೆಯಡಿ ಪೂರೈಕೆಯಾಗುವ ಹಾಲಿನ ಪುಡಿ ದರವನ್ನು ಹೆಚ್ಚಿಸುವಂತೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರಸ್ತುತ ಸರ್ಕಾರವು ಪ್ರತಿ ಕಿಲೋ ಹಾಲಿನ ಪುಡಿಗೆ ರೂ 348.32+ ಜಿಎಸ್ಟಿ ಪಾವತಿಸುತ್ತಿದ್ದು, ಇದನ್ನು ರೂ 400 + ಜಿಎಸ್ಟಿಗೆ ಪರಿಷ್ಕರಿಸಲು ಫೆಡರೇಶನ್ ಒತ್ತಾಯಿಸಿದೆ.
ಕನಿಷ್ಠ ಆರು ತಿಂಗಳಿಗೊಮ್ಮೆ 5% ರಷ್ಟು ಬೆಲೆ ಪರಿಷ್ಕರಣೆ ಪರಿಗಣಿಸುವಂತೆ ಕೆಎಂಎಫ್ ಸರ್ಕಾರವನ್ನು ವಿನಂತಿಸಿದೆ. ಪ್ರತಿ ಕ್ವಿಂಟಾಲ್ಗೆ 160 ರೂ. ಸೇರಿಸಿ ರೈತರಿಗೆ ನೆರವಾಗಲು ಹಾಲು ಉತ್ಪಾದಕರ ಒಕ್ಕೂಟದಿಂದ ಮೆಕ್ಕೆಜೋಳವನ್ನು ಖರೀದಿಸಲು ಸರ್ಕಾರ ನಿರ್ಧರಿಸಿದೆ. ನವೆಂಬರ್ 13 ರಿಂದ ಖರೀದಿ ಕೇಂದ್ರ ಕಾರ್ಯಾರಂಭ ಮಾಡಲಿದ್ದು, ರೈತರಿಗೆ ಪ್ರತಿ ಕ್ವಿಂಟಾಲ್ಗೆ 2,250 ರೂ. ಒಂದು ವರ್ಷದಲ್ಲಿ ಒಂದು ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ರೈತರಿಂದ ಖರೀದಿಸುವುದು ನಮ್ಮ ಗುರಿಯಾಗಿದೆ ಎಂದು ಸಚಿವರು ವಿವರಿಸಿದರು.












Click it and Unblock the Notifications