ಓ ಮನಸೇಗೆ 100, ಕಾಡುವ ಹಾಡುಗಳಿಗಾಗಿ ಕೋರಿಕೆ
ಅದೊಂದು ಹಾಡು, ಒಂದೇ ಒಂದು ಹಾಡು. ಆ ಹಾಡು ನಿಮ್ಮನ್ನು ಕಾಡಿದಷ್ಟು ಇನ್ನಾವ ಹಾಡೂ ಕಾಡಿಲ್ಲ. ಮನೆಯ ಚಾವಡಿಯಲ್ಲಿ, ಅಡುಗೆ ಮನೆಯಲ್ಲಿ, ಬಚ್ಚಲು ಮನೆಯಲ್ಲಿ, ರಸ್ತೆಯಲ್ಲಿ, ಬಸ್ಸಲ್ಲಿ, ಆಫೀಸಲ್ಲಿ... ನೀವೆಲ್ಲಿ ಹೋದರೂ ಬೆನ್ನಟ್ಟಿ ಬರುತ್ತದೆ ಆ ಹಾಡು. ಸದಾ ನಿಮ್ಮ ನಾಲಿಗೆ ತುದಿಯಲ್ಲಿ ಕುಣಿದಾಡುತ್ತಿರುತ್ತದೆ. ಯಾವುದು ಆ ಹಾಡು? ಅದ್ಯಾಕೆ ಅಂಥಾ ಪರಿ ನಿಮ್ಮನ್ನು ಕಾಡುತ್ತಿದೆ? ಯಾವತ್ತಾದರೂ ಯೋಚನೆ ಮಾಡಿದ್ದೀರಾ? ನಿಮ್ಮಿಷ್ಟದ ಹಾಡಿನ ಜೊತೆಗಿನ ನಿಮ್ಮ ಸಾಂಗತ್ಯವನ್ನು ಮಿಕ್ಕವರ ಜೊತೆ ಹಂಚಿಕೊಳ್ಳಬೇಕು ಎಂದು ನಿಮಗೆ ಯಾವತ್ತಾದರೂ ಅನಿಸಿದೆಯಾ?
‘ಓ ಮನಸೇ...' ನಿಮಗೆ ಅಂಥಾದ್ದೊಂದು ಅವಕಾಶವನ್ನು ಕಲ್ಪಿಸಿ ಕೊಡುತ್ತಿದೆ. ‘ಓ ಮನಸೇ...'ಯ ನೂರನೇ ಸಂಚಿಕೆಯಲ್ಲಿ (ಅಕ್ಟೋಬರ್ 15-31) ನಿಮ್ಮನ್ನು ಕಾಡುವ ಹಾಡಿನ ಸಾಲುಗಳನ್ನು ನಾವು ಪ್ರಕಟಿಸುತ್ತೇವೆ.
ನೀವು ಮಾಡಬೇಕಾದದ್ದು ಇಷ್ಟೆ: ನಿಮಗಿಷ್ಟವಾದ ಹಾಡಿನ ಮೊದಲ ಎರಡು ಸಾಲುಗಳನ್ನು ನಮಗೆ ಬರೆದು ಕಳುಹಿಸಿ. ಆ ಹಾಡು ಯಾಕೆ ನಿಮಗಿಷ್ಟ ಅನ್ನುವುದನ್ನು ನಾಲ್ಕು ವಾಕ್ಯಗಳಿಗೆ ಮೀರದಂತೆ ಬರೆಯಿರಿ. ಆ ಹಾಡಿನ ಗಾಯಕ, ಗೀತರಚನೆಕಾರ, ಸಂಗೀತ ನಿರ್ದೇಶಕ ಮತ್ತು ಸಿನೆಮಾದ ಹೆಸರುಗಳೂ ಇರಲಿ. ಜೊತೆಗೆ ನಿಮ್ಮದೊಂದು ಚಿಕ್ಕ ಫೊಟೋ. ಈ-ಮೇಲ್ ಮುಖೇನ ಬರುವ ಪತ್ರಗಳಿಗೆ ಮೊದಲ ಪ್ರಾಶಸ್ತ್ಯ.

‘ಓ ಮನಸೇ' ಪತ್ರಿಕೆಯ ನೂರನೇ ಸಂಚಿಕೆಯನ್ನು ಓದುಗರು ಮೆಚ್ಚಿದ ಗೀತೆಗಳಿಂದ ಅಲಂಕರಿಸುವ ನಮ್ಮ ಪ್ರಯತ್ನಕ್ಕೆ ನೀವೂ ಕೈ ಜೋಡಿಸಿ. ನಿಮಗೆ ಗೊತ್ತಲ್ವಾ? ಹಾಡು ಹಳೆಯದಾದರೇನು, ಭಾವ ನವನವೀನ. ನಿಮ್ಮ ಪತ್ರಗಳು ಅಕ್ಟೋಬರ್ 1ರ ಒಳಗೆ ನಮ್ಮನ್ನು ತಲುಪಬೇಕು.
ನೀವು ಈ-ಮೇಲ್ ಕಳುಹಿಸಬೇಕಾದ ವಿಳಾಸ: [email protected]
ಪತ್ರ ಕಳುಹಿಸಬೇಕಾದ ವಿಳಾಸ :
ಓ ಮನಸೇ, ನಂ. 2, 80 ಅಡಿ ರಸ್ತೆ,
ಕದಿರೇನಹಳ್ಳಿ ಪೆಟ್ರೋಲ್ ಬಂಕ್ನ ಹತ್ತಿರ,
ಪದ್ಮನಾಭನಗರ, ಬನಶಂಕರಿ 2ನೇ ಹಂತ,
ಬೆಂಗಳೂರು-560 070.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications