Get Updates
Get notified of breaking news, exclusive insights, and must-see stories!

ಮಹಾರಾಷ್ಟ್ರ-ಕರ್ನಾಟಕ ವಿವಾದ: ಬೆಳಗಾವಿ ಬಡಿದಾಟದ ಸುತ್ತ-ಮುತ್ತ ಏನು, ಎತ್ತ, ಯಾಕೆ?

ಬೆಳಗಾವಿ, ಡಿಸೆಂಬರ್ 02: ಬೆಳಗಾವಿಯಲ್ಲಿ ಅಂತರ್ ಕಾಲೇಜು ಉತ್ಸವದಲ್ಲಿ ನಡೆದ ಘರ್ಷಣೆಯು ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವಿನ ಗಡಿ ವಿವಾದದ ಬೆಂಕಿಗೆ ತುಪ್ಪ ಸುರಿಯಿತು. ಕಳೆದ ಎರಡು ವಾರಗಳಿಂದ ಉಭಯ ರಾಜ್ಯಗಳ ಗಡಿ ವಿವಾದ ಹೆಚ್ಚು ಚರ್ಚೆ ಆಗುತ್ತಿದೆ.

ವಿದ್ಯಾರ್ಥಿಯೊಬ್ಬ ಕನ್ನಡ ಅಥವಾ ಕರ್ನಾಟಕದ ಸಾಂಪ್ರದಾಯಿಕ ಧ್ವಜವನ್ನು ಪ್ರದರ್ಶಿಸಿದ ಎಂಬುದಕ್ಕಾಗಿ ಈ ಘರ್ಷಣೆ ಪ್ರಾರಂಭವಾಯಿತು. ಇದರಿಂದ ಕೋಪಗೊಂಡ ಮರಾಠಿ ವಿದ್ಯಾರ್ಥಿಗಳು ಧ್ವಜಾರೋಹಣ ಮಾಡಿದ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದರು. ಈ ವೀಡಿಯೊ ಕಳೆದ ಎರಡು ದಿನಗಳಲ್ಲಿ ವೈರಲ್ ಆಗಿದ್ದು, ಆತಿಥೇಯ ಕಾಲೇಜಿನ ಶಿಕ್ಷಕರು ಮತ್ತು ಇತರ ಸಿಬ್ಬಂದಿ ಬೆಳಗಾವಿಯ ಟಿಳಕವಾಡಿಯಲ್ಲಿ ಮಧ್ಯಪ್ರವೇಶಿಸಿ ಗಲಾಟೆಗೆ ಬ್ರೇಕ್ ಹಾಕಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವಲಯ ಪೊಲೀಸ್ ವರಿಷ್ಠ ರವೀಂದ್ರ ಗಡಾಡಿ ಹಾಗೂ ಇತರೆ ಅಧಿಕಾರಿಗಳು ಕಾಲೇಜಿಗೆ ತೆರಳಿ ಪರಿಶೀಲನೆ ನಡೆಸಿದರು.

ಮಹಾರಾಷ್ಟ್ರ-ಕರ್ನಾಟಕದ ನಡುವೆ ಗಡಿ ವಿವಾದವೇ ಮುಸುಕಿನ ಗುದ್ದಾಟವನ್ನು ಸೃಷ್ಟಿಸಿದೆ. ನಾಯಕರ ನಡುವೆ ಮಾತಿನ ಪೈಪೋಟಿ ನಡೆಯುತ್ತಿದೆ. ಎರಡು ರಾಜ್ಯದ ಮುಖ್ಯಮಂತ್ರಿಗಳು ಜಿದ್ದಿಗೆ ಬಿದ್ದು ಏಟಿಗೆ-ಎದುರೇಟು ನೀಡುತ್ತಿದ್ದಾರೆ. ರಾಜಕೀಯದಲ್ಲಿ ಒಂದೇ ಪಕ್ಷದವರೇ ಆಗಿರುವ ಬಿಜೆಪಿಗರು ಈ ಗಡಿ ವಿಚಾರದಲ್ಲಿ ಮಾತ್ರ ದಾಯಾದಿಗಳ ರೀತಿ ಕಿತ್ತಾಡಿಕೊಳ್ಳುವ ಮಾತುಗಳನ್ನು ಆಡುತ್ತಿದ್ದಾರೆ. ಅಸಲಿಗೆ ಈ ಗಡಿ ವಿವಾದ ಪ್ರಾರಂಭವಾಗಿದ್ದು ಯಾವಾಗ?, ಎರಡು ರಾಜ್ಯಗಳ ನಡುವೆ ನಡೆಯುತ್ತಿರುವ ವಿದ್ಯಮಾನಗಳೇನು?, ಕೋರ್ಟ್ ಅಂಗಳದಲ್ಲಿರುವ ವಿವಾದದ ಬಗ್ಗೆ ರಾಜಕಾರಣಿಗಳು ಹೀಗೆ ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದು ಏಕೆ? ಈ ವಿವಾದದ ಬಗ್ಗೆ ಕೇಂದ್ರ ಸರ್ಕಾರದ ಅಭಿಪ್ರಾಯವೇನು ಎಂಬುದರ ಕುರಿತು ವಿಸ್ತೃತ ಮಾಹಿತಿಯನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಗಡಿ ವಿವಾದ ಸುತ್ತಮುತ್ತಲಿನ ವಿದ್ಯಮಾನಗಳೇನು?

ಗಡಿ ವಿವಾದ ಸುತ್ತಮುತ್ತಲಿನ ವಿದ್ಯಮಾನಗಳೇನು?

* ಎರಡು ರಾಜ್ಯಗಳ ಮಧ್ಯೆ ತಿಕ್ಕಾಟ ನಡೆಯುತ್ತಿರುವ ಸಂದರ್ಭದಲ್ಲಿ ಯಾವುದೇ ರೀತಿ ಧ್ವಜಗಳನ್ನು ಪ್ರದರ್ಶಿಸಬಾರದು ಎಂಬುದಾಗಿ ಹಲ್ಲೆಗೆ ಒಳಗಾದ ಪದವಿ ಪೂರ್ವ ಕಾಲೇಜಿನಲ್ಲಿ ಎರಡನೇ ವರ್ಷದ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗೆ ಪೊಲೀಸರು ಮೊದಲೇ ಹೇಳಿದ್ದರು ಎಂದು ತಿಳಿದುಬಂದಿದೆ. .

* ಮಹಾರಾಷ್ಟ್ರದ ಕೆಲವು ಪ್ರದೇಶಗಳು ರಾಜ್ಯಕ್ಕೆ ಸೇರಬೇಕು ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚಿಗೆ ನೀಡಿದ ಹೇಳಿಕೆಯು ಈ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಮಾಡಿತು. ಭಾಷಾವಾರು ರಾಜ್ಯಗಳ ಮರುಸಂಘಟನೆಯ ಮಾತು ಈ ಹಿಂದಿನ ಪ್ರಾದೇಶಿಕ ವಿವಾದವು ಭುಗಿಲೇಳುವಂತೆ ಮಾಡಿತು.

* ಭಾಷಾವಾರು ರಾಜ್ಯಗಳ ರಚನೆಗೆ ಸಂಬಂಧಿಸಿದಂತೆ ನೋಡುವುದಾದರೆ ಅತಿಹೆಚ್ಚು ಮರಾಠಿ ಮಾತನಾಡುವ ಬೆಳಗಾವಿಯನ್ನು ತಪ್ಪಾಗಿ ಕರ್ನಾಟಕಕ್ಕೆ ಸೇರಿಸಲಾಗಿದೆ ಎನ್ನುವುದು ಮಹಾರಾಷ್ಟ್ರದ ವಾದವಾಗಿದೆ. ಇದೇ ವಿಚಾರ ಹಲವು ದಶಕಗಳಿಂದ ಸುಪ್ರೀಂ ಕೋರ್ಟ್‌ನಲ್ಲಿದೆ.

* ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಮತ್ತು ಕರ್ನಾಟಕದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿರುವ ಕಾರಣ ಈ ವಿಷಯದ ರಾಜಕೀಯವು ಟ್ರಿಕ್ ಆಗಿದೆ ಎಂಬ ಚರ್ಚೆಯೂ ನಡೆಯುತ್ತಿದೆ.

* "ಗಡಿ ವಿವಾದವು ಮಹಾರಾಷ್ಟ್ರದ ಎಲ್ಲಾ ಪಕ್ಷಗಳು ಬಳಸುವ ರಾಜಕೀಯ ಸಾಧನವಾಗಿದೆ. ಮರುಸಂಘಟನೆಯ ಬಗ್ಗೆ ಯಾವುದೇ ಸಂದರ್ಭದಲ್ಲಿ ಪರಿಶೀಲಿಸದ ಕಾರಣ" ಮಹಾರಾಷ್ಟ್ರದ ಮನವಿಗಳು ಮಾನ್ಯವಾಗಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.

* ಕರ್ನಾಟಕದಲ್ಲೂ ಪ್ರತಿಪಕ್ಷಗಳು ಮರುಪರಿಶೀಲನೆ ಕೋರಿವೆ. ಕಾಂಗ್ರೆಸ್‌ನ ನಾಯಕ ಹಾಗೂ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನೂ ಒಳಗೊಂಡಂತೆ ಸಲಹಾ ಸಮಿತಿಯನ್ನು ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.

* ಈ ವಿವಾದವು 1940ರ ದಶಕದ ಹಿಂದಿನದು. 1948ರಲ್ಲಿ ಬೆಳಗಾವಿ ಪುರಸಭೆಯು ಮರಾಠಿ ಮಾತನಾಡುವ ಜನಸಂಖ್ಯೆಯ ಬಹುಪಾಲು ಜಿಲ್ಲೆಯನ್ನು ಪ್ರಸ್ತಾವಿತ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿಸಬೇಕೆಂದು ವಿನಂತಿಸಿತ್ತು.

* 1956ರಲ್ಲಿ ಭಾರತದ ರಾಜ್ಯಗಳನ್ನು ಭಾಷಾವಾರು ಆಧಾರದ ಮೇಲೆ ಮರುಸಂಘಟಿಸಲಾಯಿತು. ಕ್ರಮೇಣ, ಬೆಳಗಾವಿ ಮತ್ತು ಬಾಂಬೆ ಪ್ರೆಸಿಡೆನ್ಸಿಯ 10 ಇತರ ತಾಲೂಕುಗಳನ್ನು ಮೈಸೂರು ರಾಜ್ಯದ ಭಾಗವಾಗಿ ಮಾಡಲಾಯಿತು. 1973 ರಲ್ಲಿ ಮೈಸೂರಿಗೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. 2004ರಲ್ಲಿ, ಮಹಾರಾಷ್ಟ್ರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತು ಮತ್ತು ಕಾನೂನು ಜಗಳ ಮುಂದುವರೆಯಿತು.

ಬೆಳಗಾವಿ ವಿವಾದದ ಕಥೆ ಈಗ ಎಲ್ಲಿ ನಿಂತಿದೆ?

ಬೆಳಗಾವಿ ವಿವಾದದ ಕಥೆ ಈಗ ಎಲ್ಲಿ ನಿಂತಿದೆ?

ರಾಜ್ಯಗಳ ಮರುಸಂಘಟನೆ ಕಾಯಿದೆ, 1956ರ ಅಡಿಯಲ್ಲಿ ಭಾಷಾವಾರು ಗಡಿಗಳನ್ನು ಗುರುತಿಸಿದಾಗಿನಿಂದ ಗಡಿ ನಗರವಾಗಿರುವ ಬೆಳಗಾವಿಯು ಕರ್ನಾಟಕದ ಭಾಗವಾಗಿದೆ. ಆದರೆ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಅಂತಾರಾಜ್ಯ ಗಡಿ ವಿವಾದವು ಆಗೊಮ್ಮೆ ಈಗೊಮ್ಮೆ ಭುಗಿಲೆದ್ದಿದೆ. ಇತ್ತೀಚೆಗೆ, ದಶಕಗಳಷ್ಟು ಹಳೆಯ ವಿವಾದ ಕರ್ನಾಟಕ ಸರ್ಕಾರವು ಮಹಾರಾಷ್ಟ್ರದ ಜಾತ್ ತಾಲೂಕಿಗೆ "ಗಂಭೀರವಾಗಿ" ಹಕ್ಕು ಚಲಾಯಿಸುತ್ತಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದಾಗ ಮತ್ತೆ ಭುಗಿಲೆದ್ದಿದೆ. ಈ ತಾಲೂಕಿನ ಎಲ್ಲ 40 ಗ್ರಾ.ಪಂ.ಗಳು ಜಾತ್ ತಾಲೂಕನ್ನು ಕರ್ನಾಟಕಕ್ಕೆ ಸೇರಬೇಕೆಂದು ನಿರ್ಣಯ ಕೈಗೊಂಡಿದ್ದೇವೆ ಎಂದು ಬೊಮ್ಮಾಯಿ ಮಾಧ್ಯಮಗಳಿಗೆ ತಿಳಿಸಿದರು. ನವೆಂಬರ್ 30ರ ಬುಧವಾರ ವಿವಾದದ ಕುರಿತು ಮಹಾರಾಷ್ಟ್ರದ ಅರ್ಜಿಯ ಅಂತಿಮ ಸುಪ್ರೀಂ ಕೋರ್ಟ್ ವಿಚಾರಣೆಗೆ ಮುನ್ನ ಅವರು ಹೇಳಿಕೆ ನೀಡಿದ್ದು ವಿವಾದವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿತು.

ಮಹಾರಾಷ್ಟ್ರ-ಕರ್ನಾಟಕದ ವಿವಾದ ಹುಟ್ಟಿಕೊಂಡಿದ್ದು ಯಾವಾಗ?

ಮಹಾರಾಷ್ಟ್ರ-ಕರ್ನಾಟಕದ ವಿವಾದ ಹುಟ್ಟಿಕೊಂಡಿದ್ದು ಯಾವಾಗ?

1956ರಲ್ಲಿ ಸಂಸತ್ತಿನಲ್ಲಿ ರಾಜ್ಯ ಮರುಸಂಘಟನೆ ಕಾಯಿದೆಯನ್ನು ಅಂಗೀಕರಿಸಿದಾಗಿನಿಂದ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದ ಗಡಿಯುದ್ದಕ್ಕೂ ಕೆಲವು ಪಟ್ಟಣಗಳು ಮತ್ತು ಹಳ್ಳಿಗಳನ್ನು ಸೇರಿಸುವ ಬಗ್ಗೆ ಕಿತ್ತಾಟ ಪ್ರಾರಂಭವಾಗಿದೆ. 1953ರಲ್ಲಿ ನೇಮಕಗೊಂಡ ನ್ಯಾಯಮೂರ್ತಿ ಫಜಲ್ ಅಲಿ ಆಯೋಗವು ಎರಡು ವರ್ಷಗಳ ನಂತರ ವರದಿಯನ್ನು ಸಲ್ಲಿಸಿತು. ಈ ಕಾಯ್ದೆಯು ಅದೇ ಆಯೋಗದ ಸಂಶೋಧನೆಗಳನ್ನು ಆಧರಿಸಿದೆ.

ಕಳೆದ ನವೆಂಬರ್ 1, 1956ರಂದು ಮೈಸೂರು ರಾಜ್ಯವನ್ನು ನಂತರ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ರಾಜ್ಯ ಮತ್ತು ನೆರೆಯ ಬಾಂಬೆ ರಾಜ್ಯದ ನಂತರ ಮಹಾರಾಷ್ಟ್ರ ನಡುವಿನ ಭಿನ್ನಾಭಿಪ್ರಾಯಗಳು ಸ್ಫೋಟಗೊಂಡವು. ಕರ್ನಾಟಕದ ವಾಯುವ್ಯ ಜಿಲ್ಲೆ ಬೆಳಗಾವಿಯು ರಾಜ್ಯದ ಭಾಗವಾಗಬೇಕು ಎಂದು ಮಹಾರಾಷ್ಟ್ರವು ಅಭಿಪ್ರಾಯಪಟ್ಟಿತು. ಇದು ಒಂದು ದಶಕದ ಹಿಂಸಾತ್ಮಕ ಆಂದೋಲನಕ್ಕೆ ಕಾರಣವಾಯಿತು. ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ರಚನೆಗೂ ಕಾರಣವಾಯಿತು. ಇದು ಜಿಲ್ಲೆಯ ಕೆಲವು ಭಾಗಗಳಲ್ಲಿ ಇನ್ನೂ ಅಧಿಕಾರವನ್ನು ಹೊಂದಿದೆ.

ಕೇಂದ್ರ ಸರ್ಕಾರವು ವಿವಾದದ ಬಗ್ಗೆ ಹೇಳುವುದೇನು?

ಕೇಂದ್ರ ಸರ್ಕಾರವು ವಿವಾದದ ಬಗ್ಗೆ ಹೇಳುವುದೇನು?

ಮಹಾರಾಷ್ಟ್ರದ ಪ್ರತಿಭಟನೆಗಳು ಮತ್ತು ಒತ್ತಡದ ನಡುವೆ, ಕೇಂದ್ರ ಸರ್ಕಾರವು ಅಕ್ಟೋಬರ್ 25, 1966ರಂದು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೆಹರ್‌ಚಂದ್ ಮಹಾಜನ್ ನೇತೃತ್ವದಲ್ಲಿ ಆಯೋಗವೊಂದನ್ನು ಸ್ಥಾಪಿಸಿತು. ಅಂದು ಎಸ್ ನಿಜಲಿಂಗಪ್ಪ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ವಿಪಿ ನಾಯಕ್ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿದ್ದರು. ಈ ವರದಿಯು ಎರಡೂ ರಾಜ್ಯಗಳಿಗೆ ಬೈಂಡಿಂಗ್ ಡಾಕ್ಯುಮೆಂಟ್ ಆಗಿರುತ್ತದೆ ಮತ್ತು ವಿವಾದವು ಕೊನೆ ಆಗುತ್ತದೆ ಅಂತಲೇ ನಿರೀಕ್ಷಿಸಲಾಗಿತ್ತು. ಆದರೆ ಆಯೋಗವು ಆಗಸ್ಟ್ 1967 ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು. ಅದರಲ್ಲಿ ಕರ್ನಾಟಕದ ನಿಪ್ಪಾಣಿ, ನಂದಗಡ ಮತ್ತು ಖಾನಾಪುರ ಸೇರಿದಂತೆ 264 ಪಟ್ಟಣಗಳು ಮತ್ತು ಹಳ್ಳಿಗಳನ್ನು ಮಹಾರಾಷ್ಟ್ರದೊಂದಿಗೆ ಮತ್ತು ಮಹಾರಾಷ್ಟ್ರದ ದಕ್ಷಿಣ ಸೋಲಾಪುರ ಮತ್ತು ಅಕ್ಕಲಕೋಟ ಸೇರಿದಂತೆ 247 ಹಳ್ಳಿಗಳನ್ನು ಕರ್ನಾಟಕದೊಂದಿಗೆ ವಿಲೀನಗೊಳಿಸಲು ಶಿಫಾರಸು ಮಾಡಿತು.

1970ರಲ್ಲಿ ಸಂಸತ್ತಿನಲ್ಲಿ ವರದಿ ಮಂಡನೆಯಾಗಿದ್ದರೂ ಅದನ್ನು ಚರ್ಚೆಗೆ ತೆಗೆದುಕೊಳ್ಳಲಿಲ್ಲ. ಈ ಶಿಫಾರಸುಗಳ ಅನುಷ್ಠಾನವಿಲ್ಲದೆ, ಮರಾಠಿ ಮಾತನಾಡುವ ಪ್ರದೇಶಗಳು ಮಹಾರಾಷ್ಟ್ರದ ಭಾಗವಾಗಬೇಕು ಮತ್ತು ಕನ್ನಡ ಮಾತನಾಡುವ ಪ್ರದೇಶಗಳು ಕರ್ನಾಟಕದ ಭಾಗವಾಗಬೇಕು ಎಂಬ ಬೇಡಿಕೆಗಳು ಬೆಳೆಯುತ್ತಲೇ ಇದ್ದವು. ಎಂಇಎಸ್ ಬೆಳಗಾವಿಯ ಹಲವೆಡೆ ಚುನಾವಣಾ ವಿಷಯವಾಗಿ ಜಿಲ್ಲೆಯ ಕ್ಷೇತ್ರಗಳಿಂದ ಸತತವಾಗಿ ಗೆದ್ದಿತು.

ಕನ್ನಡ ಹೋರಾಟಗಾರ ಅಶೋಕ್ ಚಂದರಗಿ ಪ್ರಕಾರ, ಈ ಸಮಸ್ಯೆಯು ಬೆಳಗಾವಿಯ ಗಡಿ ಪ್ರದೇಶಗಳಲ್ಲಿ ರಾಜಕೀಯ ಧ್ರುವೀಕರಣಕ್ಕೆ ಕಾರಣವಾಯಿತು. ಅನೇಕ ಜನರು ಭಾಷೆಯ ಆಧಾರದ ಮೇಲೆ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಆದರೆ, 1999ರ ಸುಮಾರಿಗೆ ಎಂಇಎಸ್ ಚುನಾವಣೆಯಲ್ಲಿ ಹೀನಾಯವಾಗಿ ಸೋತು ಗಡಿ ಭಾಗದಲ್ಲಿ ಒಂದೇ ಒಂದು ಸ್ಥಾನವನ್ನೂ ಗೆಲ್ಲಲಿಲ್ಲ.

ಬೆಳಗಾವಿ ವಿವಾದಕ್ಕೆ ಚಳಿಗಾಲದಲ್ಲೇ ಏಕೆ ಮುಹೂರ್ತ?

ಬೆಳಗಾವಿ ವಿವಾದಕ್ಕೆ ಚಳಿಗಾಲದಲ್ಲೇ ಏಕೆ ಮುಹೂರ್ತ?

ಕಳೆದ 2007ರಲ್ಲಿ ಕರ್ನಾಟಕವು ಈ ಪ್ರದೇಶದ ಮೇಲೆ ತನ್ನ ನಿಯಂತ್ರಣವನ್ನು ಪ್ರತಿಪಾದಿಸಲು ಬೆಳಗಾವಿಯಲ್ಲಿ ಸುವರ್ಣ ವಿಧಾನ ಸೌಧವನ್ನು (ವಿಧಾನ ಸಭೆ) ನಿರ್ಮಿಸಲು ಪ್ರಾರಂಭಿಸಿತು. ಈ ಕಟ್ಟಡವನ್ನು 2012ರಲ್ಲಿ ಉದ್ಘಾಟಿಸಲಾಯಿತು. ವಾರ್ಷಿಕ ಚಳಿಗಾಲದ ಶಾಸಕಾಂಗ ಅಧಿವೇಶನಗಳು ಇಲ್ಲಿ ನಡೆಯುತ್ತವೆ. ಬೆಳಗಾವಿಯಲ್ಲಿ ಕರ್ನಾಟಕದ ವಿಧಾನಸಭೆ ಅಧಿವೇಶನ ನಡೆದಾಗಲೆಲ್ಲಾ ಗಡಿ ಸಮಸ್ಯೆಗಳು ತಲೆದೋರುತ್ತವೆ.

2021 ರಲ್ಲಿ ಬೆಳಗಾವಿ ಅಧಿವೇಶನದ ಸಮಯದಲ್ಲಿ ನಗರವು ಕಾದ ಕೆಂಡದಂತೆ ಆಗಿತ್ತು. ಬೆಳಗಾವಿಯನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಎಂಇಎಸ್ ಕಾರ್ಯಕರ್ತನ ಮುಖಕ್ಕೆ ಕನ್ನಡ ಕಾರ್ಯಕರ್ತರು ಕಪ್ಪು ಮಸಿ ಬಳಿದಿದ್ದರು. ಇದಾದ ಕೆಲವೇ ದಿನಗಳಲ್ಲಿ ಬೆಳಗಾವಿ ನಗರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕನ್ನಡದ ದಿಗ್ಗಜ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿತ್ತು.

ಈ ವರ್ಷವೂ ಅಧಿವೇಶನದಲ್ಲಿ ಗಡಿ ವಿಚಾರವಾಗಿ ಕನ್ನಡ ಮತ್ತು ಮರಾಠಾ ಗುಂಪುಗಳು ಗದ್ದಲ ಎಬ್ಬಿಸುವ ಆತಂಕ ಎದುರಾಗಿದೆ. ಡಿಸೆಂಬರ್ 3ರಂದು ಮಹಾರಾಷ್ಟ್ರ ಸರ್ಕಾರದ ಇಬ್ಬರು ಸಚಿವರಾದ ಚಂದ್ರಕಾಂತ್ ಪಾಟೀಲ್ ಮತ್ತು ಶಂಬುರಾಜೇ ದೇಸಾಯಿ ಬೆಳಗಾವಿಗೆ ಭೇಟಿ ನೀಡಲಿದ್ದಾರೆ. ಈ ಮಧ್ಯೆ ಮಹಾರಾಷ್ಟ್ರದ ಕನ್ನಡ ಮಾತನಾಡುವ ಪ್ರದೇಶಗಳಿಗೆ ತನ್ನದೇ ಆದ ಹಿರಿಯ ಸಚಿವರ ನಿಯೋಗವನ್ನು ನಿಯೋಜಿಸುವಂತೆ ಕನ್ನಡ ಗುಂಪುಗಳು ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿವೆ.

ಗಡಿ ವಿವಾದ ಕೋರ್ಟ್ ಅಂಗಳದಲ್ಲಿದೆ

ಗಡಿ ವಿವಾದ ಕೋರ್ಟ್ ಅಂಗಳದಲ್ಲಿದೆ

2004ರಲ್ಲಿ ರಾಜ್ಯ ಮರುಸಂಘಟನೆ ಕಾಯ್ದೆಯನ್ನು ಪ್ರಶ್ನಿಸಿ ಮಹಾರಾಷ್ಟ್ರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಕರ್ನಾಟಕದ ಐದು ಜಿಲ್ಲೆಗಳ 865 ಗ್ರಾಮಗಳು ಮತ್ತು ಪಟ್ಟಣಗಳನ್ನು ರಾಜ್ಯದೊಂದಿಗೆ ವಿಲೀನಗೊಳಿಸಬೇಕೆಂದು ಒತ್ತಾಯಿಸಿತು. ಬೆಳಗಾವಿ, ಕಾರವಾರ, ವಿಜಯಪುರ, ಕಲಬುರಗಿ ಮತ್ತು ಬೀದರ್ ಆ ಐದು ಜಿಲ್ಲೆಗಳಾಗಿದ್ದವು. ಆದಾಗ್ಯೂ, ಅರ್ಜಿಯ ಸುಮಾರು ಎರಡು ದಶಕಗಳ ನಂತರವೂ ಅದರ ನಿರ್ವಹಣೆಯು ಸವಾಲಾಗಿ ಉಳಿದಿದೆ. ರಾಜ್ಯಗಳ ಗಡಿಯನ್ನು ನಿರ್ಧರಿಸುವ ಅಧಿಕಾರ ಸುಪ್ರೀಂ ಕೋರ್ಟ್‌ಗೆ ಇಲ್ಲ. ಸಂಸತ್ತಿಗೆ ಮಾತ್ರ ಹಾಗೆ ಮಾಡುವ ಅಧಿಕಾರವಿದೆ ಎಂದು ವಾದಿಸಲು ಕರ್ನಾಟಕವು ಭಾರತೀಯ ಸಂವಿಧಾನದ 3ನೇ ವಿಧಿಯನ್ನು ಆಶ್ರಯಿಸಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯಗಳ ನಡುವಿನ ವಿವಾದಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ಗೆ ನ್ಯಾಯವ್ಯಾಪ್ತಿ ಇದೆ ಎಂದು ಹೇಳುವ ಸಂವಿಧಾನದ 131ನೇ ವಿಧಿಯನ್ನು ಮಹಾರಾಷ್ಟ್ರವು ಉಲ್ಲೇಖಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+