ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಂಧನ ಭೀತಿಯಿಂದ ಕೋರ್ಟಿಗೆ ಶರಣಾದ ಶಾಸಕ ಬಾಲಕೃಷ್ಣ
ಮಾಗಡಿ ತಾಲೂಕಿನ ಕುದೂರು ಪೊಲೀಸ್ ಠಾಣೆಗೆ ನುಗ್ಗಿ ಗೂಂಡಾಗಿರಿ ಪ್ರದರ್ಶಿಸಿದ್ದ ಶಾಸಕ ಬಾಲಕೃಷ್ಣ ಅವರು ಬಂಧನ ಭೀತಿಯಿಂದ ಶುಕ್ರವಾರ ಬೆಳಗ್ಗೆ ಕೋರ್ಟಿಗೆ ಶರಣಾಗಿದ್ದಾರೆ
ರಾಮನಗರ, ಜನವರಿ 20: ಮಾಗಡಿ ತಾಲೂಕಿನ ಕುದೂರು ಪೊಲೀಸ್ ಠಾಣೆಗೆ ನುಗ್ಗಿ ಗೂಂಡಾಗಿರಿ ಪ್ರದರ್ಶಿಸಿದ್ದ ಶಾಸಕ ಬಾಲಕೃಷ್ಣ ಅವರು ಬಂಧನ ಭೀತಿಯಿಂದ ಶುಕ್ರವಾರ ಬೆಳಗ್ಗೆ ಕೋರ್ಟಿಗೆ ಶರಣಾಗಿದ್ದಾರೆ. ಗುರುವಾರದಂದು ಶಾಸಕರ ವಿರುದ್ಧ ಎಫ್ ಐಆರ್ ದಾಖಲಾಗಿತ್ತು.
ಶುಕ್ರವಾರ
ಬೆಳಗ್ಗೆ
1ನೇ
ಜೆಎಂಎಫ್
ಸಿ
ಕೋರ್ಟಿಗೆ
ಹಾಜರಾಗಿ,
ಶರಣಾಗಿದ್ದಾರೆ.
ಜನವರಿ
15ರಂದು
ಕುದೂರು
ಠಾಣೆಗೆ
ಬಂದಿದ್ದ
ಬಾಲಕೃಷ್ಣ
ಅವರು
ಎಸ್ಐ
ಹರೀಶ್
ಮತ್ತು
ಇನ್ಸಪೆಕ್ಟರ್
ನಂದೀಶ್
ಅವರ
ವಿರುದ್ಧ
ಅವಾಚ್ಯ
ಪದಗಳನ್ನು
ಬಳಸಿ,
ಧಮಕಿ
ಹಾಕಿದ್ದರು.
ಪೊಲೀಸರ ಮೇಲೆ ಗೂಂಡಾ ವರ್ತನೆ ಮಾಡಿದ ಶಾಸಕರ ವಿರುದ್ಧ ಎಸ್ಪಿ ರಮೇಶ್ ಬಾನೊತ್ ಅವರಿಗೆ ದೂರು ನೀಡಲಾಗಿತ್ತು. ಈ ಸಂಬಂಧ ಮಾಗಡಿ ಶಾಸಕ ಬಾಲಕೃಷ್ಣ ಸೇರಿದಂತೆ 17 ಮಂದಿಯ ಮೇಲೆ ಐಪಿಸಿ ಸೆಕ್ಷನ್ 341, 352, 353, 504, 506 ಜೊತೆಗೆ 141 ಐಪಿಸಿ ಸೆಕ್ಷನ್ ಅಡಿ ಕೇಸ್ ದಾಖಲಾಗಿತ್ತು.
Comments
hc balakrishna magadi ramanagara district news karnataka police ರಾಮನಗರ ಮಾಗಡಿ ಕರ್ನಾಟಕ ಪೊಲೀಸ್ ಎಚ್ ಸಿ ಬಾಲಕೃಷ್ಣ
English summary
Magadi MLA HC Balakrishna surrenders himself before JMFC court today. An FIR was filed against Magadi MLA H.C. Balakrishna on Thursday by the Kudur police for abusing and creating a ruckus in the police station.