ವಲಸೆ ಪಾಲಿಟಿಕ್ಸ್ : ಕಾಂಗ್ರೆಸ್ಸಿಗೆ ಸೇರ್ಪಡೆಯಾದವರ ಪಟ್ಟಿ
Recommended Video

ಬೆಂಗಳೂರು, ಮಾರ್ಚ್ 09: ಕರ್ನಾಟಕ ರಾಜ್ಯದ ಜನಪರ ಕಾಂಗ್ರೆಸ್ ಸರ್ಕಾರವು ನಾಡಿನ ಸಮಸ್ತ ಜನತೆಗೆ ನೀಡಿರುವ ವಿವಿಧ ಯೋಜನೆಗಳು ಹಾಗೂ ಅಭೂತಪೂರ್ವ ಕಾರ್ಯಕ್ರಮಗಳ ಪ್ರಭಾವದಿಂದ ರಾಜ್ಯದೆಲ್ಲೆಡೆ ಕಾಂಗ್ರೆಸ್ ಅಲೆ ಎದ್ದಿದೆ. ಹೀಗಾಗಿ, ವಿವಿಧ ಪಕ್ಷಗಳಿಂದ ವಲಸೆ ಬರುವವರ ಸಂಖ್ಯೆ ಹೆಚ್ಚಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಜನಾಭಿವೃದ್ಧಿ ಕಾರ್ಯಕ್ರಮಗಳನ್ನು ನೀಡುತ್ತಿರುವ ಕರ್ನಾಟಕ ಕಾಂಗ್ರೆಸ್ಗೆ ಮನಸೋತು ವಿವಿಧ ಪಕ್ಷಗಳ ಹಲವಾರು ನಾಯಕರು ಕಾಂಗ್ರೆಸ್ ಸೇರಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಇನ್ನಷ್ಟು ಮಂದಿ ಸೇರುವ ನಿರೀಕ್ಷೆಯೂ ಇದೆ. ವಿವಿಧ ಪಕ್ಷಗಳಿಂದ ಕಾಂಗ್ರೆಸ್ಗೆ ಸೇರ್ಪಡೆಯಾದವರ ಪಟ್ಟಿ ಇಲ್ಲಿದೆ.
ಸಾಧನೆ ನೋಡಿ ಸೇರ್ಪಡೆಯದರು: 5 ವರ್ಷಗಳ ಆಡಳಿತಾವಧಿಯಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಬಳ್ಳಾರಿ ಗ್ರಾಮೀಣ, ನಂಜನಗೂಡು, ಗುಂಡ್ಲುಪೇಟೆ, ಚಿಕ್ಕೋಡಿ-ಸದಲಗಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಿರುವುದು ಅಭಿವೃದ್ಧಿ ಯೋಜನೆಗಳಿಗೆ ಸಂದ ಫಲವೇ ಆಗಿದೆ ಎಂದು ಕಾಂಗ್ರೆಸ್ ತನ್ನ ಸಾಧನೆಗಳನ್ನು ಎಲ್ಲೆಡೆ ಸಾರುತ್ತಿದೆ.

ಇದಕ್ಕೆ ಪೂರಕವಾಗಿ ಚುನಾವಣಾ ಸಮೀಕ್ಷೆಗಳ ಮೂಲಕ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿಸುವುದು ನಿಚ್ಚಳವಾಗಿದ್ದು ರಾಜ್ಯದ ಜನತೆಯ ಒಲವು ಕಾಂಗ್ರೆಸ್ ಪರವಾಗಿದೆ ಎಂದು ಕಾಂಗ್ರೆಸ್ ಮುಖಂಡರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿವಿಧ ಪಕ್ಷಗಳಿಂದ ಕಾಂಗ್ರೆಸ್ಸಿಗೆ ವಲಸೆ ಬಂದವರು:
ಬಿಜೆಪಿ
* ಹುಣಸೂರು-ಸಿ.ಎಚ್.ವಿಜಯಶಂಕರ್
* ವಿಜಯನಗರ- ಆನಂದ್ ಸಿಂಗ್
* ಕೂಡ್ಲಿಗಿ-ನಾಗೇಂದ್ರ
ಜೆಡಿಎಸ್
* ಕೊಡಗು-ಎಂ.ಸಿ.ನಾಣಯ್ಯ
* ನಂಜನಗೂಡು-ಕಳಲೆ ಕೃಷ್ಣಮೂರ್ತಿ
* ಗಂಗಾವತಿ-ಇಕ್ಬಾಲ್ ಅನ್ಸಾರಿ
* ಚಾಮರಾಜಪೇಟೆ -ಜಮೀರ್ ಅಹಮದ್ ಖಾನ್
* ಪುಲಿಕೇಶಿನಗರ- ಅಖಂಡ ಶ್ರೀನಿವಾಸ ಮೂರ್ತಿ
* ಮಾಗಡಿ - ಹೆಚ್.ಸಿ. ಬಾಲಕೃಷ್ಣ
* ನಾಗಮಂಗಲ -ಚೆಲುವರಾಯಸ್ವಾಮಿ
* ಶ್ರೀರಂಗಪಟ್ಟಣ-ರಮೇಶ್ ಬಂಡಿಸಿದ್ದೇಗೌಡ
* ಹಗರಿಬೊಮ್ಮನಹಳ್ಳಿ-ಭೀಮಾ ನಾಯ್ಕ
ಕೆಜೆಪಿ
* ಆಳಂದ - ಬಿ.ಆರ್.ಪಾಟೀಲ್
***
ಕೆಎಂಪಿ
* ಬೀದರ್ ದಕ್ಷಿಣ - ಅಶೋಕ್ ಖೇಣಿ
***












Click it and Unblock the Notifications