ಜಯಲಲಿತಾ ಆಸ್ತಿ ವಿಲೇವಾರಿಗೆ ಎಸ್ಪಿಪಿ ನೇಮಕ ಮಾಡಲು ಪತ್ರ
ದೇಶದ ರಾಜಕಾರಣದಲ್ಲಿ ಕುತೂಹಲ ಕೇರಳಿಸಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಜಪ್ತಿ ಮಾಡಲಾದ ಕೋಟ್ಯಂತ ಬೆಲೆ ಬಾಳುವ ವಸ್ತುಗಳು ಸದ್ಯದಲ್ಲೇ ವಿಲೇವಾರಿ ಆಗಲಿವೆ.
ಬೆಂಗಳೂರು ಜ.25. ದೇಶದ ರಾಜಕಾರಣದಲ್ಲಿ ಕುತೂಹಲ ಕೇರಳಿಸಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಜಪ್ತಿ ಮಾಡಲಾದ ಕೋಟ್ಯಂತ ಬೆಲೆ ಬಾಳುವ ವಸ್ತುಗಳು ಸದ್ಯದಲ್ಲೇ ವಿಲೇವಾರಿ ಆಗಲಿವೆ.
ಪ್ರಕರಣದ ವಿಚಾರಣೆ ನಡೆಸಿದ್ದ ನಗರದ ವಿಶೇಷ ನ್ಯಾಯಾಲಯ ಜಯಾ ಅವರ ವಸ್ತುಗಳನ್ನು ವಿಲೇವಾರಿ ಮಾಡಲು ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸುವಂತೆ ರಾಜ್ಯ ಗೃಹ ಇಲಾಖೆಗೆ ಪತ್ರ ಬರೆದಿದೆ.
ಕರ್ನಾಟಕ ಹೈಕೋರ್ಟ್ನ ಇಬ್ಬರು ನ್ಯಾಯಮೂರ್ತಿಗಳ ಪ್ರಮಾಣವಚನ
ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ನಗರದ ವಿಶೇಷ ನ್ಯಾಯಾಲಯವು ಜಯಲಲಿತಾಗೆ ನಾಲ್ಕು ವರ್ಷ ಜೈಲು ಮತ್ತು ೧೦೦ ಕೋಟಿ ರು. ದಂಡ ವಿಧಿಸಿ ೨೦೧೪ರ ಸೆ.೨೭ರಂದು ಆದೇಶಿಸಿತ್ತು. ಜಪ್ತಿ ಮಾಡಲಾದ ಜಯಲಲಿತಾ ಅವರ ಬೆಲೆಬಾಳುವ ವಸ್ತುಗಳನ್ನು ಆರ್ಬಿಐ, ಎಸ್ಬಿಐಗೆ ಅಥವಾ ಸಾರ್ವಜನಿಕ ಹರಾಜು ಮೂಲಕ ಮಾರಾಟ ಮಾಡಬೇಕು. ಅದರಿಂದ ಬಂದ ಹಣವನ್ನು ದಂಡ ಮೊತ್ತಕ್ಕೆ ಹೊಂದಾಣಿಕೆ ಮಾಡಬೇಕು ಎಂದು ನಿರ್ದೇಶಿಸಿತ್ತು.
ಆರ್ಟಿಐ ಕಾರ್ಯಕರ್ತ ಟಿ.ನರಸಿಂಹ ಮೂರ್ತಿ ಸಲ್ಲಿಸಿದ್ದ ಮೇಲ್ಮನವಿ ಕುರಿತು ನಗರದ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಹೊರಡಿಸಿರುವ ಆದೇಶದಲ್ಲಿ ಈ ವಿಷಯ ತಿಳಿಸಲಾಗಿದೆ. ಇದರಿಂದ ಆರ್ಟಿಐ ಕಾರ್ಯಕರ್ತ ನರಸಿಂಹ ಮೂರ್ತಿ, ೨೦೨೨ರ ಆ.೧೨ರಂದು ನಗರದ ಸಿಟಿ ಸಿವಿಲ್ ಕೋರ್ಟ್ ಮಾಹಿತಿ ಹಕ್ಕು ಅಧಿಕಾರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ, ಜಪ್ತಿ ಮಾಡಿರುವ ಜಯಲಲಿತಾ ಅವರಿಗೆ ಸೇರಿದ ವಸ್ತುಗಳ ವಿಲೇವಾರಿ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದರು. ಆದರೆ, ಮಾಹಿತಿ ನೀಡಲು ನಿರಾಕರಿಸಿದ ಮಾಹಿತಿ ಹಕ್ಕು ಅಧಿಕಾರಿ, ೨೦೨೨ರ ಸೆ.೭ರಂದು ಆ ಅರ್ಜಿ ತಿರಸ್ಕರಿಸಿದ್ದರು. ಇದರಿಂದ ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇತ್ತೀಚೆಗೆ ಮೇಲ್ಮನವಿಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಕಾನೂನು ಇಲಾಖೆಗೂ ಪತ್ರ: ಜಪ್ತಿ ಮಾಡಿರುವ ಜಯಲಲಿತಾ ಅವರ ವಸ್ತುಗಳ ವಿಲೇವಾರಿಗೆ ಸಂಬಂಧಪಟ್ಟ ನ್ಯಾಯಾಲಯ ಕಾನೂನು ಪ್ರಕಾರ ಸೂಕ್ತ ಕ್ರಮ ಜರುಗಿಸಬೇಕೆಂದು ವಿಶೇಷ ನ್ಯಾಯಾಲಯ ಆದೇಶಿಸಿದೆ. ಪ್ರಕರಣದ ದಾಖಲೆ ಪರಿಶೀಲಿಸಿದಾಗ ವಿಶೇಷ ನ್ಯಾಯಾಲಯವು ರಾಜ್ಯ ಕಾನೂನು ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದು, ವಸ್ತುಗಳನ್ನು ವಿಲೇವಾರಿ ಮಾಡಲು ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸುವಂತೆ ಕೋರಿದೆ.
ನಂತರ
ಇದೇ
ವಿಚಾರವಾಗಿ
ರಾಜ್ಯ
ಗೃಹ
ಇಲಾಖೆ
ಕಾರ್ಯದರ್ಶಿಗೆ
ಇತ್ತೀಚಗೆ
ಮತ್ತೊಂದು
ಪತ್ರ
ಬರೆಯಲಾಗಿದೆ
ಎಂಬುದು
ತಿಳಿದು
ಬರಲಿದೆ.
ಹಾಗಾಗಿ,
ಈ
ಎಲ್ಲಾ
ಮಾಹಿತಿ
ಮತ್ತು
ಪತ್ರಗಳ
ಪ್ರತಿಗಳನ್ನು
ಮೇಲ್ಮನವಿದಾರಿಗೆ
ಒದಗಿಸಬೇಕು
ಎಂದು
ಮಾಹಿತಿ
ಹಕ್ಕು
ಅಧಿಕಾರಿಗೆ
ಪ್ರಥಮ
ಮೇಲ್ಮನವಿ
ಪ್ರಾಧಿಕಾರ
ಆದೇಶಿಸಿದೆ.
ಅಕ್ರಮ
ಆಸ್ತಿ
ಗಳಿಕೆ
ಪ್ರಕರಣ
ಸಂಬಂಧ
ತಮಿಳನಾಡು
ಭ್ರಷ್ಟಾಚಾರ
ನಿಗ್ರಹ
ಮತ್ತ
ವಿಚಕ್ಷಣಾ
ದಳದ
ಅಧಿಕಾರಿಗಳು
೧೯೯೬ರ
ಡಿ.೧೧ರಂದು
ಚೆನ್ನೈ
ನಗರದ
ಜಯಲಲಿತಾ
ನಿವಾಸ
ಪೊಯಾಸ್
ಗಾರ್ಡನ್
ಮೇಲೆ
ದಾಳಿ
ನಡೆಸಿ
ಕೋಟ್ಯಂತರ
ರು.
ಬೆಲೆಬಾಳುವ
ವಸ್ತುಗಳನ್ನು
ಜಪ್ತಿ
ಮಾಡಿದ್ದರು.
ಈಗಾಗಲೇ
ಪ್ರಕರಣ
ಮುಕ್ತಾಯಗೊಂಡಿರುವ
ಕಾರಣ
ಆ
ವಸ್ತುಗಳನ್ನು
ನ್ಯಾಯಾಲಯದ
ಸುಪರ್ದಿಯಲ್ಲಿ
ಇಟ್ಟುಕೊಳ್ಳುವ
ಯಾವುದೇ
ಅಗತ್ಯ
ಇಲ್ಲ
ಎಂದು
ಮೇಲ್ಮನವಿದಾರ
ತಮ್ಮ
ಮನವಿಯಲ್ಲಿ
ತಿಳಿಸಿದ್ದರು.