ಅತೃಪ್ತರಿಗೆ ಅಭಯ ನೀಡದ ಕೃಷ್ಣ, ಪ್ರಸಾದ್ ಅಂಡ್ ಪ್ರಸಾದ್ ಟಾಕ್
ಬೆಂಗಳೂರು, ಜೂನ್ 27: ಅತೃಪ್ತ ಕಾಂಗ್ರೆಸ್ಸಿಗರ ಜತೆ ಸೋಮವಾರ ನಡೆಸಬೇಕಿದ್ದ ಸಭೆಯನ್ನು ಮಾಜಿ ಸಿಎಂ, ವಿದೇಶಾಂಗ ಸಚಿವ ಎಸ್ಸೆಂ ಕೃಷ್ಣ ಅವರು ರದ್ದುಗೊಳಿಸಿದ್ದಾರೆ. ಈ ಮೂಲಕ ಭಿನ್ನಮತೀಯರಿಗೆ ಭಾರಿ ಹಿನ್ನಡೆಯಾಗಿದೆ. ಅಂಬರೀಶ್, ಖಮರುಲ್ ಇಸ್ಲಾಂ, ಶ್ರೀನಿವಾಸ್ ಪ್ರಸಾದ್ ಅವರ ಮುಂದೆ ನಡೆ ಏನು? ಕರ್ನಾಟಕ ರಾಜಕೀಯ ಚಟುವಟಿಕೆಗಳ ರೌಂಡಪ್ ಇಲ್ಲಿದೆ
ಅತೃಪ್ತರೊಂದಿಗೆ ನಡೆಯಬೇಕಿದ್ದ ಸಭೆರನ್ನು ಕೃಷ್ಣ ಅವರು ರದ್ದುಗೊಳಿಸಲು ಅನಾರೋಗ್ಯ ಕಾರಣ ಎನ್ನಲಾಗಿದೆ. ಆದರೆ, ಈಗಾಗಲೇ ಅತೃಪ್ತರಿಗೆ ಕಾದು ನೋಡಿ, ತಾಳ್ಮೆಯಿಂದಿರಿ ಎಂದು ಬೋಧಿಸುವ ಮೂಲಕ ಕೃಷ್ಣ ಅವರು ಭಿನ್ನಮತೀಯರಿಂದ ದೂರ ಸರಿಯುವುದು ನಿಚ್ಚಳವಾಗಿದೆ.[ಅಂಬರೀಶ್ ಮತ್ತೆ ಸಂಪುಟಕ್ಕೆ, ರಮ್ಯಾ ಮತ್ತೆ ಸಂಸತ್ ಸ್ಥಾನಕ್ಕೆ?]
ಬಂಡಾಯಗಾರರು ಯಾರು?: ಸಂಪುಟದಿಂದ ಕೈ ಬಿಟ್ಟ ಬಳಿಕ ಮುಖ್ಯಮಂತ್ರಿಗಳ ವಿರುದ್ಧ ದನಿ ಎತ್ತಿದವರ ಪೈಕಿ ಮಾಜಿ ಕಂದಾಯ ಸಚಿವ ಶ್ರೀನಿವಾಸಪ್ರಸಾದ್, ಮಾಜಿ ವಸತಿ ಸಚಿಅ ಅಂಬರೀಶ್ ಹಾಗೂ ಖಮರುಲ್ ಇಸ್ಲಾಂ ಮುಂಚೂಣಿಯಲ್ಲಿದ್ದಾರೆ. ಅಂಬರೀಷ್ ಅವರ ರೆಬೆಲ್ ವಾಯ್ಸ್ ಸದ್ಯಕ್ಕೆ ತಣ್ಣಗಾಗಿದೆ. ರಮ್ಯಾ ಅವರು ಕ್ಯಾಬಿನೆಟ್ ಪ್ರವೇಶ ವಿಳಂಬ ಅಥವಾ ಕಷ್ಟ ಎಂಬುದು ಸ್ಪಷ್ಟವಾಗಿದೆ.

ಹೈದರಾಬಾದ್ ಕರ್ನಾಟಕ ಪ್ರದೇಶದ ನಾಯಕರನ್ನು ಒಟ್ಟುಗೂಡಿಸುವಲ್ಲೇ ಸುಸ್ತಾಗಿರುವ ಖಮರುಲ್ ಇಸ್ಲಾಂರನ್ನು ಪಕ್ಷ ಇನ್ನೂ ಬಂಡಾಯಗಾರ ಎಂದು ಪರಿಗಣಿಸಿಲ್ಲ. ಶ್ರೀನಿವಾಸ್ ಪ್ರಸಾದ್ ಅವರು ಏಕಾಂಗಿಯಾಗಿ ಒಂದಷ್ಟು ಗುಪ್ತ ಸಭೆಗಳನ್ನು ನಡೆಸುತ್ತಿದ್ದಾರೆ ಅಷ್ಟೆ,
ಭಾನುವಾರ ಟುಸ್ ಆದ ಭಿನ್ನರ ಸಭೆ: ಸಿಎಂ ಸಿದ್ದರಾಮಯ್ಯ ವಿರುದ್ಧ ದನಿ ಎತ್ತಲು ನಮ್ಮ ಜತೆ 40ಕ್ಕೂ ಹೆಚ್ಚು ಶಾಸಕರಿದ್ದಾರೆ ಎಂಬ ಸುದ್ದಿ ಕೇಳಿ ಕಾಂಗ್ರೆಸ್ ಅಷ್ಟೇ ಅಲ್ಲ ಬಿಜೆಪಿ, ಜೆಡಿಎಸ್ ಕೂಡಾ ಒಮ್ಮೆ ಹುಬ್ಬೇರಿಸಿತ್ತು. ಆದರೆ, ಶ್ರೀನಿವಾಸಪ್ರಸಾದ್ ನೇತೃತ್ವದಲ್ಲಿ ಭಾನುವಾರ ನಡೆಯಬೇಕಿದ್ದ ಸಭೆ ಸಂಖ್ಯಾ ಬಲವಿಲ್ಲದೆ ರದ್ದಾಯಿತು.
ಹರಿಪ್ರಸಾದ್ ಜತೆ ಶ್ರೀನಿವಾಸ್ ಪ್ರಸಾದ್ ಮಾತುಕತೆ: ಎಸ್ಸೆಂಕೃಷ್ಣರನ್ನು ಭೇಟಿ ಮಾಡಿದ ನಂತರ ಶ್ರೀನಿವಾಸ್ ಪ್ರಸಾದ್ ಅವರು ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸಂಪುಟ ಪುನರ್ ರಚನೆ, ಸ್ವಹಿತಾ ಸಕ್ತಿ, ನಾಯಕತ್ವ ಬದಲಾವಣೆ, ಅತೃಪ್ತರ ಬಣ, ಜಾಫರ್ ಷರೀಫ್ ಅವರ ಬೆಂಬಲದ ಬಗ್ಗೆ ಹರಿಪ್ರಸಾದ್ ಅವರಿಗೆ ಶ್ರೀನಿವಾಸ್ ಪ್ರಸಾದ್ ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ. ಆದರೆ, ಸಿದ್ದರಾಮಯ್ಯ ಅವರ ಸರ್ಕಾರ ಅಲುಗಾಡಿಸುವಂಥ ಯಾವುದೇ ಬೆಳವಣಿಗೆ ಇಲ್ಲಿ ತನಕ ಕಂಡು ಬಂದಿಲ್ಲ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications