Get Updates
Get notified of breaking news, exclusive insights, and must-see stories!

Tour Package: ಪ್ರವಾಸೋದ್ಯಮ ಇಲಾಖೆಯಿಂದ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ, ಎಲ್ಲಿಂದ-ಎಲ್ಲಿಗೆ?

ಬೆಂಗಳೂರು: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯು ಪ್ರವಾಸಾಸಕ್ತರಿಗೆ ಹಸಿರು ಪರಿಸರದ ಸೌಂದರ್ಯ ಅನುಭವಿಸುವ ಜೊತೆಗೆ ನಾಡಿನ ಐತಿಹಾಸಿಕ ಸ್ಥಳದ ಸಂಸ್ಕೃತಿ, ಕಲೆಗಳ ಮಾಹಿತಿ ತಿಳಿಸಲು ವಿಶೇಷ ಪ್ರವಾಸ ಪ್ಯಾಕೇಜ್ ಘೋಷಿಸಿದೆ. ಜೊತೆಗೆ ಪ್ರವಾಸ ದರದಲ್ಲಿ ಶೇಕಡಾ 20 ರಷ್ಟು ರಿಯಾಯಿತಿ ಸಹ ನೀಡುತ್ತಿದೆ. ಪ್ರವಾಸದ ಮಾರ್ಗ, ಸ್ಥಳ, ಟಿಕೆಟ್ ದರ, ಸಂಚಾರ ಸಮಯ, ಪ್ಯಾಕೇಜ್ ಬುಕ್ಕಿಂಗ್ ಹೇಗೆ ಎಂಬ ಮಾಹಿತಿ ಇಲ್ಲಿದೆ.

ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಬೆಂಗಳೂರಿನಿಂದ ಈ ಪ್ರವಾಸದ ಪ್ರಯಾಣ ಆರಂಭಿಸಲಿದೆ. ದಕ್ಷಿಣ ಭಾರತದ ಮನಮೋಹಕ ಬೆಟ್ಟ ಪ್ರದೇಶಗಳ ಸೌಂದರ್ಯ ಒಂದೇ ಪ್ರವಾಸದಲ್ಲಿ ಮೈಸೂರು-ಊಟಿ-ಕೊಡೈಕನಾಲ್ ನೋಡಿಕೊಂಡು ಬರುವ ಅವಕಾಶ ಕಲ್ಪಿಸಿದೆ. ಹಸಿರು ಬೆಟ್ಟಗಳು, ತಂಪಾದ ವಾತಾವರಣ, ಸುಂದರ ತಾಣಗಳನ್ನು ಈ ಪ್ಯಾಕೇಜ್ ಒಳಗೊಡಿದೆ. ಆರಾಮದಾಯಕ ಪ್ರಯಾಣ ಹಾಗೂ ಮಾರ್ಗದರ್ಶಕರು ಇರಲಿದ್ದಾರೆ. ಆನ್‌ಲೈನ್ ಮೂಲಕ ಈ ಪ್ಯಾಕೇಜ್ ಬುಕ್ ಮಾಡಬಹುದಾಗಿದೆ.

KSTDC Announce Tour Package of Mysuru Ooty Kodaikanal Know Route Ticket Price

ಪ್ರವಾಸಿಗರನ್ನು ವಿಶೇಷವಾಗಿ ಆಕರ್ಷಿಸುವ ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರದ ವೈಭವವನ್ನು ನೋಡಲು ಪ್ರಪಂಚದಾದ್ಯಂತದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇತಿಹಾಸಪೂರ್ವ ತಾಣಗಳು, ಸ್ಮಾರಕಗಳು, ವಸ್ತು ಸಂಗ್ರಹಾಲಯಗಳು, ಕೋಟೆಗಳು, ದೇವಾಲಯಗಳು, ಮಸೀದಿಗಳು, ಚರ್ಚುಗಳು ಮತ್ತು ಮೃಗಾಲಯಗಳು ಇಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ.

ಊಟಿಯು ತನ್ನ ಚಹಾ ತೋಟಗಳಿಗೆ ಹೆಚ್ಚು ಪ್ರಸಿದ್ಧವಾಗಿದೆ. ಧೂಳು ಮತ್ತು ಎಲೆ; ಕಪ್ಪು, ಹಸಿರು, ಕಪ್ಪು ಮತ್ತು ಬಿಳಿ ಪ್ರಭೇದ, ಮಸಾಲಾ, ಮಲ್ಲಿಗೆ, ಏಲಕ್ಕಿ ಮತ್ತು ಚಾಕೊಲೇಟ್‌ನಂತಹ ಸುವಾಸನೆಗಳು ಇಲ್ಲಿನ ಕೇಂದ್ರ ಬಿಂದು. ಇನ್ನೂ ಕೊಡೈಕೆನಾಲ್ ಅನ್ನು "ಗಿರಿಧಾಮಗಳ ರಾಜಕುಮಾರಿ" ಎಂದು ಕರೆಯಲಾಗುತ್ತದೆ. ಈ ಎಲ್ಲ ಸ್ಥಳಗಳು ಜನಪ್ರಿಯ ಹಾಗೂ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣಗಳಾಗಿವೆ.

ಡಿಲಕ್ಸ್ ಕೋಚ್ ಬಸ್ ವ್ಯವಸ್ಥೆ : ಈ ಸ್ಥಳಗಳಿಗೆ ಪ್ರವಾಸೋದ್ಯಮ ಇಲಾಖೆಯು ಬೆಂಗಳೂರಿನಿಂದ ಡಿಲಕ್ಸ್ ಕೋಚ್ ಬಸ್ ಮೂಲಕ ಪ್ರವಾಸಿಗರನ್ನು ಕರೆದೊಯ್ಯಲಿದೆ. ಮೈಸೂರಿನಲ್ಲಿರುವ ಹೋಟೆಲ್ ಮಯೂರ ಹೊಯ್ಸಳದಲ್ಲಿ ತಂಗಲು ವ್ಯವಸ್ಥೆ ಮಾಡಿದೆ. ಊಟಿಯಲ್ಲಿರುವ ಹೋಟೆಲ್ ಮಯೂರ ಸುದರ್ಶನ ಅಥವಾ ಅಂತಹುದೇ ಹೋಟೆಲ್ ಎಸ್ ವಿ ಇಂಟರ್ನ್ಯಾಷನಲ್ (ಕೊಡೈಕೆನಲ್) ಪ್ರವಾಸಿಗರಿಗೆ ಅಗತ್ಯ ವ್ಯವಸ್ಥೆ ಒದಗಿಸಲಿದೆ.

ಪ್ರವಾಸ ಬಸ್ ಮಾರ್ಗ/ಸ್ಥಳಗಳು: 4 ದಿನ ದಿನ 3 ರಾತ್ರಿ ಟೂರ್ ಪ್ಯಾಕೇಜ್ ಇದಾಗಿದ್ದು, ಬೆಂಗಳೂರಿನ ಬಿಎಂಟಿಸಿ ಬಸ್‌ ನಿಲ್ದಾಣ, ಯಶವಂತಪುರದಿಂದ ಬೆಳಗ್ಗೆ 6.30ಕ್ಕೆ ಹೊರಡುತ್ತದೆ. ಇಲ್ಲಿಂದ ನೇರವಾಗಿ ಶ್ರೀರಂಗ ಪಟ್ಟಣದ ಟಿಪ್ಪು ದರಿಯಾ ದೌಲತ್, ಶ್ರೀರಂಗನಾಥ ಸ್ವಾಮಿ ದೇವಸ್ಥಾನ, ಸೇಂಟ್ ಫಿಲೋಮಿಯಾ ಚರ್ಚ್, ಅರಮನೆ ಚಾಮುಂಡಿ ಬೆಟ್ಟ, ಮೃಗಾಲಯ, ಬೃಂದಾವನ ಉದ್ಯಾನ, ನಂಜನಗೂಡು, ಊಟಿ ಮತ್ತು ಕೊಡೈಕೆನಲ್ ಗೆ ತಲುಪುತ್ತದೆ.

ಪ್ರವಾಸಿಗಳ ಜೊತೆ ಮಾರ್ಗದರ್ಶಿ: ವಿಶೇಷವೆಂದರೆ ಎಲ್ಲಾ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲು ಸಾಕಷ್ಟು ಸಮಯ ನೀಡಲಾಗುತ್ತದೆ. ಜೊತೆಗೆ ಪ್ರವಾಸಿ ತಾಣಗಳ ಬಗ್ಗೆ ಪರಿಪೂರ್ಣ ಜ್ಞಾನ ಹೊಂದಿದ ವೃತ್ತಿಪರ ಮಾರ್ಗದರ್ಶಕರು ಪ್ರವಾಸಿಗರೊಂದಿಗೆ ಇರುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಪ್ರಕೃತಿ, ಐತಿಹಾಸಿಕ ಸ್ಥಳ ನೋಡುವ ಜೊತೆಗೆ ಅವುಗಳ ಹಿನ್ನೆಲೆ, ಮಹತ್ವ, ಖ್ಯಾತಿಯನ್ನು ತಿಳಿದುಕೊಳ್ಳಬಹುದು. ಈ ಮೂಲಕ ಪ್ರವಾಸವನ್ನು ಯಶಸ್ವಿಯಗೊಳಿಸಬಹುದು.

ಟಿಕೆಟ್ ದರ/ರಿಯಾಯಿತಿ: ಮೈಸೂರು-ಊಟಿ-ಕೊಡೈಕೆನಾಲ್ ಪ್ರವಾಸ ಪ್ಯಾಕೇಜ್ ಗೆ ಒಬ್ಬರಿಗೆ ತಲಾ ₹9,310 ರೂಪಾಯಿ ಇದೆ. ಹಿರಿಯ ನಾಗರಿಕಿಗೆ ದರದಲ್ಲಿ ಶೇಕಡಾ 20ರಷ್ಟು ರಿಯಾಯಿತಿ ಇದೆ. ರಾಜ್ಯ, ಕೇಂದ್ರ ಮತ್ತು ಪಿಎಸ್‌ಯು ಉದ್ಯೋಗಿಗಳಿಗೆ ಎಲ್‌ಟಿಸಿ ಸೌಲಭ್ಯಗಳು ಸಿಗುತ್ತವೆ. ಪ್ಯಾಕೇಜ್ ಬುಕ್ ಮಾಡಲು ನೀವು ಇಲ್ಲಿರುವ ಅಧಿಕೃತ https://kstdc.co/tour_packages/mysuru-ooty-kodaikanal/ ಲಿಂಕ್ ಗೆ ಭೇಟಿ ನೀಡಬೇಕು. ಹೆಚ್ಚಿನ ಮಾಹಿತಿಗೆ 804 334 4334

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+