ಕೊಡಗು ಚಾರಣ: 4 ದಿನ ದಟ್ಟ ಕಾಡಿನಲ್ಲಿದ್ದ ಕೇರಳಂ ಮೂಲದ ಜಿ.ಎಸ್.ಶರಣ್ಯ ಬದುಕುಳಿದಿದ್ದು ಹೇಗೆ, ರೋಚಕ ಕಾರ್ಯಾಚರಣೆ
Kodagu Trek: ಕೊಡಗು ಜಿಲ್ಲೆಯ ಕಕ್ಕಬ್ಬೆ ಸಮೀಪದ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆಂದು ತೆರಳಿದ್ದ ಕೇರಳ ಮೂಲದ ಯುವತಿ ನಾಪತ್ತೆಯಾಗಿದ್ದ ಪ್ರಕರಣವು ಭಾರೀ ಸಂಚಲನ ಹಾಗೂ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಕೊಡಗಿನ ಅತಿ ಎತ್ತರದ ಪ್ರದೇಶವಾಗಿದ್ದ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ಹೋಗಿ, ನಾಪತ್ತೆಯಾಗಿದ್ದ ಕೇರಳ ಮೂಲದ ಜಿ.ಎಸ್.ಶರಣ್ಯ(36) ಕೊನೆಗೂ ಸುರಕ್ಷಿತವಾಗಿ ಸಿಕ್ಕಿದ್ದಾರೆ. ಶರಣ್ಯ ಅವರು ಪತ್ತೆಯಾಗುವುದರೊಂದಿಗೆ ಈ ಪ್ರಕರಣ ಸುಖಾಂತ್ಯವಾದಂತೆ ಆಗಿದೆ. ಶರಣ್ಯ ಅವರು ನಾಲ್ಕು ದಿನಗಳಾದರೂ ಸುಳಿವು ಪತ್ತೆಯಾಗಿರಲಿಲ್ಲ. ದಟ್ಟವಾದ ಕಾನನದ ನಡುವೆ ಯುವತಿಯ ಪತ್ತೆಗಾಗಿ ಹಗಲಿರುಳು ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿತ್ತು. ಈ ರೋಚಕ ಕಾರ್ಯಾಚರಣೆ ಹೇಗಿತ್ತು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಕೇರಳ ಮೂಲದ ಜಿ.ಎಸ್.ಶರಣ್ಯ ಅವರು ಹೊರ ಪ್ರಪಂಚವನ್ನು ಸಂಪರ್ಕಿಸಲು ಯಾವುದೇ ಮಾರ್ಗವಿಲ್ಲದೆ ನಾಲ್ಕು ದಿನಗಳ ಕಾಲ ಒಂಟಿಯಾಗಿದ್ದರು. ಆದರೆ ಅವಳು ಹೆದರಿರಲಿಲ್ಲ. ಕೇರಳ ಮೂಲದ 36 ವರ್ಷದ ಟೆಕ್ಕಿ ಜಿಎಸ್ ಶರಣ್ಯ, ಏಪ್ರಿಲ್ 2 ರಂದು ಗುಂಪಿನೊಂದಿಗೆ ಚಾರಣ ಮಾಡುವಾಗ ದಾರಿ ತಪ್ಪಿದ್ದರು. ದಟ್ಟವಾದ ಕಾಡಿನಲ್ಲಿ ನಾಲ್ಕು ದಿನಗಳನ್ನು ಕಳೆದ ನಂತರ ಅವರು ಪತ್ತೆಯಾಗಿದ್ದಾಳೆ. ಈ ಸಮಯದಲ್ಲಿ ಶರಣ್ಯ ತಮ್ಮ ಹೋಂಸ್ಟೇಗೆ ವಾಪಸ್ ಹೋಗುವುದಕ್ಕೆ ಅಥವಾ ಹಿಂದಿರುಗುವುದಕ್ಕೆ ಪರದಾಡಿದ್ದಾರೆ.

ದೊಡ್ಡ ಹಾಗೂ ಹಲವು ಏಜೆನ್ಸಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದವರಿಗೆ ಹಾಗೂ ಅವರ ಪ್ರಯತ್ನಗಳಿಗೆ ಧನ್ಯವಾದಗಳು ಎಂದು ಅವರು ಹೇಳಿದ್ದಾರೆ. ಕಾರ್ಯಾಚರಣೆಯಲ್ಲಿ ಅರಣ್ಯ ಅಧಿಕಾರಿಗಳು, ನಕ್ಸಲ್ ವಿರೋಧಿ ದಳದ ಸದಸ್ಯರು ಮತ್ತು ಸ್ಥಳೀಯ ಬುಡಕಟ್ಟು ಸಮುದಾಯಗಳು ಸೇರಿದಂತೆ ಒಂಬತ್ತು ತಂಡಗಳು ಭಾಗಿಯಾಗಿದ್ದವು. ಆಕೆ ಕಾಣೆಯಾದ ತಕ್ಷಣ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು.
Kodagu Trek ಶರಣ್ಯ ನಾಲ್ಕು ದಿನ ಬದುಕುಳಿದಿದ್ದು ಹೇಗೆ
ಚಾರಣಕ್ಕೆಂದು ಹೋಗಿದ್ದ ಸಂದರ್ಭದಲ್ಲಿ ಗುಂಪಿನ ಸದಸ್ಯರು ಬೆಟ್ಟಗಳನ್ನು ಇಳಿಯುವಾಗ, ಶರಣ್ಯ ಹಿಂದೆ ಉಳಿದಿದ್ದರು. ಅವರು ಇತರ ಸದಸ್ಯರನ್ನು ಹುಡುಕಲು ಪ್ರಯತ್ನಿಸಿದ್ದರು, ಆದರೆ ಸ್ವಲ್ಪ ಸಮಯದ ನಂತರ ತಾವು ಒಂಟಿಯಾಗಿದ್ದೇವೆ ಎಂದು ಶೀಘ್ರದಲ್ಲೇ ಅರಿತುಕೊಂಡಿದ್ದಾರೆ. ಆಕೆ ಚಾರಣದಲ್ಲಿ ದಾರಿ ತಪ್ಪಿದಾಗ ಕೇವಲ 500 ಮಿಲಿ ನೀರು ಮತ್ತು ಸ್ವಲ್ಪ ಮಾತ್ರ ಚಾರ್ಜಿಂಗ್ ಉಳಿದಿತ್ತು. ಸ್ನೇಹಿತರನ್ನು ಮತ್ತು ಆಕೆ ನೆಸಿದ್ದ ಹೋಂಸ್ಟೇಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು. ಆಕೆಯ ಫೋನ್ ಬ್ಯಾಟರಿ ಖಾಲಿಯಾಗುವ ಮೊದಲು ಆಕೆ ತಮ್ಮ ಸ್ನೇಹಿತೆರು ಮತ್ತು ಹೋಂಸ್ಟೇಯನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾಗಿದ್ದಳು.
ನಾನು ಜನರನ್ನು ಹುಡುಕಲು ಎಡ ತಿರುವು ತೆಗೆದುಕೊಂಡೆ, ಆದರೆ ಕಾಡು ದಟ್ಟವಾಗಿದ್ದರಿಂದ ದಾರಿ ತಪ್ಪಿದೆ. ಸಂಜೆ 6:45 ರ ಸುಮಾರಿಗೆ, ನಾನು ಯಾರನ್ನಾದರೂ ಭೇಟಿಯಾಗುತ್ತೇನೆ ಎಂದು ಭಾವಿಸಿ ನಡೆಯುತ್ತಲೇ ಇದ್ದೆ. ಆದರೆ ನಾನೆಗೆ ಯಾರು ಸಿಗಲಿಲ್ಲ. ಹೀಗಾಗಿ, ನಾನು ಬೆಟ್ಟದ ಮೇಲೆಯೇ ಇದ್ದೆ. ನಾನು ನನ್ನ ಸ್ನೇಹಿತ ಯಧುಗೆ ಕರೆ ಮಾಡಿ ಇತರರಿಗೆ ತಿಳಿಸಲು ಕೇಳಿದೆ. ನಾನು ಸಹಾಯವಾಣಿ ಸಂಖ್ಯೆಗೆ ಸಂದೇಶ ಕಳುಹಿಸಲು ಪ್ರಯತ್ನಿಸುತ್ತಿರುವಾಗ, ನನ್ನ ಫೋನ್ ಸ್ವಿಚ್ ಆಫ್ ಆಗಿತ್ತು. ಮರುದಿನ ಬೆಳಿಗ್ಗೆ, ನನ್ನ ಕಾಲು ನೋಯುತ್ತಿತ್ತು, ಆದ್ದರಿಂದ ನನಗೆ ನಡೆಯುವುದಕ್ಕೆ ಆಗಲಿಲ್ಲ ಎಂದು ಹೇಳಿದ್ದಾರೆ.
ಆನೆಗಳು ಹೆಚ್ಚಾಗಿ ಓಡಾಡುವ ಕಾಡಿನಲ್ಲಿ ಒಬ್ಬಂಟಿಯಾಗಿದ್ದರೂ, ಪರಿಸ್ಥಿತಿ ನಿಭಾಯಿಸಿದ್ದಾರೆ. ಈ ನಡುವೆ ಭಾರೀ ಮಳೆಯ ಆಗಿತ್ತು. ನನಗೆ ಭಯವಾಗಲಿಲ್ಲ. ಏಕೆ ಎಂದು ನನಗೆ ಗೊತ್ತಿಲ್ಲ. ಎರಡನೇ ದಿನ, ಆ ಪ್ರದೇಶದಲ್ಲಿ ಉತ್ತಮ ಗೋಚರತೆ ಇರುವುದರಿಂದ ಹಾಗೂ ಡ್ರೋಣ್ ಮೂಲಕ ನನ್ನನ್ನು ಗುರುತಿಸಬಹುದು ಎಂದು ಭಾವಿಸಿ ಅವರು ಬೆಟ್ಟವನ್ನು ಹತ್ತಿದ್ದಾಗಿ ಹೇಳಿಕೊಂಡಿದ್ದಾರೆ.
ಮೂರನೇ ದಿನ, ಅವರು ಹೆಚ್ಚು ನಡೆಯಲು ಮುಂದಾಗಿದ್ದರು, ಆದರೆ ನಿರಂತರ ಮಳೆಯಿಂದ ಇದು ಸಾಧ್ಯವಾಗಿರಲಿಲ್ಲ. ನಾನು ಒದ್ದೆಯಾಗಿದ್ದೆ, ಮತ್ತು ರಾತ್ರಿ ತುಂಬಾ ತಂಪಾಗಿತ್ತು, ಆದ್ದರಿಂದ ನನಗೆ ನಿದ್ರೆ ಬರಲಿಲ್ಲ. ನಾನು ಇನ್ನೂ ಮಳೆಯಿಂದ ಒದ್ದೆಯಾಗಿದ್ದರಿಂದ ಮಧ್ಯಾಹ್ನದ ಬಿಸಿಲಿಗಾಗಿ ಕಾಯುತ್ತಿದ್ದೆ ಎಂದಿದ್ದಾರೆ. ಅಂತಿಮವಾಗಿ ಹೊಳೆಯ ಪಕ್ಕದಲ್ಲಿರುವ ಬಂಡೆಯ ಬಳಿ ಆಶ್ರಯ ಪಡೆಯಲು ನಿರ್ಧರಿಸಿದ್ದಾಗೆ ಹೇಳಿದ್ದಾರೆ. ಅಲ್ಲಿಂದ, ಆಕೆಯನ್ನು ಗುರುತಿಸುವುದು ಸುಲಭ ಮತ್ತು ನೀರಿನ ಪ್ರವೇಶವೂ ಇತ್ತು. ಈ ಸ್ಥಳದಲ್ಲಿಯೇ ಸ್ಥಳೀಯರು ಮತ್ತು ಶೋಧ ಕಾರ್ಯಾಚರಣೆಯಲ್ಲಿದ್ದ ಗುಂಪು ಅಂತಿಮವಾಗಿ ಆಕೆಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
-
Karnataka Rain: ಚಂಡಮಾರುತ ಪ್ರಸರಣ: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗಗಳಲ್ಲಿ 6 ದಿನ ಮಳೆ: ಐಎಂಡಿ ವರದಿ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್












Click it and Unblock the Notifications