Sigandur Bridge: ಅತೀ ಉದ್ದದ 'ಸಿಗಂದೂರು ಬ್ರಿಡ್ಜ್' ಲೋಕಾರ್ಪಣೆ: ಹೆಸರಿಡುವ ವಿಚಾರ ಕೋರ್ಟ್ ಅಂಗಳಕ್ಕೆ...
Sigandur Bridge News: ಮಲೆನಾಡಿನ ಜಿಲ್ಲೆ ಶಿವಮೊಗ್ಗದಲ್ಲಿ ಮತ್ತೊಂದು ಮಹಾತ್ವಾಕಾಂಕ್ಷೆಯ ಯೋಜನೆ ಇಂದು ಲೋಕಾರ್ಪಣೆಗೊಳ್ಳಲಿದೆ. ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಲಾದ ಕರ್ನಾಟಕದ ಅತೀ ಉದ್ದದ ಹಾಗೂ ಭಾರತದ ಎರಡನೇ ದೊಡ್ಡ ಕೇಬಲ್ ಬ್ರಿಡ್ಜ್ ಅನ್ನು ಇಂದು ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರು ಉದ್ಘಾಟಿಸಿ, ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಿದ್ದಾರೆ. ಇದೇ ವೇಳೆ ಸೇತುವೆಗೆ ಹೆಸರಿಡುವ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ. ಈ ವಿಚಾರ ಕೋರ್ಟ್ ಮೆಟ್ಟಿಲೇರಿದೆ.
ಹೌದು, ಒಟ್ಟು 473 ಕೋಟಿ ವೆಚ್ಚದಲ್ಲಿ 2.44 ಕಿಲೋ ಮೀಟರ್ ಉದ್ದದ ಸೇತುವೆ ಇದಾಗಿದೆ. ಈ ಭಾಗದ ಜನರು, ಪ್ರವಾಸಿಗರು, ಚೌಡೇಶ್ವರಿ ಭಕ್ತರ ಕನಸು ಇಂದು ನನಸಾಗಿದೆ. ಲಾಂಜ್ ಮೂಲಕ ತೆರಳುತ್ತಿದ್ದ ಜನರು ಇಂದಿನಿಂದ ಸೇತುವೆ ಮೂಲಕ ನಿಶ್ಚಿಂತೆಯಿಂದ ಓಡಾಡಬಹುದಾಗಿದೆ. 740 ಮೀಟರ್ ಕೇಬಲ್ ಒಳಗೊಂಡ ರಾಜ್ಯದ ಒಳನಾಡು ಸೇತುವೆ ಇದಾಗಿದೆ. ಬೃಹತ್ ಕಾರ್ಯಕ್ರಮ ಆಯೋಜನೆಗೊಂಡಿದ್ದು, ವಿವಿಧ ನಾಯಕರ ಸಮ್ಮುಖದಲ್ಲಿ ಕೇಂದ್ರ ಸಚಿವರು ಲೋಕಾರ್ಪಣೆಗೊಳಿಸಲಿದ್ದಾರೆ.

ಸಿಂಗದೂರಿಗೆ ತೆರಳಲು ರಸ್ತೆ ಮಾರ್ಗ ಅನುಸರಿಸಿದರೆ 100 ಕಿಲೋ ಮೀಟರ್ ಹೋಗಬೇಕು. ಇಲ್ಲವೇ ಲಾಂಚ್ ಮೂಲಕ ತೆರಳಬೇಕಿತ್ತು. ಇದೀಗ ಶರಾವತಿ ನದಿ ಮೇಲೆ ಬ್ರಿಡ್ಜ್ ನಿರ್ಮಿಸಿದ್ದರಿಂದ ಸಾಕಷ್ಟು ಅನುಕೂಲವಾಗಿದೆ. ಈ ಯೋಜನೆ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಸತತ ಪ್ರಯತ್ನದಿಂದ ಆಗಿದೆ. ಹೀಗಾಗಿ ಈ ಬ್ರಿಡ್ಜ್ಗೆ ಅವರ ಹೆಸರು ಇಡುವಂತೆ ಆಗ್ರಹ ಜೋರಾಗಿದೆ. ಯಾರ ಹೆಸರಿಡಬೇಕು ಎಂಬ ಚರ್ಚೆ ಸಹ ಶುರುವಾಗಿದೆ.
ಸೇತುವೆಗೆ ಯಾರ ಹೆಸರು ಅಂತಿಮ?
ಸಿಂಗದೂರು ಬ್ರಿಡ್ಜ್ಗೆ 'ಸಿಗಂದೂರು ಚೌಡೇಶ್ವರಿ' ಎಂಬ ಹೆಸರು ಇಡುವಂತೆ ರಾಜ್ಯ ಸರ್ಕಾರಕ್ಕೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಪರವಾಗಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದ್ದರು. ಇದೀಗ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಹೆಸರು ಇಡುವಂತೆ ಹರಿನಾಥ್ ರಾವ್ ಎಂಬುವವರು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
A hearty welcome to Shri @nitin_gadkari Ji, Hon’ble Union Minister for Road Transport & Highways, who is visiting Karnataka ahead of the inauguration of the Sigandur Bridge — India’s second-largest cable-stayed bridge and a long-cherished dream of Shri @BSYBJP.
— Vijayendra Yediyurappa (@BYVijayendra) July 13, 2025
This landmark… pic.twitter.com/gtrKAAzqEK
ಯಡಿಯೂರಪ್ಪ ಅವರ ಕಾಲದಲ್ಲಿ ಅವರ ನಿರಂತರ ಪ್ರಯತ್ನದಿಂದ ಈ ಸೇತುವೆ ಜನರಿಗೆ ಧಕ್ಕುತ್ತಿದೆ. ಹೀಗಾಗಿ ಅವರ ಹೆಸರು ಇಡುವುದು ಸೂಕ್ತ ಎಂದು ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಸೇತುವೆ ಲೋಕಾರ್ಪಣೆ ಆಗ ಜನಬಳಕೆಗೆ ಸಿಗುತ್ತಿದೆ. ಈ ಮಧ್ಯೆ ಯಾರ ಹೆಸರು ಅಂತಿಮಗೊಳ್ಳುತ್ತದೆ ಎಂಬ ಚರ್ಚೆ ಸೃಷ್ಟಿಯಾಗಿದೆ. ಕೋರ್ಟ್ ತಿರ್ಮಾನವೇ ಅಂತಿಮವಾಗಲಿದೆ. ಆ ಬಗ್ಗೆ ಕಾದು ನೋಡಬೇಕಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications