Kantara: ಕರ್ನಾಟಕ ಸಾರಿಗೆ ಇಲಾಖೆಯಿಂದ ಮಾಲಿನ್ಯ ಬಗ್ಗೆ ವಿನೂತನ ಜಾಗೃತಿ: ಶಿವ-ಲೀಲಾ ಸಾಂಗ್ Video Viral
ಬೆಂಗಳೂರು, ಸೆಪ್ಟಂಬರ್ 04: ಕರ್ನಾಟಕ ಸೇರಿದಂತೆ ದೇಶದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುವುದರ ಜೊತೆಗೆ ವಾಯು ಮಾಲಿನ್ಯ ಕೂಡ ದಿನೇ ದಿನೆ ಹೆಚ್ಚಾಗುತ್ತದೆ. ವಾಹನಗಳು ಹೊರಸೂಸುವ ಹೊಗೆಯಿಂದ ಪರಿಸರದ ಜೊತೆಗೆ ಮನುಷ್ಯರ ಆರೋಗ್ಯ ಸಹ ಹದಗೆಡುತ್ತದೆ. ಇಂತಹ ವಾಯು ಮಾಲಿನ್ಯ ಬಗ್ಗೆ ಸರ್ಕಾರಗಳು ಜಾಗೃತಿ ಮೂಡಿಸುತ್ತಲೇ ಇವೆ. ಇದೀಗ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ 'ಕಾಂತಾರ' (Kantara) ಸಿನಿಮಾದ ಹಾಡನ್ನು ಬಳಸಿ ವಿನೂತನ ಜಾಗೃತಿ ಮೂಡಿಸಿದೆ. ಈ ವಿಡಿಯೋ ವೈರಲ್ ಆಗಿದೆ.
ಹೌದು, ಬೆಂಗಳೂರಿನಂತಹ ಅಪಾರ ವಾಹನಗಳು ಇರುವ ಮಹಾನಗರದಲ್ಲಿ ಹೊಗೆಯಿಂದ ನಿತ್ಯ ಜನ ಅನಾರೋಗ್ಯಕ್ಕೆ ತುತ್ತಾಗುವ ವಾತಾವರಣ ಇದೆ. ವಾಹನಗಳ ಇಂಜಿನ್ ಫಿಟ್ ಆಗಿ ಇಟ್ಟುಕೊಳ್ಳಿ, ಸಕಾಲಕ್ಕೆ ಆಗಾಗ ಎಮಿಷನ್ ಪರೀಕ್ಷೆ ಮಾಡಿಸುವ ನಿಯಮ ಇದ್ದರು ಜನ ಪಾಲಿಸುತ್ತಿಲ್ಲ. ಪರಿಸರದ ಬಗ್ಗೆ ಖ್ಯಾರೆ ಎನ್ನುತ್ತಿಲ್ಲ. ಹೀಗಿದ್ದಾಗ ಜನರು ಇಷ್ಟು ಪಡುವ ಹಾಡು, ಸಿನಿಮಾಗಳಿಂದ ಮೂಲಕವೇ ಹೊಸ ರೀತಿಯಲ್ಲಿ ಜನರಿಗೆ ಜಾಗೃತಿ ಮೂಡಿಸುವ ವಿಡಿಯೋವೊಂದನ್ನು ಸಾರಿಗೆ ಇಲಾಖೆ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ.

ಕಾಂತಾರ ಸಿನಿಮಾದಲ್ಲಿ 'ಸಿಂಗಾರ ಸಿರಿಯೇ' ಎಂದು ಆರಂಭವಾಗುವ ಹಿಟ್ ಹಾಡು ಇತ್ತು. ಶಿವ ಮತ್ತು ಲೀಲಾಳ ರೋಮ್ಯಾಂಟಿಕ್ ಹಾಡು ಇದಾಗಿದ್ದು, ಇದನ್ನೆ ಬಳಸಿಕೊಂಡು ಸುಂದರ ವಿಡಿಯೋ ಮಾಡಿದ ಸಾರಿಗೆ ಇಲಾಖೆ ಸಾರ್ವಜನಿಕರ ಪರಿಸರ ಜಾಗೃತಿ ಸಂದೇಶ ರವಾನಿಸಿದೆ. ಇನ್ನು ಮುಂದಾದರು ವಾಹನ ಸವಾರರು ಎಚ್ಚರಿಕೆ ವಹಿಸಬೇಕು, ಪರಿಸರ ಕಾಳಜಿ ಮರೆಯಬೇಕೆಂಬುದು ಇಲಾಖೆಯ ಕಳಕಳಿಯಾಗಿದೆ.
ಈ ಜಾಗೃತಿ ಹಾಡಿನ ವಿಡಿಯೋದಲ್ಲೇನಿದೆ?
ವಿಡಿಯೋದಲ್ಲಿ ''ಶಿವ.... ನಿಮ್ಮ ವಾಹನದ ಹೊಗೆ ವಿಷಪೂರಿತವಾಗಿದೆ. ಹೀಗಿರುವಾಗ ನಿಮ್ಮ ಹೃದಯವನ್ನು ಲೀಲೆಗೆ ಅರ್ಪಿಸುವುದರಲ್ಲಿ ಅರ್ಥವೇನು?. ನಿಮ್ಮ ಬೈಕ್ ಅನ್ನು ಪರಿಸರ ಸ್ನೇಹಿಯಾಗಿ ಬದಲಾಯಿಸಿಕೊಳ್ಳಿ..ಶಿವ'' ಎಂದು ವಿಡಿಯೋದಲ್ಲಿ ಸಿಂಗಾರ ಸಿರಿಯೇ ಹಾಡಿನ ಮೂಲಕ ತಿಳಿಸಲಾಗಿದೆ. ''ನಿಮ್ಮ ವಾಹನವನ್ನು ಫಿಟ್ ಆಗಿರಿಸಿಕೊಳ್ಳಿ, ತನ್ಮೂಲಕ ಸ್ವಚ್ಛವಾದ ಸವಾರಿಗಳನ್ನಾಗಿ ಮಾಡಿ, ಪ್ರತಿಯೊಂದು ಹಾನಿಯನ್ನು ರಕ್ಷಿಸಿ'' ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಅಂದರೆ ಹಾಡಿನಲ್ಲಿ ನಾಯಕ ಶಿವ RX 100 ಬೈಕ್ ಓಡಿಸುವಾಗ ನಾಯಕಿ ಲೀಲಾಳನ್ನು ಕೂರಿಕೊಂಡು ಹೋಗುವುದನ್ನು ತೋರಿಸಲಾಗಿದೆ. ಈ ವೇಳೆ ಬೈಕ್ ಭಾರೀ ಪ್ರಮಾಣದಲ್ಲಿ ಹೊಗೆ ಸೂಸುವುದನ್ನು ತೋರಿಸುತ್ತದೆ. ಅಲ್ಲದೇ ಪರಿಸರ, ದೈವ, ತಮ್ಮತನಕ್ಕಾಗಿ ಹೋರಾಡುವ ನಾಯಕ ಇದನ್ನು ಮರೆತರೆ ಹೇಗೆ ಎಂಬರ್ಥದಲ್ಲಿ ಸಾರಿಗೆ ಇಲಾಖೆ ತಿಳಿಸಿದೆ. ಈ ಮೂಲಕವರಾದರೂ ಜನರಿಗೆ ವಾಯುಮಾಲಿನ್ಯದ ಸ್ಪಷ್ಟ ಅರಿವು ಸಿಕ್ಕು, ವಾಹನಗಳನ್ನು ಪರಿಸರ ಸ್ನೇಹಿ ಆಗಿಸುತ್ತಾರೆ ಎಂಬ ಆಶಯ ಸಾರಿಗೆ ಇಲಾಖೆ ಹೊಂದಿದೆ.
#CleanAir #GoGreen #EcoFriendly #PollutionFree #SustainableLiving #PUCCheck #SaveEnvironment #DriveResponsibly #GreenFuture #EarthResponsibility #ClimateAction #AirQuality@CMofKarnataka @RLR_BTM @MORTHIndia pic.twitter.com/IJaS4gs5D8
— ಸಾರಿಗೆ ಇಲಾಖೆ ,Transport Department Karnataka (@tdkarnataka) September 4, 2025
ಬೈಕ್ ಮಾತ್ರವಲ್ಲದೇ, ಕಾರು ಇತರ ವಾಹನಗಳು, ಧೂಮಪಾನ, ಕಾರ್ಖಾನೆಗಳಿಂದಲೂ ವಾಯುಮಾಲಿನ್ಯ ಉಂಟಾಗುತ್ತದೆ. ಇದನ್ನು ಕಡಿಮೆ ಮಾಡುವ ಜೊತೆಗೆ ಪರಿಸರ ಕಾಳಜಿ ವಹಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications