ಜಾತಿ ಗಣತಿಗೆ ಸಿದ್ಧರಾಗಿ, ಯಾವ ಜಾತಿಗೆ ಯಾವ ಕಾಲಂ
ಬೆಂಗಳೂರು, ಏ.10: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದೇ ಮೊದಲ ಬಾರಿಗೆ ಜಾತಿ ಗಣತಿ ಅಥವಾ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೆ ಮುಂದಾಗಿದೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಅಧ್ಯಯನ ಕಮ್ ಸಮೀಕ್ಷೆ ಕಾರ್ಯ ಏ.11ರಿಂದ ರಾಜ್ಯಾದ್ಯಂತ ಪ್ರಾರಂಭವಾಗಲಿದೆ. ಏ.30ರ ವರೆಗೂ 20 ದಿನಗಳ ಕಾಲ ನಿರಂತರವಾಗಿ ಸಮೀಕ್ಷಾ ಕಾರ್ಯ ನಡೆಯಲಿದೆ.
ಸುಮಾರು 1.3 ಲಕ್ಷ ಗಣತಿದಾರ ಅಧಿಕಾರಿಗಳು 1.26 ಕೋಟಿಗೂ ಅಧಿಕ ಮನೆ ಮನೆ ಸಮೀಕ್ಷೆ ಮೂಲಕ ಜಾತಿ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕಾರ್ಯ ನಡೆಸಲಿದ್ದಾರೆ. [ಜಾತಿ ಗಣತಿ : ಏಕೆ, ಏನು, ಇದೆಲ್ಲಾ ಬೇಕೆ?]
ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ, ಕೌಟುಂಬಿಕ, ಮೀಸಲಾತಿ, ರಾಜಕೀಯ ಸೇರಿದಂತೆ 55 ವಿವಿಧ ಅಂಶಗಳನ್ನು ಒಳಗೊಂಡ ಪ್ರಶ್ನೆಗಳನ್ನು ಈಗಾಗಲೇ ಸಮೀಕ್ಷೆಗಾಗಿ ಸಿದ್ಧಪಡಿಸಲಾಗಿದೆ. 1 ರಿಂದ 31 ಪ್ರಶ್ನೆಗಳು ವೈಯಕ್ತಿಕ ವಿಷಯಗಳು ಹಾಗೂ ಕುಟುಂಬದ ಬಗ್ಗೆ ಇರುತ್ತದೆ.
ರಾಜ್ಯದ ಎಲ್ಲ ಜಿಲ್ಲಾಡಳಿತ ಸಾಮಾಜಿಕ ಸಮೀಕ್ಷೆಗಾಗಿ ಸಜ್ಜುಗೊಂಡಿವೆ. ವಿವಿಧ ಜಾತಿ ಆಧಾರಿತ ಸಂಘಟನೆಗಳು ತಮ್ಮ ತಮ್ಮ ಜಾತಿ ಹಾಗೂ ಉಪಜಾತಿಗಳ ನಮೂದು ಮಾಡುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಕೈಗೊಂಡಿವೆ. [ಜಾತಿ ಜನಗಣತಿ ವಿರೋಧಿಸಿ ವೀರಶೈವರ ಜಾಥಾ]
ರಜಾ ದಿನಗಳಲ್ಲೂ ಕೂಡ ಸಮೀಕ್ಷೆ ನಡೆಸಲಾಗುತ್ತದೆ. ಪ್ರತಿಯೊಂದು ಮಾಹಿತಿಯನ್ನೂ ನಿಖರವಾಗಿ ನೀಡಬೇಕು. ತಪ್ಪು ಮಾಹಿತಿಯನ್ನು ನೀಡಬಾರದೆಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್ ಕಾಂತರಾಜ್ ಕೋರಿದ್ದಾರೆ.

ಜಾತಿ ಕಾಲಂನಲ್ಲಿ ಏನೆಂದು ನಮೂದಿಸಬೇಕು ಎಂಬ ಗೊಂದಲಕ್ಕೆ ಇಲ್ಲಿದೆ ಕೆಲ ಉದಾಹರಣೆ:
ಒಕ್ಕಲಿಗ: ಕಾಲಂ ಸಂಖ್ಯೆ 6ರಲ್ಲಿ ಒಕ್ಕಲಿಗ ಎಂದೂ ಹಾಗೂ ಒಕ್ಕಲಿಗ ಸಮುದಾಯದ ಸಂಕೇತ ಸಂಖ್ಯೆ (ಕೋಡ್) -1334 ಎಂದು ನಮೂದಿಸಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಅ. ದೇವೇಗೌಡ ಮನವಿ ಮಾಡಿದ್ದಾರೆ.
ನಾಯಕ: ನಾಯಕ, ಊರ ನಾಯಕ, ಮ್ಯಾಸ ನಾಯಕ, ಬೇಡ, ತಳವಾರ, ಪಾಳೇಗಾರ, ವಾಲ್ಮೀಕಿ, ಬೇಡರ್, ವಡರ್ ಹೀಗೆ 18 ಪರ್ಯಾಯ ಪದಗಳಿಂದ ಕರೆಯಲ್ಪಡುವ ಜನಾಂದ ನಾಯಕ ಎಂದು ನಮೂದಿಸಬೇಕು ಎಂದು ನಾಯಕ ಜನಾಂಗದ ಮುಖಂಡ ಟಿ. ದಾಸಕರಿಯಪ್ಪ ಕೋರಿದ್ದಾರೆ.
ವೀರಶೈವ - ಲಿಂಗಾಯತ: ಜಾತಿ ಕಾಲಂನಲ್ಲಿ ವೀರಶೈವ - ಲಿಂಗಾಯತಕ್ಕೆ ಕೊಟ್ಟ ಸಂಕೇತ ಸಂಖ್ಯೆ 1319. ಕಾಲಂ 7ರಲ್ಲಿ ಉಪಜಾತಿಗಳು ಇದ್ದಲ್ಲಿ ಆ ಕುರಿತ ಸಂಕೇತ ಕೋಡ್ ನೀಡಬೇಕು. [ಬ್ರಾಹ್ಮಣ, ವೈಶ್ಯರಿಗೂ ಮೀಸಲಾತಿ: ಆಂಜನೇಯ]
ವೀರಶೈವ - ಲಿಂಗಾಯತ ಪ್ರತ್ಯೇಕ ಧರ್ಮವಾಗಿದೆ. ಆದರೂ ಸಹ ಸರ್ಕಾರ ಜಾತಿ ಗಣತಿಯಲ್ಲಿ ವೀರಶೈವ - ಧರ್ಮಕ್ಕೆ ಪ್ರತ್ಯೇಕ ಕೋಡ್ ನೀಡಿರುವುದಿಲ್ಲ. ಇತರೆ ಎಂಬ ಕಾಲಂನಲ್ಲಿ ಲಿಂಗಾಯತ - ವೀರಶೈವರು ಗುರುತಿಸಿಕೊಳ್ಳುವುದರಿಂದ ಸಂಖ್ಯೆಯನ್ನು ನಿಖರವಾಗಿ ಗುರುತಿಸಲು ಅನುಕೂಲವಾಗುತ್ತದೆ.
ಕೊರಚ ಸಮಾಜ : ಕುಳುವ, ಕುಂಚಿ ಕೊರಚ, ಪುಟ್ಟಿಕೊರಚ, ಕೊರವ, ಕೊರವರ್, ಭಜಂತ್ರಿ, ಕೊರಚರ್ ಈ ಯಾವುದೇ ಉಪನಾಮಗಳನ್ನು ನಮೂದಿಸಬಾರದು. ಜಾತಿ ಕಾಲಂನಲ್ಲಿ 'ಕೊರಚ' ಎಂದು ನಮೂದಿಸಿದರೇ ಸಾಕು ಎಂದು ಸಮಾಜದ ಮುಖ್ಯಸ್ಥ ಕೆ.ಎನ್. ಓಂಕಾರಪ್ಪ ಮನವಿ ಮಾಡಿಕೊಂಡಿದ್ದಾರೆ. [ಜಾತಿ ಮೀಸಲಾತಿ ನಿಷೇಧ ಅಸಾಧ್ಯ, ಏಕೆಂದರೆ?]
ಬೇಡ ಜಂಗಮ: ಜಾತಿ ಗಣತಿಯಲ್ಲಿ ಬೇಡ ಜಂಗಮರು ಜಾತಿ ಕಾಲಂ ನಲ್ಲಿ ಬಿ022 ಎಂದು ನಮೂದಿಸಬೇಕೆಂದು ಜಿಲ್ಲಾ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಸ್ಥೆಯ ಗೌರವಾಧ್ಯಕ್ಷ ಎನ್.ಎಂ.ಜೆ.ಬಿ. ಆರಾಧ್ಯ ಅವರು ಕರೆ ನೀಡಿದ್ದಾರೆ.
ಧರ್ಮದ 5ನೇ ಕಾಲಂನಲ್ಲಿ ಹಿಂದೂ ಎಂದು, ಜಾತಿ ಕಾಲಂನಲ್ಲಿ ಬೇಡ ಜಂಗಮ (ಪರಿಶಿಷ್ಟ ಜಾತಿ), ಕೋಡ್ ಬಿ022 ಎಂದು ನಮೂದಿಸಬೇಕು. ಉಪಜಾತಿಯನ್ನು ಬರೆಸಬಾರದು, ಕಡ್ಡಾಯವಾಗಿ ಪೆನ್ನಿನಲ್ಲಿ ನಮೂದು ಮಾಡಬೇಕು.
ಮಡಿವಾಳ ಸಮಾಜ: ಮಡಿವಾಳ ಸಮಾಜದವರು ಜಾತಿ ಕಾಲಂನಲ್ಲಿ 'ಮಡಿವಾಳ' ಎಂದು ಮತ್ತು ಉಪ ಜಾತಿಯ ಕಾಲಂನಲ್ಲೂ ಮಡಿವಾಳ ಹಾಗೂ ಪರ್ಯಾಯ ಜಾತಿಯ ಕಾಲಂ ನಂ.8ರಲ್ಲಿ ಅಗಸ ಅಥವಾ ಧೋಬಿ ಎಂದು ಬರೆಸಬಹುದು.
-
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು












Click it and Unblock the Notifications