SPಗೆ ಗುಡ್ ಬೈ: ದಿಲ್ಲಿಯಲ್ಲಿ ಶಂಕರ ಬಿದರಿ ಘೋಷಣೆ

ಬೆಳಗಿನ ಸುದ್ದಿ: ಹೆಚ್ಚೇನೂ ಇಲ್ಲ. ಕೇವಲ ಒಂಬತ್ತು ತಿಂಗಳ ಹಿಂದೆ ಶಂಕರ ಮಹಾದೇವ ಬಿದರಿ ಅವರು ಪೊಲೀಸ್ ಅಧಿಕಾರಿಯಾಗಿ ತಾವು ಸಲ್ಲಿಸಿದ ಉತ್ತಮ ಕೆಲಸಕ್ಕೆ ಸುಪ್ರೀಂ ಕೋರ್ಟಿನಿಂದ ಒಂದು ಸರ್ಟಿಫಿಕೇಟ್ ಪಡೆದರು. ಅದು ಅವರ ಜೀವನದಲ್ಲಿ ಬಹುದೊಡ್ಡ ಗೆಲುವಾಗಿತ್ತು. ಅದು ಅಷ್ಟಕ್ಕೆ ನಿಂತಿದ್ದರೆ ಬಿದರಿ ಅವರು ಇಂದು ಪ್ರಶಾಂತ ನಿವೃತ್ತ ಜೀವನ ಸವಿಯಬಹುದಿತ್ತು.
ಆದರೆ ಜನಸೇವೆ ಮಾಡಬೇಕು ಎಂಬ ಉಮೇದಿನಲ್ಲಿ ರಾಜಕೀಯ ಪ್ರವೇಶಿಸಿದರು. ಆದರೆ ಅಲ್ಲಿಂದೀಚೆಗೆ 65 ವರ್ಷದ ಬಿದರಿ ಅವರ ಒಂದೊಂದು ರಾಜಕೀಯ ನಡೆಯೂ ನಿಗೂಢವಾಗುತ್ತಾ, ಅತ್ಯಾಶ್ಚರ್ಯವೆಂಬಂತೆ ಸಿಕ್ಕ ಸಿಕ್ಕ ಪಾರ್ಟಿಗಳ ಕೈಹಿಡಿದರು.
ಮೊದಲು ಕಾಂಗ್ರೆಸ್ ಅಂಗಳದಲ್ಲಿ ಕಾಣಿಸಿಕೊಂಡರು. ಅದು ಸರಿಹೋಗುತ್ತಿಲ್ಲ ಎಂದೆನಿಸುತ್ತಿದ್ದಂತೆ ಲಖ್ನೋವರೆಗೂ ಸೈಕೆಲ್ ಹತ್ತಿ ಹೊರಟರು. ದೆಹಲಿಯಲ್ಲಿ ಮುಲಾಯಂ ಪಕ್ಷವನ್ನು ತಬ್ಬಿಕೊಂಡವರೆ ಕಾಂಗ್ರೆಸ್ ಹಾಗೆ ಹೀಗೆ ಎಂದು ಅಲವತ್ತುಕೊಂಡರು. ಅಷ್ಟೇ ಅಲ್ಲ. ದೇಶದ ಇಂದಿನ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸೈಕಲ್ ಒಂದೇ ಎಂದರು.
ಆದರೆ ಈಗ ಆ ಸೈಕಲ್ ಸುಸ್ಥಿತಿಯಲ್ಲಿಲ್ಲ. ತಮಗೂ ಅದಕ್ಕೂ ಆಗಬರುವುದಿಲ್ಲ ಎಂಬ ಸ್ಥಿತಿಗೆ ಬಿದರಿ ಸಾಹೇಬರು ಬಂದುನಿಂತಿದ್ದಾರೆ. ಆದರೆ ಇದನ್ನೆಲ್ಲ ಗಮನಿಸಿದ ಜನ, ಖಡಕ್ ಪೊಲೀಸ್ ಅಧಿಕಾರಿ ಎನಿಸಿಕೊಂಡಿದ್ದ ಬಿದರಿ ಅವರಿಗೆ ಇದೆಲ್ಲಾ ಬೇಕಿತ್ತಾ? ಜನಸೇವೆ ಮಾಡಲು ರಾಜಕೀಯವೇ ಬೇಕಿತ್ತಾ? ಯಾಕೋ ಎಲ್ಲ ಎಡವಟ್ಟು ಮಾಡಿಕೊಂಡಬಿಟ್ಟರು ಎಂದು ಮಮ್ಮಲಮರುಗಿದರು.
ಆದರೆ ಶಂಕರ ಮಹಾದೇವ ಬಿದರಿ ಅವರು ಇಟ್ಟ ಹೆಜ್ಜೆ ಹಿಂತೆಗೆಯುವರಲ್ಲ. ರಾಜಕೀಯ ಜಯಿಸಲೇಬೇಕು ಎಂದು ಪಣತೊಟ್ಟಿದ್ದಾರೆ- ಅದು ಯಾವುದೇ ಪಕ್ಷವಾದರೂ ಸರಿ ಎನ್ನುತ್ತಿದ್ದಾರೆ. ಆದರೆ ತಾವು ಸೇವೆಯಲ್ಲಿದ್ದಾಗ ತಮ್ಮನ್ನು ಇನ್ನಿಲ್ಲದಂತೆ ಗೋಳುಹೊಯ್ದುಕೊಂಡ ಗೌಡ ಫ್ಯಾಮಿಲಿ ಸಹವಾಸ ಬೇಡವೇ ಬೇಡ ಎಂದು ನಿಶ್ಚಯಿಸಿರುವಂತಿದೆ . ಹಾಗಾಗಿ ಜೆಡಿಎಸ್ ಸಹವಾಸದಿಂದ ಬಿದರಿ ದೂರವೇ ಇರುವುದು ನಿಶ್ಚಿತ.
ಹಾಗಾಗಿ ಈ ಹಂತದಲ್ಲಿ ಅವರಿಗೆ ಕಾಣಿಸಿಕೊಂಡಿರುವುದು ಅವರ ಹಳೆಯ ರಾಜಕೀಯ ಧಣಿ ಯಡಿಯೂರಪ್ಪ. ಹಾಗಾಗಿ ಸಮಾಜವಾದಿ ಪಕ್ಷ ತೊರೆದು ಶಾಸ್ತ್ರಕ್ಕೆಂದು ಇದೇ 12ರಂದು ಬೆಂಗಳೂರಿನಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿ, ಯಡಿಯೂರಪ್ಪನವರ ಕೆಜೆಪಿ/ಬಿಜೆಪಿ ಹಿಡಿಯುವ ಲಕ್ಷಣಗಳು ಹೆಚ್ಚಾಗಿವೆ ಎಂದು ಬಿದರಿ ಆಪ್ತ ಮೂಲಗಳ ಅನಿಸಿಕೆ. ಗುಲ್ಬರ್ಗಾ ಯಾನಾಗುಂಡಿಯ ಮಾತೆ ಮಾಣಿಕೇಶ್ವರಿ ಶಂಕರ ಬಿದರಿಗೆ ಯಾವ ದಾರಿ ತೋರುತ್ತಾರೋ ಕಾದುನೋಡಬೇಕಿದೆ.
ಗೂಳಿಹಟ್ಟಿ ಶೇಖರ್ ಗುಡ್ ಬೈ?: ಕುತೂಹಲದ ಸಂಗತಿಯೆಂದರೆ ಸಿಪಿ ಯೋಗೀಶ್ವರ್ ಅವರ 'ಹೈಕಮಾಂಡ್'ನಿಂದ ಬಸವಳಿದಿರುವ ಗೂಳಿಹಟ್ಟಿ ಶೇಖರ್ ಅವರೂ ಸಹ ಸಮಾಜವಾದಿ ಪಕ್ಷ ತೊರೆಯುವ ಲಕ್ಷಣಗಳು ಹೆಚ್ಚಾಗಿವೆ ಎನ್ನಲಾಗಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications