"ಕೊರೊನಾ 2ನೇ ಅಲೆ ನಿಯಂತ್ರಣಕ್ಕೆ ಸಹಕಾರ ಅಗತ್ಯ"
ಬೆಂಗಳೂರು, ಮಾರ್ಚ್ 21: ಕರ್ನಾಟಕದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಎದ್ದಿರುವುದನ್ನು ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಚಿವ ಡಾ. ಸುಧಾಕರ್ ಒಪ್ಪಿಕೊಂಡಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಕೊರೊನಾ ಪ್ರಕರಣ ಬೆಂಗಳೂರಿನಲ್ಲಿ ಸತತವಾಗಿ ಒಂದು ಸಾವಿರ ದಾಟಿದೆ. ಜನಸಾಮಾನ್ಯರು ಕೋವಿಡ್ ಸುರಕ್ಷತಾ ಕ್ರಮ ಪಾಲಿಸದಿದ್ದರೆ, ಆಪಾಯವಾಗುತ್ತದೆ. ಮನೆಯಲ್ಲಿರುವ ಹಿರಿಯ ನಾಗರಿಕರಿಗೆ ಲಸಿಕೆ ಕೊಡಿಸಬೇಕು. ಯುವಜನರು ಅನಗತ್ಯವಾಗಿ ಹೊರಗೆ ಸುತ್ತಾಡಬಾರದು ಎಂದರು.
ಸರ್ವಪಕ್ಷ
ಸಭೆ
ಅಗತ್ಯ:
ತಾಂತ್ರಿಕ
ಸಲಹಾ
ಸಮಿತಿ
ನೀಡಿದ
ವರದಿಗೆ
ಸರ್ಕಾರ
ಹಾಗೂ
ಸಾರ್ವಜನಿಕರು
ಸ್ಪಂದಿಸಬೇಕು.
ಯಾವುದೇ
ಚಟುವಟಿಕೆಗೆ
ಕೊರೊನಾ
ರಿಯಾಯಿತಿ
ತೋರುವುದಿಲ್ಲ.
ಸರ್ಕಾರ
ತನ್ನ
ಇತಿಮಿತಿಯಲ್ಲಿ
ನಿಯಂತ್ರಣ
ಮಾಡುತ್ತಿದೆ.
ಜನರಿಗೆ
ಕಷ್ಟವಾಗಬಾರದೆಂದು
ಹೆಚ್ಚಿನ
ನಿರ್ಬಂಧ
ಹೇರಿಲ್ಲ.
ಕೊರೊನಾ
ನಿಯಂತ್ರಣಕ್ಕೆ
ಕ್ರಮ
ಕೈಗೊಳ್ಳಲು
ಸರ್ವಪಕ್ಷ
ಸಭೆ
ಮಾಡಬೇಕೆಂದು
ಮುಖ್ಯಮಂತ್ರಿಗಳಿಗೆ
ಕೋರಲಾಗುವುದು.
ಚುನಾವಣೆ
ಸಮಯದಲ್ಲಿ
ಇದು
ಅಗತ್ಯ
.
ಗಡಿಭಾಗಗಳಲ್ಲಿ
ಜನರ
ಮೇಲೆ
ನಿಗಾ
ಇರಿಸಲಾಗಿದೆ.
ಎಲ್ಲ
ಜಿಲ್ಲೆಗಳಿಗೆ
ಈ
ಬಗ್ಗೆ
ಸೂಚನೆ
ನೀಡಲಾಗಿದೆ
ಎಂದರು.
Recommended Video
ಕರ್ನಾಟಕದಲ್ಲಿ ಶನಿವಾರದಂದು 1,798 ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಬೆಂಗಳೂರು ನಗರದಲ್ಲೇ 1,186 ಪ್ರಕರಣಗಳು ಕಂಡು ಬಂದಿವೆ. 7 ಮಂದಿ ಮೃತಪಟ್ಟಿದ್ದಾರೆ.