Get Updates
Get notified of breaking news, exclusive insights, and must-see stories!

Heatwave: ಶಾಖದ ಅಲೆಗೆ ಕರ್ನಾಟಕ ತತ್ತರ; ಐದು ವಾರದಲ್ಲಿ ಇಬ್ಬರು ಸಾವು

ಕರ್ನಾಟಕದಲ್ಲಿ ಹೆಚ್ಚುತ್ತಿರುವ ಬಿಸಿಲು ಜನರನ್ನು ತೀವ್ರವಾಗಿ ಬಾಧಿಸುತ್ತಿದೆ. ಮಾರ್ಚ್ 1ರಿಂದ ಏಪ್ರಿಲ್ 3 ರವರೆಗೆ ರಾಜ್ಯದಲ್ಲಿ 521 ಶಂಕಿತ ಹೀಟ್‌ಸ್ಟ್ರೋಕ್ ಪ್ರಕರಣಗಳು ವರದಿಯಾಗಿದ್ದು, ಬಿಸಿಲಿನ ತೀವ್ರತೆಗೆ ಇಬ್ಬರು ಸಾವನ್ನಪ್ಪಿರುವ ವರದಿಯಾಗಿದೆ.

ಬಾಗಲಕೋಟೆ, ಕಲಬುರಗಿ ಜಿಲ್ಲೆಯಲ್ಲಿ ತಲಾ ಒಂದು ಸಾವು ವರದಿಯಾಗಿದೆ. ಆರೋಗ್ಯ ಇಲಾಖೆ ಅಂಕಿಅಶಂಗಳ ಪ್ರಕಾರ, ಚಿಕ್ಕಬಳ್ಳಾಪುರ, ಬಾಗಲಕೋಟೆ, ಚಿತ್ರದುರ್ಗ ಮತ್ತು ಮಂಡ್ಯದಲ್ಲಿ ಕ್ರಮವಾಗಿ 102, 69, 56 ಮತ್ತು 54 ಹೀಟ್‌ ಸ್ಟ್ರೋಕ್ (ಶಾಖಾಘಾತ) ಪ್ರಕರಣಗಳು ವರದಿಯಾಗಿವೆ.

Karnataka Records Over 500 Heatstroke Cases 2 Fatalities in 5 Weeks Amidst Unyielding Temperatures

ಬೆಂಗಳೂರಿನಲ್ಲಿ ತೀವ್ರ ತಾಪಮಾನ ಇದ್ದರೂ, ಯಾವುದೇ ಶಾಖಾಘಾತದ ಪ್ರಕರಣ ವರದಿಯಾಗಿದ್ದ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರಾದ ಡಿ ರಂದೀಪ್ ಮಾಹಿತಿ ನೀಡಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಅಧಿಕಾರಿಗಳ ಸಭೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ಅವರು ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಆಸ್ಪತ್ರೆ ಆಡಳಿತಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಹೀಟ್‌ಸ್ಟ್ರೋಕ್ ಪ್ರಕರಣಗಳನ್ನುಸರಿಯಾದ ಸಮಯದಲ್ಲಿ ವರದಿ ಮಾಡಿ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸೂಚನೆ ನಿಡಿದ್ದಾರೆ.

ಬಿಸಿಲಿನಿಂದ ಉಂಟಾದ ಸೆಳೆತ ಮತ್ತು ಬಳಲಿಕೆಯಂತಹ ಪ್ರಾಥಮಿಕ ದೂರುಗಳಿಗೂ ಚಿಕಿತ್ಸೆ ನೀಡಲು ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೀಟ್‌ಸ್ಟ್ರೋಕ್-ನಿರ್ವಹಣಾ ಕೊಠಡಿಗಳನ್ನು ಸ್ಥಾಪಿಸಲಾಗಿದೆ.

ಬೆಂಗಳೂರಿನಲ್ಲಿ ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆ, ಇಂದಿರಾನಗರದ ಸರ್ ಸಿವಿ ರಾಮನ್ ಜನರಲ್ ಆಸ್ಪತ್ರೆ ಮತ್ತು ಜಯನಗರ ಜನರಲ್ ಆಸ್ಪತ್ರೆಯಲ್ಲಿ ಇಂತಹ ಕೊಠಡಿಗಳನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ಐದು ಹಾಸಿಗೆಗಳು ಮತ್ತು ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ಎರಡು ಹಾಸಿಗೆಗಳನ್ನು ಹೀಟ್‌ಸ್ಟ್ರೋಕ್‌ ಪ್ರಕರಣಗಳಿಗೆ ಮೀಸಲಿಡಲಾಗಿದೆ, ಜೊತೆಗೆ ಆಂಬ್ಯುಲೆನ್ಸ್‌ಗಳನ್ನು ಸಜ್ಜಾಗಿರಿಸಲಾಗಿದೆ ಎಂದು ಕೂಡ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಾಸ್ತಿ ತಂಪಾದ ನೀರು ಕುಡಿಯಬೇಡಿ

ಜಾಸ್ತಿ ಬಿಸಿಲು ಇದೆ ಎಂದು ಜಾಸ್ತಿ ತಂಪಾದ ನೀರು ಕುಡಿಯಬೇಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ. ಜಾಸ್ತಿ ತಣ್ಣಗಿರುವ ನೀರು ಕುಡಿಯುವುದರಿಂದ ರಕ್ತನಾಳಗಳ ಸಂಕೋಚನ ಉಂಟಾಗಬಹುದು. ದೇಹವು ಹೈಡ್ರೇಟ್ ಮಾಡಲು ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ. ಆದ್ದರಿಂದ ಜಾಸ್ತಿ ತಂಪಾದ ನೀರು ಕುಡಿಯುವುದನ್ನು ತಪ್ಪಿಸುವಂತೆ ಸೂಚನೆ ನೀಡಿದ್ದಾರೆ.

ಬೇಸಿಗೆಯಲ್ಲಿ ತಣ್ಣೀರಿನ ಸ್ನಾನ ಮಾಡುವುದ ಕೂಡ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ಇದು ದೇಹದ ಮೇಲ್ಮೈ ತಾಪಮಾನವನ್ನು ಕಡಿಮೆ ಮಾಡುತ್ತದೆ. ಮೇಲ್ಮೈ ಗ್ರಾಹಕಗಳು ನಂತರ ಮೆದುಳಿಗೆ ಅದು ತಂಪಾಗಿರುವ ಸಂಕೇತಗಳನ್ನು ಕಳುಹಿಸುತ್ತದೆ, ಅದು ಆಂತರಿಕವಾಗಿ ಅದು ಅಲ್ಲ. ಮೆದುಳಿಗೆ ತಪ್ಪು ಸಂಕೇತವನ್ನು ಪಡೆಯುವುದರಿಂದ ದೇಹದ ಆಂತರಿಕ ಕಾರ್ಯವಿಧಾನವು ಶಾಖವನ್ನು ಹರಡುವುದನ್ನು ತಡೆಯುತ್ತದೆ ಎಂದು ವಿವರಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+