Karnataka Rain: ಈ ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ
Karnataka Rain: ಜೂನ್ ಆರಂಭದಿಂದಲೂ ರಾಜ್ಯದ ಬಹುತೇಕ ಭಾಗಗಳಲ್ಲಿ ಮುಂಗಾರು ಚುರುಕು ಪಡೆದಿದ್ದು, ಈ ಹಿನ್ನೆಲೆ ಕೆರೆ-ಕಟ್ಟೆಗಳು ಸೇರಿದಂತೆ ಅನೇಕ ಜಲಮೂಲಗಳು ಉಕ್ಕಿಹರಿಯುತ್ತಿವೆ. ಮತ್ತೊಂದೆಡೆ ಜಲಮೂಲಗಳಿಗೂ ಜೀವಕಳೆ ಬಂದಂತಾಗಿದೆ.
ಮತ್ತೊಂದೆಡೆ ಇಂದು (ಜೂನ್ 16) ಇನ್ನು ಮೂರು ಗಂಟೆಗಳಲ್ಲಿ ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. ಹಾಗಾದರೆ ಎಲ್ಲೆಲ್ಲಿ ಮಳೆ ಸುರಿಯಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಬೆಂಗಳೂರು, ಬಾಗಲಕೋಟೆ, ಬೆಳಗಾವಿ, ಬೀದರ್, ವಿಜಯಪುರ, ಚಾಮರಾಜನಗರ, ಧಾರವಾಡ, ಗದಗ, ಮೈಸೂರು, ಉಡುಪಿಯಲ್ಲಿ ಮುಂದಿನ 3 ಗಂಟೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ.
Thunderstorm with Lightning is very likely to occur at isolated places over Bagalakote, Belagavi, Bidar, Vijayapura, Chamarajanagara, Dharwad, Gadag, Mysuru, Udupi in the next 3 hours
— Karnataka Weather (@Bnglrweatherman) June 16, 2024
Issued by: IMD Bengaluru
Validity Time: 16 Jun, 15:00 - 18:00#KarnatakaRains pic.twitter.com/TzWaDdzwZL
ಈಗಾಗಲೇ ಶನಿವಾರ ರಾಯಚೂರಿನ ಗಬ್ಬೂರಿನಲ್ಲಿ 6 ಸೆಂ.ಮೀ ಮಳೆ ಆಗಿದ್ದು ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬಿದ್ದಿರುವ ಸ್ಥಳ ಎಂದು ವರದಿಯಾಗಿದೆ. ಇನ್ನು ಉಡುಪಿ, ಯಾದಗಿರಿ, ಸೈದಾಪುರ, ಅಂಕೋಲಾದಲ್ಲಿ ತಾಲಾ 3 ಸೆಂಟಿ ಮೀಟರ್ ಗೋಕರ್ಣ, ಕುಮಟಾ, ಕೆಂಭಾವಿ, ತಾವರಗೇರಾ, ಮುದಗಲ್, ಮಂಠಾಳ, ಕೋಟದಲ್ಲಿ ತಲಾ 2 ಸೆಂಟಿ ಮೀಟರ್ ಮಳೆಯಾಗಿದೆ.
ಹಾಗೆಯೇ ಹೊನ್ನಾವರ, ಕಾರ್ಕಳ , ಸಿದ್ದಾಪುರ, ಮಂಕಿ, ಯಲ್ಲಾಪುರ, ಯಡ್ರಾಮಿ, ದೇವದುರ್ಗ, ಕವಡಿಮಟ್ಟಿ, ಮಸ್ಕಿ, ಕಲಬುರ್ಗಿ, ಕಕ್ಕೇರಿ, ಕಮಲಾಪುರ, ಮಾನ್ವಿ ಸೇರಿದಂತೆ ಹಲವೆಡೆ ತಲಾ 1 ಸೆಂಟಿ ಮೀಟರ್ ಮಳೆಯಾದ ವರದಿಯಾಗಿದೆ. ಹಾಗೆಯೇ ಇನ್ನು ಇಂದು ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications