ರೈಲ್ವೆ ಬಜೆಟಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದು ರೂ. 3174 ಕೋಟಿ
ಕೇಂದ್ರ ಬಜೆಟಿನಲ್ಲಿ ಕರ್ನಾಟಕ ರೈಲ್ವೆಗೆ ನಿರೀಕ್ಷೆಗೂ ಮೀರಿ ಅನುದಾನ ನೀಡಲಾಗಿದ್ದು ಒಟ್ಟು 3,174 ಕೋಟಿ ರೂಪಾಯಿಗಳನ್ನು ಎತ್ತಿಡಲಾಗಿದೆ.
ಬೆಂಗಳೂರು, ಫೆಬ್ರವರಿ 2: ಈ ಬಾರಿಯ ಕೇಂದ್ರ ಬಜೆಟಿನಲ್ಲಿ ಕರ್ನಾಟಕ ರೈಲ್ವೇಗೆ ಹಲವು ಕೊಡುಗೆಗಳನ್ನು ನೀಡಲಾಗಿದೆ. ನೈರುತ್ಯ ರೈಲ್ವೇ ವಲಯದ ವ್ಯಾಪ್ತಿಗೆ ಬರುವ ಕರ್ನಾಟಕಕ್ಕೆ ಒಟ್ಟು 3174 ಕೋಟಿ ರೂಪಾಯಿಗಳ ಅನುದಾನ ಬಜೆಟಿನಲ್ಲಿ ಸಿಕ್ಕಿದೆ.
'ಕಳೆದ ಬಾರಿಯ ಬಜೆಟಿನಲ್ಲಿ 2,663.42 ಕೋಟಿ ರೂಪಾಯಿ ನೈರುತ್ಯ ರೈಲ್ವೆಗೆ ನೀಡಲಾಗಿತ್ತು. ನಾವು ಈ ಬಾರಿ 2,900 ಕೋಟಿ ನೀಡುವಂತೆ ಕೇಳಿಕೊಂಡಿದ್ದೆವು. ಆದರೆ ಸರಕಾರ ನಮ್ಮ ನಿರೀಕ್ಷೆಗೂ ಮೀರಿ ಈ ಬಾರಿ 3,174 ಕೋಟಿ ರೂಪಾಯಿ ನೀಡಿದೆ," ಎಂದು ನೈರುತ್ಯ ರೈಲ್ವೇ ವಲಯದ ಪ್ರಧಾನ ವ್ಯವಸ್ಥಾಪಕ ಎ.ಕೆ.ಗುಪ್ತಾ ಹೇಳಿದ್ದಾರೆ.[ಅಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಪೂರಕವಲ್ಲದ ಬಜೆಟ್:ಸಿದ್ದರಾಮಯ್ಯ]

ಕೇಂದ್ರ ಬಜೆಟಿನಲ್ಲಿ ಕರ್ನಾಟಕ್ಕೆ ಸಿಕ್ಕಿದ ಹೊಸ ಯೋಜನೆಗಳು ಹೀಗಿವೆ,
*ಕೊಪ್ಪಳ ಜಿಲ್ಲೆ ಚಿಕ್ಕಬೆಣಕಲ್ ನಿಂದ ಗಂಗಾವತಿಗೆ 13 ಕಿಲೋಮೀಟರ್ ಹೊಸ ಮಾರ್ಗ
*ಮಹಾರಾಷ್ಟ್ರದ ದೌಂಡ್ ನಿಂದ ಕಲಬುರ್ಗಿವರೆಗಿನ 46.81 ಕಿಲೋಮಿಟರ್ ಲೈನ್ ಡಬ್ಲಿಂಗ್
*ಬೆಂಗಳೂರಿನ 'ನಮ್ಮ ಮೆಟ್ರೋ' 2 ಹೊಸ ಲೈನ್, ಎರಡನೇ ಹಂತದ ನಾಲ್ಕು ಮಾರ್ಗಗಳ ವಿಸ್ತರಣೆಗೆ ಅನುಮತಿ.[ಬಜೆಟ್ 2017: ಮೂಲ ಸೌಕರ್ಯಕ್ಕೆ ಜೇಟ್ಲಿ ಕೊಟ್ಟಿದ್ದು ಬರೀ ಸಪ್ಪೆ ಸಪ್ಪೆ..]
*ಬೆಂಗಳೂರಿನ ಯಶವಂತಪುರ ಮತ್ತು ಕಂಟೋನ್ಮೆಂಟ್ ರೈಲ್ವೇ ನಿಲ್ದಾಣಗಳ ಮರು ಅಭಿವೃದ್ಧಿ
*ಗುಂತಕಲ್-ಬಳ್ಳಾರಿ-ಹೊಸಪೇಟೆ-ತೋರಣಗಲ್-ರಣಜಿತ್ ಪುರ ಮಾರ್ಗದ ವಿದ್ಯುದ್ದೀಕರಣ
*ಹೊಸಪೇಟೆ-ಗದಗ ಮಾರ್ಗ ವಿದ್ಯುದೀಕರಣ
*ನೈರುತ್ಯ ರೈಲ್ವೆಯ 34 ನಿಲ್ದಾಣಗಳಿಗೆ 100ಮೆಗಾ ವ್ಯಾಟ್ ಸೌರ ವಿದ್ಯುತ್ ಸೌಲಭ್ಯ
*914 ರೈಲುಗಳಿಗೆ ಬಯೋ ಶೌಚಾಲಯ ಸೌಲಭ್ಯ
-
Gold Rate April 9: ಚಿನ್ನ - ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ: ಬಂಗಾರ ಖರೀದಿದಾರರಿಗೆ ಸಂತೋಷದ ಸುದ್ದಿ -
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
Rain in Karnataka: ಕರ್ನಾಟಕದ ಕರಾವಳಿಯಲ್ಲಿ ಭಾರೀ ಬಿಸಿಲು; ಬೆಂಗಳೂರು ಸೇರಿ ಈ ಭಾಗಗಳಲ್ಲಿ ಮಳೆ: ಐಎಂಡಿ -
Election Commission: ಚುನಾವಣೆ ಸಮಯದಲ್ಲೇ ಭಾರತೀಯ ಚುನಾವಣಾ ಆಯೋಗದ ಟ್ವೀಟ್ ಎಡವಟ್ಟು, ಬಿಜೆಪಿ ಪರ ಎಂದ ವಿರೋಧ ಪಕ್ಷಗಳು -
Dhurandhar 2: ದುರಂಧರ್ 2 ಸಿನಿಮಾ: ಬಾಕ್ಸ್ ಆಫೀಸ್ನಲ್ಲಿ 1,000 ಕೋಟಿ ದಾಖಲೆಯ ನಡುವೆ ಹೊಸ ಸಂಕಷ್ಟ -
Zombis Drug: ಬೆಂಗಳೂರಲ್ಲಿ ಜಾಂಬಿ ಡ್ರಗ್ಸ್ ಸೇವಿಸಿ ಯುವಕನ ವಿಚಿತ್ರ ವರ್ತನೆ: ನಟ ದುನಿಯಾ ವಿಜಯ್ ವಿಡಿಯೋ ವೈರಲ್ -
Assembly Elections 2026: ಕೇರಳಂ, ಅಸ್ಸಾಂ, ಪುದುಚೇರಿ ವಿಧಾನಸಭೆ ಚುನಾವಣೆ ಮತದಾನ ಪ್ರಾರಂಭ -
Karnataka 2nd Puc Results 2026: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ ಯಾವ ಜಿಲ್ಲೆ ಎಷ್ಟನೇ ಸ್ಥಾನ?












Click it and Unblock the Notifications