ಹಂಸಲೇಖ, ದಿ.ಗೋಪಾಲ ವಾಜಪೇಯಿಗೆ ನಾಟಕ ಅಕಾಡೆಮಿ ಗೌರವ
ಬೆಂಗಳೂರು, ಅಕ್ಟೋಬರ್ 25: ಕರ್ನಾಟಕ ನಾಟಕ ಅಕಾಡೆಮಿಯು ಗೌರವ ಪ್ರಶಸ್ತಿ, ವಾರ್ಷಿಕ ಪ್ರಶಸ್ತಿ, ಹಾಗೂ ದತ್ತಿ ನಿಧಿ ಪ್ರಶಸ್ತಿಗಳಿಗೆ ಅರ್ಹ ರಂಗಸಾಧಕರನ್ನು ಆಯ್ಕೆ ಮಾಡಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವೃತ್ತಿರಂಗಭೂಮಿ, ಮಕ್ಕಳ ರಂಗಭೂಮಿ, ಹವ್ಯಾಸಿ, ಗ್ರಾಮೀಣ, ಪೌರಾಣಿಕ ರಂಗಭೂಮಿ ಹಾಗೂ ನೇಪಥ್ಯ, ಸಂಗೀತ, ಮೇಕಪ್, ರಂಗಸಂಗೀತ ಇತ್ಯಾದಿ ಪ್ರಕಾರಗಳಲ್ಲಿ ಶ್ರಮಿಸಿರುವವರಿಗೆ ಪ್ರಾತಿನಿಧ್ಯ ನೀಡಲಾಗಿದೆ.
ರಂಗಸಾಧನೆ ಗೌರವ ಪ್ರಶಸ್ತಿಗೆ 2015ನೇ ಸಾಲಿಗೆ ದಾವಣಗೆರೆಯ ಮಾನೂಬಾಯಿ ನಾಕೋಡ, 2016ನೇ ಸಾಲಿಗೆ ಹಂಸಲೇಖ ಆಯ್ಕೆಯಾಗಿದ್ದಾರೆ.[ಕರ್ನಾಟಕ ಕ್ರೀಡಾರತ್ನ ಮತ್ತು ಏಕಲವ್ಯ ಪ್ರಶಸ್ತಿ ಪ್ರಕಟ]

2015ನೇ ಸಾಲಿನ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪುರಸ್ಕೃತರ ವಿವರ ಹೀಗಿದೆ.
ದೇವಿರಪ್ಪ ಶಿವಪ್ಪ ಬಣಕಾರ, ಹಾವೇರಿ-ನಟ, ವೆಂಕಟೇಶ ಕುಲಕರ್ಣಿ, ಬಾಗಲಕೋಟೆ-ನಾಟಕಮಾಸ್ತರು, ನಿರ್ದೇಶಕರು, ಕೆ.ವಿ.ಕೃಷ್ಣಯ್ಯ, ಬೆಂಗಳೂರು ನಗರ- ನಾಟಕಕಾರರು, ಪೂಜಾರ ಚಂದ್ರಪ್ಪ, ದಾವಣಗೆರೆ- ನಟ, ಹಾರ್ಮೋನಿಯಂ ಮಾಸ್ತರ್, ಟಿ.ಆರ್.ರಾಮಚಂದ್ರರಾವ್, ಬೆಂಗಳೂರು- ನೇಪಥ್ಯ, ಕೆ.ವಿ.ವೆಂಕಟೇಶ್, ಚಾಮರಾಜನಗರ- ನಟ.
ಎಸ್.ಕೆ. ಸೂರಯ್ಯ, ಚಿತ್ರದುರ್ಗ-ನಟ, ಸರೋಜಿನಿ, ಮೈಸೂರು- ನಟಿ, ವಿಠ್ಠಲಕೊಪ್ಪ, ಧಾರವಾಡ- ನಟ, ಕಿಶೋರ್ ಡಿ ಶೆಟ್ಟಿ, ಮಂಗಳೂರು- ನಟ, ಸಂಘಟಕ, ಚಂದ್ರು ಉಡುಪಿ, ಶಿರಸಿ, ಉತ್ತರ ಕನ್ನಡ- ನಟಿ, ನೇಪಥ್ಯ, ಮಾನಮ್ಮ ರಾಯನಗೌಡ, ರಾಯಚೂರು-ನಟಿ, ಗಾಯಕಿ, ವನಜಶ್ರೀ ಶೆಟ್ಟಿ, ಬೆಂಗಳೂರು- ನಟಿ, ಬಿ.ಇ.ತಿಪ್ಪೇಸ್ವಾಮಿ, ದಾವಣಗೆರೆ- ನಟ, ಹಾರ್ಮೋನಿಯಂ ಮಾಸ್ತರ್, ಪರಶುರಾಮ ಪ್ರಿಯ, ಕೊಪ್ಪಳ- ನಟ, ನಿರ್ದೇಶಕ.[ಈಬಾರಿ ಯಾರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದರೆ ಲೇಸು?]
2016ನೇ ಸಾಲಿನ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪುರಸ್ಕೃತರ ವಿವರ
ಎಲ್.ರಾಮಕೃಷ್ಣ, ಬೆಂಗಳೂರು ಗ್ರಾಮಾಂತರ- ನಿರ್ದೇಶನ, ವಿರೂಪಾಕ್ಷರಾವ್ ಮೊರಗೇರಿ, ಬಳ್ಳಾರಿ- ತಬಲ, ಬಸವರಾಜ ಹೂಗಾರ, ವಿಜಯಪುರ- ತಬಲ, ಮಹಾಂತಯ್ಯ ಖಾನಪೂರ, ಯಾದಗಿರಿ- ಹಾರ್ಮೋನಿಯಂ, ಎಚ್.ಹನುಮಂತ ನರಬೋಳಿ, ಕಲಬುರ್ಗಿ- ತಬಲ, ಆಶೋಕ ನೇಸರಗಿ, ಬೆಳಗಾವಿ- ನಟ, ನಾಟಕಕಾರರು, ಸಿದ್ಧಪ್ಪ ನಿಂಗಪ್ಪ ಗುಳ್ಳೆ, ಗದಗ-ಹಾರ್ಮೋನಿಯಂ.

ಭಾಗ್ಯಶ್ರೀ, ಬೆಂಗಳೂರು-ನಟಿ, ಮಹದೇವಪ್ಪ ಹುಣಶ್ಯಾಳ, ಬೀದರ್- ನೇಪಥ್ಯ, ಬೈರ್ನಯಳ್ಳಿ ಶಿವರಾಂ, ರಾಮನಗರ-ನಿರ್ದೇಶನ, ಚೌಡಶೆಟ್ಟಿ, ಮಂಡ್ಯ- ನಿರ್ದೇಶನ, ವೆಂಕಟೇಶ್, ಹಾಸನ- ನಟ, ವಾಸುದೇವರಾವ್, ಉಡುಪಿ- ನಟ, ಲಕ್ಷ್ಮಣದಾಸ್, ತುಮಕೂರು-ನಟ, ನಿರ್ದೇಶನ, ಚೇತನ ಡಿ ಪ್ರಸಾದ್, ಕೋಲಾರ- ನಟ.[ಯಕ್ಷಗಾನ ಅರ್ಥಧಾರಿ ಎಂಎ ಹೆಗಡೆಗೆ ಚಿಟ್ಟಾಣಿ ಪ್ರಶಸ್ತಿ]
ಕಮಲಮ್ಮ ಬೀಳಗಿ, ಬಾಗಲಕೋಟೆ- ನಟಿ, ಆಂಜನೇಯ, ಬೆಂಗಳೂರು ಗ್ರಾಮಾಂತರ- ನಟ, ನಾಟಕಕಾರರು, ಲಲಿತಾ ಸಣ್ಣಂಗಿ, ಹಾವೇರಿ- ನಟಿ, ವಿಜಯಕಾಶಿ, ಶಿವಮೊಗ್ಗ-ನಟ, ಛಾಯಾ ರೆಡ್ಡಿ, ಧಾರವಾಡ-ನಟಿ, ಪ್ರೇಮಾ ಆರ್ ತಾಳೀಕೋಟಿ, ವಿಜಯಪುರ- ನಟಿ,
ವೆಂಕಟೇಶ್ ಹೆಗಡೆ, ಉತ್ತರ ಕನ್ನಡ-ನಟ, ಸುಂದರಮೂರ್ತಿ ಆಲೆಮನೆ, ಬೆಂಗಳೂರು-ಮೇಕಪ್, ಎ.ಭದ್ರಪ್ಪ, ದಾವಣಗೆರೆ-ಸಂಘಟಕ, ಜಿ.ಎಂ.ಸಿದ್ಧರಾಜು, ಮಂಡ್ಯ-ನಟ.
ಕಲ್ಚರ್ಡ್ ಕೆಮೆಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರ ಪ್ರಶಸ್ತಿ: 2015-ಮದುಕೇಶ್ ಚಿಂದೋಡಿ, ದಾವಣಗೆರೆ, 2016- ಮಹದೇವಪ್ಪ, ಬೆಂಗಳೂರು, ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ ಪ್ರಶಸ್ತಿ: 2015- ಗೂಡು ಸಾಹೇಬ್ ಚಟ್ನಿಹಾಳ, ಬಾಗಲಕೋಟೆ,
2016- ಬಿ.ಗಂಗಾಧರ, ತುಮಕೂರು.['ಕರ್ನಾಟಕ ಕಲಾಶ್ರೀ' ಪ್ರಶಸ್ತಿ ಪಟ್ಟಿ ಪ್ರಕಟ]
ಚಿಂದೋಡಿ ಲೀಲಾ ದತ್ತಿ ಪುರಸ್ಕಾರ ಪ್ರಶಸ್ತಿ: 2015- ಮಮತಾ ಗುಡೂರು, 2016 ಉಮಾ, ರಾಣೆಬೆನ್ನೂರು, ರಂಗಭೂಮಿಯ ಪುಸ್ತಕ ಪುರಸ್ಕಾರ: 2014- ಪ್ರಕಾಶ ಗರುಡ- 'ಕಂಪನಿ ನಾಟಕ ಅರ್ಥಾತ್ ವೃತ್ತಿರಂಗಭೂಮಿ', 2015- ದಿವಂಗತ ಗೋಪಾಲ ವಾಜಪೇಯಿ - 'ರಂಗದ ಒಳಗೆ-ಹೊರಗೆ'.
-
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
ಇಂಧನ ಪೂರೈಕೆ ಕೊರತೆ ಭೀತಿ: 2026ರಲ್ಲಿ ನೀವು ಖರೀದಿಸಬಹುದಾದ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಇಲ್ಲಿವೆ -
Water4Life: ಅತ್ಯಮೂಲ್ಯ ಜಲಮೂಲಗಳ ಸಂರಕ್ಷಣೆಗೆ ರಿಲಯನ್ಸ್ ಫೌಂಡೇಷನ್ನಿಂದ ಜನ ಚಳವಳಿ, ಡಿಟೇಲ್ಸ್ ಇಲ್ಲಿದೆ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ?











Click it and Unblock the Notifications