Karnataka Dam Water Level Today: ಕಬಿನಿ, ಭದ್ರಾ ಸೇರಿ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ?
ಬೆಂಗಳೂರು, ಜೂನ್ 07: ರಾಜ್ಯದಲ್ಲಿ ಕೆಲವು ವಾರಗಳ ಹಿಂದೆಷ್ಟೆ ಬಣಗುಡುತ್ತಿದ್ದ ಜಲಾಶಯಗಳಲ್ಲಿ ಜೀವ ಕಳೆ ತುಂಬಿದೆ. ಭಾರೀ ಮಳೆಯಿಂದಾಗಿ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೆಚ್ಚಾಗಿದೆ. ಇದರಿಂದಾಗಿ ಕಬಿನಿ, ಘಟಪ್ರಭಾ, ಕೆಆರ್ಎಸ್ ಸೇರಿದಂತೆ ಹಲವು ಜಲಾಶಯಗಳ ನೀರಿನ ಸಂಗ್ರಹ, ಒಳಹರಿವು ಹೆಚ್ಚಾಗಿದೆ.
ಪ್ರಸ್ತುತ ವಾರಾಂತ್ಯಕ್ಕೆ ಮುಂಗಾರು ಮಳೆ ಕರ್ನಾಟಕದ ಉದ್ದಗಲಕ್ಕೂ ವ್ಯಾಪಿಸಿದೆ. ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲೂ ಮುಂಗಾರು ಪೂರ್ತಿ ವಿಸ್ತರಣೆಗೊಂಡು, ಭಾರೀ ಮಳೆ ಸುರಿಸುತ್ತಿದೆ. ಆಯಾ ಜಲಾಶಯಗಳ ಸುತ್ತಮುತ್ತ, ನದಿಗಳ ಮೂಲಗಳ ಪ್ರದೇಶದಲ್ಲಿ ಭರ್ಜರಿ ಮಳೆ ಆಗುತ್ತಿದೆ. ಹೀಗಾಗಿ ನದಿಗಳು ತುಂಬಿಕೊಂಡಿವೆ. ಜಲಾಶಯಗಳು ಭರ್ತಿ ಆಗಿವೆ.

ಭಾರೀ ಮಳೆ ಮುಂದುವರಿಯಲಿವೆ. ಇಂದು ಜೂನ್ 07ರಂದು ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಯಾವೆಲ್ಲ ಹೆಚ್ಚು ನೀರಿನ ಸಾಮರ್ಥ್ಯ ಹೊಂದಿವೆ. ಇಂದಿನ ನೀರಿನ ಮಟ್ಟ, ಒಳ ಮತ್ತು ಹೊರ ಹರಿವಿನ ಮಾಹಿತಿ ಇಲ್ಲಿದೆ.
* ಆಲಮಟ್ಟಿ ಜಲಾಶಯ
ಒಟ್ಟು ಸಾಮರ್ಥ್ಯ -123.8 ಟಿಎಂಸಿ
ಇಂದಿನ ನೀರಿನ ಸಂಗ್ರಹ - 20.55 ಟಿಎಂಸಿ
ಒಳ ಹರಿವು - 00
ಹೊರ ಹರಿವು - 1238 ಕ್ಯೂಸೆಕ್ಸ್
* ಕೆಆರ್ಎಸ್ ಜಲಾಶಯ
ಒಟ್ಟು ಸಾಮರ್ಥ್ಯ- 49.45 ಟಿಎಂಸಿ
ಇಂದಿನ ನೀರಿನ ಮಟ್ಟ - 12.97 ಟಿಎಂಸಿ
ಒಳ ಹರಿವು - 1470 ಕ್ಯೂಸೆಕ್ಸ್
ಹೊರ ಹರಿವು - 550 ಕ್ಯೂಸೆಕ್ಸ್
* ತುಂಗಭದ್ರಾ ಜಲಾಶಯ
ಒಟ್ಟು ಸಾಮರ್ಥ್ಯ - 105.79 ಟಿಎಂಸಿ
ಇಂದಿನ ನೀರಿನ ಮಟ್ಟ - 3.63 ಟಿಎಂಸಿ
ಒಳ ಹರಿವು - 1581 ಕ್ಯೂಸೆಕ್ಸ್
ಹೊರ ಹರಿವು - 73 ಕ್ಯೂಸೆಕ್ಸ್

* ಮಲಪ್ರಭಾ ಜಲಾಶಯ
ಒಟ್ಟು ಸಾಮರ್ಥ್ಯ - 37.73 ಟಿಎಂಸಿ
ಇಂದಿನ ನೀರಿನ ಸಂಗ್ರಹ - 6.68 ಟಿಎಂಸಿ
ಒಳ ಹರಿವು - 00
ಹೊರ ಹರಿವು -194 ಕ್ಯೂಸೆಕ್ಸ್
* ಲಿಂಗನಮಕ್ಕಿ ಜಲಾಶಯ
ಒಟ್ಟು ಸಾಮರ್ಥ್ಯ - 151.75 ಟಿಎಂಸಿ
ಇಂದಿನ ನೀರಿನ ಮಟ್ಟ - 13.62 ಟಿಎಂಸಿ
ಒಳ ಹರಿವು - 00
ಹೊರ ಹರಿವು - 2422 ಕ್ಯೂಸೆಕ್ಸ್
* ಕಬಿನಿ ಜಲಾಶಯ
ಒಟ್ಟು ಸಾಮರ್ಥ್ಯ - 19.52 ಟಿಎಂಸಿ
ಇಂದಿನ ನೀರಿನ ಸಂಗ್ರಹ - 7.69 ಟಿಎಂಸಿ
ಒಳ ಹರಿವು - 475 ಕ್ಯೂಸೆಕ್ಸ್
ಹೊರ ಹರಿವು - 300 ಕ್ಯೂಸೆಕ್ಸ್
* ಭದ್ರಾ ಜಲಾಶಯ
ಒಟ್ಟು ಸಾಮರ್ಥ್ಯ - 71.54 ಟಿಎಂಸಿ
ಇಂದಿನ ನೀರಿನ ಮಟ್ಟ - 14.37 ಟಿಎಂಸಿ
ಒಳ ಹರಿವು - 341 ಕ್ಯೂಸೆಕ್ಸ್
ಹೊರ ಹರಿವು - 341 ಕ್ಯೂಸೆಕ್ಸ್
* ಹಾರಂಗಿ ಜಲಾಶಯ
ಒಟ್ಟು ಸಾಮರ್ಥ್ಯ - 8.50 ಟಿಎಂಸಿ
ಇಂದಿನ ನೀರಿನ ಮಟ್ಟ - 3.05 ಟಿಎಂಸಿ
ಒಳ ಹರಿವು - 296 ಕ್ಯೂಸೆಕ್ಸ್
ಹೊರ ಹರಿವು - 200 ಕ್ಯೂಸೆಕ್ಸ್
ಕರ್ನಾಟಕದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ಕಡೆಗಳಲ್ಲೂ ಭಾರಿ ಮಳೆ ಆಗುತ್ತಿದೆ. ಮುಂದಿನ ಮೂರು ದಿನ ರಾಜ್ಯದ ಸುಮಾರು ಆರು ಜಿಲ್ಲೆಗಳಿಗೆ ಸುನಾಮಿ ಮಳೆ ಬರುವ ಕಾರಣಕ್ಕೆ ಐಎಂಡಿ ಆರೆಂಜ್ ಅಲರ್ಟ್ ಎಚ್ಚರಿಕೆ ನೀಡಿದೆ. ಇದರಿಂದ ಮುಂದಿನ ವಾರದ ಹೊತ್ತಿಗೆ ಜಲಾಶಯಗಳ ನೀರಿನ ಹರಿವು ಇನ್ನಷ್ಟು ಹೆಚ್ಚಾಗಲಿದೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications