ಆರೋಗ್ಯ ಸಂಜೀವಿನಿ ಕುರಿತು ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ
ಬೆಂಗಳೂರು, ಫೆಬ್ರವರಿ 22: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಿಂದ ಹೊರಗುಳಿಯಲು ಬಯಸುವ ನೌಕರರಿಗಾಗಿ ಆರ್ಥಿಕ ಇಲಾಖೆ HRMS-1 ವೆಬ್ ಅಪ್ಲಿಕೇಶನ್ ಅಪ್ಲಿಕೇಶನ್ನಲ್ಲಿ ಹೊಸ ಸೌಲಭ್ಯವನ್ನು ಕಲ್ಪಿಸಿದೆ. ಹಾಗಾದ್ರೆ ಇದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಯೋಜನೆಯಿಂದ ಹೊರಗುಳಿಯಲು ಏನು ಮಾಡಬೇಕು?
* ಲಾಗಿನ್ ಪ್ರಕ್ರಿಯೆ: ಮೊದಲಿಗೆ ಸಂಬಂಧಪಟ್ಟ DDO ಲಾಗಿನ್ ಕ್ರೆಡೆನ್ಶಿಯಲ್ ಬಳಸಿ HRMS-1 ಸೈಟ್ಗೆ ಲಾಗಿನ್ ಆಗಬೇಕು.
* ನ್ಯಾವಿಗೇಷನ್: ಸೈಟ್ನಲ್ಲಿ Service Register > Family Dependent Entry Form - KASS ಆಯ್ಕೆ ಮಾಡಿ.
* ನೌಕರರ ವಿವರ: ನೌಕರರ KGID ಸಂಖ್ಯೆಯನ್ನು ನಮೂದಿಸಿ GET ಮೇಲೆ ಕ್ಲಿಕ್ ಮಾಡಿ.
* ದೃಢೀಕರಣ: ಸ್ಕ್ರೀನ್ ಮೇಲೆ ಕಾಣಿಸುವ "Do you wish to OPT-OUT from the KASS Scheme?" ಎಂಬ ಪ್ರಶ್ನೆಗೆ 'Yes' ಎಂದು ಆಯ್ಕೆ ಮಾಡಬೇಕು.

ಯಾವ ಕಾರಣಗಳನ್ನು ನೀಡಬಹುದು?
* ಈಗಾಗಲೇ KASS ಹೊರತುಪಡಿಸಿ ರಾಜ್ಯ ಸರ್ಕಾರದ ಇತರ ಆರೋಗ್ಯ ಯೋಜನೆಯ ಫಲಾನುಭವಿಯಾಗಿದ್ದರೆ.
* ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (CGHS) ಫಲಾನುಭವಿಯಾಗಿದ್ದರೆ.
* ಪತಿ ಅಥವಾ ಪತ್ನಿ ರಾಜ್ಯ/ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯ ಫಲಾನುಭವಿಯಾಗಿದ್ದರೆ.
* ಅಥವಾ ಇತರ ಕಾರಣಗಳಿದ್ದರೆ ಅವುಗಳನ್ನು ನಮೂದಿಸಬಹುದು.
ಈ ದಾಖಲೆ ಸಲ್ಲಿಕೆ ಕಡ್ಡಾಯ
* ಆಯ್ಕೆ ಮಾಡಿದ ಕಾರಣಕ್ಕೆ ಪೂರಕವಾಗಿ ದೃಢೀಕರಣ ಪ್ರಮಾಣ ಪತ್ರವನ್ನು PDF ರೂಪದಲ್ಲಿ (ಗರಿಷ್ಠ
500KB) ಅಪ್ಲೋಡ್ ಮಾಡಿ 'Submit' ಮೇಲೆ ಕ್ಲಿಕ್ ಮಾಡಬೇಕು. ಯಶಸ್ವಿಯಾಗಿ ಸಲ್ಲಿಕೆಯಾದ ನಂತರ "Successfully OPT-OUT saved" ಎಂಬ ಸಂದೇಶ ದೊರೆಯುತ್ತದೆ.
ವರದಿಗಳನ್ನು ವೀಕ್ಷಿಸುವುದು ಹೇಗೆ?
* ಯೋಜನೆಗೆ ಸೇರಿದ ಅಥವಾ ಹೊರಗುಳಿದವರ ವರದಿಯನ್ನು ವೀಕ್ಷಿಸಲು MIS Report -> KASS Report -> Opt-In/Opt-Out Report ಅನ್ನು ಅನುಸರಿಸಬಹುದು.
* ಹೆಚ್ಚಿನ ಮಾಹಿತಿಗಾಗಿ HRMS ಸಾಫ್ಟ್ವೇರ್ನ ಮುಖಪುಟದಲ್ಲಿರುವ KASS Manual ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಆರೋಗ್ಯ ಸಂಜೀವಿನಿ ಕುರಿತು ಮಾಹಿತಿ
ಆರೋಗ್ಯ ಸಂಜೀವಿನಿ ಭಾರತದಲ್ಲಿ ಎಲ್ಲಾ ವಿಮಾ ಕಂಪನಿಗಳು ಒಂದೇ ಮಾದರಿಯಲ್ಲಿ ನೀಡುವ ಮೂಲಭೂತ ಆರೋಗ್ಯ ವಿಮಾ ಯೋಜನೆ. ಈ ಯೋಜನೆಯನ್ನು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಮಾನದಂಡದಂತೆ ರೂಪಿಸಿದ್ದು, ಸಾಮಾನ್ಯ ಜನರಿಗೆ ಸರಳ ಮತ್ತು ಉತ್ತಮ ಆರೋಗ್ಯ ವಿಮಾ ರಕ್ಷಣೆ ಒದಗಿಸುವುದು ಇದರ ಉದ್ದೇಶವಾಗಿದೆ.
ಈ ಪಾಲಿಸಿಯಲ್ಲಿ ಆಸ್ಪತ್ರೆ ದಾಖಲಾತಿ ವೆಚ್ಚ, ಕೊಠಡಿ ಬಾಡಿಗೆ, ಶಸ್ತ್ರಚಿಕಿತ್ಸೆ, ವೈದ್ಯಕೀಯ ಪರೀಕ್ಷೆಗಳು ಹಾಗೂ ಚಿಕಿತ್ಸೆ ಸಂಬಂಧಿತ ಖರ್ಚುಗಳಿಗೆ ಭದ್ರತೆ ಲಭ್ಯವಿರುತ್ತದೆ. ಸಾಮಾನ್ಯವಾಗಿ ₹1 ಲಕ್ಷದಿಂದ ₹5 ಲಕ್ಷವರೆಗೆ ವಿಮಾ ಮೊತ್ತವನ್ನು ಆಯ್ಕೆ ಮಾಡುವ ಅವಕಾಶ ಇರುತ್ತದೆ. ವೈಯಕ್ತಿಕ ಅಥವಾ ಕುಟುಂಬ ಫ್ಲೋಟರ್ ರೂಪದಲ್ಲೂ ಈ ಯೋಜನೆಯನ್ನು ಪಡೆಯಬಹುದು.
ಆರೋಗ್ಯ ಸಂಜೀವಿನಿ ಯೋಜನೆಯ ವಿಶೇಷತೆ ಎಂದರೆ ಎಲ್ಲ ಕಂಪನಿಗಳಲ್ಲೂ ನಿಯಮಗಳು ಬಹುತೇಕ ಒಂದೇ ರೀತಿಯಾಗಿರುವುದು. ಇದರಿಂದ ಗ್ರಾಹಕರು ಬೇರೆ ಬೇರೆ ಪಾಲಿಸಿಗಳನ್ನು ಹೋಲಿಕೆ ಮಾಡುವಲ್ಲಿ ಸುಲಭವಾಗುತ್ತದೆ. ಪ್ರೀಮಿಯಂ ಮೊತ್ತ ವಯಸ್ಸು ಹಾಗೂ ಆಯ್ಕೆ ಮಾಡಿದ ವಿಮಾ ಮೊತ್ತದ ಆಧಾರದಲ್ಲಿ ಬದಲಾಗುತ್ತದೆ. ಆಸ್ಪತ್ರೆ ವೆಚ್ಚಗಳ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಮೂಲಭೂತ ಆರೋಗ್ಯ ರಕ್ಷಣೆಗೆ ಈ ಯೋಜನೆ ಸಹಾಯಕವಾಗಿದೆ. ಹೊಸದಾಗಿ ಆರೋಗ್ಯ ವಿಮೆ ತೆಗೆದುಕೊಳ್ಳುವವರಿಗೆ ಇದು ಉತ್ತಮ ಆರಂಭಿಕ ಆಯ್ಕೆಯಾಗಬಹುದು.
-
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
IPL Free VIP Tickets: ಶಾಸಕರಿಗೆ ಐಪಿಎಲ್ ವಿಐಪಿ ಟಿಕೆಟ್ ಪಡೆಯುವ ಹಕ್ಕು ಇದೆ: ಡಿ.ಕೆ.ಶಿವಕುಮಾರ್ ಸಮರ್ಥನೆ -
ಹಿಂದಿ ಹೆಚ್ಚು ಜನ ಮಾತನಾಡುವ ಭಾಷೆ, ವಿದ್ಯಾರ್ಥಿಗಳು ಎಲ್ಲ ಭಾಷೆ ಕಲಿಯಬೇಕು: ಶ್ರೀರಾಮುಲು -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ












Click it and Unblock the Notifications