ವಿವಾದತ್ಮಕ ಚಿತ್ರ 'ದಿ ಕೇರಳ ಸ್ಟೋರಿ' ವಿಚಾರವಾಗಿ ಪ್ರಧಾನಿ ಮೋದಿ ಬಳ್ಳಾರಿಯಲ್ಲಿ ಮಾತನಾಡಿದ್ದೇಕೆ? ಅಂತದ್ದೇನಿದೆ ಅದರಲ್ಲಿ?

ಬಳ್ಳಾರಿ, ಮೇ 05: ಬಳ್ಳಾರಿಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು 'ದಿ ಕೇರಳ ಸ್ಟೋರಿ' ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರವು ಕೇರಳದಲ್ಲಿ ಭಯೋತ್ಪಾದಕರು ರೂಪಿಸಿದ ಸಂಚುಗಳನ್ನು ಆಧರಿಸಿದೆ ಎಂದು ತಿಳಿಸಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣದ ಹೆಸರಿನಲ್ಲಿ ಕಾಂಗ್ರೆಸ್ ಭಯೋತ್ಪಾದಕರನ್ನು ರಕ್ಷಿಸುತ್ತಿದೆ ಎಂದು ಪ್ರಧಾನಿ ಆರೋಪಿಸಿದ್ದಾರೆ.

'ಕಳೆದ ಕೆಲವು ವರ್ಷಗಳಲ್ಲಿ, ಭಯೋತ್ಪಾದನೆಯ ಮತ್ತೊಂದು ರೂಪವು ಮುನ್ನೆಲೆಗೆ ಬಂದಿದೆ. ಬಾಂಬ್ ಮತ್ತು ಬಂದೂಕುಗಳು ಸದ್ದು ಮಾಡುತ್ತವೆ ಮತ್ತು ಅದು ಕೇಳುತ್ತದೆ. ಆದರೆ ಸಮಾಜದೊಳಗಿನ ಜನರು ಭಯೋತ್ಪಾದನೆಗೆ ಸೇರಿದರೆ ಯಾವುದೇ ಶಬ್ದವಿಲ್ಲರುವುದಿಲ್ಲ. ಇಂತಹ ಭಯೋತ್ಪಾದನೆಯ ಬಗ್ಗೆ ನ್ಯಾಯಾಲಯಗಳೂ ಕಳವಳ ವ್ಯಕ್ತಪಡಿಸಿವೆ' ಎಂದು ಮೋದಿ ವಾಗ್ದಾಳಿ ನಡೆಸಿದರು.

Karnataka Elections 2023: PM Modi invokes The Kerala Story in Ballari

ಇಂತಹ ಭಯೋತ್ಪಾದನೆಯನ್ನು ಆಧರಿಸಿ 'ದಿ ಕೇರಳ ಸ್ಟೋರಿ' ಸಿನಿಮಾ ಮಾಡಲಾಗಿದೆ. 'ದಿ ಕೇರಳ ಸ್ಟೋರಿ' ಒಂದು ರಾಜ್ಯದಲ್ಲಿ ಭಯೋತ್ಪಾದಕರು ನಡೆಸಿದ ಸಂಚಿನ ಮೇಲೆ ಆಧಾರಿತವಾಗಿದೆ ಎಂದು ಅವರು ಹೇಳಿದರು.

ಇದೊಂದು ಸುಂದರ ರಾಜ್ಯವಾಗಿದ್ದು, ಜನರು ತುಂಬಾ ಶ್ರಮವಹಿಸಿ ದುಡಿಯುತ್ತಿದ್ದಾರೆ ಮತ್ತು ಕೌಶಲ್ಯಪೂರ್ಣರಾಗಿದ್ದಾರೆ. ಇಂತಹ ರಾಜ್ಯದಲ್ಲಿ ಭಯೋತ್ಪಾದಕರ ಪಿತೂರಿಯನ್ನು 'ದಿ ಕೇರಳ ಸ್ಟೋರಿ'ಯಲ್ಲಿ ತೋರಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಕಾಂಗ್ರೆಸ್ ಭಯೋತ್ಪಾದಕರ ಜೊತೆ ನಿಂತಿದೆ ಮತ್ತು ಹಿಂದಿನಿಂದ ರಾಜಕೀಯ ವ್ಯವಹಾರಗಳಲ್ಲಿ ತೊಡಗಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದರು.

ಇಂದು ಬಿಡುಗಡೆಯಾದ ಚಿತ್ರದ ಬಿಡುಗಡೆಗೆ ತಡೆ ನೀಡಲು ಕೇರಳ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ. ಕೇರಳದ ಹಲವು ಸಚಿವರು ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿ, ನಿಷೇಧಕ್ಕೆ ಆಗ್ರಹಿಸಿದ್ದರು.
"ಕಾಂಗ್ರೆಸ್ ನಕಲಿ ಸಮೀಕ್ಷೆಗಳನ್ನು ನಡೆಸುವ ಮೂಲಕ ಸುಳ್ಳುಗಳನ್ನು ಹರಡುತ್ತಿದೆ. ಆದರೆ, ಕರ್ನಾಟಕದ ಜನತೆ ಬಿಜೆಪಿಗೆ ಮತ ಹಾಕಲು ನಿರ್ಧರಿಸಿದ್ದಾರೆ. ಈಗ ಅವರು ಯಾವ ಹೊಸ ಸುಳ್ಳು ಹೇಳಬಹುದು ಎಂದು ಕಾಂಗ್ರೆಸ್ ಯೋಚಿಸುತ್ತಿದೆ ಎಂದು ಮೋದಿ ಹೇಳಿದರು.

ಪ್ರಧಾನಿಯವರು ಕಾಂಗ್ರೆಸ್ ಪ್ರಣಾಳಿಕೆಯನ್ನು ಕಟುವಾಗಿ ಟೀಕಿಸಿದರು ಮತ್ತು ಇದು ಸುಳ್ಳಿನ ಕಂತೆ ಎಂದು ಬಣ್ಣಿಸಿದರು.

"ನೀವು ಈಗಾಗಲೇ ವಿವಿಧ ಪಕ್ಷಗಳ ಪ್ರಣಾಳಿಕೆಗಳನ್ನು ನೋಡಿರಬೇಕು. ಆದರೆ, ಬಿಜೆಪಿಯ ಪ್ರಣಾಳಿಕೆಯು ಕರ್ನಾಟಕವನ್ನು ನಂಬರ್ 1 ಮಾಡುವ ಗುರಿಯನ್ನು ಹೊಂದಿರುವ 'ಸಂಕಲ್ಪ ಪತ್ರ'ವಾಗಿದೆ. ಮತ್ತೊಂದೆಡೆ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹಲವಾರು ಸುಳ್ಳುಗಳಿವೆ. ಅದೊಂದು ಸುಳ್ಳಿನ ಕಂತೆ. ನಾವು ಇದನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇವೆ, ನಾವು ಅದನ್ನು ರದ್ದುಗೊಳಿಸುತ್ತೇವೆ ಎಂದು ಅವರು ಹೇಳಿದರು. ಕಾಂಗ್ರೆಸ್‌ನ ಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ ಅವರು ನಡುಗುತ್ತಿದ್ದಾರೆ, ಅದಕ್ಕಾಗಿಯೇ ಅವರಿಗೆ ಜೈ ಬಜರಂಗ್ ಬಲಿ ಹೇಳಲು ನನಗೆ ತೊಂದರೆಯಾಗಿದೆ ಎಂದು ಮೋದಿ ಹೇಳಿದರು.

ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಮೋದಿ ಆರೋಪಿಸಿದ್ದಾರೆ.

ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಹೆಸರುವಾಸಿಯಾಗಿದೆ. ಇಂತಹ ಪಕ್ಷ ಕರ್ನಾಟಕದ ಜನರನ್ನು ರಕ್ಷಿಸುತ್ತದೆಯೇ? ವೋಟ್ ಬ್ಯಾಂಕ್ ರಾಜಕಾರಣದ ಹೆಸರಿನಲ್ಲಿ ಐಟಿ ಉದ್ಯಮ, ಕೈಗಾರಿಕೀಕರಣ, ಕರ್ನಾಟಕದ ಶ್ರೀಮಂತ ಪರಂಪರೆಯನ್ನು ನಾಶಪಡಿಸಲಾಗುವುದು ಎಂದು ಪ್ರಧಾನಿ ಆರೋಪಿಸಿದರು.

ಇದೇ ವೇಳೆ, ಕಾಂಗ್ರೆಸ್ '85 ಪರ್ಸೆಂಟ್ ಕಮಿಷನ್' ಪಕ್ಷ ಎಂದು ಆರೋಪಿಸಿದರು.

'ಡಬಲ್ ಇಂಜಿನ್ ಸರ್ಕಾರವು ಕೇವಲ 3.5 ವರ್ಷಗಳ ಆಡಳಿತವನ್ನು ಪಡೆದುಕೊಂಡಿದೆ. ಅದಕ್ಕೂ ಮೊದಲು ಭ್ರಷ್ಟಾಚಾರದಲ್ಲಿ ತೊಡಗಿದ್ದ ಕಾಂಗ್ರೆಸ್ ಸರಕಾರವಿತ್ತು. ರಾಜೀವ್ ಗಾಂಧಿ ಅವರು ದೆಹಲಿಯಿಂದ 100 ಪೈಸೆ ಕಳುಹಿಸಿದರೆ ಬಡವರಿಗೆ 15 ಪೈಸೆ ಮಾತ್ರ ತಲುಪುತ್ತದೆ ಎಂದು ಹೇಳಿದ್ದರು. 85 ಪರ್ಸೆಂಟ್ ಕಮಿಷನ್ ಪಾರ್ಟಿ ಎಂದು ಒಪ್ಪಿಕೊಂಡಿದ್ದರು. ರಾಜ್ಯವನ್ನು ಸರ್ವನಾಶ ಮಾಡಿದ 85 ಪರ್ಸೆಂಟ್ ಕಮಿಷನ್ ಪಕ್ಷವಾಗಿ ಕಾಂಗ್ರೆಸ್ ಈಗಲೂ ಇದೆ' ಎಂದು ಮೋದಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+