Live

Karnataka Assembly Election 2023 LIVE News Updates: 'ಚುನಾವಣೆಯಲ್ಲಿ ಗೆದ್ದರೂ ಕೈ ಶಾಸಕರ ಖರೀದಿ ಮಾಡ್ತಾರೆ' ಖರ್ಗೆ ಕಿಡಿ

ಬೆಂಗಳೂರು, ಏಪ್ರಿಲ್ 25: ಕಾಂಗ್ರೆಸ್ 120 ಸ್ಥಾನ ಗೆದ್ದರೂ ಸಲಾದು, ಯಾಕೆಂದರೆ ಬಿಜೆಪಿ ಕೈ ಶಾಸಕರನ್ನು ಖರೀದಿ ಮಾಡುತ್ತದೆ ಎಂದು ಮಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ.

ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡುವಂತೆ ಮತದಾರರಿಗೆ ಮನವಿ ಮಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ರಾಜ್ಯದಲ್ಲಿ ಸರ್ಕಾರ ರಚಿಸಲು ನಮಗೆ 113 ಸ್ಥಾನಗಳ ಅಗತ್ಯವಿದ್ದರೂ, ಕಾಂಗ್ರೆಸ್ 120 ಸ್ಥಾನಗಳನ್ನು ಗೆದ್ದರೂ ಸಾಕಾಗುವುದಿಲ್ಲ. ಏಕೆಂದರೆ ಅವರು ನಮ್ಮ ಶಾಸಕರನ್ನು ಖರೀದಿಸುವ ಅಪಾಯ ಇದೆ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದರು.

ನಮ್ಮ ಶಾಸಕರನ್ನು ಕದ್ದುಕೊಂಡು ರಾಜ್ಯದಲ್ಲಿ ಸರ್ಕಾರ ರಚಿಸಿದ್ದಾರೆ. ಅದೇ ರೀತಿ ಗೋವಾದಲ್ಲೂ ಶಾಸಕರ ಕಳ್ಳತನ ಮಾಡಲಾಗಿದೆ. ಕಳ್ಳರ ಕಾಟ ಇರುವುದರಿಂದ ಎಚ್ಚರಿಕೆ ವಹಿಸಬೇಕು. ನಾನು ಯಾರ ಬಗ್ಗೆಯೂ ಮಾತನಾಡುತ್ತಿಲ್ಲ. ನಾವು ಬಹಳ ಜಾಗರೂಕರಾಗಿರಬೇಕು. ಹೀಗಾಗಿ 150 ಸ್ಥಾನ ಗೆಲ್ಲುವ ಗುರಿ ಹೊಂದಿದ್ದೇವೆ. ಸ್ಥಿರ ಸರ್ಕಾರ ದೇಶ ಮತ್ತು ನಾಗರಿಕರಿಗೆ ಒಳ್ಳೆಯ ಆಡಳಿತ ನೀಡುತ್ತದೆ ಎಂದು ಖರ್ಗೆ ಹೇಳಿದ್ದಾರೆ.

Karnataka Election 2023 Live News Updates

ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಈಗಾಗಲೇ ಏಪ್ರಿಲ್ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಮುಗಿದಿದೆ. ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ಕೂಡ ಮಾಡಲಾಗಿದೆ. ಇಂದು ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಇನ್ನು ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.

'ಒನ್ ಇಂಡಿಯಾ ಕನ್ನಡ' ಜಾಲತಾಣವು ಓದುಗರಿಗೆ ಚುನಾವಣಾ ಬೆಳವಣಿಗೆಯ ಮಾಹಿತಿ ನೀಡಲು ನಿತ್ಯವು ಹೊಸ ಲೈವ್ ಬ್ಲಾಗ್ ಆರಂಭಿಸಲಿದೆ. ನೀವು ಇಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ನಾಯಕರ ಪ್ರಚಾರ, ಭರವಸೆ, ಸಾರ್ವಜನಿಕ ಸಭೆಗಳು, ಹೇಳಿಕೆಗಳು, ಚರ್ಚೆಗಳು, ಪ್ರಚಾರದ ಸದ್ದು-ಗದ್ದಲಗಳ ಕ್ಷಣ ಕ್ಷಣದ ಮಾಹಿತಿ ತಿಳಿದುಕೊಳ್ಳಬಹುದು.

Apr 25, 2023, 7:06 pm IST

ಸ್ವಯಂಕೃತ ಅಪರಾಧದಿಂದ ಪಕ್ಷ ಬಿಟ್ಟವರಿಗೆ ನಷ್ಟ

ಸ್ವಯಂಕೃತ ಅಪರಾಧದಿಂದ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿ ಅವರು ಸೋಲುತ್ತಾರೆ. ಅವರ ವಿರುದ್ಧ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಅಮಿತ್ ಶಾ ಸಾಲು ಸಾಲು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಲಿಂಗಾಯತ ನಾಯಕರು ಪಕ್ಷ ತೊರೆದಿದ್ದರಿಂದ ಬಿಜೆಪಿಗೆ ಯಾವುದೇ ನಷ್ಟ ಉಂಟಾಗದಂತೆ ಅಮಿತ್ ಶಾ ತಂತ್ರ ರೂಪಿಸಿದ್ದಾರೆ.
Apr 25, 2023, 6:18 pm IST

ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಮನೆ ಮನೆ ಪ್ರಚಾರ ಆರಂಭಿಸಿದ್ದಾರೆ. ಕ್ಷೇತ್ರದ ಜ್ಞಾನ ಭಾರತಿ ವಾರ್ಡ್‌ನಲ್ಲಿ ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಿದರು. ನನ್ನ ಮತದಾರರೇ ನನಗೆ ದೇವರಿದ್ದಂತೆ, ಈ ಬಾರಿ ಬಿಜೆಪಿಯೇ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ನೀನು ಉತ್ತಮ ಕೆಲಸ ಮಾಡಿದ್ದೀಯಾ, ಗೆದ್ದು ಬಾ ಸಾಕು ಎಂದು ನನ್ನ ಕ್ಷೇತ್ರದ ಮತದಾರರು ಹೇಳಿದ್ದಾರೆ ಎಂದರು.
Apr 25, 2023, 6:13 pm IST

ಜನವಿರೋಧಿ ಸರ್ಕಾರ ಬದಲಾಯಿಸಿ: ಖರ್ಗೆ

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಸುಳ್ಯದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮತಯಾಚನೆ ಮಾಡಿದರು. ಬಿಜೆಪಿ ಕರ್ನಾಟಕದ ಅಸ್ಮಿತೆಯ ಮೇಲೆ ನಿರಂತರ ದಾಳಿ ನಡೆಸುತ್ತಿದೆ. 40ಪರ್ಸೆಂಟ್ ಭ್ರಷ್ಟಾಚಾರದ ಮೂಲಕ ರಾಜ್ಯವನ್ನು ಬಿಜೆಪಿ ಲೂಟಿ ಹೊಡೆಯುತ್ತಿದೆ. ರಾಜ್ಯದ ಹಿತದೃಷ್ಟಿಯಿಂದ ಇಂತಹ ಜನವಿರೋಧಿ ಸರ್ಕಾರವನ್ನು ಬದಲಾಯಿಸಿ ಜನಪರ ಸರ್ಕಾರನ್ನು ತರುವ ಅಗತ್ಯವಿದೆ ಎಂದು ಅವರು ಮನವಿ ಮಾಡಿದರು.
Apr 25, 2023, 5:46 pm IST

ನಾಳೆ ವಿವಿಧೆಡೆ ಬಿಜೆಪಿ ಪರ ಕಿಚ್ಚ ಸುದೀಪ್ ಪ್ರಚಾರ

ನಾಳೆ ವಿವಿಧೆಡೆ ಬಿಜೆಪಿ ಪರ ಕಿಚ್ಚ ಸುದೀಪ್ ಪ್ರಚಾರ
ನಾಳೆ ಬುಧವಾರ ಬಿಜೆಪಿ ಪರ ನಟ ಕಿಚ್ಚ ಸುದೀಪ್ ಮತಯಾಚನೆ ಮಾಡಲಿದ್ದಾರೆ. ಮಧ್ಯಾಹ್ನ 3ಗಂಟೆಗೆ ಮಾಯಕೊಂಡದಲ್ಲಿ ಪ್ರಚಾರದಲ್ಲಿ ಕಾರ್ಯದಲ್ಲಿ ಸುದೀಪ್ ತೊಡಗಿಕೊಳ್ಳಲಿದ್ದಾರೆ. ನಂತರ ಸಂಜೆ 4.20ಕ್ಕೆ ದಾವಣಗೆರೆ ಜಿಲ್ಲೆಯ ಕೆಲವು ಕಡೆಗಳಲ್ಲಿ ಹಾಗೂ ಬಳಿಕ ಸಂಜೆ 6.10ಕ್ಕೆ ಬಳ್ಳಾರಿ ಭಾಗದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಅವರು ಮತಯಾಚನೆ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
Apr 25, 2023, 4:32 pm IST

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲ ಉತ್ತರ ಕರ್ನಾಟಕಕ್ಕೆ ಅನ್ಯಾಯ: ಸಿಎಂ

ಕಾಂಗ್ರೆಸ್ ಅಂದರೆ ಉತ್ತರ ಕರ್ನಾಟಕ ವಿರೋಧಿ. ಅವರು ಅಧಿಕಾರಕ್ಕೆ ಬಂದಾಗಲೆಲ್ಲ ಉತ್ತರ ಕರ್ನಾಕಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಂಜುಂಡಪ್ಪ ವರದಿಯನ್ನು ಯಡಿಯೂರಪ್ಪ ಅವರು ಅನುಷ್ಠಾನ ಮಾಡಿದ ಮೇಲೆ ಉತ್ತರ ಕರ್ನಾಟಕದ ಅಭಿವೃದ್ಧಿ ಆಗುತ್ತಿದೆ. ನಾನು ಉತ್ತರ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ ಅಂತ ಘೋಷಣೆ ಮಾಡಿದ್ದೇನೆ. ಕಿತ್ತೂರು ಕರ್ನಾಟಕದ ಅಭಿವೃದ್ಧಿಗೆ 5 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇನೆ ಎಂದು ಹೇಳಿದರು.
Apr 25, 2023, 4:31 pm IST

ಜಗದೀಶ್ ಶೆಟ್ಟರ್ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ, ಅಮಿತ್ ಶಾ ಹೇಳಿದ ತಕ್ಷಣ ಜನ ಬದಲಾಗಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅಮಿತ್ ಶಾಗೂ ಕರ್ನಾಟಕ ರಾಜ್ಯಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದರು. ಅಮಿತ್ ಶಾ ಮತ್ತು ನರೇಂದ್ರ ಮೋದಿ ನೂರು ಬಾರಿ ರಾಜ್ಯಕ್ಕೆ ಬಂದರೂ ಏನೂ ಆಗಲ್ಲ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
Apr 25, 2023, 4:23 pm IST

ಸಿಟಿ ರವಿ ಮುಂದಿನ ಸಿಎಂ: ಈಶ್ವರಪ್ಪ

ಬಿಜೆಪಿಯಲ್ಲಿ ಮುಂದಿನ ಸಿಎಂ ಸಿಟಿ ರವಿ ಆಗಲಿ ಎಂದು ಬಹಿರಂಗ ಸಭೆಯಲ್ಲಿ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಘೋಷಣೆ. ಕಾಂಗ್ರೆಸ್ ಬೆನ್ನಲ್ಲೆ ಬಿಜೆಪಿಯಲ್ಲೂ ಸಿಎಂ ಸ್ಥಾನದ ಕೂಗು. ಸಭೆಯೊಂದರಲ್ಲಿ ಸಿಟಿ ರವಿ ಪರ ಈಶ್ವರಪ್ಪ ಮಾತನಾಡಿದ್ದಾರೆ.
Apr 25, 2023, 4:16 pm IST

ತೇರದಾಳ: ಬಿಜೆಪಿ ಅಭ್ಯರ್ಥಿಗಳ ಪರ ಅಮಿತ್‌ ಶಾ ಭರ್ಜರಿ ಮತ ಬೇಟೆ

ನೇಕಾರ ಮತದಾರರೇ ನಿರ್ಣಾಯಕ ಆಗಿರುವ ತೇರದಾಳ ಕ್ಷೇತ್ರದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಮಂಗಳವಾರ ಬಹಿರಂಗ ಸಭೆ ನಡೆಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ತೇರದಾಳ ಮತ ಕ್ಷೇತ್ರದ ರಬಕವಿ ಪಟ್ಟಣದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಸಿದ್ದು ಸವದಿ ಪರ ಅಮಿತ್ ಶಾ ಮತಯಾಚನೆ ಮಾಡಿದ್ದಾರೆ. ಸದ್ಯ ಕರ್ನಾಟಕ ಪ್ರವಾಸದಲ್ಲಿರುವ ಅಮಿತ್‌ ಶಾ ತೇರದಾಳ ಕ್ಷೇತ್ರಕ್ಕೆ ಆಗಮಿಸಿದ್ದು, ನೇಕಾರರ ಕೈ ಮಗ್ಗ ನೇಯುವ ಮೂಲಕ ಹಾಗೂ ಅಲ್ಲಮಪ್ರಭುವಿಗೆ ನಮಿಸುವ ಮೂಲಕ ಚುನಾವಣಾ ಪ್ರಚಾರ ಆರಂಭಿಸಿದರು. ಸಾವಿರಾರು ಕಾರ್ಯಕರ್ತರೊಂದಿಗೆ ಅಮಿತ್ ಶಾ ಬಹಿರಂಗ ಸಭೆ ನಡೆಸಿದ್ದು, ಈ ವೇಳೆ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ.
Apr 25, 2023, 4:11 pm IST

ಏ.29ಕ್ಕೆ ಪ್ರಧಾನಿ ಮೋದಿ ಆಗಮನ: 21 ಕಡೆ ರ್‍ಯಾಲಿ

ಏ.29ಕ್ಕೆ ಪ್ರಧಾನಿ ಮೋದಿ ಆಗಮನ: 21 ಕಡೆ ರ್‍ಯಾಲಿ
ಚುನಾವಣಾ ಮತ ಪ್ರಚಾರಕ್ಕಾಗಿ ಏಪ್ರಿಲ್ 29ರಂದು ಕರ್ನಾಟಕಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಬೆಂಗಳೂರು ಕೇಂದ್ರದಿಂದ ಪ್ರಧಾನಿ ನರೇಂದ್ರ ಮೋದಿ ಮತ ಶಿಕಾರಿ ಆರಂಭ. ಕೋಲಾರ, ಮೈಸೂರು ಭಾಗದಲ್ಲಿ ಸಾರ್ವಜನಿಕ ಸಮಾವೇಶ ಆಯೋಜನೆ. ಸಿದ್ದರಾಪುರ, ಶಿವಮೊಗ್ಗ, ಹಾವೇರಿ ಇನ್ನಿತರ ಭಾಗದಲ್ಲೂ ಬೃಹತ್ ಕಾರ್ಯಕ್ರಮದ ಪಟ್ಟಿ ರೆಡಿ ಮಾಡಿ ಪಿಎಂ ಕಚೇರಿಗೆ ಕಳುಹಿಸಿರುವ ರಾಜ್ಯ ಬಿಜೆಪಿ. ಹಾವೇರಿ ಬೃಹತ್ ಸಮಾವೇಶ ನಡೆಯುವ ಮೂಲಕ ಪ್ರಧಾನಮಂತ್ರಿ ರೋಡ್ ಶೋ ಕೊನೆಯಾಗಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
Apr 25, 2023, 4:02 pm IST

ಯತ್ನಾಳ್ ಸಿಎಂ ಆಗಲಿ: ಅಭಿಮಾನಿಯ ದೀಡ ನಮಸ್ಕಾರ್

ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಅವರ ಅಭಿಮಾನಿಯೊಬ್ಬ ದೇವರೆದುರು ವಿಶೇಷ ಪ್ರಾರ್ಥನೆ ಇಟ್ಟಿದ್ದಾನೆ. ಯತ್ನಾಳ್ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಲಿ ಎಂದು ದೇವಸ್ಥಾನವೊಂದರ ಆವರಣದಲ್ಲಿ ಅಭಿಮಾನಿ ದೀಡ ನಮಸ್ಕಾರ ಹಾಕಿದ ಘಟನೆ ನಡೆದಿದೆ.
Apr 25, 2023, 3:41 pm IST

ನಿಪ್ಪಾಣಿ: ಮಹಿಳಾ ಮತಗಳ ಮೇಲೆ ಕೇಂದ್ರ ಸಚಿವೆ ಕಣ್ಣು

ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಹಿಳಾ ಅಭ್ಯರ್ಥಿಯಾದ ಶಶಿಕಲಾ ಜೊಲ್ಲೆಯವರ ಪರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೆಲವೇ ಕ್ಷಣಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಇಂದು ಬೆಳಗ್ಗೆ ಧಾರವಾಡಕ್ಕೆ ಭೇಟಿ ನೀಡಿದ್ದ ಕೇಂದ್ರ ಸಚಿವೆ ಸಂಜೆ 4ಗಂಟೆಗೆ ನಿಪ್ಪಾಣಿಗೆ ಭೇಟಿ ಕೊಟ್ಟು ಅಲ್ಲಿ ಪ್ರಚಾರ ಆರಂಭಿಸಲಿದ್ದಾರೆ. ಈ ಮೂಲಕ ಮಹಿಳಾ ಮತಗಳನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸಲಿದ್ದಾರೆ.
Apr 25, 2023, 3:28 pm IST

ಕರ್ನಾಟಕದಲ್ಲಿ ಬಿಜೆಪಿಯನ್ನು ಸಂಘಟನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 27ರಂದು ರಾಜ್ಯದ 50 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲು ಮುಂದಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯದ 1680 ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸುಮಾರು 50 ಲಕ್ಷ ಬೂತ್ ಮಟ್ಟದ ಕಾರ್ಯಕರ್ತರ ಜೊತೆ ಸಂವಾದ ನಡೆಯಲಿದೆ ಎಂದು ಹೇಳಿದರು.
Apr 25, 2023, 3:23 pm IST

ಬಿಜೆಪಿ 1.5 ಲಕ್ಷ ಕೋಟಿ ರೂ.ಲೂಟಿ: ಪ್ರಿಯಾಂಕಾ ಗಾಂಧಿ

ಬಿಜೆಪಿ 1.5 ಲಕ್ಷ ಕೋಟಿ ರೂ.ಲೂಟಿ: ಪ್ರಿಯಾಂಕಾ ಗಾಂಧಿ
ರಾಜ್ಯದಲ್ಲಿ ಸರ್ಕಾರಿ ಉದ್ಯೋಗಕ್ಕೆ ಇಂತಿಷ್ಟು ಹಣ ಫಿಕ್ಸ್ ಮಾಡಲಾಗಿದೆ. ಸರ್ಕಾರ 1.5 ಲಕ್ಷ ಕೋಟಿ ರೂಪಾಯಿ ಲೂಟಿ ಮಾಡಿದೆ. ಇದು 40 ಪರ್ಸೆಂಟ್ ಸರ್ಕಾರ, ಲೂಟಿಕೋರರ ಸರ್ಕಾರ, ಶಾಲಾ ಮಕ್ಕಳ ಮೊಟ್ಟೆಯ ಹಣದಲ್ಲಿ ಅಕ್ರಮ ನಡೆದಿದೆ ಎಂದು ಪ್ರಿಯಾಂಕಾ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
Apr 25, 2023, 3:20 pm IST

ಬಿಜೆಪಿಯವರು ಎಂತಹ ನೀಚರು: ಸಿದ್ದು ಗರಂ

ಬಸವರಾಜ ಬೊಮ್ಮಾಯಿ ಅವರಂತಹ ಭ್ರಷ್ಟ ಸಿಎಂ ಈ ಮೊದಲು ಬಂದಿರಲಿಲ್ಲ. ಅವರೊಬ್ಬ ಭ್ರಷ್ಟ ಮುಖ್ಯಮಂತ್ರಿ ಎಂದು ಹೇಳಿದ್ದೇನೆ. ಅದನ್ನು ಲಿಂಗಾಯತರ ಬಗ್ಗೆ ಮಾತನಾಡಿದ್ದೇನೆ, ಅವಮಾನ ಮಾಡಿದ್ದೇನೆ ಎಂದು ತಿರುಚಿದ್ದಾರೆ. ಇವರು ಎಂತಹ ನೀಚರು. ನನಗೆ ಬಸವಣ್ಣನವರ ಬಗ್ಗೆಯು ಗೌರವವಿದೆ ಎಂದು ಇಂದು ಬೆಳಗಾವಿಯಲ್ಲಿ ಸಿದ್ದರಾಮಯ್ಯ ಮತ್ತೊಮ್ಮೆ ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದರು.
Apr 25, 2023, 2:38 pm IST

'ಸಿದ್ದರಾಮಯ್ಯಗೆ ಇಷ್ಟೊಂದು ಆಸ್ತಿ ಎಲ್ಲಿಂದ ಬಂತು?' ಸಾ.ರಾ. ಮಹೇಶ್‌ ಪ್ರಶ್ನೆ

'ಸಿದ್ದರಾಮಯ್ಯಗೆ ಇಷ್ಟೊಂದು ಆಸ್ತಿ ಎಲ್ಲಿಂದ ಬಂತು?' ಸಾ.ರಾ. ಮಹೇಶ್‌ ಪ್ರಶ್ನೆ
ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಅವರು ರೈತರು ಅಲ್ಲ, ವ್ಯಾಪರಸ್ಥರು ಅಲ್ಲ, ಉದ್ದಿಮೆದಾರರು ಅಲ್ಲ. ಅದರೂ ಇಷ್ಟೊಂದು ಆಸ್ತಿ ಸಂಪಾದನೆ ಮಾಡಲು ಹೇಗೆ ಸಾಧ್ಯ? ಇದು ಭ್ರಷ್ಟಾಚಾರದಿಂದ ಅಲ್ಲದೇ ಬೇರೆ ಎಲ್ಲಿಂದ ಬಂತು ಎಂಬುದನ್ನು ಅವರೇ ಬಹಿರಂಗ ಪಡಿಸಲಿ ಎಂದು ಸಾ.ರಾ ಮಹೇಶ್‌ ಪ್ರಶ್ನಿಸಿದ್ದಾರೆ.
Apr 25, 2023, 2:06 pm IST

ಧಾರವಾಡದಲ್ಲಿ ಅಮೃತ ದೇಸಾಯಿ ಪರ ಬೊಮ್ಮಾಯಿ ಪ್ರಚಾರ

ಧಾರವಾಡದಲ್ಲಿ ಅಮೃತ ದೇಸಾಯಿ ಪರ ಬೊಮ್ಮಾಯಿ ಪ್ರಚಾರ
ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಇಂದು ಅಮೃತ ದೇಸಾಯಿ ಪರ ಪ್ರಚಾರ ಮಾಡಿದರು. ಈ ವೇಳೆ ಮಾತನಾಡಿದ ಅವರು, 'ಕಾಂಗ್ರೆಸ್ ನವರು ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಅಂದ್ರು, ನಾವು ಮೂವತ್ತು ಕೆಜಿ ಕೊಡ್ತಾಯಿದ್ವಿ. ಚುನಾವಣೆ ಆದ್ಮೇಲೆ ಅದನ್ನು ಕಡಿಮೆ ಮಾಡಿದರು. ಈಗಲೂ ಅದನ್ನೆ ಮಾಡ್ತಾರೆ. ಆದರೆ ಜನ ತುಂಬಾ ಬುದ್ಧಿವಂತರಿದ್ದಾರೆ. ಅವರ ಬಾಣ ಅವರಿಗೆ ತಿರಿಗಿಸಿ ಕಳಿಸ್ತಾರೆ' ಎಂದು ಬೊಮ್ಮಾಯಿ ಹೇಳಿದರು.
Apr 25, 2023, 1:43 pm IST

ಚಿಕ್ಕಪೇಟೆ ಕಾಂಗ್ರೆಸ್ ಬಂಡಾಯ ಶಮನ!

ಚಿಕ್ಕಪೇಟೆ ಕಾಂಗ್ರೆಸ್ ಬಂಡಾಯ ಶಮನ!
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಬಂಡಾಯ ಶಮನ ಮಾಡುವಲ್ಲಿ ಪಕ್ಷದ ಮುಖಂಡರು ಯಶಸ್ವಿ ಆಗಿದ್ದು, ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದ ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಇದೀಗ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ. ಗಂಗಾಂಭಿಕೆ ಮಲ್ಲಿಕಾರ್ಜುನ್ ಅವರು ಸೌತ್ ಎಂಡ್ ಸರ್ಕಲ್‌ನಲ್ಲಿರುವ ಚುನಾವಣಾ ಅಧಿಕಾರಿಗಳ ಕಚೇರಿಯಲ್ಲಿ ನಾಮಪತ್ರವನ್ನು ತಮ್ಮ ಏಜೆಂಟ್ ಮೂಲಕ ವಾಪಸ್ ಪಡೆದುಕೊಂಡರು. ಕಾಂಗ್ರೆಸ್‌ ಟಿಕೆಟ್ ಸಿಗದ ಅಸಮಾಧಾನದಿಂದ ಪಕ್ಷೇತರವಾಗಿ ಮಾಜಿ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದರು.
Apr 25, 2023, 1:37 pm IST

ಮುಸ್ಲಿಮರ 2ಬಿ ಮೀಸಲಾತಿ ವಿಚಾರ: ಕೆ.ಎಸ್‌.ಈಶ್ವರಪ್ಪ ಹೇಳಿದ್ದೇನು?

ಮುಸ್ಲಿಮರ 2ಬಿ ಮೀಸಲಾತಿ ಸರ್ಕಾರದ ರದ್ದು ಆದೇಶಕ್ಕೆ ಸುಪ್ರೀಂಕೋರ್ಟ್‌ ತಡೆಯೊಡ್ಡಿದೆ ಅಷ್ಟೇ, ರದ್ದು ಮಾಡಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಾಡಿ ತಡೆಯನ್ನು ತೆರವು ಮಾಡಿಸುತ್ತೇವೆ. ಕೊನೆಗೆ ನ್ಯಾಯಬದ್ಧವಾಗಿ ತೀರ್ಮಾನ ಬರಲಿದೆ ಎಂಬ ವಿಶ್ವಾಸ ಇದೆ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪನವರು ಹೇಳಿದರು.
Apr 25, 2023, 1:37 pm IST

ದಕ್ಷಿಣ ಕರ್ನಾಟಕದಲ್ಲಿ ಪ್ರಿಯಾಂಕಾ ಉತ್ತರದಲ್ಲಿ ಅಮಿತ್ ಶಾ

ದಕ್ಷಿಣ ಕರ್ನಾಟಕದಲ್ಲಿ ಪ್ರಿಯಾಂಕಾ ಉತ್ತರದಲ್ಲಿ ಅಮಿತ್ ಶಾ
ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ರಾಜ್ಯದಲ್ಲಿ ತಮ್ಮ ಪಕ್ಷಗಳ ಪರ ಪ್ರಚಾರ ಮಾಡಿದರು. ಪ್ರಿಯಾಂಕಾ ಗಾಂಧಿ ದಕ್ಷಿಣ ಕರ್ನಾಟಕದತ್ತ ಗಮನ ಹರಿಸಿದರೆ, ಶಾ ಉತ್ತರ ಕರ್ನಾಟಕ ಪ್ರದೇಶದಲ್ಲಿ ಪ್ರಚಾರ ಮಾಡಿದ್ದು ಮತದಾರರು ಯಾರ ಕೈ ಹಿಡಿಯುತ್ತಾರೆ ಕಾದು ನೋಡಬೇಕಿದೆ. ಆಂತರಿಕ ಸಮೀಕ್ಷೆಗಳು ಮತ್ತು ಬಿಜೆಪಿಯಲ್ಲಿನ ಬಂಡಾಯದಿಂದ ಉತ್ತೇಜಿತವಾಗಿರುವ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿದೆ.
Apr 25, 2023, 1:22 pm IST

ಶೆಟ್ಟರ್ ವಿರುದ್ಧ 35 ಸಾವಿರ ಅಂತರದಲ್ಲಿ ಗೆಲ್ಲಬೇಕು: ಅಮಿತ್‌ ಶಾ ಸೂಚನೆ

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಲ್ಲಿ ನಾವು ಯಾವುದೇ ತಂತ್ರಗಾರಿಕೆ ಮಾಡುವ ಅವಶ್ಯಕತೆ ಇಲ್ಲ. ಇಲ್ಲಿನ ಜನರು, ಕಾರ್ಯಕರ್ತರು, ಮತದಾರರೇ ನಿರ್ಧಾರ ಮಾಡುತ್ತಾರೆ. ಕ್ಷೇತ್ರದಲ್ಲಿ ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಗೆಲುವು ಸಾಧಸಲಿದೆ ಎಂದು ಹುಬ್ಬಳ್ಳಿಯಲ್ಲಿ ಶಾಸಕ ಅರವಿಂದ ಬೆಲ್ಲದ್‌ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸೆಂಟ್ರಲ್ ಕ್ಷೇತ್ರದಲ್ಲಿ ಯಾವ ವಿಚಾರವೂ ಕೆಲಸ ಮಾಡಲ್ಲ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ 35 ಸಾವಿರ ಲೀಡ್ ಆಗಬೇಕು ಅಂತಾ ಅಮಿತ್ ಶಾ ಹೇಳಿದ್ದಾರೆ.ಹೀಗಾಗಿ ಕನಿಷ್ಠ ಪಕ್ಷ 35 ರಿಂದ 40 ಸಾವಿರ ಅಂತರದಲ್ಲಿ ಮಹೇಶ ಟೆಂಗಿನಕಾಯಿ ಗೆಲ್ಲುತ್ತಾರೆ ಎಂದುಅರವಿಂದ ಬೆಲ್ಲದ್ ಹೇಳಿದ್ದಾರೆ.
Apr 25, 2023, 12:44 pm IST

ಕರ್ನಾಟಕ ಚುನಾವಣೆ ಕಾಂಗ್ರೆಸ್‌ಗೆ ಮಾತ್ರವಲ್ಲ, ಇಡೀ ದೇಶಕ್ಕೆ ಮಹತ್ವದ್ದಾಗಿದೆ -ಕೆ ಸಿ ವೇಣುಗೋಪಾಲ್

ಕರ್ನಾಟಕ ಚುನಾವಣೆ ಕಾಂಗ್ರೆಸ್‌ಗೆ ಮಾತ್ರವಲ್ಲ, ಇಡೀ ದೇಶಕ್ಕೆ ಮಹತ್ವದ್ದಾಗಿದೆ -ಕೆ ಸಿ ವೇಣುಗೋಪಾಲ್
2024ರ ಲೋಕಸಭೆ ಚುನಾವಣೆಯಲ್ಲಿ ಚುನಾವಣಾ ಪೂರ್ವ ಮತ್ತು ನಂತರದ ಮೈತ್ರಿಗೆ ಕಾಂಗ್ರೆಸ್ ಮುಕ್ತವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಸಂಘಟನೆ), ಕೆ ಸಿ ವೇಣುಗೋಪಾಲ್ ಅವರು ಹೇಳಿದ್ದಾರೆ. 'ಪ್ರತಿ ರಾಜಕೀಯ ಪಕ್ಷಕ್ಕೂ ಪ್ರತಿ ಚುನಾವಣೆ ಮಹತ್ವದ್ದಾಗಿರುತ್ತದೆ. ಆದರೆ, ಕರ್ನಾಟಕ ಚುನಾವಣೆ ಕಾಂಗ್ರೆಸ್‌ಗೆ ಮಾತ್ರವಲ್ಲ, ಇಡೀ ರಾಷ್ಟ್ರಕ್ಕೆ ಅತ್ಯಂತ ಮಹತ್ವದ್ದಾಗಿದೆ' ಎಂದರು.
Apr 25, 2023, 11:50 am IST

ಬಿಜೆಪಿ ಅಭ್ಯರ್ಥಿಗೆ ಮೇಕೆ ಮರಿ ಗಿಫ್ಟ್ ಕೊಟ್ಟ ಕಾರ್ಯಕರ್ತರು

ಬಿಜೆಪಿ ಅಭ್ಯರ್ಥಿಗೆ ಮೇಕೆ ಮರಿ ಗಿಫ್ಟ್ ಕೊಟ್ಟ ಕಾರ್ಯಕರ್ತರು
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕಸವನಹಳ್ಳಿ ಗ್ರಾಮದಲ್ಲಿ ಪ್ರಚಾರಕ್ಕೆ ತೆರಳಿದ್ದ ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಅವರಿಗೆ ರಾಮಚಂದ್ರ ಎಂಬ ಕಾರ್ಯಕರ್ತ ಮೇಕೆ ಮರಿ ಗಿಫ್ಟ್​​ ನೀಡಿದ್ದಾರೆ. ಇದರಿಂದ ಸಂತಸಗೊಂಡ ಅಭ್ಯರ್ಥಿ ಪೂರ್ಣಿಮಾ ಅವರು ಮೇಕೆ ಮರಿಯನ್ನು ತಮ್ಮ ಫಾರ್ಮ ಹೌಸ್‌ನಲ್ಲಿ ಸಾಕುವುದಾಗಿ ಹೇಳಿದರು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜಕೀಯ ನಾಯಕರು ಜನರಿಗೆ ದುಡ್ಡು, ಗಿಫ್ಟ್​​ಗಳನ್ನು ಕೊಡುವುದು ಸಾಮಾನ್ಯವಾಗಿತ್ತು. ಆದರೆ ಈ ಬಾರಿ ಬದಲಾಗಿದ್ದು, ಜನರೇ ರಾಜಕಾರಣಿಗಳಿಗೆ ದುಡ್ಡು ಮತ್ತು ಗಿಫ್ಟ್​ಗಳನ್ನು ನೀಡುತ್ತಿದ್ದಾರೆ.
Apr 25, 2023, 11:42 am IST

ಚಾಮುಂಡಿ ದೇವಿಯ ದರ್ಶನ ಪಡೆದ ಹೆಚ್‌ಡಿ ಕುಮಾರಸ್ವಾಮಿ

ಚಾಮುಂಡಿ ದೇವಿಯ ದರ್ಶನ ಪಡೆದ ಹೆಚ್‌ಡಿ ಕುಮಾರಸ್ವಾಮಿ
ಸೋಮವಾರವಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಇಂದು ಪ್ರಚಾರಕ್ಕೆ ಮುಂದಾಗಿದ್ದಾರೆ. ರಾಜ್ಯ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು ಜೆಡಿಎಸ್ ಬಿಡುವಿಲ್ಲದೆ ನಿರಂತರ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಮತಬೇಟೆಗೂ ಮುನ್ನ ಮೈಸೂರಿನ ಚಾಮುಂಡಿ ದೇವಿಯ ದರ್ಶನವನ್ನು ಹೆಚ್‌ಡಿ ಕುಮಾರಸ್ವಾಮಿ ಪಡೆದರು. ಅನಾರೋಗ್ಯದ ನಡುವೆಯೂ ಹೆಚ್‌ಡಿ ಕುಮಾರಸ್ವಾಮಿ ಇಂದು ಮೂರು ಕ್ಷೇತ್ರಗಳಲ್ಲಿ ಹೆಚ್‌ಡಿಕೆ ಪ್ರಚಾರ ಮಾಡಲಿದ್ದಾರೆ.
Apr 25, 2023, 11:41 am IST

ನನ್ನ ಆತ್ಮಕ್ಕೆ ಶಾಂತಿ ಸಿಗುತ್ತೆ ನನ್ನನ್ನು ಸೋಲಿಸಿದವರಿಗೆ ಕಣ್ಣೀರು ಹಾಕಿಸಿ: ದೇವೇಗೌಡ

ತುಮಕೂರು ಜಿಲ್ಲೆಯ ಕೆಲ ಮುಖಂಡರು, ಮಾಜಿ ಶಾಸಕರು ನನ್ನನ್ನು ಬಲಿಪಶು ಮಾಡಿದ್ದು ಈ ಬಾರಿ ತಕ್ಕ ಪಾಠ ಕಲಿಸಿ. ನಾನು ಬೇಡವೆಂದರೂ ಕರೆತಂದು ಲೋಕಸಭೆಯ ಚುನಾವಣೆಯಲ್ಲಿ ನನ್ನನ್ನು ಸೋಲಿಸಿ ಕಣ್ಣೀರು ಹಾಕಿಸಿದವರಿಗೂ ಕಣ್ಣೀರು ಹಾಕಿಸಬೇಕು. ಆಗಲೇ ನನ್ನ ಆತ್ಮಕ್ಕೆ ಶಾಂತಿಯೆಂದು ಮಾಜಿ ಪ್ರಧಾನಿ ದೇವೇಗೌಡರು ಕಣ್ಣೀರು ಹಾಕಿದ್ದಾರೆ.
Apr 25, 2023, 11:40 am IST

ಮಾಜಿ ಸಚಿವ ಡಿ.ಬಿ.ಇನಾಂದಾರ್ ನಿಧನ

ಮಾಜಿ ಸಚಿವ ಡಿ.ಬಿ.ಇನಾಂದಾರ್ ಇಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 74 ವರ್ಷದ ಇನಾಮ್‌ದಾರ್ ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕಿತ್ತೂರು ಮತಕ್ಷೇತ್ರದಿಂದ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ದೇವರಾಜ ಅರಸು, ಎಸ್‌.ಎಂ. ಕೃಷ್ಣ, ಎಸ್‌.ಬಂಗಾರಪ್ಪ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ್ದರು.
Apr 25, 2023, 11:30 am IST

ಡಿಕೆ ಶಿವಕುಮಾರ್ ಪರವಾಗಿ ಮತಬೇಟೆಗಿಳಿದ ಪತ್ನಿ ಉಷಾ

ಡಿಕೆ ಶಿವಕುಮಾರ್ ಪರವಾಗಿ ಮತಬೇಟೆಗಿಳಿದ ಪತ್ನಿ ಉಷಾ
ಕನಕಪುರ ಕ್ಷೇತ್ರ ರಾಜ್ಯ ಚುನಾವಣೆಯಲ್ಲಿ ಹೆಚ್ಚು ಸುದ್ದಿಯಲ್ಲಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕನಕಪುರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಈ ನಡುವೆ ಅವರ ಪತ್ನಿ ಉಷಾ ಡಿಕೆ ಶಿವಕುಮಾರ್ ಪರ ಮತಯಾಚನೆ ಮಾಡಿದರು. ಉಷಾ ಅವರು ಇಂದು ವಾರ್ಡ್‌ಗಳಿಗೆ ತೆರಳಿ ಡಿಕೆ ಶಿವಕುಮಾರ್ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.
Apr 25, 2023, 11:09 am IST

ಬಿಜೆಪಿಗೆ ಸ್ಪಷ್ಟ ಬಹುಮತದಿಂದ ಜಯ ಖಚಿತ- ಬಿಎಸ್‌ವೈ

ಬಿಜೆಪಿಗೆ ಸ್ಪಷ್ಟ ಬಹುಮತದಿಂದ ಜಯ ಖಚಿತ- ಬಿಎಸ್‌ವೈ
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದ್ದು ಯಾರ ಸಹಾಯವೂ ಇಲ್ಲದೆ ಸರ್ಕಾರ ರಚನೆ ಮಾಡುವುದಾಗಿ ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಿಕ್ಕೆ ಬರುವುದಾಗಿ ತಿಳಿಸಿದ್ದಾರೆ.
Apr 25, 2023, 11:01 am IST

ಮಂಗಳೂರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಮಾತು

ಏಪ್ರಿಲ್ 25 ರಂದು ಮಂಗಳೂರಿನ ಸುಳ್ಯದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಒಬ್ಬ ಸ್ವಾಮಿಯಾಗಿ ಸಮಾಜ ಸೇವೆ ಮಾಡಿ ಎಂದಿದ್ದೆವು. ಅವರು ಸಿಎಂ ಆಗಿ ಬೆಂಗಳೂರಿನಿಂದ ವಾರಣಾಸಿಗೆ ಒಂದು ರೈಲನ್ನು ಬಿಡುಗಡೆ ಮಾಡಿದರು. ಆದರೆ ನಾನು ಸಚಿವ ಆಗಿದ್ದಾಗಲೇ ಮೂವತ್ತಕ್ಕೂ ಅಧಿಕ ರೈಲು ಬಿಟ್ಟಿದೆ ಎಂದು ಖರ್ಗೆ ಕುಟುಕಿದ್ದಾರೆ.
Apr 25, 2023, 10:35 am IST

ಧಾರವಾಡಕ್ಕಿಂದು ಸ್ಮೃತಿ ಇರಾನಿ- ಇಂದಿನ ಕಾರ್ಯಕ್ರಮಗಳೇನು?

ಧಾರವಾಡಕ್ಕಿಂದು ಸ್ಮೃತಿ ಇರಾನಿ- ಇಂದಿನ ಕಾರ್ಯಕ್ರಮಗಳೇನು?
ಲಿಂಗಾಯತ ಮತಗಳನ್ನು ಸೆಳೆಯಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿದೆ. ಇದಕ್ಕಾಗಿ ಕೇಂದ್ರ ನಾಯಕರನ್ನು ಹುಬ್ಬಳ್ಳಿ-ಧಾರವಾಡದತ್ತ ಒಬ್ಬರಾದ ನಂತರ ಒಬ್ಬರನ್ನು ಮತಪ್ರಚಾರಕ್ಕಾಗಿ ಕರೆತರಲಾಗುತ್ತಿದೆ. ಇದರ ಬೆನ್ನಲ್ಲೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಇಂದು ಧಾರವಾಡದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಧಾರವಾಡದಲ್ಲಿ ಬೆಳಿಗ್ಗೆ 11.45ಕ್ಕೆ ಮಹಿಳಾ ಸಭೆ ಮತ್ತು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಬಳಿಕ ಸಂಜೆ ನಾಲ್ಕು ಗಂಟೆಗೆ ನಿಪ್ಪಾಣಿಯ ವಿಎಸ್‌ಎಂ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಸ್ಮೃತಿ ಇರಾನಿ ಮಾತನಾಡಲಿದ್ದಾರೆ.
Apr 25, 2023, 10:26 am IST

42 ಕ್ಷೇತ್ರಗಳಿಗೆ ನಾನು ಭೇಟಿ ನೀಡುತ್ತೇನೆ- ಹೆಚ್‌ಡಿಡಿ ಕಿಚ್ಚಿನ ಮಾತು

ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ, '42 ಕ್ಷೇತ್ರಗಳಿಗೆ ನಾನು ಭೇಟಿ ನೀಡುತ್ತೇನೆ' ಎಂದು ಕಿಚ್ಚಿನ ಮಾತನಾಡಿದ್ದಾರೆ. ಕುಮಾರಣ್ಣ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 42-45 ಕುಮಾರಸ್ವಾಮಿ ಪ್ರಚಾರ ಮಾಡ್ತಾರೆ. ಮೇ 8ವರೆಗೆ ನಿರಂತರ ಕಾರ್ಯಕ್ರಮಗಳಿವೆ. ನಾನೂ ಕೂಡ ಬಹುತೇಕ ಕ್ಷೇತ್ರಗಳಲ್ಲಿ ಭಾಗವಹಿಸುತ್ತೇನೆ' ಎಂದರು.
READ MORE

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+