ಶುಕ್ರವಾರ ರಾಹುಲ್ ಗಾಂಧಿಯಿಂದ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ
ಬೆಂಗಳೂರು, ಏಪ್ರಿಲ್ 26: ನಾಳೆ ಅಂದರೆ (ಏಪ್ರಿಲ್ 27, ಶುಕ್ರವಾರ) ಕಾಂಗ್ರೆಸ್ ಪಕ್ಷದ ಬಹುನಿರೀಕ್ಷಿತ ಪ್ರಣಾಳಿಕೆ ಬಿಡುಗಡೆಯಾಗಲಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ.
ಕಡಲ ತಡಿಯ ಮಂಗಳೂರಿನ ಟಿಎಂಎ ಪೈ ಕನ್ವೆನ್ಷನ್ ಹಾಲ್ ನಲ್ಲಿ ಈ ಸಂಬಂಧ ಸಮಾರಂಭ ನಿಗದಿಯಾಗಿದ್ದು, ಸಾವಿರಾರು ಜನರ ಸಮ್ಮುಖದಲ್ಲಿ ಪ್ರಾಣಾಳಿಕೆ ಬಿಡುಗಡೆಯಾಗಲಿದೆ.
ಕಾಂಗ್ರೆಸ್ ನಿಂದ 35 ಪ್ರತ್ಯೇಕ ಪ್ರಣಾಳಿಕೆ ಏಕೆ? ಇಲ್ಲಿದೆ ಉತ್ತರ
'ಅಭಿವೃದ್ಧಿಗಾಗಿ ಕಾಂಗ್ರೆಸ್' ಹೆಸರಿನಲ್ಲಿ ಪ್ರಣಾಳಿಕೆ ರೂಪಿಸಲಾಗಿದ್ದು ಬೆಳಿಗ್ಗೆ 9.45ಕ್ಕೆ ಪ್ರಣಾಳಿಕೆ ಬಿಡುಗಡೆಯಾಗಲಿದೆ.
After delivering 5 years of Stable, Inclusive development, we pledge to continue our efforts to build a 'Nava Karnataka'
— Karnataka Congress (@INCKarnataka) April 25, 2018
Congress President Shri @RahulGandhi will be launching our manifesto 'Congress For Progress' in Mangaluru, on Friday 27th April, 2018#CongressMathomme pic.twitter.com/aabglpSFiG
2013ರ ಪ್ರಣಾಳಿಕೆಯಲ್ಲಿ ನಾವು 165 ಭರವಸೆಗಳನ್ನು ನೀಡಿದ್ದೆವು ಇದರಲ್ಲಿ ಹೆಚ್ಚಿನ ಭರವಸೆಗಳನ್ನೆಲ್ಲಾ ಈಡೇರಿಸಿದ್ದೇವೆ. ನಮ್ಮದು ನುಡಿದಂತೆ ನಡೆದ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾ ಓಡಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಈ ಬಾರಿಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಯಾವೆಲ್ಲಾ ಅಂಶಗಳು ಇವೆ ಎಂಬ ಬಗ್ಗೆ ಕುತೂಹಲ ಮೂಡಿದೆ.