ಸಿಇಟಿ 2017 : ಪ್ರತೀಕ್ ಹಾಗೂ ರಕ್ಷಿತ ಟಾಪರ್ಸ್
ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಯುವ 2017ನೇ ಸಾಲಿನ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಪ್ರತೀಕ್ ಇಂಜಿನಿಯರಿಂಗ್ ನಲ್ಲಿ ಹಾಗೂ ರಕ್ಷಿತಾ ಹೋಮಿಯೋಪತಿ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
ಬೆಂಗಳೂರು, ಮೇ 30: 2017ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಮಂಗಳವಾರ(ಮೇ 30) ಮಧ್ಯಾಹ್ನ 11.15 ಗಂಟೆ ಸುಮಾರಿಗೆ ಪ್ರಕಟಿಸಿದರು. ಪ್ರತೀಕ್ ಅವರು ಇಂಜಿನಿಯರಿಂಗ್ ಹಾಗೂ ರಕ್ಷಿತಾ ಅವರು ಹೋಮಿಯೋಪತಿ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಟಾಪರ್ ಗಳ ಪಟ್ಟಿ ಇಲ್ಲಿದೆ.
ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಯುವ 2017ನೇ ಸಾಲಿನ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ಮೇ 2 ಹಾಗೂ 3ರಂದು ನಡೆಸಲಾಗಿತ್ತು. ಬೆಂಗಳೂರಿನ 82 ಸೇರಿ ರಾಜ್ಯಾದ್ಯಾಂತ 404 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ 94,415 ವಿದ್ಯಾರ್ಥಿ ಹಾಗೂ 90,996 ವಿದ್ಯಾರ್ಥಿನಿಯರು ಸೇರಿದಂತೆ 1,85,411 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.[ಸಿಇಟಿ 2017 ಫಲಿತಾಂಶ ಪ್ರಕಟ]
ವಿವಿಧ ವಿಭಾಗಗಳಲ್ಲಿ ಟಾಪರ್ ಗಳ ಪಟ್ಟಿ ಮುಂದೆ ಓದಿ...
ಸರ್ಕಾರದಿಂದ ಉಚಿತ ಶಿಕ್ಷಣ : 'ಸಿಇಟಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಐದು ಜನರಿಗೆ ಅವರ ಕೋರ್ಸ್ ಮುಗಿಯುವವರೆಗೆ ಸರ್ಕಾರದಿಂದ ಉಚಿತ ಶಿಕ್ಷಣ ನೀಡಲಾಗುತ್ತದೆ' ಎಂದು ಕರ್ನಾಟಕ ಸರ್ಕಾರ 2016ರಲ್ಲೇ ಘೋಷಿಸಿದೆ. (ಒನ್ಇಂಡಿಯಾ ಸುದ್ದಿ)

ಇಂಜಿನಿಯರಿಂಗ್
1- ಪ್ರತೀಕ್ ಎಸ್ ನಾಯಕ್, ಎಕ್ಸ್ ಪರ್ಟ್ ಪಿಯುಕಾಲೇಜ್ ಮಂಗಳೂರು
2-ಸುಮನ್ ಆರ್ ಹೆಗಡೆ, vvs ಸರ್ದಾರ್ ಪಟೇಲ್ ಕಾಲೇಜ್ ,ಬೆಂಗಳೂರು
3- ಅನಿರುದ್ಧ್ ಆರ್.ವಿ.ಪಿಯು ಕಾಲೇಜ್ ಬೆಂಗಳೂರು

ISMH ಕೋರ್ಸ್
1- ರಕ್ಷಿತಾ ರಮೇಶ್(ಚಿತ್ರದಲ್ಲಿ), ಭಗವಾನ್ ಮಹಾವೀರ್ ಜೈನ್ ಕಾಲೇಜ್ ಬೆಂಗಳೂರು.
2 - ವಿಕ್ಟರ್ ಥಾಮಸ್ , ವೈಷ್ನವಿ ಪಿಯು ಕಾಲೇಜ್ ದಾವಣಗೆರೆ
3- ನಾಸಿರ್ ಹುಸೇನ್ , ಇಂಡಿಪೆಂಡೆಂಟ್ ಪಿಯು ಕಾಲೇಜ್

Bsc ಕೋರ್ಸ್
1- ರಕ್ಷಿತಾ ರಮೇಶ್(ತಾಯಿ ಜತೆಗಿನ ಚಿತ್ರ), ಮಹಾವೀರ ಜೈನ್ ಕಾಲೇಜ್ ಬೆಂಗಳೂರು
2- ಸಂಕೀರ್ಥ ಸದಾನಂದ , ಡೆಲ್ಲಿ ಪಬ್ಲಿಕ್ ಸ್ಕೂಲ್ ಬೆಂಗಳೂರು
3- ಅನನ್ಯಾ, ಮಹಾವೀರ್ ಜೈನ್ ಕಾಲೇಜ್ ಬೆಂಗಳೂರು

BparmaPHARMA ಕೋರ್ಸ್
1- ಪ್ರತೀಕ್ ಎಸ್ ನಾಯಕ್, ಎಕ್ಸ್ ಪರ್ಟ್ ಪಿಯು ಕಾಲೇಜ್, ಮಂಗಳೂರು
2- ಸುಮನ್ ಆರ್ ಹೆಗಡೆ, ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜ್ ಬೆಂಗಳೂರು
3- ಧ್ರುವ ಶ್ರೀರಾಮ್, ದೀಕ್ಷಾ ಪಿಯು ಕಾಲೇಜ್ ಬೆಂಗಳೂರು.
****
BVS ಕೋರ್ಸ್
1- ವಿಕ್ಟೋರಿ ಥಾಮಸ್, ವೈಷ್ಣವಿ ಚೇತನ ಪಿಯು ಕಾಲೇಜ್ , ದಾವಣಗೆರೆ
2- ರಕ್ಷಿತಾ ರಮೇಶ್, ಮಹಾವೀರ್ ಜೈನ್ ಕಾಲೇಜ್ ,ಬೆಂಗಳೂರು
3- ಭರತ್ ಕುಮಾರ್, ಆಳ್ವಾಸ್ ಪಿಯು ಕಾಲೇಜ್ ಮಂಗಳೂರು
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications