ಸಿಇಟಿ 2017 : ಪ್ರತೀಕ್ ಹಾಗೂ ರಕ್ಷಿತ ಟಾಪರ್ಸ್
ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಯುವ 2017ನೇ ಸಾಲಿನ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಪ್ರತೀಕ್ ಇಂಜಿನಿಯರಿಂಗ್ ನಲ್ಲಿ ಹಾಗೂ ರಕ್ಷಿತಾ ಹೋಮಿಯೋಪತಿ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
ಬೆಂಗಳೂರು, ಮೇ 30: 2017ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಮಂಗಳವಾರ(ಮೇ 30) ಮಧ್ಯಾಹ್ನ 11.15 ಗಂಟೆ ಸುಮಾರಿಗೆ ಪ್ರಕಟಿಸಿದರು. ಪ್ರತೀಕ್ ಅವರು ಇಂಜಿನಿಯರಿಂಗ್ ಹಾಗೂ ರಕ್ಷಿತಾ ಅವರು ಹೋಮಿಯೋಪತಿ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಟಾಪರ್ ಗಳ ಪಟ್ಟಿ ಇಲ್ಲಿದೆ.
ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಯುವ 2017ನೇ ಸಾಲಿನ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ಮೇ 2 ಹಾಗೂ 3ರಂದು ನಡೆಸಲಾಗಿತ್ತು. ಬೆಂಗಳೂರಿನ 82 ಸೇರಿ ರಾಜ್ಯಾದ್ಯಾಂತ 404 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ 94,415 ವಿದ್ಯಾರ್ಥಿ ಹಾಗೂ 90,996 ವಿದ್ಯಾರ್ಥಿನಿಯರು ಸೇರಿದಂತೆ 1,85,411 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.[ಸಿಇಟಿ 2017 ಫಲಿತಾಂಶ ಪ್ರಕಟ]
ವಿವಿಧ ವಿಭಾಗಗಳಲ್ಲಿ ಟಾಪರ್ ಗಳ ಪಟ್ಟಿ ಮುಂದೆ ಓದಿ...
ಸರ್ಕಾರದಿಂದ ಉಚಿತ ಶಿಕ್ಷಣ : 'ಸಿಇಟಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಐದು ಜನರಿಗೆ ಅವರ ಕೋರ್ಸ್ ಮುಗಿಯುವವರೆಗೆ ಸರ್ಕಾರದಿಂದ ಉಚಿತ ಶಿಕ್ಷಣ ನೀಡಲಾಗುತ್ತದೆ' ಎಂದು ಕರ್ನಾಟಕ ಸರ್ಕಾರ 2016ರಲ್ಲೇ ಘೋಷಿಸಿದೆ. (ಒನ್ಇಂಡಿಯಾ ಸುದ್ದಿ)

ಇಂಜಿನಿಯರಿಂಗ್
1- ಪ್ರತೀಕ್ ಎಸ್ ನಾಯಕ್, ಎಕ್ಸ್ ಪರ್ಟ್ ಪಿಯುಕಾಲೇಜ್ ಮಂಗಳೂರು
2-ಸುಮನ್ ಆರ್ ಹೆಗಡೆ, vvs ಸರ್ದಾರ್ ಪಟೇಲ್ ಕಾಲೇಜ್ ,ಬೆಂಗಳೂರು
3- ಅನಿರುದ್ಧ್ ಆರ್.ವಿ.ಪಿಯು ಕಾಲೇಜ್ ಬೆಂಗಳೂರು

ISMH ಕೋರ್ಸ್
1- ರಕ್ಷಿತಾ ರಮೇಶ್(ಚಿತ್ರದಲ್ಲಿ), ಭಗವಾನ್ ಮಹಾವೀರ್ ಜೈನ್ ಕಾಲೇಜ್ ಬೆಂಗಳೂರು.
2 - ವಿಕ್ಟರ್ ಥಾಮಸ್ , ವೈಷ್ನವಿ ಪಿಯು ಕಾಲೇಜ್ ದಾವಣಗೆರೆ
3- ನಾಸಿರ್ ಹುಸೇನ್ , ಇಂಡಿಪೆಂಡೆಂಟ್ ಪಿಯು ಕಾಲೇಜ್

Bsc ಕೋರ್ಸ್
1- ರಕ್ಷಿತಾ ರಮೇಶ್(ತಾಯಿ ಜತೆಗಿನ ಚಿತ್ರ), ಮಹಾವೀರ ಜೈನ್ ಕಾಲೇಜ್ ಬೆಂಗಳೂರು
2- ಸಂಕೀರ್ಥ ಸದಾನಂದ , ಡೆಲ್ಲಿ ಪಬ್ಲಿಕ್ ಸ್ಕೂಲ್ ಬೆಂಗಳೂರು
3- ಅನನ್ಯಾ, ಮಹಾವೀರ್ ಜೈನ್ ಕಾಲೇಜ್ ಬೆಂಗಳೂರು

BparmaPHARMA ಕೋರ್ಸ್
1- ಪ್ರತೀಕ್ ಎಸ್ ನಾಯಕ್, ಎಕ್ಸ್ ಪರ್ಟ್ ಪಿಯು ಕಾಲೇಜ್, ಮಂಗಳೂರು
2- ಸುಮನ್ ಆರ್ ಹೆಗಡೆ, ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜ್ ಬೆಂಗಳೂರು
3- ಧ್ರುವ ಶ್ರೀರಾಮ್, ದೀಕ್ಷಾ ಪಿಯು ಕಾಲೇಜ್ ಬೆಂಗಳೂರು.
****
BVS ಕೋರ್ಸ್
1- ವಿಕ್ಟೋರಿ ಥಾಮಸ್, ವೈಷ್ಣವಿ ಚೇತನ ಪಿಯು ಕಾಲೇಜ್ , ದಾವಣಗೆರೆ
2- ರಕ್ಷಿತಾ ರಮೇಶ್, ಮಹಾವೀರ್ ಜೈನ್ ಕಾಲೇಜ್ ,ಬೆಂಗಳೂರು
3- ಭರತ್ ಕುಮಾರ್, ಆಳ್ವಾಸ್ ಪಿಯು ಕಾಲೇಜ್ ಮಂಗಳೂರು
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications