Karntaka Budget 2025: ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಭರ್ಜರಿ ಅನುದಾನ ಹಂಚಿಕೆ, ಏನೆಲ್ಲ ಘೋಷಣೆ ಆಗಿದೆ!
ಬೆಂಗಳೂರು, ಮಾರ್ಚ್ 07: ಬಹುನಿರೀಕ್ಷೆ ಕರ್ನಾಟಕ ಬಜೆಟ್ ಮಂಡನೆಗೆ ಕ್ಷಣಗಣನೇ ಶುರುವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 16ನೇ ಮಂಡನೆ ಮಾಡಲಿದ್ದಾರೆ. ಅಪಾರ ನಿರೀಕ್ಷೆಗಳು ಇದ್ದು, ಗ್ಯಾರಂಟಿ ಯೋಜನೆಗಳಿಗೆ ಅನುದಾನ ಒದಗಿಸುವ ಜೊತೆಗೆ ಯಾವುದರ ಮೇಲೂ ಹೆಚ್ಚು ಭಾರ ಹಾಕದೇ ಜನರಪರ ಬಜೆಟ್ ಮಂಡಿಸುವ ಸವಾಲು ಸಿಎಂ ಮೇಲಿದೆ. ಇತ್ತೀಚೆಗೆ ಅವರ ಕಾಲು ನೋವಾಗಿತ್ತು. ಹೀಗಾಗಿ ಅವರು ಕುರ್ಚಿ (ವ್ಹೀಲ್ ಚೇರ್) ಮೇಲೆ ಕೂತೇ ಬಜೆಟ್ ಮಂಡನೆ ಮಾಡುವ ನಿರೀಕ್ಷೆಗಳು ಇವೆ.
ಬಜೆಟ್ ಅಂದಾಜು ವೆಚ್ಚ, ಮಂಡನೆ ಸಮಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಾರ್ಚ್ 07 ರಂದು ಶಕ್ತಿ ಸೌಧ ವಿಧಾನಸೌಧದಲ್ಲಿ ಬೆಳಗ್ಗೆ 10.15ಗಂಟೆಗೆ ಪ್ರಸಕ್ತ ಸಾಲಿನ 2025-26 ರಾಜ್ಯ ಆಯವ್ಯಯ ಮಂಡಿಸಲಿದ್ದಾರೆ. ಈ ಬಜೆಟ್ ಗಾತ್ರ ಅಂದಾಜು ಸುಮಾರು 04 ಲಕ್ಷ ಕೋಟಿ ದಾಟಲಿದೆ ಎಂದು ಹೇಳಲಾಗುತ್ತಿದೆ. ಕಳೆದ ವರ್ಷ 2024-25ರಲ್ಲಿ ರಾಜ್ಯ ಬಜೆಟ್ ಗಾತ್ರ 3.71 ಲಕ್ಷ ಕೋಟಿ ಇತ್ತು.

ಗ್ಯಾರೆಂಟಿ ಯೋಜನೆಗಳ ಹಂಚಿಕೆ ಹಣ ಇಳಿಕೆ ಇಲ್ಲ
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಿಗೆ ವಾರ್ಷಿಕವಾಗಿ ಬೇಕಾಗುವ 52000 ಕೋಟಿ ಹಣ ಹಂಚಿಕೆಯಲ್ಲಿ ಇಳಿಕೆ ಮಾಡುವುದಿಲ್ಲ. ಆದರೆ ಅಭಿವೃದ್ಧಿ ಕಾರ್ಯ ಚುರುಕುಗೊಳಿಸಲು 55000 ಕೋಟಿ ಬಂಡವಾಳ ವೆಚ್ಚ ಹೆಚ್ಚಳಕ್ಕೆ ಸಿಎಂ ನಿರ್ಧರಿಸಿದ್ದಾರೆ ಎಂದು ಹಣಕಾಸು ಇಲಾಖೆ ತಿಳಿಸಿದೆ.
ಕರ್ನಾಟಕ ಬಜೆಟ್ ನೇರ ಪ್ರಸಾರ ಎಲ್ಲಿ ವೀಕ್ಷಣೆ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆ ಬಜೆಟ್ ಮಂಡನೆಯು ಆನ್ಲೈನ್ನಲ್ಲಿ ಪ್ರಸಾರವಾಗಲಿದೆ. ಬಜೆಟ್ ಮಂಡಿಸುವ ಲೈವ್ ಅನ್ನು ವಿಧಾನಮಂಡಳ ವೆಬ್ಕಾಸ್ಟ್ನಲ್ಲಿ ನೋಡಬಹುದು. ಈ ಅಧಿಕೃತ ಜಾಲತಾಣದಲ್ಲಿ https://webcast.gov.in/karassembly ವೀಕ್ಷಿಸಬಹುದು. ಜೊತೆಗೆ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಎಕ್ಸ್ ಹ್ಯಾಂಡಲ್ @INCKarnataka ಇಲ್ಲಿ ಸಹ ಲೈವ್ ಪ್ರಸಾರ ಬಿಟ್ಟಿರುತ್ತಾರೆ. ಅಲ್ಲಿ ವೀಕ್ಷಿಸಬಹುದು. ಜೊತೆಗೆ 'ಒನ್ ಇಂಡಿಯಾ ಕನ್ನಡ' ಬಜೆಟ್ನಲ್ಲಿ ಕ್ಷಣ ಕ್ಷಣದ ಲೈವ್ ಅಪ್ಡೇಟ್ ನೀಡಲಿದೆ ಇಲ್ಲಿ ಸಹ ತಿಳಿಯಬಹುದು. ಇತರ ಸುದ್ದಿ ಮಾಧ್ಯಮಗಳಲ್ಲೂ ವೀಕ್ಷಿಸಬಹುದಾಗಿದೆ.
ಕರ್ನಾಟಕ ಬಜೆಟ್ ನಿರೀಕ್ಷೆಗಳು
* ಪಂಚ ಗ್ಯಾರೆಂಟಿ ಯೋಜನೆಗಳ ಹಿನ್ನೆಲೆ ಬೃಹತ್ ಯೋಜನೆ ಘೋಷಣೆ ಕಷ್ಟಸಾಧ್ಯ
* ರಾಜ್ಯ ಜನರಿಗೆ ಸಣ್ಣ ಪುಟ್ಟ ಯೋಜನೆಗಳ ಘೋಷಣೆ ನಿರೀಕ್ಷೆ
* ದೊಡ್ಡ ಪ್ರಮಾಣದಲ್ಲಿ ತೆರಿಗೆ ಹೆಚ್ಚಳಕ್ಕೆ ಕೈ ಹಾಕಲ್ಲ, ಚಿಕ್ಕಪುಟ್ಟ ತೆರಿಗೆ ಏರಿಕೆ ಸಾಧ್ಯತೆ
* ಶಿಕ್ಷಕರು, ಉಪನ್ಯಾಸಕರ ನೇಮಕಕ್ಕೆ ಕ್ರಮ
* ಶಾಸಕರಿಗೆ ವಿಶೇಷ ಅನುದಾನ, ವಿವಿಧ ಜಿಲ್ಲೆಗಳಿಗೆ ವೈದ್ಯಕೀಯ ಕಾಲೇಜು ಘೋಷಣೆ
* ಹೊಸ ಜಿಲ್ಲೆಗಳು, ಇಲ್ಲವೇ ತಾಲೂಕು ಪ್ರಕಟ ನಿರೀಕ್ಷೆ
* ಅಮೃತ ಸ್ವಾಭಿಮಾನಿ ಕುರಿಗಾಯಿ, ಪಶು ಭಾಗ್ಯಕ್ಕೆ ಮರು ಚಾಲನೆ ನಿರೀಕ್ಷೆ.
* ಗ್ಯಾರಂಟಿಗಳಿಗೆ ಅನುದಾನ ಕೊಂಚ ಹೆಚ್ಚಳ ಮಾಡುವ ಸಾಧ್ಯತೆ
* ರೈತರು, ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರಿಗಾಗಿ ಸಣ್ಣ ಪುಟ್ಟ ಯೋಜನೆ ಘೋಷಣೆ.
-
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
Sleeper Vande Bharat; ಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್ಗೆ ಕೇಂದ್ರ ಅಸ್ತು, ಕರ್ನಾಟಕಕ್ಕೆ ಏನೆಲ್ಲ ಲಾಭ? -
UGCET ಅಭ್ಯರ್ಥಿಗಳ ಗಮನಕ್ಕೆ: ಇದೇ ತಿಂಗಳು CET ಪರೀಕ್ಷೆ, ರಿಲೀಸಾದ ನಕಲಿ ಲಿಂಕ್ ಬಗ್ಗೆ ಎಚ್ಚರ -
ಭಾರತೀಯ ರೈಲ್ವೆಯ ಹೊಸ ಹೆಜ್ಜೆ: 12 ಸ್ಲೀಪರ್ ವಂದೇ ಭಾರತ್ ರೈಲುಗಳ ಪರಿಚಯ, ಎಲ್ಲೆಲ್ಲಿ-ಯಾವಾಗ? -
Ramya: ಬೀದಿ ನಾಯಿಗಳ ಮೇಲಿನ ಕ್ರೌರ್ಯಕ್ಕೆ ನಟಿ ರಮ್ಯಾ ಕಣ್ಣೀರು: ಬೆಂಗಳೂರಿನ ಫ್ರೀಡಂಪಾರ್ಕ್ ಪ್ರತಿಭಟನೆಯಲ್ಲಿ ಭಾಗಿ -
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ -
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್











Click it and Unblock the Notifications