ಗಣೇಶ ಚತುರ್ಥಿ: ಖಾಸಗಿ ಬಸ್ಗಳಿಂದ ಪ್ರಯಾಣಿಕರ ಸುಲಿಗೆ ಶುರು
ಬೆಂಗಳೂರು, ಸೆಪ್ಟೆಂಬರ್ 08: ಹಬ್ಬಗಳ ಸೀಸನ್ ಬರುತ್ತಿದ್ದಂತೆಯೇ ಖಾಸಗಿ ಬಸ್ಗಳ ಟಿಕೆಟ್ ದರ ಏರಿಕೆ ಮಾಡುತ್ತಾರೆ.
ಈ ಬಾರಿಯೂ ಕೂಡ ಖಾಸಗಿ ಬಸ್ಗಳು ಪ್ರಯಾಣಿಕರ ಸುಲಿಗೆಗಿಳಿದಿವೆ, ಗಣೇಶ ಚತುರ್ಥಿ ನೆಪ ಮಾಡಿಕೊಂಡು ಹೆಚ್ಚುವರಿ ಹಣವನ್ನು ವಸೂಲಿ ಮಾಡುತ್ತಿವೆ.
ಗೌರಿ, ಗಣೇಶ ಹಬ್ಬ; ಬೆಂಗಳೂರಿನಿಂದ 1000 ಹೆಚ್ಚುವರಿ ಬಸ್ ವ್ಯವಸ್ಥೆ
ನಗರದಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ಮಂದಿ ಚೌತಿ ಹಬ್ಬಕ್ಕೆಂದು ಊರಿಗೆ ಹೋಗಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹಬ್ಬದ ರಜೆಯೂ ಸೇರಿ ಶುಕ್ರವಾರದಿಂದ ಸರಣಿ ರಜೆಗಳಿವೆ, ಹೀಗಾಗಿ ಗುರುವಾರ ರಾತ್ರಿಯಿಂದಲೇ ಹೆಚ್ಚಿನವರು ಪ್ರಯಾಣ ಬೆಳೆಸುತ್ತಾರೆ.
ಸಾಮಾನ್ಯ ದಿನಗಳಲ್ಲಿ ಹವಾನಿಯಂತ್ರಿತ ಹಾಗೂ ಹವಾನಿಯಂತ್ರಣ ರಹಿತ ಬಸ್ಗಳಿಗೆ ಅನುಗುಣವಾಗಿ 450 ರೂ.ನಿಂದ 1200 ರೂ. ಪ್ರಯಾಣ ದರವಿತ್ತು. ಆದರೆ, ಗುರುವಾರ ಸೆ.9 ಹಾಗೂ ಸೆ.10ರಂದು ಕನಿಷ್ಠ 850ರಿಂದ ಗರಿಷ್ಠ 7 ಸಾವಿರದವರೆಗೆ ಏರಿಕೆಯಾಗಿದೆ.
ಅದೇ ದಿನದಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೋಗುವ ವಿಮಾನಗಳ ಪ್ರಯಾಣ ದರ ಕನಿಷ್ಠ 2700 ರೂ. ಹಾಗೂ ಗರಿಷ್ಠ 4033ರೂ.ವರೆಗೂ ಇದೆ.
ಬೆಂಗಳೂರಿನಿಂದ
ಹುಬ್ಬಳ್ಳಿ,
ಧಾರವಾಡ,
ಬೆಳಗಾವಿ,
ವಿಜಯಪುರ,
ಮಂಗಳೂರು,
ಶಿವಮೊಗ್ಗ
ಸೇರಿದಂತೆ
ಹಲವು
ಖಾಸಗಿ
ಬಸ್ಗಳ
ದರ
ಹೆಚ್ಚಾಗಿದೆ.
ಶಿವಮೊಗ್ಗ-399
ರೂ.ನಿಂದ
1650ರೂ.
ಬೆಳಗಾವಿ-850ರೂ.ನಿಂದ
7
ಸಾವಿರ
ರೂ.
ಹುಬ್ಬಳ್ಳಿ-850
ರೂ.ನಿಂದ
7
ಸಾವಿರ
ರೂ.
ಕಲಬುರಗಿ-960
ರೂ.ನಿಂದ
1499ರೂ.
ವಿಜಯಪುರ-910
ರೂ.ನಿಂದ
2
ಸಾವಿರ
ರೂ.
ಮಂಗಳೂರು-925
ರೂ.ನಿಂದ
1799ರೂ.ಇದೆ.
Recommended Video
ಕೆಎಸ್ಆರ್ಟಿಸಿಯಿಂದ
1
ಸಾವಿರ
ಹೆಚ್ಚುವರಿ
ಬಸ್
ಸೇವೆ:
ಗೌರಿ
ಗಣೇಶ
ಹಬ್ಬ
ಹಿನ್ನೆಲೆಯಲ್ಲಿ
ಕೆಎಸ್ಆರ್ಟಿಸಿ
ಕಡೆಯಿಂದ
ಸೆಪ್ಟೆಂಬರ್
8,
9ರಂದು
ಬೆಂಗಳೂರಿನಿಂದ
ಹೆಚ್ಚುವರಿ
ಬಸ್ಗಳ
ವ್ಯವಸ್ಥೆ
ಮಾಡಲಾಗಿದೆ.
ಬೆಂಗಳೂರಿನಿಂದ
ರಾಜ್ಯದ
ವಿವಿಧೆಡೆಗೆ
ಹೆಚ್ಚುವರಿ
ಕೆಎಸ್ಆರ್ಟಿಸಿ
ಬಸ್ಗಳನ್ನು
ಬಿಟ್ಟಿದ್ದು
1,000
ಹೆಚ್ಚುವರಿ
ಬಸ್ಗಳ
ವ್ಯವಸ್ಥೆ
ಮಾಡಲಾಗಿದೆ.
ಜೊತೆಗೆ
ಸೆಪ್ಟೆಂಬರ್
12ರಂದು
ಬೆಂಗಳೂರಿಗೆ
ಆಗಮಿಸುವವರಿಗೆ
ರಾಜ್ಯದ
ವಿವಿಧ
ಜಿಲ್ಲಾ
ಕೇಂದ್ರಗಳಿಂದ
ಹೆಚ್ಚುವರಿ
ಬಸ್ಗಳ
ವ್ಯವಸ್ಥೆ
ಮಾಡಲಾಗಿದೆ.
ಧರ್ಮಸ್ಥಳ,
ಶಿವಮೊಗ್ಗ,
ಕುಕ್ಕೆ
ಸುಬ್ರಹ್ಮಣ್ಯ,
ಶೃಂಗೇರಿ,
ಮಂಗಳೂರು,
ಹೊರನಾಡು,
ದಾವಣಗೆರೆ,
ಹುಬ್ಬಳ್ಳಿ,
ಧಾರವಾಡ,
ಬೆಳಗಾವಿ,
ವಿಜಯಪುರ,
ಗೋಕರ್ಣ,
ಶಿರಸಿ,
ಕಾರವಾರ,
ರಾಯಚೂರು,
ಕಲಬುರಗಿ,
ಬಳ್ಳಾರಿ,
ಕೊಪ್ಪಳ,
ಯಾದಗಿರಿ,
ಬೀದರ್
ಸೇರಿ
ಹಲವಡೆ
ಹೆಚ್ಚುವರಿ
ಬಸ್
ಸೇವೆ
ಕಲ್ಪಿಸಲಾಗಿದೆ.
ಜನರ
ಅನುಕೂಲಕ್ಕಾಗಿ
ಹೆಚ್ಚುವರಿ
ಸಾರಿಗೆಗಳಿಗೆ
ಮುಂಗಡವಾಗಿ
ಆಸನಗಳನ್ನು
ಕಾಯ್ದಿರಿಸುವ
ಸೌಲಭ್ಯಗಳನ್ನು
ಕಲ್ಪಿಸಲಾಗಿದೆ.
ಪ್ರಯಾಣಿಕರು
ಬಸ್
ನಿಲ್ದಾಣಗಳಿಗೆ
ತೆರಳುವ
ಮುನ್ನ
ಮುಂಗಡ
ಕಾಯ್ದಿರಿಸಲಾಗಿರುವ
ಟಿಕೆಟ್ಗಳ
ಮೇಲೆ
ನಮೂದಿಸಲಾಗಿರುವ
ಬಸ್
ನಿಲ್ದಾಣ/
ಪಿಕ್
ಅಪ್
ಪಾಯಿಂಟ್
ಹೆಸರನ್ನು
ಗಮನಿಸುವಂತೆ
ಸೂಚಿಸಲಾಗಿದೆ.
ಜನರು
ಇ-ಟಕೆಟ್ಗಳನ್ನು
https://ksrtc.karnataka.gov.in/
ವೆಬ್ಸೈಟ್ಗೆ
ಭೇಟಿ
ನೀಡುವ
ಮೂಲಕ
ಬುಕ್
ಮಾಡಬಹುದಾಗಿದೆ.
ಜನರು
ಕರ್ನಾಟಕ
ಮತ್ತು
ಅಂತರರಾಜ್ಯದಲ್ಲಿ
ಇರುವ
685
ಗಣಕೀಕೃತ
ಬುಕ್ಕಿಂಗ್
ಕೌಂಟರ್ಗಳ
ಮೂಲಕವೂ
ಟಿಕೆಟ್
ಕಾಯ್ದಿರಿಸಬಹುದು
ಎಂದು
ಪ್ರಕಟಣೆಯಲ್ಲಿ
ತಿಳಿಸಲಾಗಿದೆ.
ನಿಗಮದ
ಕಾರ್ಯಾಚರಣೆ
ವ್ಯಾಪ್ತಿಯಲ್ಲಿನ
ಎಲ್ಲಾ
ತಾಲೂಕು
ಮತ್ತು
ಜಿಲ್ಲಾ
ಬಸ್
ನಿಲ್ದಾಣಗಳಿಂದ
ಸಂಚಾರ
ಬೇಡಿಕೆಗೆ
ಅನುಗುಣವಾಗಿ
ವಿಶೇಷ
ಬಸ್ಗಳನ್ನು
ಓಡಿಸಲಾಗುತ್ತದೆ
ಎಂದು
ಕೆಎಸ್ಆರ್ಟಿಸಿ
ಹೇಳಿದೆ.
ಮೆಜೆಸ್ಟಿಕ್ನಿಂದ
ಬಸ್ಗಳ
ಸಂಚಾರ
ಕೆಂಪೇಗೌಡ
ಬಸ್
ನಿಲ್ದಾಣದಿಂದ
ಧರ್ಮಸ್ಥಳ,
ಕುಕ್ಕೆ
ಸುಬ್ರಮಣ್ಯ,
ಶಿವಮೊಗ್ಗ,
ಹಾಸನ,
ಮಂಗಳೂರು,
ಕುಂದಾಪುರ,
ಶೃಂಗೇರಿ,
ಹೊರನಾಡು,
ದಾವಣಗೆರೆ,
ಹುಬ್ಬಳ್ಳಿ,
ಧಾರವಾಡ,
ಬೆಳಗಾವಿ,
ವಿಜಯಪುರ,
ಗೋಕರ್ಣ,
ಶಿರಸಿ,
ಕಾರವಾರ,
ರಾಯಚೂರು,
ಕಲಬುರಗಿ,
ಬಳ್ಳಾರಿ,
ಕೊಪ್ಪಳ,
ಯಾದಗಿರಿ,
ಬೀದರ್,
ತಿರುಪತಿ
ಮುಂತಾದ
ಸ್ಥಳಗಳಿಗೆ
ವಿಶೇಷ
ಬಸ್ಗಳು
ಸಂಚರಿಸಲಿದೆ.
ಶಾಂತಿನಗರದ
ಬೆಂಗಳೂರು
ಮಹಾನಗರ
ಸಾರಿಗೆ
ಸಂಸ್ಥೆ
ಬಸ್
ನಿಲ್ದಾಣದಿಂದ
ತಮಿಳುನಾಡು
ಮತ್ತು
ಆಂಧ್ರಪ್ರದೇಶ/ತೆಲಂಗಾಣ
ಕಡೆಗೆ
ಅಂದರೆ
ಮಧುರೆ,
ಕುಂಭಕೋಣಂ,
ತಿರುಚಿ,
ಚೆನ್ನೈ,
ಕೊಯಂಬತ್ತೂರು,
ತಿರುಪತಿ,
ವಿಜಯವಾಡ,
ಹೈದರಾಬಾದ್
ಮುಂತಾದ
ಸ್ಥಳಗಳಿಗೆ
ಸಂಚಾರ
ನಡೆಸಲಿವೆ.
ನೆರೆ
ರಾಜ್ಯಗಳಾದ
ತಮಿಳುನಾಡು,
ಆಂಧ್ರಪ್ರದೇಶ,
ತೆಲಂಗಾಣ,
ಕೇರಳ,
ಗೋವಾ,
ಮಹಾರಾಷ್ಟ್ರ
ಹಾಗೂ
ಪುದುಚೇರಿ
ಮುಂತಾದ
ಪ್ರಮುಖ
ನಗರಗಳಲ್ಲಿ
ನಿಗಮದ
ಮುಂಗಡ
ಆಸನಗಳನ್ನು
ಕಾಯ್ದಿರಿಸುವ
ಕೌಂಟರ್ಗಳು
ಇದ್ದು,
ಇವುಗಳ
ಮೂಲಕ
ಸಹ
ಮುಂಗಡವಾಗಿ
ಆಸನಗಳನ್ನು
ನಿಗಮದ
ಸಾರಿಗೆಗಳಿಗೆ
ಕಾಯ್ದಿರಿಸಬಹುದಾಗಿದೆ.