ಉಗ್ರಪ್ಪ ಚಡ್ಡಿ ಹಾಕೋಳಕ್ಕೆ ಶುರು ಮಾಡ್ಕೊಂಡಿದ್ದು ಯಾವತ್ತಿಂದ?
ಉತ್ತಮ ವಾಗ್ಮಿ ಮತ್ತು ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ವಿ ಎಸ್ ಉಗ್ರಪ್ಪ ಮಾತಿಗೆ ನಿಂತರೆ ವಿರೋಧಿಗಳ ಬಾಯಿ ಮುಚ್ಚಿಸುವಲ್ಲಿ ಬಹಳಾನೇ ಹೆಸರುವಾಸಿ.
ಶುಕ್ರವಾರ (ಫೆ 13) ಮೇಲ್ಮನೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ಹಾಸ್ಯ ಭರಿತ ಮಾತಿನ ಭರಾಟೆಯಲ್ಲಿ ಉಗ್ರಪ್ಪ ಮತ್ತು ಈಶ್ವರಪ್ಪ ಆಡಿದ ಒಂದು ಮಾತು ಸದನವನ್ನು ನಗೆಗಡಲಲ್ಲಿ ತೇಲಿಸಿತು. ಇದಕ್ಕೆ ಕಾರಣವಾಗಿದ್ದು ಸಂಸ್ಕೃತ ಶ್ಲೋಕವೊಂದು.
ವಿಧಾನ ಪರಿಷತ್ತಿನಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಚರ್ಚೆ ನಡೆಯುತ್ತಿತ್ತು. ಬಿಜೆಪಿ ಮುಖಂಡ ಗೋ. ಮಧುಸೂಧನ್ ಅವರು ಸಂಸ್ಕೃತ ಶ್ಲೋಕದ ಮೂಲಕ ಭಾಷಣ ಮಾಡಲಾರಂಭಿಸಿದರು. (ಮಠಗಳಿಗೆ ನಿಯಂತ್ರಣ ಹಾಕುವ ವಿಧೇಯಕ ವಾಪಸ್)

ಮಧುಸೂಧನ್ ಅವರ ಭಾಷಣ ಆರಂಭವಾಗುತ್ತಿದ್ದಂತೇ ಎದ್ದು ನಿಂತ ಉಗ್ರಪ್ಪ, ಸಂಸ್ಕೃತದಲ್ಲೇ ಒಂದೆರಡು ಮಾತನಾಡುವ ಮೂಲಕ ಮಧುಸೂಧನ್ ಅವರ ಕಾಲೆಳೆದರು.
ಇದಕ್ಕೆ ಹಾಸ್ಯಧಾಟಿಯಲ್ಲಿ ಉತ್ತರಿಸಿದ ಮಧುಸೂಧನ್, ಹಾಗಾದರೆ ಉಗ್ರಪ್ಪನವರು ಚಡ್ಡಿ (RSS ಸಮವಸ್ತ್ರ ಎನ್ನುವ ಅರ್ಥದಲ್ಲಿ) ಹಾಕಿದ್ರೂಂತಾಯಿತು ಎಂದು ಕಿಚಾಯಿಸಿದರು. ಆಗ, ಸದನದಲ್ಲಿ ಹಾಜರಿದ್ದ ಈಶ್ವರಪ್ಪ, ಏನಿದು ಮಧುಸೂಧನ್ ಅವರ ಮಾತಿನ ಅರ್ಥ. ಹಾಗಾದ್ರೆ ಉಗ್ರಪ್ಪ ಚಡ್ಡಿ ಹಾಕಿಲ್ಲಾಂತ ನಿಮ್ಮತ್ರ ಹೇಳಿದ್ರಾ ಎಂದು ಮಧುಸೂಧನ್ ಅವರನ್ನು ಕೇಳಿದರು.
ತಕ್ಷಣ ಎದ್ದು ನಿಂತ ಉಗ್ರಪ್ಪ, ನಾನು ಚಡ್ಡಿ ಹಾಕುವ ಮೊದಲೇ ಸಂಸ್ಕೃತ ಕಲಿತಿದ್ದೆ ಎಂದು ಈಶ್ವರಪ್ಪ ಮತ್ತು ಮಧುಸೂಧನ್ ಅವರಿಗೆ ಪ್ರತ್ಯುತ್ತರ ನೀಡಿದ ಮೇಲೆ ಮಧುಸೂಧನ್ ಅವರ ಭಾಷಣ ಸಾಂಗವಾಗಿ ಮುಂದುವರಿಯಿತು.
ಹಾಗಾಗಿ, ವಿ ಎಸ್ ಉಗ್ರಪ್ಪ ಚಡ್ಡಿ ಹಾಕಿಕೊಳ್ಳಲು ಶುರು ಮಾಡ್ಕೊಂಡಿದ್ದು ಯಾವಾ ವಯಸ್ಸಿನಿಂದ ಎಂದು ತಿಳಿದುಕೊಳ್ಳುವ ಅಧಿಕಾರ ರಾಜ್ಯದ ಜನತೆಗೆ ಇಲ್ಲವೇ ಎನ್ನುವುದು ಇಲ್ಲಿ ತಮಾಷೆಯ ಪ್ರಶ್ನೆ?
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications