ಉಗ್ರಪ್ಪ ಚಡ್ಡಿ ಹಾಕೋಳಕ್ಕೆ ಶುರು ಮಾಡ್ಕೊಂಡಿದ್ದು ಯಾವತ್ತಿಂದ?
ಉತ್ತಮ ವಾಗ್ಮಿ ಮತ್ತು ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ವಿ ಎಸ್ ಉಗ್ರಪ್ಪ ಮಾತಿಗೆ ನಿಂತರೆ ವಿರೋಧಿಗಳ ಬಾಯಿ ಮುಚ್ಚಿಸುವಲ್ಲಿ ಬಹಳಾನೇ ಹೆಸರುವಾಸಿ.
ಶುಕ್ರವಾರ (ಫೆ 13) ಮೇಲ್ಮನೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ಹಾಸ್ಯ ಭರಿತ ಮಾತಿನ ಭರಾಟೆಯಲ್ಲಿ ಉಗ್ರಪ್ಪ ಮತ್ತು ಈಶ್ವರಪ್ಪ ಆಡಿದ ಒಂದು ಮಾತು ಸದನವನ್ನು ನಗೆಗಡಲಲ್ಲಿ ತೇಲಿಸಿತು. ಇದಕ್ಕೆ ಕಾರಣವಾಗಿದ್ದು ಸಂಸ್ಕೃತ ಶ್ಲೋಕವೊಂದು.
ವಿಧಾನ ಪರಿಷತ್ತಿನಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಚರ್ಚೆ ನಡೆಯುತ್ತಿತ್ತು. ಬಿಜೆಪಿ ಮುಖಂಡ ಗೋ. ಮಧುಸೂಧನ್ ಅವರು ಸಂಸ್ಕೃತ ಶ್ಲೋಕದ ಮೂಲಕ ಭಾಷಣ ಮಾಡಲಾರಂಭಿಸಿದರು. (ಮಠಗಳಿಗೆ ನಿಯಂತ್ರಣ ಹಾಕುವ ವಿಧೇಯಕ ವಾಪಸ್)

ಮಧುಸೂಧನ್ ಅವರ ಭಾಷಣ ಆರಂಭವಾಗುತ್ತಿದ್ದಂತೇ ಎದ್ದು ನಿಂತ ಉಗ್ರಪ್ಪ, ಸಂಸ್ಕೃತದಲ್ಲೇ ಒಂದೆರಡು ಮಾತನಾಡುವ ಮೂಲಕ ಮಧುಸೂಧನ್ ಅವರ ಕಾಲೆಳೆದರು.
ಇದಕ್ಕೆ ಹಾಸ್ಯಧಾಟಿಯಲ್ಲಿ ಉತ್ತರಿಸಿದ ಮಧುಸೂಧನ್, ಹಾಗಾದರೆ ಉಗ್ರಪ್ಪನವರು ಚಡ್ಡಿ (RSS ಸಮವಸ್ತ್ರ ಎನ್ನುವ ಅರ್ಥದಲ್ಲಿ) ಹಾಕಿದ್ರೂಂತಾಯಿತು ಎಂದು ಕಿಚಾಯಿಸಿದರು. ಆಗ, ಸದನದಲ್ಲಿ ಹಾಜರಿದ್ದ ಈಶ್ವರಪ್ಪ, ಏನಿದು ಮಧುಸೂಧನ್ ಅವರ ಮಾತಿನ ಅರ್ಥ. ಹಾಗಾದ್ರೆ ಉಗ್ರಪ್ಪ ಚಡ್ಡಿ ಹಾಕಿಲ್ಲಾಂತ ನಿಮ್ಮತ್ರ ಹೇಳಿದ್ರಾ ಎಂದು ಮಧುಸೂಧನ್ ಅವರನ್ನು ಕೇಳಿದರು.
ತಕ್ಷಣ ಎದ್ದು ನಿಂತ ಉಗ್ರಪ್ಪ, ನಾನು ಚಡ್ಡಿ ಹಾಕುವ ಮೊದಲೇ ಸಂಸ್ಕೃತ ಕಲಿತಿದ್ದೆ ಎಂದು ಈಶ್ವರಪ್ಪ ಮತ್ತು ಮಧುಸೂಧನ್ ಅವರಿಗೆ ಪ್ರತ್ಯುತ್ತರ ನೀಡಿದ ಮೇಲೆ ಮಧುಸೂಧನ್ ಅವರ ಭಾಷಣ ಸಾಂಗವಾಗಿ ಮುಂದುವರಿಯಿತು.
ಹಾಗಾಗಿ, ವಿ ಎಸ್ ಉಗ್ರಪ್ಪ ಚಡ್ಡಿ ಹಾಕಿಕೊಳ್ಳಲು ಶುರು ಮಾಡ್ಕೊಂಡಿದ್ದು ಯಾವಾ ವಯಸ್ಸಿನಿಂದ ಎಂದು ತಿಳಿದುಕೊಳ್ಳುವ ಅಧಿಕಾರ ರಾಜ್ಯದ ಜನತೆಗೆ ಇಲ್ಲವೇ ಎನ್ನುವುದು ಇಲ್ಲಿ ತಮಾಷೆಯ ಪ್ರಶ್ನೆ?
-
Karnataka Rain: ಚಂಡಮಾರುತ ಪ್ರಸರಣ: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗಗಳಲ್ಲಿ 6 ದಿನ ಮಳೆ: ಐಎಂಡಿ ವರದಿ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್












Click it and Unblock the Notifications