ಚಿತ್ರಗಳು : ವಿಧಾನಸೌಧದಿಂದ ಮೈಸೂರಿಗೆ ಹೊರಟ ವಿಂಟೇಜ್ ಕಾರುಗಳು
ಬೆಂಗಳೂರು, ಸೆಪ್ಟೆಂಬರ್ 30 : ರಾಯಲ್ ಕ್ಲಾಸಿಕಲ್ ಕಾರ್ ಡ್ರೈವ್ ಟು ಮೈಸೂರು ಕಾರುಗಳ ಜಾಥಾಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ಚಾಲನೆ ನೀಡಿದರು. ಮೈಸೂರು ದಸರಾ 2018ರ ಅಂಗವಾಗಿ ಕಾರುಗಳ ಜಾಥಾ ಆಯೋಜನೆ ಮಾಡಲಾಗಿತ್ತು.
ಭಾನುವಾರ ಬೆಂಗಳೂರಿನ ವಿಧಾನಸೌಧದ ಮುಂದೆ ಎಚ್.ಡಿ.ಕುಮಾರಸ್ವಾಮಿ ಅವರು ವಿಂಟೇಜ್ ಕಾರುಗಳ ಜಾಥಾಕ್ಕೆ ಚಾಲನೆ ನೀಡಿದರು. ಫೆಡರೇಷನ್ ಆಫ್ ಹಿಸ್ಟಾರಿಕ್ ವೆಹಿಕಲ್ಸ್ ಆಫ್ ಇಂಡಿಯಾ ಈ ಜಾಥಾವನ್ನು ಆಯೋಜನೆ ಮಾಡಿತ್ತು.
50 ಕ್ಕೂ ಹೆಚ್ಚು ಅತ್ಯಂತ ಹಳೆಯ ಮತ್ತು ಐತಿಹಾಸಿಕ ವಿಂಟೇಜ್ ಮತ್ತು ರಾಯಲ್ ಕ್ಲಾಸಿಕಲ್ ಕಾರುಗಳು ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಬೆಳೆಸಿದವು. 19ನೇ ಶತಮಾನದ ಕಾರುಗಳನ್ನು ಅದರ ಮಾಲೀಕರು ಕುಟುಂಬ ಸಮೇತವಾಗಿ ಡ್ರೈವ್ ಮಾಡಿಕೊಂಡು ಮೈಸೂರಿನತ್ತ ತೆರಳಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಸಹ ಜಾಥಾಕ್ಕೆ ಚಾಲನೆ ನೀಡಿದ ಬಳಿಕ ವಿಧಾನಸೌಧದಿಂದ ಕಬ್ಬನ್ ಪಾರ್ಕ್ ತನಕ ವಿಂಟೇಜ್ ಕಾರಿನಲ್ಲಿ ಪ್ರಯಾಣ ಬೆಳೆಸಿದರು. ಬಗೆ ಬಗೆಯ ಕಾರುಗಳು ಹೇಗಿದ್ದವು ಚಿತ್ರಗಳಲ್ಲಿ ನೋಡಿ....

50ಕ್ಕೂ ಹೆಚ್ಚು ಕಾರುಗಳು
ಗಣ್ಯರು ಬಳಸಿದ್ದ ಕಾರು, ರಾಜರು ಓಡಾಡಿದ್ದ ಕಾರು ಸೇರಿದಂತೆ 50ಕ್ಕೂ ಹೆಚ್ಚು ವಿವಿಧ ಮಾದರಿಯ ಅತ್ಯಂತ ಹಳೆಯ ಕಾರುಗಳು ಇಂದು ಬೆಂಗಳೂರಿನ ರಸ್ತೆಗೆ ಇಳಿದಿದ್ದವು. ಹಳೆಯ ಕಾರುಗಳನ್ನು ಬೆಂಗಳೂರಿನಿಂದ ಮೈಸೂರಿಗೆ ತೆಗೆದುಕೊಂಡು ಹೋಗುವ ಮೂಲಕ 2018ರ ಮೈಸೂರು ದಸರಾಕ್ಕೆ ಚಾಲನೆ ನೀಡಲಾಯಿತು.

ಬೇರೆ ದೇಶದ ಕಾರುಗಳು
ಬೆಂಗಳೂರಿನ ವಿಧಾನಸೌಧದಿಂದ ಮೈಸೂರಿನ ತನಕ ವಿಂಟೇಜ್ ಕಾರುಗಳ ಜಾಥಾ ಆಯೋಜನೆ ಮಾಡಲಾಗಿತ್ತು. ಕರ್ನಾಟಕ 16, ಫ್ರಾನ್ಸ್ನ 1, ಶ್ರೀಲಂಕಾದ 9, ಇಂಗ್ಲೆಡ್ನ 1 ಸೇರಿದಂತೆ ದೇಶದ ವಿವಿಧ ಭಾಗಗಳಿಂದ 22 ಕಾರುಗಳು ಜಾಥಾದಲ್ಲಿ ಪಾಲ್ಗೊಂಡಿದ್ದವು.

ನೆಹರು ಬಳಸಿದ್ದ ಕಾರು
ವಿಂಟೇಜ್ ಕಾರುಗಳು ಅತ್ಯಂತ ಹಳೆಯದಾಗಿದ್ದು ಗಮನ ಸೆಳೆದವು. 1928ರಲ್ಲಿ ಮೋತಿಲಾಲ್ ನೆಹರು ಬಳಸಿದ್ದ ಕಾರು ಜಾಥಾದಲ್ಲಿ ಎಲ್ಲರ ಗಮನ ಸೆಳೆಯಿತು. 1922ಕ್ಕೆ ಸೇರಿದ್ದ ವಿಂಟೇಜ್ ಕಾರನ್ನು ಲಂಡನ್ನ ಪ್ಯಾಂಟ್ರಿಕ್ ರೋಲೇ ದಂಪತಿಗಳು ಜಾಥಾಕ್ಕಾಗಿ ಬೆಂಗಳೂರಿಗೆ ತಂದಿದ್ದರು.

ವಿಧಾನಸೌಧ ರೌಂಡ್ಸ್
ಮೋತಿಲಾಲ್ ನೆಹರು ಬಳಸಿದ್ದ ವಿಂಟೇಜ್ ಕಾರಿನಲ್ಲಿ ಕುಳಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಧಾನಸೌಧಕ್ಕೆ ಒಂದು ಸುತ್ತು ಹಾಕಿದರು. ಕಾರಿನ ಮಾಲೀಕ ರವಿಶಂಕರ್ ಡ್ರೈವ್ ಮಾಡಿದರು. ಕುಮಾರಸ್ವಾಮಿ ಅವರು ಕುತೂಹಲದಿಂದ ಕಾರನ್ನು ವೀಕ್ಷಣೆ ಮಾಡಿದರು.
-
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Mysuru-Nanjangud special train: ನಂಜನಗೂಡು ದೊಡ್ಡ ಜಾತ್ರೆಗೆ ಮೈಸೂರಿನಿಂದ ವಿಶೇಷ ರೈಲು ಸೇವೆ: ಸಚಿವ ವಿ.ಸೋಮಣ್ಣ ಮಾಹಿತಿ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು










Click it and Unblock the Notifications