ಶಾಲೆಗಳಲ್ಲಿ ಕ್ಷೀರಭಾಗ್ಯ ಯೋಜನೆ ಆರಂಭಿಸಲು ಮಾರ್ಗಸೂಚಿ
ಬೆಂಗಳೂರು, ಜೂನ್ 02: 2024-25ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಿವೆ. ಶಾಲೆಗಳು ಬಾಗಿಲು ತೆರೆದಿದ್ದು, ಮಕ್ಕಳು ಆಗಮಿಸುತ್ತಿದ್ದಾರೆ. ಶಾಲೆಗಳಲ್ಲಿ 'ಕ್ಷೀರಭಾಗ್ಯ ಯೋಜನೆ' ಆರಂಭಿಸುವ ಕುರಿತು ಶಾಲೆಗಳಿಗೆ, ಮುಖ್ಯ ಶಿಕ್ಷಕರಿಗೆ ಹಲವು ಸೂಚನೆಗಳನ್ನು ನೀಡಲಾಗಿದೆ.
'ಕ್ಷೀರಭಾಗ್ಯ ಯೋಜನೆ'ಯಡಿ ಮಕ್ಕಳಿಗೆ ಶಾಲೆಯಲ್ಲಿ ಹಾಲು ನೀಡಲಾಗುತ್ತದೆ. 2024-25ನೇ ಸಾಲಿಗೆ ಅಗತ್ಯವಿರುವ ಹಾಲಿನ ಪುಡಿ ಆಯಾ ತಿಂಗಳ ಬೇಡಿಕೆಗೆ ಅನುಗುಣವಾಗಿ ಜಿಲ್ಲಾ ಶಿಕ್ಷಣಾಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕರು ಸಮಾಲೋಚಿಸಿ ಶಾಲಾವಾರು ಹಾಗೂ ತಾಲ್ಲೂಕುವಾರು ಬೇಡಿಕೆಯನ್ನು ಸಿದ್ಧಪಡಿಸಿ ಸಂಬಂಧಿಸಿದ ಜಿಲ್ಲೆಗಳಿಗೆ ಹಾಲಿನ ಪುಡಿ ಸರಬರಾಜುಗೊಳಿಸುವ ಹಾಲು ಒಕ್ಕೂಟ ಘಟಕಕ್ಕೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಬೇಡಿಕೆಗೆ ಅನುಗುಣವಾಗಿ ಶಾಲಾ ಹಂತದಲ್ಲಿ ಮುಖ್ಯ ಶಿಕ್ಷಕರು ಸ್ವೀಕರಿಸಿ ದಾಸ್ತಾನುಗೊಳಿಸಿ ಸುರಕ್ಷಿತವಾಗಿ ನಿರ್ವಹಿಸುವುದು. ಶಾಲಾ ಪ್ರಾರಂಭದ ದಿನದಂದೇ ಕ್ಷೀರಭಾಗ್ಯ ಯೋಜನೆಯನ್ನು ಆರಂಭಿಸಿ ಬೆಳಗಿನ ಪ್ರಾರ್ಥನಾ ಸಮಯದಲ್ಲಿ ಮಕ್ಕಳಿಗೆ (ಸಕ್ಕರೆ ಯುಕ್ತ) ಬಿಸಿ ಹಾಲನ್ನು ವಿತರಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ತಿಳಿಸಿದೆ.
ಹಾಲಿನ ಪುಡಿ ಸಂಗ್ರಹ: ಪ್ರತಿ ವಿದ್ಯಾರ್ಥಿಗೆ (ವಾರದಲ್ಲಿ 5 ದಿನಗಳು ) ಪ್ರತಿ ದಿನ 150 ಮಿ. ಲೀ. ಬಿಸಿಹಾಲನ್ನು 18.00 ಗ್ರಾಂ ಹಾಲಿನ ಪುಡಿಯಿಂದ ತಯಾರಿಸಿ 10.00 ಗ್ರಾಂ ಸಕ್ಕರೆ ಬೆರಸಿ ಚೆನ್ನಾಗಿ ಕಾಯಿಸಿ ನಿಖರವಾದ ಪ್ರಮಾಣದಲ್ಲಿ (ಅಳತೆ ಲೋಟ ಬಳಸಿ) ವಿತರಿಸುವ ಕ್ರಮವನ್ನು ನಿರ್ವಹಿಸುವಂತೆ ಸೂಚಿಸಿದೆ.
ಶಾಲೆಯಲ್ಲಿ ಹಾಜರಾದ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹಾಲಿನ ಪುಡಿ ಪಮಾಣವನ್ನು ಬಳಸಿ ಬಿಸಿಹಾಲು ತಯಾರಿಸುವುದು ಹಾಗೂ ಈ ಬಗ್ಗೆ ದೈನಂದಿನ ಹಾಲಿನ ಪುಡಿ ಬಳಕೆಯ ಲಕ್ಕ ವಹಿ ನಿರ್ವಹಿಸುವುದು. ಹಾಲಿನ ಪುಡಿಯನ್ನು ಅಗತ್ಯ ಪ್ರಮಾಣದಲ್ಲಿ ಬಳಸದೇ ದಾಸ್ತಾನು ಇಡುವುದು ಹಾಗೂ ಅಪವ್ಯಯ ಮಾಡುತ್ತಿರುವುದು ಕಂಡುಬಂದಲ್ಲಿ ಶಾಲಾ ಮುಖ್ಯ ಶಿಕ್ಷಕರನ್ನು ಹಾಗೂ ಅಡುಗೆಯವನ್ನು ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ಶ್ರೀ ಸತ್ಯ ಸಾಯಿ ಶೂರ್ ಅನ್ನಪೂರ್ಣ ಹೆಲ್ತ್ ಮಿಕ್ಸ್ ಪೌಡರ್ ಬೇಡಿಕೆ ಬಗ್ಗೆ 2024-2025ನೇ ಸಾಲಿನಿಂದ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ ತಾಲ್ಲೂಕು/ ಜಿಲ್ಲೆ, ಈ ಸಂಸ್ಥೆಯವರು ಉಚಿತವಾಗಿ ಪೂರಕ ಪೌಷ್ಠಿಕ ಆಹಾರವಾಗಿ ಸಾಯಿ ಶೂರ್ ರಾಗಿ ಹಲ್ತ್ ಪೌಡರ್ ಅನ್ನು ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 1 ರಿಂದ 10 ನೇ ತರಗತಿಯ ಎಲ್ಲಾ ಶಾಲಾ ಮಕ್ಕಳಿಗೆ ಬೆಳಗಿನ ಪ್ರಾರ್ಥನಾ ಸಮಯದಲ್ಲಿ ಹಾಲಿನ ಜೊತೆಯಲ್ಲಿ ವಾರದಲ್ಲಿ 3 ದಿನಗಳು ಪ್ರತಿ ಮಗುವಿಗೆ 5 ಗ್ರಾಂ ನಂತೆ ಬೆರೆಸಿ ವಿತರಿಸಲು ಮುಂದೆ ಬಂದಿದ್ದಾರೆ.
ಇವರ ಸಹಯೋಗ ಮತ್ತು ಸಹಕಾರದಿಂದ ಕೆಎಂಎಫ್ ನವರು ಸಾಯಿ ಶೂರ್ ರಾಗಿ ಹೆಲ್ತ್ ಪೌಡರ್ ಅನ್ನು ಜಿಲ್ಲಾವಾರು ಬೇಡಿಕೆಯಂತೆ ಶಾಲೆಗಳಿಗೆ ಮುದ್ದೇನಹಳ್ಳಿ ಉತ್ಪಾದಕಾ ಘಟಕದಿಂದ ಸರಬರಾಜುಗೊಳಿಸುವ ಸಾಗಾಣಿಕೆಗಾಗಿ ಒಪ್ಪಿದ್ದು ಅದರಂತೆ ಕ್ರಮವಹಿಸುವುದು. ಸಾಗಾಣಿಕಾ ವೆಚ್ಚವನ್ನು ಕ್ಷೀರಭಾಗ್ಯ ಯೋಜನೆಯಡಿ ಕೆಎಂಎಫ್ ಸಂಸ್ಥೆಗೆ ಭರಿಸುವ ಕ್ರಮವನ್ನು ಜಿಲ್ಲಾಪಂಚಾಯತ್ಗಳಿಂದ ನಿರ್ವಹಿಸುವಂತೆ ಸರ್ಕಾರವು ಆದೇಶಿಸಿದ್ದು, ಇದರಂತೆ ಕ್ರಮ ಕೈಗೊಳ್ಳಬೇಕು.
ಮೊಟ್ಟೆ, ಬಾಳೆಹಣ್ಣು/ ಶೇಂಗಾ ಚಿಕ್ಕಿ ವಿತರಣೆ: 2024-25ನೇ ಸಾಲಿನಲ್ಲಿ ಜೂನ್ 2024 ರಿಂದ ಮಾರ್ಚ್ 2025 ವರೆಗಿನ ಶಾಲಾ ಅವಧಿಯಲ್ಲಿ ಒಟ್ಟು ವಾರ್ಷಿಕ 80 ದಿನಗಳಿಗೆ ರಾಜ್ಯದ ಎಲ್ಲಾ 35 ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1-10 ನೇ ತರಗತಿ ವಿದ್ಯಾರ್ಥಿಗಳಿಗೆ ಮೊಟ್ಟೆ ಹಾಗೂ ಮೊಟ್ಟೆ ಸ್ವೀಕರಿಸದೇ ಇರುವ ವಿದ್ಯಾರ್ಥಿಗಳಿಗೆ ಬಾಳೆ ಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು, ವಾರದಲ್ಲಿ 2 ದಿನಗಳಂತೆ, ಪ್ರತಿ ವಿದ್ಯಾರ್ಥಿಗೆ ಒಂದು ದಿನಕ್ಕೆ ರೂ. 6 ಘಟಕ ವೆಚ್ಚದಲ್ಲಿ ವಿತರಿಸಬೇಕು.
2024-25ನೇ ಸಾಲಿನಲ್ಲಿ ಜೂನ್-2024 ರಿಂದ ಎಪ್ರಿಲ್ 2025 ವರೆಗಿನ ಶಾಲಾ ಅವಧಿಯಲ್ಲಿ ರಾಜ್ಯದ ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ಜಿಲ್ಲೆಗಳಾದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ ಮತ್ತು ವಿಜಯಪುರ ಜಿಲ್ಲೆ. ಈ 8 ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1-8ನೇ ತರಗತಿ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ಶೇಕಡ 60:40 ಅನುಪಾತದಲ್ಲಿ ಪೂರಕ ಪೌಷ್ಠಿಕ ಆಹಾರವಾಗಿ 50 ದಿನಗಳಿಗೆ ಮೊಟ್ಟೆಯನ್ನು ನೀಡಲಾಗುತ್ತಿದೆ.
ಮೊಟ್ಟೆಯನ್ನು ಸ್ವೀಕರಿಸದೇ ಇರುವ ವಿದ್ಯಾರ್ಥಿಗಳಿಗೆ ಬಾಳೆ ಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು ವಾರದಲ್ಲಿ 2 ದಿನಗಳಂತೆ, ಪ್ರತಿ ವಿದ್ಯಾರ್ಥಿಗೆ ಒಂದು ದಿನಕ್ಕೆ ರೂ.6 ರ ಘಟಕ ವೆಚ್ಚದಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಡಿ ವೆಚ್ಚ ಭರಿಸಿ ಕಾರ್ಯಕ್ರಮವನ್ನು ಕೈಗೊಳ್ಳುವಂತೆ ಸೂಚಿಸಿದೆ.
ಈ ಕಾರ್ಯಕ್ರಮದಡಿ 50 ದಿನಗಳ ವಿತರಣೆಗೆ ಕೇಂದ್ರದ ಅನುದಾನ ವೆಚ್ಚ ವಾಗಲಿದ್ದು ಉಳಿದ 30 ದಿನಗಳ ಅವಧಿಗೆ ರಾಜ್ಯ ಸರ್ಕಾರದ ಅನುದಾನವನ್ನು ಬಳಸಿಕೊಂಡು 1-8 ನೇ ತರಗತಿ ವಿದ್ಯಾರ್ಥಿಗಳಿಗೆ ಒಟ್ಟು ವಾರ್ಷಿಕ 80 ದಿನಗಳಿಗೆ ಹಾಗೂ ಈ 8 ಜಿಲ್ಲೆಗಳಲ್ಲಿ 9-10 ನೇ ತರಗತಿಗೆ ಒಟ್ಟು 80 ದಿನಗಳಿಗೆ ರಾಜ್ಯ ಅನುದಾನದಲ್ಲಿ ವೆಚ್ಚ ಭರಿಸುವ ಕ್ರಮ ವಹಿಸುವುದು.
-
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications