Get Updates
Get notified of breaking news, exclusive insights, and must-see stories!

ಗಣೇಶ ಪ್ರತಿಷ್ಠಾಪಿಸಿದವರೇ A1,A1ನಿಂದ A23 ವರೆಗೆ ಎಲ್ಲಾ ಹಿಂದೂಗಳೇ: ಯತ್ನಾಳ ಕಿಡಿ

ನಾಗಮಂಗಲ ಗಲಭೆಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳ ಮತ್ತೊಮ್ಮೆ ಗುಡುಗಿದ್ದಾರೆ. ನಾಗಮಂಗಲ ಗಲಭೆಯನ್ನು ರಾಜ್ಯ ಸರ್ಕಾರ ಹಗುರವಾಗಿ ಪರಿಗಣಿಸುತ್ತಿದೆ. ಗೃಹ ಸಚಿವರು ಇದು ಆಕಸ್ಮಿಕ ಘಟನೆ ಎಂದಿದ್ದಾರೆ. ಇದು ಆಕಸ್ಮಿಕವೇ ಎಂದು ಬಿಜೆಪಿ ಗುರುವಾರದಿಂದ ಗುಡುಗಿದೆ. ಇದೀಗ ತನಿಖೆ ನಡೆಯುತ್ತಿರುವ ವಿಧಾನಕ್ಕೆ ಬಸನಗೌಡ ಯತ್ನಾಳ ಸೇರಿದಂತೆ ಬಿಜೆಪಿಯ ಕೆಲವು ಮುಖಂಡರು ಈಗಾಗಲೇ ವಿರೋಧಿಸಿದ್ದಾರೆ. ಇದೀಗ ಸೆಕ್ಷನ್‌ ವಿಧಿಸಿರುವುದಕ್ಕೆ ಸಂಬಂಧಿಸಿದಂತೆ ಯತ್ನಾಳ ಮತ್ತೊಮ್ಮೆ ಗರಂ ಆಗಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿರುವ ಯತ್ನಾಳ್‌ ಅವರು ಮತ್ತೊಮ್ಮೆ ಗುಡುಗಿದ್ದಾರೆ. ಪೊಲೀಸರ ತನಿಖೆಯ ತರ್ಕಾನುಸಾರ ಗಣೇಶನನ್ನು ಕೂರಿಸಿದ ಆಯೋಜಕರೇ ದೋಷಿಗಳು, ಅವರೇ ಗಲಭೆ ಸೃಷ್ಟಿಸಿದ್ದು, ಸಾರ್ವಜನಿಕ/ಖಾಸಗಿ ಆಸ್ತಿ ಪಾಸ್ತಿಗಳಿಗೆ ಬೆಂಕಿ ಹಚ್ಚಿದ್ದು ಗಣಪನನ್ನು ಕೂರಿಸಿದ ಹಿಂದೂಗಳೇ ಎಂದು ಪ್ರಶ್ನೆ ಮಾಡಿದ್ದಾರೆ.

Hindus are the target in Nagamangala riots Basangouda Patil Yatnal

ಮುಂದುವರಿದು ಪೊಲೀಸರು ಯಾರ ಒತ್ತಡ ಮೇಲೆ ಹಿಂದೂಗಳ ಮೇಲೆ ಕೇಸು ಮಾಡುತ್ತಿದ್ದಾರೆ ಎಂದು ಹೇಳಬೇಕು. ಮೆರವಣಿಗೆ ಹೋಗುತ್ತಿದ್ದಾಗ ಚಪ್ಪಲಿ, ಕಲ್ಲೆಸೆತ ಮಾಡಿದ್ದು ಯಾರೆಂದು ಪೊಲೀಸರಿಗೆ ಗೊತ್ತಿಲ್ಲವೇ ? A1 ನಿಂದ A23 ನ ಎಲ್ಲ ಆರೋಪಿಗಳು ಹಿಂದೂಗಳೇ ಆಗಿದ್ದಾರೆ. ಮಂಡ್ಯದ ಪೊಲೀಸ್ ವರಿಷ್ಠಾಧಿಕಾರಿಗಳೇ ನಿಮ್ಮ ಇಲಾಖೆ ಮಾಡುತ್ತಿರುವ ತನಿಖೆ ರಾಜಕೀಯ ಪ್ರೇರಿತವಾಗಿದೆ. ನೀವು ನಿಜವಾದ ಅಪರಾಧಿಗಳನ್ನು ಹಿಡಿಯಬೇಕು, ಅಮಾಯಕರನ್ನಲ್ಲ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಕೂಡಲೇ, ತಪ್ಪುಗಳನ್ನು ಸರಿಪಡಿಸಿ ಎಂದು ಆಗ್ರಹಿಸಿದ್ದಾರೆ.

ಗಣೇಶ ಮೂರ್ತಿ ಪ್ರತಿಷ್ಠಾಪಿಸಿದವರೇ ಎ1 ಆರೋಪಿ ?

ಇನ್ನು ಮಂಡ್ಯದ ನಾಗಮಂಗಲದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದವರನ್ನೇ ಎ1 ಆರೋಪಿ ಮಾಡಲಾಗಿದೆ ಎಂದು ವರದಿಯಾಗುತ್ತಿದ್ದು, ಇದಕ್ಕೆ ಆಕ್ಷೇಪಣೆ ವ್ಯಕ್ತವಾಗಿದೆ. ಅಲ್ಲದೇ ಇದರಲ್ಲಿ ಎ1ನಿಂದ ಎ23ರ ವರೆಗೆ ಇರುವ ಎಫ್‌ಐಆರ್‌ನಲ್ಲಿ ಹಿಂದೂಗಳ ಹೆಸರನ್ನೇ ದಾಖಲು ಮಾಡಲಾಗಿದೆ. ಎ 24ನಿಂದ ಪೆಟ್ರೋಲ್‌ ಬಾಂಬ್‌, ಕಲ್ಲು ತೂರಿದವರು ಹಾಗೂ ಅಂಗಡಿಗಳನ್ನು ಸುಟ್ಟವರ ಹೆಸರನ್ನು ಸೇರಿಸಲಾಗಿದೆ ಎಂದು ಹೇಳಲಾಗುತ್ತಿದೆ ಇದನ್ನು ಯತ್ನಾಳ ಅವರು ವಿರೋಧ ಮಾಡಿದ್ದಾರೆ.

ಯಾರನ್ನು ತುಷ್ಟೀಕರಣ ಮಾಡಬೇಕಿಲ್ಲ: ಪರಂ

ರಾಜ್ಯ ಕಾಂಗ್ರೆಸ್‌ ಸರ್ಕಾರವು ನಿರ್ದಿಷ್ಟ ಸಮುದಾಯವನ್ನು ತುಷ್ಟೀಕರಣ ಮಾಡುತ್ತಿದೆ. ಅದರ ಪರಿಣಾಮವೇ ಈ ಘಟನೆ ಎಂದು ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ ವಿರೋಧಿಸಿವೆ. ಆದರೆ, ಇದಕ್ಕೆ ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಸಂಬಂಧ ಮಾನಾಡಿರುವ ಗೃಹ ಸಚಿವ ಜಿ. ಪರಮೇಶ್ವರ್‌ ಅವರು, ಯಾವ ಸಮುದಾಯವನ್ನು ತುಷ್ಟೀಕರಣ ಮಾಡುವ ಅವಶ್ಯಕತೆ ನಮಗಿಲ್ಲ. ಹೇಳಿಕೆಗಳನ್ನು ತಿರುಚಿ, ತಮಗೆ ಬೇಕಾದಂತೆ ವ್ಯಾಖ್ಯಾನ ಮಾಡಿಕೊಳ್ಳುವವರಿಗೆ ನಾವೇನು ಮಾಡಲು ಸಾಧ್ಯ ಎಂದು ಪರಮೇಶ್ವರ್‌ ಅವರು ಪ್ರಶ್ನೆ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+