ಜನವರಿ 20ರಿಂದ ನೀವು ಧರಿಸುವ ಹೆಲ್ಮೆಟ್ ಹೀಗಿರಬೇಕು
ಬೆಂಗಳೂರು, ಜನವರಿ, 18: ನೀವು ಹೆಲ್ಮೆಟ್ ಖರೀದಿ ಮಾಡಿದ್ರಾ? ಇದು ಸದ್ಯ ಎಲ್ಲ ಕಡೆ ಕೇಳಿಬರುತ್ತಿರುವ ಒಂದೇ ಒಂದು ಪ್ರಶ್ನೆ. ದ್ವಿಚಕ್ರ ವಾಹನ ಸವಾರರಿಗೆ ಇದೊಂದು ರೀತಿಯ ತಲೆನೋವು ತಂದಿರುವುದು ಸುಳ್ಳಲ್ಲ. ಪೊಲೀಸರ ಕಣ್ಣು ಕಟ್ಟಲು ಯಾವುದೋ ಒಂದು ಹೆಲ್ಮೆಟ್ ಆಯಿತೆಂದು ತಲೆಗೆ ಹಾಕಿಕೊಂಡು ಹೋದರೂ ದಂಡ ಕಟ್ಟಬೇಕಾದೀತು ಹುಷಾರ್!
ಹಾಗಾದರೆ ನೀವು ಯಾವ ಬಗೆಯ ಹೆಲ್ಮೆಟ್ ಖರೀದಿ ಮಾಡಬೇಕು ಎಂಬುದನ್ನು ಕೇಂದ್ರ ಮೋಟಾರು ವಾಹನ ಕಾಯ್ದೆ ಸೆಕ್ಷನ್ 129 ತಿಳಿಸುತ್ತದೆ. ಇದು ಹೇಳುವಂತೆ ಐಎಸ್ಐ ಮುದ್ರೆಯಿರುವ ಪೂರ್ಣ ಪ್ರಮಾಣದ ಹೆಲ್ಮೆಟ್ ಧರಿಸುವುದು ಕಡ್ಡಾಯ. ಹೀಗಾಗಿ ಅರ್ಧ ಹೆಲ್ಮೆಟ್ ಧರಿಸಿ ರಸ್ತೆಗಿಳಿದರೆ ದಂಡ ಕಟ್ಟುವುದು ಅನಿವಾರ್ಯವಾಗಲಿದೆ. ಇಂಡಿಯನ್ ಬ್ಯೂರೋ ಆಫ್ ಸ್ಟ್ಯಾಂಡರ್ಡ್ ಕೂಡ ಸುರಕ್ಷಿತ ಹೆಲ್ಮೆಟ್ ನ ನಿರ್ದಿಷ್ಟ ಮಾನದಂಡಗಳನ್ನು ತಿಳಿಸಿದೆ.[ಹೆಲ್ಮೆಟ್ ಕಡ್ಡಾಯ: ಬೆಂಗಳೂರಿಗರಿಗೆ ಜನವರಿ 20 ಅಂತಿಮ ಗಡುವು]
ಪರ-ವಿರೋಧ ಚರ್ಚೆಗಳು ಯಾವುದೇ ಇರಲಿ.. ನೀವು ಧರಿಸಬೇಕಾದ ಹೆಲ್ಮೆಟ್ ಹೇಗಿರಬೇಕು, ಹಿಂಬದಿ ಸವಾರನಿರಲಿ, ಮುಂಬದಿ ಸವಾರನಿರಲಿ ಯಾವ ಬಗೆಯ ಹೆಲ್ಮೆಟ್ ಹಾಕಿಕೊಳ್ಳಬೇಕು. ಎಂಬುದರ ಸಂಪೂರ್ಣ ವಿವರ ಇಲ್ಲಿದೆ...

ನೀವು ಧರಿಸುವ ಹೆಲ್ಮೆಟ್
ಹೆಲ್ಮೆಟ್ ಎರಡು ಕಿವಿಯನ್ನು ಸಂಪೂರ್ಣವಾಗಿ ಮುಚ್ಚಬೇಕು.ತಲೆ ಮತ್ತೆ ಹಣೆಯ ಸುತ್ತ ಕವಚ ಹಾಗೂ ಗಲ್ಲವನ್ನು ಹೆಲ್ಮೆಟ್ ಕವರ್ ಮಾಡುವಂತೆ ಇರಬೇಕು.

ಅರ್ಧ ಹೆಲ್ಮೆಟ್ ಗೆ ದಂಡ
ಬಿಸಿಲಿನಿಂದ ತಪ್ಪಿಸಿಕೊಳ್ಳಲು, ಪೊಲೀಸರ ಕಣ್ಣಿಗೆ ಮಣ್ಣೆರಚಲು ಅಗ್ಗದ ಬೆಲೆಯ ಅರ್ಧ ಹೆಲ್ಮೆಟ್ ಧರಿಸಿದರೂ ದಂಡ ಕಟ್ಟಬೇಕಾಗುತ್ತದೆ, ನಿಯಮ ಉಲ್ಲಂಸುವ ಹಿಂಬದಿ ಸವಾರರಿಗೂ ಜ.20ರಿಂದ ದಂಡ ವಿಧಿಸಲಾಗುವುದು ಹೆಚ್ಚುವರಿ ಪೊಲೀಸ್ ಆಯುಕ್ತರ (ಸಂಚಾರ) ಎಂ.ಎ. ಸಲೀಂ ತಿಳಿಸಿದ್ದಾರೆ.

ಅರ್ಧ ಹೆಲ್ಮೆಟ್ಗೆ ಬೇಡಿಕೆ
ಐಎಸ್ಐ ಮುದ್ರೆಯಿರುವ ಹೆಲ್ಮೆಟ್ಗೆ ಹೋಲಿಸಿದಲ್ಲಿ 200 ರೂ.ಗೆ ಸಿಗುವ ಅರ್ಧ ಹೆಲ್ಮೆಟ್ಗಳಿಗೆ ರಾಜ್ಯಾದ್ಯಂತ ಬೇಡಿಕೆ ಹೆಚ್ಚಿದೆ. ಬಿಸಿಲ ಝಳ ಹೆಚ್ಚಾದಾಗ, ಟ್ರಾಫಿಕ್ನಲ್ಲಿ ಸಿಕ್ಕಿಬಿದ್ದಾಗ ಈ ಹೆಲ್ಮೆಟ್ಗಳನ್ನು ತೆಗೆಯುವುದು ಸುಲಭ. ನೀವು ಇಂಥವನ್ನು ಧರಿಸಿ ತೆರಳಿದರೆ ದಂಡ ಕಟ್ಟಬೇಕಾಗುತ್ತದೆ.

ಹೆಚ್ಚಿದ ದರ
700ರಿಂದ 800 ರೂ.ಗೆ ಸಿಗುತ್ತಿದ್ದ ಹೆಲ್ಮೆಟ್ಗಳು ಈಗ ಸಾವಿರ ರೂ.ಗೆ ಮಾರಾಟವಾಗುತ್ತಿವೆ. ಐಎಸ್ಐ ಮಾರ್ಕ್ನ ಹೆಲ್ಮೆಟ್ಗಳು ದಿನಕ್ಕೆ 10-15 ಮಾರಾಟವಾದರೆ, 150-200 ರೂ.ಗೆ ಸಿಗುವ ಅರ್ಧ ಹೆಲ್ಮೆಟ್ಗಳು ದಿನಕ್ಕೆ 30 ಕ್ಕೂ ಅಧಿಕ ಮಾರಾಟವಾಗುತ್ತಿದೆ ಎಂದು ಬಸವನಗುಡಿ ಸಮೀಪ ಹೆಲ್ಮೆಟ್ ಮಾರುತ್ತಿದ್ದ ರಮೇಶ್ ಹೇಳುತ್ತಾರೆ.

ಅಂಗಡಿಯಲ್ಲಿ ತಗೊಬೇಕೋ?
ಗ್ರಾಹಕರಿಗೆ ಈ ಗೊಂದಲವೂ ಇದೆ. ಫುಟ್ ಪಾತ್ ನಲ್ಲಿ ಮಾರುವ ಹೆಲ್ಮೆಟ್ ತಗೊಂಡರೆ ಸಾಕಾ? ಅಥವಾ ಅಂಗಡಿಗೆ ತೆರಳಿ ತಗೋಬೇಕಾ? ನಿಮ್ಮ ಸುರಕ್ಷತೆ ನಿಮ್ಮ ಜವಾಬ್ದಾರಿ. ಮೊಬೈಲ್ ಗೆ ಗೊರಿಲ್ಲಾ ಗ್ಲಾಸ್ ಹಾಕಿಸುವವರು ನಿಮ್ಮ ತಲೆಗೂ ಉತ್ತಮ ಸುರಕ್ಷಾ ಕವಚ ಹಾಕಿಕೊಂಡರೆ ಒಳಿತು.
-
ಕೃಷ್ಣಾ ಮೇಲ್ದಂಡೆ ಯೋಜನೆಗೆ 5,000 ಕೋಟಿ ರೂ. ಘೋಷಿಸಿದ ಸಿಎಂ ಸಿದ್ಧರಾಮಯ್ಯ -
Karnataka: ರಾಜ್ಯದಲ್ಲಿ ಹೆಚ್ಚಾಯ್ತು ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ: 3 ವರ್ಷದಲ್ಲಿ 27 ಸಾವು -
ಬೆಂಗಳೂರು ಕರಡು ಮತಪಟ್ಟಿ ಹಾಗೂ ಕಾಂಗ್ರೆಸ್ನ ಮತಚೋರಿಯ ಸುಳ್ಳುಗಳ ಅನಾವರಣ: ಲೇಖಕ ರಾಜೀವ ಹೆಗಡೆ ಬರಹ -
Gold: ದುಬೈಯಿಂದ ಭಾರತಕ್ಕೆ ಚಿನ್ನದ ಪೂರೈಕೆ ಪುನರಾರಂಭ; ಗ್ರಾಹಕರ ನಿರ್ಧಾರದಿಂದ ಬೆದರಿದ ವ್ಯಾಪಾರಿಗಳು -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ












Click it and Unblock the Notifications