ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಾಗಲಕೋಟೆ: ಮಳೆ ರಭಸಕ್ಕೆ ಹಳ್ಳದಲ್ಲಿ ಕೊಚ್ಚಿ ಹೋದ ಕಾರು
ಬಾಗಲಕೋಟೆ, ಜೂನ್ 07 : ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಾದಾಮಿ ತಾಲೂಕಿನ ಅನ್ವಾಳ-ಯಂಡಗಿರಿ ಹಳ್ಳದಲ್ಲಿ ಕಾರವೊಂದು ಕೊಚ್ಚಿ ಹೋಗಿದೆ.
ಕಾರಿನಲ್ಲಿದ್ದ ನಾಲ್ವರು ನೀರು ಪಾಲು ಆಗಿದ್ದು, ಓರ್ವ ಮಾತ್ರ ಈಜಿಕೊಂಡು ದಡ ಸೇರಿದ್ದಾನೆ.[ಭಾರೀ ಮಳೆಗೆ ಗದಗ ಜಿಲ್ಲೆಯ ಯಕ್ಲಸ್ ಪುರ ಗ್ರಾಮ ಜಲಾವೃತ]
ಕಾರಿನಲ್ಲಿ ಇದ್ದ ಐವರ ಪೈಕಿ ಯಮನಪ್ಪ ಬಸ್ಸಪ್ಪ ಹಡಪದ್ (45), ವೀರಭದ್ರಪ್ಪ ಗುರಪ್ಪ (55), ಶಿವಪುತ್ರಪ್ಪ ಸಾಂತಣ್ಣವರ್ ಮತ್ತು ಹೊಳಸಬಪ್ಪ ಮೃತಪಟ್ಟಿದ್ದು, ಅಗ್ನಿಶಾಮಕ ದಳ ಸಿಬ್ಬಂದಿಯವರು ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಯಂಡಗೇರಿಯ ಬಸವಲಿಂಗಪ್ಪ ಎನ್ನುವರು ಈಜಿಕೊಂಡು ದಡ ಸೇರಿದ್ದಾರೆ. ಈ ಬಗ್ಗೆ ಕೆರೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments
English summary
heavy rains in Bagalkot, Car washed way in rain water at Badami taluk.