ಅಪ್ಪ, ಮಗನ ಸೋಲಿನ ಭೀತಿಯಲ್ಲಿ ಸಿಎಂ ಕುಮಾರಸ್ವಾಮಿ
ಬೆಂಗಳೂರು, ಮೇ 23: ಮುಖ್ಯಮಂತ್ರಿ ಕುಮಾರಸ್ವಾಮಿಗೆ ಕರ್ನಾಟಕದಲ್ಲಿ ಅಪ್ಪ ಹಾಗೂ ಮಗನ ಸೋಲಿನ ಭೀತಿ ಆರಂಭವಾಗಿದೆ.
ಮಂಡ್ಯದಲ್ಲಿ ನಿಖಿಲ್ ಹಾಗೂ ಸುಮಲತಾ ನಡುವೆ ತೀವ್ರ ಪೈಪೋಟಿ ಇದ್ದು ಒಂದು ಹಂತದಲ್ಲಿ ನಿಖಿಲ್ ಇನ್ನೊಂದು ಹಂತದಲ್ಲಿ ಸುಮಲತಾ ಮುನ್ನಡೆ ಸಾಧಿಸುತ್ತಿದ್ದಾರೆ.
ಕರ್ನಾಟಕ ಲೋಕಸಭೆ ಚುನಾವಣಾ ಫಲಿತಾಂಶ LIVE: 3 ಕ್ಷೇತ್ರದಲ್ಲಿ ಬಿಜೆಪಿ ಗೆಲುವು
ತುಮಕೂರಿನಲ್ಲಿ ಪ್ರತಿ ಸುತ್ತಿನಲ್ಲೂ ಬಿಜೆಪಿ ಅಭ್ಯರ್ಥಿ ಬಿಎಸ್ ಬಸವರಾಜು ಮುನ್ನಡೆಯನ್ನು ಹೆಚ್ಚಿಸುಕೊಂಡು ಹೋಗುತ್ತಿದ್ದಾರೆ.
ಇದಕ್ಕೆ ತದ್ವಿರುದ್ಧವಾಗಿ ಹಾಸದನಲ್ಲಿ ಸಚಿವ ಎಚ್ಡಿ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಪ್ರತಿ ಹಂತದಲ್ಲೂ ಮುನ್ನಡೆಯನ್ನು ಹೆಚ್ಚಿಸಿಕೊಂಡು ಹೋಗುತ್ತಿದ್ದಾರೆ.
ಇದರಿಂದ ಜೆಡಿಎಸ್ ಪಕ್ಷ ಹಾಗೂ ದೇವೇಗೌಡ ರ ಕುಟುಂಬದಲ್ಲಿ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ತುಮಕೂರಿನಲ್ಲಿ ಬಿಜೆಪಿಯ ಬಸವರಾಜು ವಿರುದ್ಧ ದೇವೇಗೌಡರಿಗೆ ಹಿನ್ನಡೆ
ಜೆಡಿಎಸ್ ಸಂಖ್ಯೆ ಕಳೆದ ಬಾರಿಗಿಂತ ಕಡಿಮೆಯಾಗುವುದ ಜೊತೆಗೆ ಕುಟುಂಬದಲ್ಲೂ ಆತಕ ಸೃಷ್ಟಿಸಿದೆ. ಇನ್ನೊಂದೆಡ ಜೆಡಿಎಸ್ನಲ್ಲಿ ಕುಟುಂಬ ರಾಜಕಾರಣಕ್ಕೆ ವಿಪರೀತ ಬೆಲೆ ನೀಡಲಾಗುತ್ತಿದೆ ಎಂಬ ಆರೋಪಗಳಿಗೆ ಈ ಸೋಲು ಇನ್ನಷ್ಟು ಪುಷ್ಠಿ ನೀಡಲಿದೆ. ಆದಾಗ್ಯೂ ದೇವೇಗೌಡರಿಗೆ ಕುಮಾರಸ್ವಾಮಿ ಕರೆ ಮಾಡಿ, ಗೆಲುವು ನಿಮ್ಮದಾಗಲಿದೆ ಎಂದು ಭರವಸೆ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.